ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL trade buzz:ಹಾರ್ದಿಕ್‌ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್‌ ಜೊತೆ ಕೆಕೆಆರ್‌, ಆರ್‌ಆರ್‌ ಚರ್ಚೆ!

ಕೋಲ್ಕತಾ ನೈಟ್‌ ರೈಡರ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್‌ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿವೆ. ಇದೇ ವೇಳೆ ಆರ್‌ಆರ್‌ ತಂಡವು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರನ್ನು ಒಳಗೊಂಡ ವಿನಿಮಯ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಾಗುತ್ತಿದೆ.

ಹಾರ್ದಿಕ್‌ ಪಾಂಡ್ಯಗಾಗಿ ಆರ್‌ಆರ್‌, ಕೆಕೆಆರ್‌ ಪ್ರಯತ್ನ.

ನವದೆಹಲಿ: ಹಾರ್ದಿಕ್‌ ಪಾಂಡ್ಯ(Hardik Pandya) ಅವರು ಮುಂಬೈ ಇಂಡಿಯನ್ಸ್‌ (Mumbai Indians) ತಂಡವನ್ನು ತೊರೆಯುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ಐದು ಬಾರಿ ಚಾಂಪಿಯನ್ಸ್‌ ಆದ ಈ ಫ್ರಾಂಚೈಸಿಗೆ ಈಗಾಗಲೇ ಎರಡು ತಂಡಗಳಿಂದ ಟ್ರೇಡ್ (ಆಟಗಾರರ ವಿನಿಮಯ) ಕುರಿತು ಆಸಕ್ತಿ ವ್ಯಕ್ತವಾಗಿದೆ. ಒಂದು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಿಂದ ಹಾಗೂ ಇನ್ನೊಂದು ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಬಂದಿದೆ.

ಈ ಬೆಳವಣಿಗೆಗೆ ಸಂಬಂಧಿಸಿದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಪಿಎಲ್ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ. ಕೆಕೆಆರ್‌ನ ಉನ್ನತ ಆಡಳಿತ ಮಂಡಳಿ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕರ ನಡುವೆ ಆಟಗಾರರ ವಿನಿಮಯದ ಕುರಿತು ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್‌ಗೆ ಎರಡನೇ ಬಾರಿ ಮರಳುವಿಕೆ ಅಷ್ಟೇನೂ ಯಶಸ್ವಿಯಾಗಿಲ್ಲ. ಅವರ ನಾಯಕತ್ವದಲ್ಲಿ ತಂಡ ಕೇವಲ ಒಂದು ಬಾರಿ ಮಾತ್ರ ಪ್ಲೇಆಫ್ಸ್‌ ಪ್ರವೇಶಿಸಲು ಸಾಧ್ಯವಾಗಿದೆ.

ತ್ರಿಕೋನ ಎ ಸರಣಿ ಮುಗಿದ ಬೆನ್ನಲ್ಲೆ 56 ಬಾಲ್‌ಗಳಲ್ಲಿ 136 ರನ್‌ ಚಚ್ಚಿದ ತಿಲಕ್‌ ವರ್ಮಾ!

"ಅಜಿಂಕ್ಯ ರಹಾನೆ ಅವರು ಯಾವಾಗಲೂ ಕೆಕೆಆರ್‌ಗೆ ತಾತ್ಕಾಲಿಕ ಆಯ್ಕೆಯಾಗಿದ್ದರು. ಈ ಋತುವಿನ ಬಳಿಕ ಅವರನ್ನು ಬಿಡುಗಡೆ ಮಾಡಲಾಗುವುದು ಎಂಬುದು ಮೊದಲೇ ನಿರ್ಧಾರವಾಗಿತ್ತು. ಕಳೆದ ಋತುವಿನ ಕೊನೆಯಲ್ಲಿ ಕೆಕೆಆರ್‌ನ ಉನ್ನತ ಅಧಿಕಾರಿಗಳು ಮುಂಬೈ ಇಂಡಿಯನ್ಸ್ ಮಾಲೀಕರನ್ನು ಸಂಪರ್ಕಿಸಿದ್ದರು. ಆದರೆ ಆ ಸಮಯದಲ್ಲಿ ರಿಲೆಯನ್ಸ್‌ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ (AGM) ಸಮೀಪಿಸುತ್ತಿದ್ದ ಕಾರಣ, ಐಪಿಎಲ್ ಟ್ರೇಡ್ ವಿಷಯವು ಪ್ರಮುಖ ಆದ್ಯತೆಯಾಗಿರಲಿಲ್ಲ," ಎಂದು ಮೂಲವು ತಿಳಿಸಿದೆ.

"ಆದರೆ, ಕೆಕೆಆರ್ ಮತ್ತೊಮ್ಮೆ ಮುಂಬೈ ಇಂಡಿಯನ್ಸ್‌ನ ಉನ್ನತ ವರ್ಗವನ್ನು ಸಂಪರ್ಕಿಸಿದ್ದು, ಈ ವಿಷಯದ ಕುರಿತು ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ," ಎಂದು ಹೇಳಿದೆ.

ಪಾಂಡ್ಯ ಅವರು ಸಂಪೂರ್ಣ ನಗದು ಒಪ್ಪಂದದ ಮೂಲಕವಾಗಲಿ ಅಥವಾ ಆಟಗಾರರ ವಿನಿಮಯದ ಮೂಲಕವಾಗಲಿ ಕೆಕೆಆರ್‌ಗೆ ಸೇರ್ಪಡೆಯಾದರೆ, ತಂಡದ ನಾಯಕತ್ವದ ಜವಾಬ್ದಾರಿ ಅವರಿಗೆ ಸಿಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ರಿಂಕು ಸಿಂಗ್‌ ಅವರನ್ನು ನಾಯಕತ್ವಕ್ಕೆ ಸೂಕ್ತ ಆಯ್ಕೆಯಾಗಿ ಪರಿಗಣಿಸಲಾಗುತ್ತಿಲ್ಲ.

ಆರ್‌ಸಿಬಿಯ ಸ್ಟಾರ್‌ ಆಲ್‌ರೌಂಡರ್‌ ಜೇಕಬ್ ಬೆಥೆಲ್ ಮನಗೆದ್ದ ಕನ್ನಡತಿ ಯಾರು? ಐಪಿಎಲ್‌ ವೇಳೆ ಡೇಟಿಂಗ್‌?

ಆದಾಗ್ಯೂ, ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ ಅವರಿಗಾಗಿ ಮುಂಬೈ ಇಂಡಿಯನ್ಸ್‌ ತಂಡವು ಸಂಪೂರ್ಣ ನಗದು ಒಪ್ಪಂದವನ್ನು ಬಯಸುತ್ತಿದೆಯೇ ಅಥವಾ ಆಟಗಾರರ ವಿನಿಮಯಕ್ಕೆ ಆದ್ಯತೆ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಮೂಲವು ಸ್ಪಷ್ಟ ಉತ್ತರ ನೀಡಲಿಲ್ಲ.

ರಾಜಸ್ಥಾನ್ ತಂಡದ ಲೆಕ್ಕಾಚಾರ ಹೇಗಿದೆ?

ಮುಂಬೈ ಇಂಡಿಯನ್ಸ್‌ಗೆ ಬಂದಿರುವ ಎರಡನೇ ಪ್ರಸ್ತಾವನೆ, ಯಶಸ್ವಿ ಜೈಸ್ವಾಲ್‌ ಮತ್ತು ಹಾರ್ದಿಕ್‌ ಪಾಂಡ್ಯ ನಡುವಿನ ಆಟಗಾರರ ವಿನಿಮಯ (ಸ್ವಾಪ್ ಡೀಲ್) ಕುರಿತದ್ದಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಮಾತುಕತೆಗಳು ಎಷ್ಟರ ಮಟ್ಟಿಗೆ ಮುಂದುವರಿದಿವೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಆದರೆ, ರಾಜಸ್ಥಾನ್‌ ರಾಯಲ್ಸ್‌ ತಂಡವು ಅಸ್ಸಾಂನ ಪ್ರತಿಭಾವಂತ ಆಟಗಾರ ರಿಯಾನ್‌ ಪರಾಗ್‌ ಅವರನ್ನು ದೀರ್ಘಾವಧಿಯ ನಾಯಕನಾಗಿ ರೂಪಿಸುವ ಯೋಜನೆ ಹೊಂದಿರುವುದರಿಂದ, ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ಸಿಗುವುದು ಕಷ್ಟಕರವಾಗಬಹುದು.

ಒಟ್ಟಾರೆ, ಪಾಂಡ್ಯ ಅವರ ವರ್ಗಾವಣೆ ನಿಜವಾಗಿಯೂ ನಡೆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ಗಿಂತ ಹೆಚ್ಚು ಸೂಕ್ತ ಮತ್ತು ಸಾಧ್ಯತೆಯ ಆಯ್ಕೆಯಾಗಿ ಕಾಣುತ್ತಿದೆ.