ನವದೆಹಲಿ: ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಗೂ ಮುನ್ನ ಪ್ರಸ್ತುತ ಭಾರತ ಟಿ20 ತಂಡದ ಬಲಾಬಲದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಭಾರತವನ್ನು (India) ʻಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆʼ ಎಂದು ಮಾಜಿ ನಾಯಕ ವರ್ಣಿಸಿದ್ದು, ತಂಡದ ಡೆಪ್ತ್, ಅನುಭವ ಮತ್ತು ಆಟಗಾರರ ಸ್ಪಷ್ಟ ಪಾತ್ರಗಳೇ ಅದರ ಶಕ್ತಿಯಾಗಿದೆ ಎಂದು ಹೇಳಿದ್ದಾರೆ. ಇಂದಿನ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಕಿರೀಟವನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಸಂಪೂರ್ಣ ಸಿದ್ಧತೆಯಲ್ಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಇದು (ಭಾರತ) ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆ. ನೀವು ಗೊತ್ತಾ, ಇವರಿಗೆ ಈಗಾಗಲೇ ಬ್ಯಾಟಿಂಗ್ ಅಥವಾ ಬೌಲಿಂಗ್ ಆರಂಭವಾಗಿರಬಹುದು. ಆದರೆ ಉತ್ತಮ ತಂಡಕ್ಕೆ ಯಾವೆಲ್ಲಾ ಗುಣಗಳು ಬೇಕು? ಎಲ್ಲವೂ ಈ ತಂಡದಲ್ಲಿಯೇ ಇದೆ. ಅವರಿಗೆ ಆಳವಾದ ಅನುಭವವಿದೆ. ವಿಶೇಷವಾಗಿ ಈ ಸ್ವರೂಪದಲ್ಲಿ ಅವರ ಅನುಭವ ಅತ್ಯಂತ ವ್ಯಾಪಕವಾಗಿದೆ. ಒತ್ತಡದ ಪರಿಸ್ಥಿತಿಗಳಲ್ಲಿ ಆಡಿದ ಅನುಭವವೂ ಅವರಿಗೆ ಇದೆ. ತಂಡದಲ್ಲಿ ಯಾರಾದರೂ ಯಾವ ಪಾತ್ರದಲ್ಲಿ ಆಡುತ್ತಿದ್ದರೂ, ಅವರು ಈ ರೀತಿಯ ಪರಿಸ್ಥಿತಿಗಳನ್ನು ಸಾಕಷ್ಟು ಕಾಲ ಅನುಭವಿಸಿದ್ದಾರೆ,” ಎಂದು ಎಂಎಸ್ ಧೋನಿ “ಮಾಹಿ ಅನ್ಪ್ಲಗ್” ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಭಾವ ಬೀರಬಲ್ಲ ಮೂವರು ಬೌಲರ್ಗಳನ್ನು ಆರಿಸಿದ ಆಕಾಶ್ ಚೋಪ್ರಾ!
ಆದರೆ, ಹವಾಮಾನದ ಒಂದು ಅಂಶವನ್ನು ಕೂಡ ಗಮನಿಸಿದರೆ, ಅದು ವೈಟ್ಬಾಲ್ ಕ್ರಿಕೆಟ್ನಲ್ಲಿ ನಾಯಕರು ಸಾಮಾನ್ಯವಾಗಿ ʻಇಬ್ಬನಿʼ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಾನು ನಾಯಕನಾಗಿದ್ದಾಗ ಅನುಭವಿಸಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ. ಇಬ್ಬನಿ ಪಂದ್ಯ ಫಲಿತಾಂಶಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ವಿವರಿಸಿದ್ದಾರೆ.
“ನನಗೆ ಯಾವ ವಿಷಯದ ಬಗ್ಗೆ ತಲೆ ನೋವಿತ್ತು? ಮತ್ತೆ ಹೇಳುತ್ತೇನೆ, ನನಗೆ ಇಬ್ಬನಿ ಇಷ್ಟವಿರಲಿಲ್ಲ. ಮಂಜು ಬಹಳ ಬದಲಾವಣೆಗಳನ್ನು ತರುತ್ತದೆ. ನಾನು ಆಡುತ್ತಿದ್ದಾಗಲೂ ನನಗೆ ತುಂಬಾ ಭಯವಿದ್ದದ್ದು ಇದಕ್ಕೆ. ಹಾಗಾಗಿ ಪ್ರತಿಯೊಂದು ಪಂದ್ಯಕ್ಕೂ ಟಾಸ್ ಮಹತ್ವವನ್ನು ಪಡೆದುಕೊಳ್ಳುತ್ತಿತ್ತು. ನಾವು ಅತ್ಯುತ್ತಮ ತಂಡಗಳೊಂದಿಗೆ 10 ಪಂದ್ಯಗಳನ್ನಾಡಿದರೂ, ಪರಿಸ್ಥಿತಿಗಳು ಸಧಾರಣೆಯಲ್ಲಿದ್ದರೆ ಮಾತ್ರ ಪಂದ್ಯಗಳನ್ನು ಗೆಲ್ಲಬಹುದು,” ಎಂದು ಮಾಜಿ ನಾಯಕ ತಿಳಿಸಿದ್ದಾರೆ.
T20 World Cup 2026: ಶ್ರೀಲಂಕಾ ಎ ವಿರುದ್ದ ಒಮಾನ್ ತಂಡಕ್ಕೆ 5 ವಿಕೆಟ್ ಜಯ!
ಟಿ20 ಕ್ರಿಕೆಟ್ನ ಅತ್ಯುತ್ತಮ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಎಂಎಸ್ ಧೋನಿ, ಟಿ20 ಕ್ರಿಕೆಟ್ನ ಅನಿರೀಕ್ಷಿತ ಸ್ವಭಾವವನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. “ಒಂದು ಕೆಟ್ಟ ದಿನ ಅಥವಾ ಪ್ರತಿಸ್ಪರ್ಧಿಯ ಉತ್ತೇಜಿತ ಪ್ರದರ್ಶನವೇ ಬಲಿಷ್ಠ ತಂಡಗಳನ್ನೂ ಕುಸಿತಕ್ಕೆ ತರುತ್ತದೆ. ಈ ಅನಿರೀಕ್ಷಿತತೆಯೇ ಸ್ಥಳೀಯರ ಎದುರಿನ ಏಕೈಕ ಸವಾಲಾಗಲಿದೆ," ಎಂದು ಹೇಳಿದ್ದಾರೆ.
“ಸಮಸ್ಯೆ ಏನೆಂದರೆ, ನಿಮ್ಮ ಕೆಲವು ಆಟಗಾರರಿಗೆ ಒಬ್ಬ ದಿನ ಕೆಟ್ಟದಾಗಿರಬಹುದು, ಎದುರಾಳಿಯೊಬ್ಬರು ಅದ್ಭುತ ಪ್ರದರ್ಶನ ನೀಡಬಹುದು. ಟಿ20 ಗುಂಪು ಪಂದ್ಯಗಳಲ್ಲಿ ಇದು ಸಂಭವಿಸಬಹುದಾಗಿದೆ. ಅಂತಹ ಸಮಯವೇ ಸವಾಲಾಗುತ್ತದೆ. ಲೀಗ್ ಹಂತದಲ್ಲಿ ಇದು ಸಂಭವಿಸಬಹುದು ಅಥವಾ ನಾಕೌಟ್ ಹಂತದಲ್ಲಾದರೂ ಇದು ಸಂಭವಿಸಬಹುದು, ಆದರೆ, ಇದಕ್ಕೆ ಪ್ರಾರ್ಥನೆ ಅಗತ್ಯವಿದೆ. ಯಾರೂ ಗಾಯಕ್ಕೆ ತುತ್ತಾಗಬಾರದು, ನೀಡಲಾದ ಪಾತ್ರಗಳನ್ನು ಆಟಗಾರರು ತಮ್ಮ ತಂಡಕ್ಕಾಗಿ ಯಶಸ್ವಿಯಾಗಿ ನೆರವೇರಿಸಬೇಕು,” ಎಂದು ಧೋನಿ ತಿಳಿಸಿದ್ದಾರೆ.