ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ (IND vs ENG) ಮುನ್ನ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ (Rohit Sharma) ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ವಾರ್ನಿಂಗ್ ಕೊಟ್ಟಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಇನಿಂಗ್ಸ್ ಆರಂಭಿಸಲು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಪ್ರಮುಖ ವೇದಿಕೆಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭಾರತ ತಂಡದ ಏಕೈಕ ಸ್ವರೂಪದಲ್ಲಿ ಆಡುತ್ತಿರುವ ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಜುಲೈ 14–19 ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ಬಗ್ಗೆ ರೋಹಿತ್ ಶರ್ಮಾಗೆ ಚೆನ್ನಾಗಿ ತಿಳಿದಿದೆ ಎಂದು ಗವಾಸ್ಕರ್ ಹೇಳಿದ್ದಾರೆ. "ರೋಹಿತ್ ಶರ್ಮಾ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ? ಅವರ ಬಗ್ಗೆ ಯಾವಾಗಲೂ ಸಾಕಷ್ಟು ಚರ್ಚೆ ನಡೆಯುತ್ತಿದೆ," ಎಂದು ಹೇಳಿದ ಗವಾಸ್ಕರ್, "ಅವರು ಎಲ್ಲಿದ್ದಾರೆಂದು ಅವರಿಗೆ ತಿಳಿದಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು ಮತ್ತು ರೋಹಿತ್ ಶರ್ಮಾ ನಡುವೆ ಮಾಹಿತಿಯ ವಿನಿಮಯ ಸ್ಪಷ್ಟವಾಗಿ ನಡೆದಿದೆ ಎಂದು ನಾನು ನಂಬುತ್ತೇನೆ. ಅವರು ತಮ್ಮ ಸ್ಥಾನದ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾರೆ ಮತ್ತು ವಿಶ್ವಕಪ್ ಟೂರ್ನಿಗೂ ಮುಂಚಿತವಾಗಿ ಮುಂದಿನ ಒಂದೂವರೆ ವರ್ಷಗಳ ಕಾಲ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಅವರಿಗೆ ತಿಳಿದಿದೆ," ಎಂದು ಹೇಳಿದ್ದಾರೆ.
IND vs ENG: ಟಿ20ಐ ಸರಣಿಗೂ ಮುನ್ನ ಶ್ರೇಯಸ್ ಅಯ್ಯರ್ ಬಗ್ಗೆ ಅಂಬಾಟಿ ರಾಯುಡು ದೊಡ್ಡ ಹೇಳಿಕೆ!
"ಅವರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದಿಂದಾಗಿ ಒತ್ತಡವನ್ನು ಅನುಭವಿಸುವ ವ್ಯಕ್ತಿ ಎಂದು ನಾನು ಭಾವಿಸುವುದಿಲ್ಲ. ಒಂದೂವರೆ ವರ್ಷದ ನಂತರವೂ, ಭಾರತದ ಪರ ಇನಿಂಗ್ಸ್ ತೆರೆಯಲು ಅವರು ಸರಿಯಾದ ಆಯ್ಕೆಯಾಗಿ ಉಳಿದಿದ್ದಾರೆ ಎಂಬುದನ್ನು ಪ್ರದರ್ಶಿಸಲು ಇಂಗ್ಲೆಂಡ್ ಪ್ರವಾಸವು ಅವರಿಗೆ ಒಂದು ಉತ್ತಮ ಅವಕಾಶವಾಗಿದೆ," ಎಂದು ಅವರು ತಿಳಿಸಿದ್ದಾರೆ.
ಯಾವುದೇ ಭಾರತೀಯ ಆಟಗಾರನ ಮೌಲ್ಯಮಾಪನವು ನಿಜವಾಗಿಯೂ ಕೊನೆಗೊಳ್ಳುವುದಿಲ್ಲ ಮತ್ತು ಹಿರಿಯ ಬ್ಯಾಟ್ಸ್ಮನ್ಗಳು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಚೆನ್ನಾಗಿ ತಿಳಿದಿದ್ದಾರೆ ಎಂದು ಗವಾಸ್ಕರ್ ಒತ್ತಿ ಹೇಳಿದರು.
"ನೀವು ಯುವ ಆಟಗಾರನಾಗಿ ಪಾದಾರ್ಪಣೆ ಮಾಡಿದಾಗ, ನೀವು ಅಂತಾರಾಷ್ಟ್ರೀಯ ಕ್ರಿಕೆಟ್ನ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗೆ ನೀವು ಮನೋಧರ್ಮ ಮತ್ತು ಸಾಮರ್ಥ್ಯವನ್ನು ಹೊಂದಿದ್ದೀರಾ ಎಂಬುದರ ಕುರಿತು ನಿಮ್ಮನ್ನು ಪರಿಶೀಲಿಸಲಾಗುತ್ತದೆ," ಎಂದು ಅವರು ತಿಳಿಸಿದರು.
ಭಾರತ vs ಇಂಗ್ಲೆಂಡ್ T20I ಸರಣಿಯ ಪೂರ್ಣ ವೇಳಾಪಟ್ಟಿ, ಸಮಯ, ಪ್ರಸಾರದ ವಿವರ ಇಲ್ಲಿದೆ
"ಭಾರತೀಯ ಕ್ರಿಕೆಟ್ನಲ್ಲಿ ಆಟಗಾರರನ್ನು ಆರಂಭದಿಂದಲೇ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಈ ಒತ್ತಡವು ಎಂದಿಗೂ ನಿಲ್ಲುವುದಿಲ್ಲ. ಆದ್ದರಿಂದ, ಈ ರೀತಿಯ ಪರಿಶೀಲನೆ ಅಥವಾ ಟೀಕೆ ಈ ಆಟಗಾರರಿಗೆ ಹೊಸದೇನಲ್ಲ," ಎಂದು ಬ್ಯಾಟಿಂಗ್ ದಿಗ್ಗಜ ಹೇಳಿದ್ದಾರೆ.
"ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ತಿಳಿದಿದೆ ಮತ್ತು ಮುಂದೆ ಇರುವ ಏಕೈಕ ಮಾರ್ಗವೆಂದರೆ ರನ್ ಗಳಿಸುತ್ತಲೇ ಇರುವುದು, ಕ್ಯಾಚ್ಗಳನ್ನು ಪಡೆಯುವುದುಮ ರನ್-ಔಟ್ಗಳನ್ನು ಕಾರ್ಯಗತಗೊಳಿಸುವುದು ಮತ್ತು ನಾಯಕನಿಗೆ ಸಲಹೆ ನೀಡಲು ಸಿದ್ಧರಾಗಿರುವುದು. ಅವರು ತಂಡಗಳನ್ನು ಸ್ವತಃ ಮುನ್ನಡೆಸಿದ್ದಾರೆ ಮತ್ತು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ ಎಂದು ಅವರು ಅರಿತುಕೊಂಡಿದ್ದಾರೆ," ಎಂದರು.