ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮೊಹ್ಸಿನ್‌ ಖಾನ್‌ ಭಾರತದ ಪರ ಶೀಘ್ರದಲ್ಲಿಯೇ ಆಡಲಿದ್ದಾರೆʼ: ಜಸ್ಟಿನ್‌ ಲ್ಯಾಂಗರ್‌ ಭವಿಷ್ಯ ನಿಜವಾಗುತ್ತಾ?

ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 2026ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಐದು ವಿಕೆಟ್ ಸಾಧನೆ ಮಾಡಿದ ಲಖನೌ ಸೂಪರ್ ಜಯಂಟ್ಸ್‌ ತಂಡದ ವೇಗದ ಬೌಲರ್ ಮೊಹ್ಸಿನ್ ಖಾನ್ ಅವರನ್ನು ಹೆಡ್‌ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಗುಣಗಾನ ಮಾಡಿದ್ದಾರೆ. ಭಾರತ ತಂಡದ ಪರ ಅವರು ಶೀಘ್ರದಲ್ಲಿಯೇ ಆಡಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಮೊಹ್ಸಿನ್‌ ಖಾನ್‌ ಬಗ್ಗೆ ದೊಡ್ಡ ಭವಿಷ್ಯ ನುಡಿದ ಜಸ್ಟಿನ್‌ ಲ್ಯಾಂಗರ್‌.

ಲಖನೌ: ಕೋಲ್ಕತಾ ನೈಟ್‌ ರೈಡರ್ಸ್‌ (KKR) ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ತಮ್ಮ ಚೊಚ್ಚಲ 5 ವಿಕೆಟ್‌ ಸಾಧನೆ ಮಾಡಿದ್ದ ಲಖನೌ ಸೂಪರ್‌ ಜಯಂಟ್ಸ್‌ ವೇಗಿ ಮೊಹ್ಸಿನ್‌ ಖಾನ್‌ (Mohsin Khan) ಅವರನ್ನು ಹೆಡ್‌ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಗುಣಗಾನ ಮಾಡಿದ್ದಾರೆ ಹಾಗೂ ಅವರ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಮೊಹ್ಸಿನ್‌ ಖಾನ್‌ ಆದಷ್ಟು ಬೇಗ ಭಾರತ ತಂಡದ ಪರ ಆಡಲಿದ್ದಾರೆಂದು ಅವರು ಹೇಳಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಲಖನೌ ತಂಡ ಸೂಪರ್‌ ಓವರ್‌ನಲ್ಲಿ ಸೋಲು ಅನುಭವಿಸಿತ್ತು.

ಈ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಸ್ಟಿನ್‌ ಲ್ಯಾಂಗರ್‌, ಐದು ವಿಕೆಟ್‌ ಸಾಧನೆ ಮಾಡಿದ ಮೊಹ್ಸಿನ್‌ ಖಾನ್‌ ಅವರ ಬಗ್ಗೆ ದೊಡ್ಡ ಭವಿಷ್ಯವನ್ನು ನುಡಿದರು. ಮೊಹ್ಸಿನ್ ಖಾನ್‌ ಅವರ ಕ್ರೀಡಾ ಮನೋಭಾವ ಮತ್ತು ಕೆಲಸದ ನೀತಿಯಲ್ಲಿನ ಬೆಳವಣಿಗೆಯ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಎಲ್‌ಎಸ್‌ಜಿ ಮಾಡಿದ 'ಸೂಪರ್‌' ಎಡವಟ್ಟನ್ನು ತೆರೆದಿಟ್ಟ ಡೇಲ್‌ ಸ್ಟೇನ್‌!

“ಹೌದು, ಕೆಲವು ದಿನಗಳ ಹಿಂದೆ ನಾನು ಹೇಳಿದ್ದೆ; ಮೊಹ್ಸಿನ್‌ ಖಾನ್‌ ಮತ್ತು ಪ್ರಿನ್ಸ್ ಯಾದವ್‌ ಶೀಘ್ರದಲ್ಲೇ ಭಾರತ ಪರ ಆಡಲಿದ್ದಾರೆ ಎಂದು. ಮೊಹ್ಸಿನ್ ಖಾನ್ ಬಗ್ಗೆ ವಿಶೇಷವೆಂದರೆ, ಅವರು ಅದ್ಭುತ ಅಥ್ಲೀಟ್. ನೀವು ಗಮನಿಸಿದರೆ, ಒಬ್ಬ ಉತ್ತಮ ಅಥ್ಲೀಟ್ ಅನ್ನು ಅವರು ಚೆಂಡು ಎಸೆಯುವ ರೀತಿಯಿಂದಲೇ ಗುರುತಿಸಬಹುದು ಮತ್ತು ಮೊಹ್ಸಿನ್‌ ಅವರನ್ನು ನೋಡಿದರೆ, ಅವರು ಅದ್ಭುತ ಥ್ರೋ ಎಸೆಯುವ ಆಟಗಾರ. ಇದರ ಜೊತೆಗೆ, ಅವರು ಅತ್ಯುತ್ತಮ ಲೆನ್ತ್‌ನಲ್ಲಿ ಚೆಂಡು ಹಾಕುತ್ತಾರೆ, ಅಲ್ಲವೇ? ಅವರ ಆಟದ ಯೋಜನೆ ಬಹಳ ಸರಳ — ತಮ್ಮ ಎತ್ತರ ಮತ್ತು ಕೈಮಣಿಯ ಸಹಾಯದಿಂದ ಸರಿಯಾದ ಲೆನ್ತ್‌ನಲ್ಲಿ ಚೆಂಡು ಹಾಕುತ್ತಾರೆ. ಮತ್ತೊಂದು ಮುಖ್ಯ ವಿಷಯವೆಂದರೆ, ನಾವು ಇದನ್ನು ಯಾವಾಗಲೂ ತಿಳಿದಿದ್ದೇವೆ, ಆದರೆ ತಮ್ಮ ಶ್ರಮದಿಂದ ಅವರು ತಮ್ಮನ್ನು ಫಿಟ್, ಬಲಿಷ್ಠ ಮತ್ತು ಆರೋಗ್ಯಕರವಾಗಿ ರೂಪಿಸಿಕೊಂಡಿದ್ದಾರೆ,” ಎಂದು ಜಸ್ಟಿನ್‌ ಲ್ಯಾಂಗರ್ ಗುಣಗಾನ ಮಾಡಿದ್ದಾರೆ.

IPL 2026 Playoffs Scenarios: 6 ಪಂದ್ಯ ಸೋತ ಲಖನೌ ತಂಡದ ಪ್ಲೇ ಆಫ್​ ಪ್ರವೇಶದ ಲೆಕ್ಕಾಚಾರ ಹೇಗಿದೆ?

ಮೊಹ್ಸಿನ್‌ ಅವರ ಕಠಿಣ ಶ್ರಮದ ಬಗ್ಗೆ ಕೋಚ್‌ ಮೆಚ್ಚುಗೆ

ಲ್ಯಾಂಗರ್ ಅವರು ಮೊಹ್ಸಿನ್ ಅವರ ಮೈದಾನದ ಹೊರಗಿನ ಪರಿಶ್ರಮ ಮತ್ತು ಸಮರ್ಪಣೆಯನ್ನೂ ಶ್ಲಾಘಿಸಿದರು. ಶ್ರೇಷ್ಠ ಫಿಟ್‌ನೆಸ್ ಮಟ್ಟಕ್ಕೆ ಮರಳಲು ಅವರು ಮಾಡಿದ ಶ್ರಮವನ್ನು ವಿಶೇಷವಾಗಿ ಅವರು ಉಲ್ಲೇಖಿಸಿದರು.

“ಅವರು ಭರತ್ ಅರುಣ್ ಅವರೊಂದಿಗೆ ಅದ್ಭುತ ಕೆಲಸ ಮಾಡಿದ್ದಾರೆ. ಬಹಳ ಮಂದಿಗೆ ತಿಳಿಯದ ಸಂಗತಿ ಏನೆಂದರೆ, ಈ ಹಂತಕ್ಕೆ ಬರಲು ಅವರು ಸ್ವತಃ ಚೆನ್ನೈಯಲ್ಲಿರುವ ಭರತ್ ಅವರ ಅಕಾಡೆಮಿಯಲ್ಲಿ ಕೆಲವು ತಿಂಗಳುಗಳನ್ನು ಕಳೆಯಿದ್ದಾರೆ. ಅವರು ತುಂಬಾ ಪರಿಶ್ರಮಪಟ್ಟಿದ್ದಾರೆ ಮತ್ತು ಫಿಟ್ ಆಗುತ್ತಿದ್ದಾರೆ. ಆದ್ದರಿಂದಲೇ ಮೊದಲ ಪಂದ್ಯದ ನಂತರ ಗಾಯವಾದಾಗ ಅವರಿಗೆ ತುಂಬಾ ನಿರಾಶೆಯಾಗಿತ್ತು, ಏಕೆಂದರೆ ಅವರು ತಂಡಕ್ಕೆ ಎಷ್ಟು ಮೌಲ್ಯ ಎಂಬುದು ಇದರಿಂದ ತಿಳಿಯುತ್ತದೆ. ಕಳೆದ ಎರಡು ಸೀಸನ್‌ಗಳಲ್ಲಿ ನಾವು ಅವರನ್ನು ಹೆಚ್ಚು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ, ಮತ್ತು ಇದೀಗ ಅವರು ತಂಡದಲ್ಲಿರುವುದು ನಮಗೆ ದೊಡ್ಡ ಸಂತೋಷದ ವಿಷಯ. ಆದಷ್ಟು ಬೇಗ ಅವರು ಭಾರತ ತಂಡದ ಪರ ಆಡಿದರೆ ಅದರಿಂದ ನನಗೆ ಅಚ್ಚರಿಯಾಗುವುದಿಲ್ಲ," ಎಂದು ಹೇಳಿದ್ದಾರೆ.