ನವದೆಹಲಿ, ಜು.12: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಟಿ20 ಸರಣಿ ಸೋಲುಗಳ ನಂತರ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅವರ ಸಹಾಯಕ ಸಿಬ್ಬಂದಿ ಟೀಕೆಗೆ ಗುರಿಯಾಗಿದ್ದಾರೆ. ಕಳೆದ ತಿಂಗಳು ಎರಡು ಪಂದ್ಯಗಳ ಸರಣಿಯಲ್ಲಿ ಟಿ20 ವಿಶ್ವ ಚಾಂಪಿಯನ್ಗಳು ಐರ್ಲೆಂಡ್ ವಿರುದ್ಧ ಸೋತರು. ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 4-0 ಅಂತರದ ಸೋಲು ಅನುಭವಿಸಿದರು. ಮಂಗಳವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಗಂಭೀರ್ ಮತ್ತು ತಂಡದ ಆಡಳಿತ ಮಂಡಳಿಯ ಮೇಲೆ ಈ ಸೋಲುಗಳು ತೀವ್ರ ಒತ್ತಡವನ್ನುಂಟುಮಾಡಿವೆ.
ವರದಿಯ ಪ್ರಕಾರ, ಗಂಭೀರ್ ಅವರ ಸಹಾಯಕ ರಯಾನ್ ಟೆನ್ ಡೋಸ್ಚೇಟ್ ಮತ್ತು ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಅವರು ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯ ನಂತರ ತಮ್ಮ ಪಾತ್ರಗಳಿಂದ ಹೊರನಡೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಡೋಸ್ಚೇಟ್ ಈ ಕೆಲಸದಲ್ಲಿ ಮುಂದುವರಿಯುವ ಬಗ್ಗೆ ಖಚಿತವಿಲ್ಲ. ವರ್ಷವಿಡೀ ತಂಡದೊಂದಿಗೆ ಪ್ರಯಾಣಿಸುವುದರಿಂದ ಉಂಟಾಗುವ ಸಮಸ್ಯೆಗಳನ್ನು ಅವರು ತಿಳಿಸಿದ್ದಾರೆ. ಮಾರ್ಕೆಲ್ ಕೂಡ ಇದೇ ಕಾರಣವನ್ನು ನೀಡಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಈ ವಿಷಯದ ಬಗ್ಗೆ ಇಬ್ಬರು ತರಬೇತುದಾರರೊಂದಿಗೆ ಚರ್ಚಿಸುತ್ತಿದೆ ಮತ್ತು ವಿಷಯಗಳನ್ನು ಪರಿಹರಿಸಬಹುದೇ ಎಂದು ನೋಡಲು ಪ್ರಯತ್ನಿಸುತ್ತದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಟೆನ್ ಡೋಸ್ಚೇಟ್ ಐಪಿಎಲ್ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಆದರೆ ಮಾರ್ಕೆಲ್ ಇನ್ನೂ ಏನನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.
"ಡೋಸ್ಚೇಟ್ ಮತ್ತು ಮಾರ್ಕೆಲ್ ಅವರೊಂದಿಗೆ ವಿಷಯಗಳು ಬಗೆಹರಿಯದಿದ್ದರೆ, ಇತ್ತೀಚೆಗೆ ಸಿಒಇಯಲ್ಲಿ ವೇಗದ ಬೌಲಿಂಗ್ ತರಬೇತುದಾರರಾಗಿ ನೇಮಕಗೊಂಡ ಲಕ್ಷ್ಮಿಪತಿ ಬಾಲಾಜಿ ಅವರನ್ನು ಶ್ರೀಲಂಕಾ ಸರಣಿಗೆ ಕಳುಹಿಸಲು ಬಿಸಿಸಿಐ ಒತ್ತಾಯಿಸಬಹುದು" ಎಂದು ವರದಿ ತಿಳಿಸಿದೆ.
ಲಾರ್ಡ್ಸ್ನಲ್ಲಿ ಶತಕ ಬಾರಿಸಿ ದಾಖಲೆ ಬರೆದ ಯಸ್ತಿಕಾ ಭಾಟಿಯಾ
2024 ರಲ್ಲಿ ಗಂಭೀರ್ ತಂಡದ ಉಸ್ತುವಾರಿ ವಹಿಸಿಕೊಂಡಾಗ ಡೋಸ್ಚೇಟ್ ಮತ್ತು ಮಾರ್ಕೆಲ್ ಇಬ್ಬರನ್ನೂ ಆಯ್ಕೆ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಭಾರತೀಯ ತಂಡದ ಕ್ಷೀಣಿಸುತ್ತಿರುವ ಫೀಲ್ಡಿಂಗ್ ಗುಣಮಟ್ಟದಿಂದಾಗಿ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ತಮ್ಮ ಕೆಲಸವನ್ನು ಕಳೆದುಕೊಳ್ಳಬಹುದು ಎಂದು ವರದಿ ತಿಳಿಸಿದೆ.
ತಂಡದ ಕ್ಷೀಣಿಸುತ್ತಿರುವ ಫೀಲ್ಡಿಂಗ್ ಗುಣಮಟ್ಟದಿಂದ ಮಂಡಳಿಯು ಅತೃಪ್ತವಾಗಿದೆ. ಕಳೆದ ವರ್ಷ ಅಭಿಷೇಕ್ ನಾಯರ್ ಜತೆ ದಿಲೀಪ್ ಅವರನ್ನು ವಜಾಗೊಳಿಸಲಾಗಿತ್ತು. ಆದರೆ ಸೂಕ್ತ ಫೀಲ್ಡಿಂಗ್ ಕೋಚ್ ಸಿಗದೇ ಇದ್ದ ಕಾರಣ ಬಿಸಿಸಿಐ ಮತ್ತೆ ದಿಲೀಪ್ಯನ್ನು ಮರು ನೇಮಕ ಮಾಡಿಕೊಂಡಿತು. ಇದೀಗ ಮತ್ತೆ ಅವರನ್ನು ಕೈಬಿಡಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.