ಕೋಲ್ಕತಾ, ಮೇ 23: 2026ರ ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಯುವ ವಿಕೆಟ್ ಕೀಪರ್-ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಗಾಯದಿಂದಾಗಿ ಟೂರ್ನಿಯ ಹೊರಬಿದಿದ್ದಾರೆ. ಬುಧವಾರ ಈಡನ್ ಗಾರ್ಡನ್ಸ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ನಡೆದ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ 21 ವರ್ಷದ ಆಟಗಾರನಿಗೆ ಎಡಗೈ ಬೆರಳಿಗೆ ಮೂಳೆ ಮುರಿತವಾಗಿತ್ತು.
"ಮೇ 20 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಎಡಗೈ ಬೆರಳಿಗೆ ಮುರಿತ ಉಂಟಾದ ನಂತರ ಆಂಗ್ಕ್ರಿಶ್ ರಘುವಂ ಶಿ ಅವರನ್ನು 2026 ರ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗಿಡಲಾಗಿದೆ" ಎಂದು ಕೆಕೆಆರ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.
2026 ರ ಐಪಿಎಲ್ ಸೀಸನ್ನಲ್ಲಿ ಕಳಪೆ ಆರಂಭ ಕಂಡಿದ್ದ ಕೆಕೆಆರ್ ತಂಡಕ್ಕೆ ರಘುವಂಶಿ ಅನುಪಸ್ಥಿತಿ ಮತ್ತೊಂದು ಹೊಡೆತವಾಗಿದೆ. ಮೊದಲ ಆರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳನ್ನು ಸೋತಿದ್ದ ತಂಡ ಚೇತರಿಸಿಕೊಳ್ಳುವಲ್ಲಿ ರಘುವಂಶಿ ಪ್ರಮುಖ ಪಾತ್ರ ವಹಿಸಿದ್ದರು. 13 ಪಂದ್ಯಗಳಲ್ಲಿ 422 ರನ್ ಗಳಿಸಿದ್ದು, 146.52 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್ ಮತ್ತು 42.20 ರ ಸರಾಸರಿಯಲ್ಲಿದೆ. ಐದು ಅರ್ಧಶತಕಗಳು ಸಹ ಸೇರಿವೆ.
SRH vs RCB: ರಿಷಭ್ ಪಂತ್ ವಿಶ್ವ ದಾಖಲೆ ಮುರಿದ ಹೆನ್ರಿಕ್ ಕ್ಲಾಸೆನ್
13 ಅಂಕಗಳಿಸಿರುವ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡವು ಭಾನುವಾರ ಈಡನ್ ಗಾರ್ಡನ್ಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಕೊನೆಯ ಲೀಗ್ ಹಂತದ ಪಂದ್ಯವನ್ನು ಆಡಲಿದೆ. ಡಿಸಿ ತಂಡವು ಪ್ಲೇಆಫ್ಗೆ ಹೋಗುವ ರೇಸ್ನಿಂದ ಹೊರಬಿದ್ದಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕ್ರಮವಾಗಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಕೊನೆಯ ಲೀಗ್ ಪಂದ್ಯಗಳನ್ನು ಸೋತರೆ ಮತ್ತು ಕೋಲ್ಕತ್ತಾ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿದರೆ, ಕೋಲ್ಕತ್ತಾ ಪ್ಲೇಆಫ್ಗೆ ಅರ್ಹತೆ ಪಡೆಯುತ್ತದೆ.