ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KKR vs GT: ಗುಜರಾತ್‌ ವಿರುದ್ಧ ಗ್ರೀನ್‌ಗೆ ಅಂತಿಮ ಓವರ್‌ ನೀಡದ ಬಗ್ಗೆ ಸ್ಪಷ್ಟನೆ ನೀಡಿದ ರಹಾನೆ

Gujarat Titans vs Kolkata Knight Riders: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 25ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 181 ರನ್ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.4 ಓವರ್‌ ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು. ಗುಜರಾತ್‌ ಪರ ನಾಯಕ ಗಿಲ್‌ 86 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Ajinkya Rahane

ಅಹಮದಾಬಾದ್‌, ಎ.18: ಶುಕ್ರವಾರ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ನ ಗುಜರಾತ್‌ ಟೈಟಾನ್ಸ್‌(KKR v GT) ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ತೋರಿದರೂ, ಕೊನೆಯ ಓವರ್‌ನಲ್ಲಿ ಕ್ಯಾಮರೂನ್‌ ಗ್ರೀನ್‌(Cameron Green)ಗೆ ಏಕೆ ಬೌಲಿಂಗ್‌ ನೀಡಲಿಲ್ಲ ಎಂಬ ಕಾರಣವನ್ನು ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಬಹಿರಂಗಪಡಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರಹಾನೆ, "ಪಂದ್ಯ ಸೋತ ತಕ್ಷಣ ಹೊರಬಂದು ಮಾತನಾಡುವುದು ಎಂದಿಗೂ ಸುಲಭವಲ್ಲ, ಆದರೆ ನಾನು ಸಕಾರಾತ್ಮಕ ಅಂಶಗಳತ್ತ ಗಮನ ಹರಿಸಲು ಬಯಸುತ್ತೇನೆ. ನಾವು ಮೂರು ವಿಕೆಟ್‌ಗಳನ್ನು ಮೊದಲೇ ಕಳೆದುಕೊಂಡು ಆರಂಭಿಸಿದ ರೀತಿ ಕಠಿಣವಾಗಿತ್ತು" ಎಂದು ಐದು ವಿಕೆಟ್‌ಗಳ ಸೋಲಿನ ನಂತರ ರಹಾನೆ ಹೇಳಿದರು.

"ಕ್ಯಾಮರೂನ್‌ ಗ್ರೀನ್‌ ವಾಸ್ತವವಾಗಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು, ಅದಕ್ಕಾಗಿಯೇ ಅವರು ಬೌಲಿಂಗ್ ಮಾಡಲಿಲ್ಲ. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಮೈದಾನದ ಒಳಗೆ ಮತ್ತು ಹೊರಗೆ ಇದ್ದರು" ಎಂದು ರಹಾನೆ ಹೇಳಿದರು.

"ಹೌದು, ನೀವು ಹೇಳಿದಂತೆ. ಒಂದು ಪಂದ್ಯವನ್ನು ಸೋತ ನಂತರ ಮತ್ತು ನಂತರ ಆಟದ ಬಗ್ಗೆ ಮಾತನಾಡಲು ಇಲ್ಲಿಗೆ ಬಂದಿರುವುದು ಎಂದಿಗೂ ಸುಲಭವಲ್ಲ. ಒತ್ತಡದಲ್ಲಿ ಕ್ಯಾಮರೂನ್ ಗ್ರೀನ್ ಆಡಿದ ಇನ್ನಿಂಗ್ಸ್ ಅತ್ಯುತ್ತಮವಾಗಿತ್ತು. ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದ ಕಾರಣ ನಮ್ಮ ಬೌಲರ್‌ಗಳಿಗೆ ಶ್ರೇಯಸ್ಸು ನೀಡಲೇ ಬೇಕು. ಬೌಲರ್‌ಗಳೆಲ್ಲರೂ ಉತ್ತಮ ಕೊಡುಗೆ ನೀಡಿದ್ದಾರೆ" ಎಂದು ರಹಾನೆ ಹೇಳಿದರು.

ಆರು ಪಂದ್ಯಗಳಿಂದ ಕೇವಲ ಒಂದು ಅಂಕ ಗಳಿಸಿರುವ ಕೆಕೆಆರ್ ತಂಡವು ಈಗ ಟೂರ್ನಿಯಿಂದ ಬೇಗನೆ ಹೊರನಡೆಯುವ ಭೀತಿಯಲ್ಲಿದೆ. ಇದರ ಹೊರತಾಗಿಯೂ, ತಂಡವು ಆ ಕ್ಷಣದಲ್ಲಿ ಆಡಬೇಕು ಮತ್ತು ಆಟದಲ್ಲಿ ಆನಂದಿಸಬೇಕು ಎಂದು ರಹಾನೆ ಹೇಳಿದರು.

"ಇದೆಲ್ಲವೂ ಆ ಕ್ಷಣದಲ್ಲಿ ಆಡುವುದರ ಬಗ್ಗೆ ಎಂದು ನಾನು ಭಾವಿಸುತ್ತೇನೆ. ವಿಷಯಗಳು ನಿಮ್ಮ ರೀತಿಯಲ್ಲಿ ನಡೆಯದಿದ್ದಾಗ, ನೀವು ಆ ಕ್ಷಣದಲ್ಲಿ ಆಡಬೇಕು. ಹುಡುಗರು ಹೊರಗೆ ಹೋಗಿ, ಆಟವನ್ನು ಆನಂದಿಸಿ, ಒಂದು ಘಟಕವಾಗಿ ಹಿಂತಿರುಗಿ ಮತ್ತು ನಂತರ ನೀವು ನಿಯಂತ್ರಿಸಬಹುದಾದ ವಿಷಯಗಳನ್ನು ನಿಯಂತ್ರಿಸಬೇಕೆಂದು ನಾನು ಬಯಸುತ್ತೇನೆ. ನಾವು ಸಕಾರಾತ್ಮಕವಾಗಿರಲು ಬಯಸಿದ್ದೇವೆ" ಎಂದು ರಹಾನೆ ಹೇಳಿದರು.

RCB vs DC: ವಾಹನ ಸವಾರರೇ ಗಮನಿಸಿ, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ

ಪಂದ್ಯದ ಬಗ್ಗೆ ಹೇಳುವುದಾದರೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 25ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 181 ರನ್ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.4 ಓವರ್‌ ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು. ಗುಜರಾತ್‌ ಪರ ನಾಯಕ ಗಿಲ್‌ 86 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ ದಕ್ಷಿಣ ಆಫ್ರೀಕಾದ ವೇಗಿ ಕಗಿಸೊ ರಬಾಡ 3 ವಿಕೆಟ್‌ ಕಿತ್ತರು. ಕೆಕೆಆರ್‌ ಪರ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಏಕಾಂಗಿ ಹೋರಾಟ (79 ರನ್, 46 ಎಸೆತ, 7 ಬೌಂಡರಿ, 4 ಸಿಕ್ಸರ್) ನಡೆಸಿದರು.