ಬೆಂಗಳೂರು, ಜೂ.5: ಶುಕ್ರವಾರ ನಡೆದ ಮಹಾರಾಜ ಟ್ರೋಫಿ KSCA T20 2026(Maharaja Trophy KSCA T20)ರ ಆಟಗಾರರ ಹರಾಜಿನಲ್ಲಿ ಭಾರತದ ಟೆಸ್ಟ್ ತಂಡದ ಉಪನಾಯಕ ಕೆ.ಎಲ್. ರಾಹುಲ್(KL Rahul) ಮಾರಾಟವಾಗದೆ ಉಳಿದರು. ಲಭ್ಯವಿರುವ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದರೂ ಸಹ ಅವರು ಮಾರಾಟವಾಗಲಿಲ್ಲ. ರಾಹುಲ್ 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಅನ್ಸೋಲ್ಡ್ ಆಗಲು ಕೂಡ ಬಲವಾದ ಕಾರಣವಿದೆ.
ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 14 ಪಂದ್ಯಗಳಲ್ಲಿ 593 ರನ್ ಗಳಿಸಿದ್ದ ರಾಹುಲ್, ಹರಾಜಿನಲ್ಲಿ ಸ್ಥಾನ ಪಡೆದ ಎರಡನೇ ಆಟಗಾರ. ಆದಾಗ್ಯೂ, ಆರು ಫ್ರಾಂಚೈಸಿಗಳಲ್ಲಿ ಯಾವುದೂ ಅವರಿಗೆ ಆರಂಭಿಕ ಸುತ್ತಿನಲ್ಲಿ ಬಿಡ್ ಮಾಡಲಿಲ್ಲ ಏಕೆಂದರೆ ಟೂರ್ನಮೆಂಟ್ಗೆ ಅವರ ಲಭ್ಯತೆ ಅನಿಶ್ಚಿತವಾಗಿದೆ.
ಕೇರಳದಲ್ಲಿ 'ಫಿಫಾ' ಫೀವರ್; ಎಲ್ಲಡೆ ರಾರಾಜಿಸುತ್ತಿದೆ ನೈಮರ್, ಮೆಸ್ಸಿ, ರೊನಾಲ್ಡೊ ಕಟೌಟ್
ರಾಹುಲ್ಗೆ ಬಿಡುವಿಲ್ಲದ ರಾಷ್ಟ್ರೀಯ ತಂಡದ ಕರ್ತವ್ಯ ಇರುವ ಕಾರಣ ಅವರ ಲಭ್ಯತೆ ಕಷ್ಟ ಸಾಧ್ಯ. ಇದೇ ಕಾರಣಕ್ಕೆ ಫ್ರಾಂಚೈಸಿಗಳು ಅವರನ್ನು ಖರೀದಿಸಲು ಮುಂದಾಗಿಲ್ಲ. ಒಂದೊಮ್ಮೆ ಬಿಡ್ ಮಾಡಿ ಖರೀದಿಸಿದರೂ ಅವರು ಟೂರ್ನಿಗೆ ಅಲಭ್ಯರಾದರೆ ಆಗ ತಂಡದ ಮೊತ್ತ ಅನಗತ್ಯವಾಗಿ ನಷ್ಟವಾದಂತಾಗುತ್ತದೆ. ಈ ಹಣವನ್ನು ಲಭ್ಯವಿರುವ ಆಟಗಾರರಿಗೆ ಬಳಸಿಕೊಂಡರೆ ಫ್ರಾಂಚೈಸಿಗಳಿಗೂ ಪ್ರಯೋಜನವಾಗುತ್ತದೆ.
ರಾಹುಲ್ ಪ್ರಸ್ತುತ ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತದ ತಂಡದ ಭಾಗವಾಗಿದ್ದಾರೆ ಮತ್ತು ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಅಫ್ಘಾನಿಸ್ತಾನ ಏಕದಿನ ಸರಣಿ ಮತ್ತು ಇಂಗ್ಲೆಂಡ್ ಪ್ರವಾಸ ಸೇರಿದಂತೆ ಭಾರತದ ಮುಂಬರುವ ಅಂತರರಾಷ್ಟ್ರೀಯ ಕಾರ್ಯಯೋಜನೆಗಳಲ್ಲಿಯೂ ಅವರು ಭಾಗಿಯಾಗುವ ನಿರೀಕ್ಷೆಯಿದೆ.
ದೇವದತ್ ಪಡಿಕ್ಕಲ್, ಮಾಯಾಂಕ್ ಅಗರ್ವಾಲ್, ವಿಜಯ್ ಕುಮಾರ್ ವೈಶಾಕ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ಸೇರಿದಂತೆ ಹಲವಾರು ಕರ್ನಾಟಕದ ಆಟಗಾರರು ಹರಾಜಿನಲ್ಲಿ ಗಮನ ಸೆಳೆದರು. ತಂಡದ ಮಿತಿ ಕನಿಷ್ಠ 16 ಆಟಗಾರರು ಮತ್ತು ಗರಿಷ್ಠ 18 ಆಟಗಾರರು ಹರಾಜಿನ ಮೂಲಕ ಸ್ವಾಧೀನಪಡಿಸಿಕೊಂಡಿದ್ದಾರೆ.
ಮಹಾರಾಜ ಟ್ರೋಫಿಯ ಐದನೇ ಆವೃತ್ತಿಯು ಜೂನ್ 12 ರಿಂದ ಜುಲೈ 12 ರವರೆಗೆ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. 6 ತಂಡಗಳು ಪ್ರಶಸ್ತಿ ಕಣದಲ್ಲಿರಲಿವೆ. ಜೂ.20-26 ಮೈಸೂರಲ್ಲಿ ಮೊದಲ ಚರಣ ನಡೆಯಲಿದ್ದು, ಜೂ.27-ಜು.3, 2ನೇ ಚರಣ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಈ ಎರಡು ನಗರಗಳು ತಲಾ 12 ಪಂದ್ಯಕ್ಕೆ ಆತಿಥ್ಯ ನೀಡಲಿವೆ. ಜು.5-12ರ ವರೆಗೂ ಬೆಂಗಳೂರಲ್ಲಿ ಫೈನಲ್ ಸೇರಿ 10 ಪಂದ್ಯಗಳು ನಡೆಯಲಿವೆ.
ಜೂ.20ರಂದು ಮೊದಲ ದಿನ ಬೆಂಗ್ಳೂರು ಬ್ಲಾಸ್ಟರ್ಸ್-ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಲಿವೆ. 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್-ಶಿವಮೊಗ್ಗ ಯೋಧಾಸ್ ಮುಖಾಮುಖಿಯಾಗಲಿವೆ.