ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುಲೀಪ್ ಟ್ರೋಫಿ ಫೈನಲ್‌ನಿಂದ ಹಿಂದೆ ಸರಿದ ರಾಹುಲ್

K.L. Rahul: "ರಿಕಿ ಭುಯಿ ಈ ಹಿಂದೆ ಆರಂಭಿಕ ಆಟಗಾರನಾಗಿ ಆಡಿದ್ದಾರೆ, ಆದರೆ ಅವರು ಕೆಲವು ಸಮಯದಿಂದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅವರು ಹಿರಿಯ ಆಟಗಾರ ಮತ್ತು ಅವರು ಪಾತ್ರಕ್ಕೆ ಹೊಂದಿಕೊಳ್ಳಬಲ್ಲರು, ಅದಕ್ಕಾಗಿಯೇ ಅವರು ಜಗ್ಗಿ ಅವರೊಂದಿಗೆ ಆರಂಭಿಕನಾಗಿ ಆಡಬಹುದೆಂದು ನಾವು ಭಾವಿಸಿದ್ದೇವೆ" ಎಂದು ತಿಲಕ್ ವಿವರಿಸಿದರು.

K.L. Rahul

ಚೆನ್ನೈ, ಸೆ. 5: ಭಾನುವಾರ ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪೂರ್ವ ವಲಯ ವಿರುದ್ಧ ದಕ್ಷಿಣ ವಲಯದ ಪರವಾಗಿ ಕೆ.ಎಲ್. ರಾಹುಲ್ ಆಡುವುದಿಲ್ಲ. ಆರಂಭದಲ್ಲಿ ರಾಹುಲ್ ಅವರನ್ನು ದಕ್ಷಿಣ ವಲಯದ ಫೈನಲ್‌ಗೆ ಸೇರಿಸಿಕೊಳ್ಳಲಾಗುವುದು ಎಂದು ವರದಿಗಳು ಸೂಚಿಸಿದ್ದವು. ಆದರೆ, ಪಂದ್ಯಕ್ಕೂ ಮುನ್ನ ಶನಿವಾರ ನಾಯಕ ತಿಲಕ್ ವರ್ಮಾ ಅವರು ರಾಹುಲ್‌ ತಂಡದ ಭಾಗವಾಗಿರುವುದಿಲ್ಲ ಎಂದು ದೃಢಪಡಿಸಿದರು.

ಆದಾಗ್ಯೂ, ದೇವದತ್ ಪಡಿಕ್ಕಲ್ ಮತ್ತು ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲಿದ್ದಾರೆ. ಪಡಿಕ್ಕಲ್ ಉತ್ತಮ ಫಾರ್ಮ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ಶ್ರೀಲಂಕಾ ಪ್ರವಾಸದಲ್ಲಿ ಸರಣಿಯಲ್ಲಿ ಎರಡು ಶತಕ ಬಾರಿಸಿ ಮಿಂಚಿದ್ದರು.

"ಪಡಿಕ್ಕಲ್‌ ತಂಡಕ್ಕೆ ಬರುವುದರಿಂದ ನಮ್ಮ ಬ್ಯಾಟಿಂಗ್ ಲೈನ್ ಅಪ್ ನಿಜವಾಗಿಯೂ ಬಲಗೊಳ್ಳುತ್ತದೆ" ಎಂದು ತಿಲಕ್ ವರ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾತ್ರವಲ್ಲದೆ ಪಡಿಕ್ಕಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ದೃಢಪಡಿಸಿದರು.

"ಕಳೆದ ಎರಡು ಅಥವಾ ಮೂರು ಪಂದ್ಯಗಳಲ್ಲಿ ನಾವು ಅವರಿಂದ ಕಂಡ ಫಾರ್ಮ್ ನಿಜಕ್ಕೂ ಅದ್ಭುತವಾಗಿದೆ, ಆದ್ದರಿಂದ ಅವರನ್ನು ಹೊಂದಿರುವುದು ನಮಗೆ ದೊಡ್ಡ ಉತ್ತೇಜನ ನೀಡುತ್ತದೆ" ಎಂದು ತಿಲಕ್‌ ಹೇಳಿದರು.

"ಸಿರಾಜ್‌ ಮತ್ತು ಪಡಿಕ್ಕಲ್‌ ಫಾರ್ಮ್ ನಮಗೆ ತುಂಬಾ ಸಹಕಾರಿಯಾಗಲಿದೆ. ಇದು ನಿಜಕ್ಕೂ ಸಹಾಯಕವಾಗಲಿದೆ. ತಂಡದಲ್ಲಿ ಸಾಕಷ್ಟು ಯುವ ಆಟಗಾರರು ಇರುವುದರಿಂದ ಅವರು ತಮ್ಮ ಅನುಭವವನ್ನು ಆಟಗಾರರೊಂದಿಗೆ ಹಂಚಿಕೊಳ್ಳಬಹುದು" ಎಂದು ಅವರು ಹೇಳಿದರು.

ಸೆಮಿಫೈನಲ್‌ನಲ್ಲಿ ಆರಂಭಿಕ ಆಟಗಾರನಾಗಿದ್ದ ರಿಕಿ ಭೂಯಿ, ಎನ್. ಜಗದೀಶನ್ ಜೊತೆಗೆ ಅಗ್ರ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರೆ. "ರಿಕಿ ಭುಯಿ ಈ ಹಿಂದೆ ಆರಂಭಿಕ ಆಟಗಾರನಾಗಿ ಆಡಿದ್ದಾರೆ, ಆದರೆ ಅವರು ಕೆಲವು ಸಮಯದಿಂದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅವರು ಹಿರಿಯ ಆಟಗಾರ ಮತ್ತು ಅವರು ಪಾತ್ರಕ್ಕೆ ಹೊಂದಿಕೊಳ್ಳಬಲ್ಲರು, ಅದಕ್ಕಾಗಿಯೇ ಅವರು ಜಗ್ಗಿ ಅವರೊಂದಿಗೆ ಆರಂಭಿಕನಾಗಿ ಆಡಬಹುದೆಂದು ನಾವು ಭಾವಿಸಿದ್ದೇವೆ" ಎಂದು ತಿಲಕ್ ವಿವರಿಸಿದರು.