ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜಿಸುವುದು ಖಚಿತವಿಲ್ಲ; ಬಿಸಿಸಿಐ

IPL 2026: ಕ್ರೀಡಾಂಗಣವು ಗಮನಾರ್ಹ ಭದ್ರತೆ ಮತ್ತು ಮೂಲಸೌಕರ್ಯ ಮಾರ್ಪಾಡುಗಳಿಗೆ ಒಳಗಾಗುತ್ತಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ (ಕೆಎಸ್‌ಸಿಎ) ವೆಂಕಟೇಶ್ ಪ್ರಸಾದ್ ಅವರು ಸ್ಥಳದಲ್ಲಿ 13 ಹೊಸ ಗೇಟ್‌ಗಳನ್ನು ನಿರ್ಮಿಸುವ ಮೂಲಕ ದಟ್ಟಣೆ ನಿವಾರಣೆಗೆ ಆದ್ಯತೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

virat kohli rcb

ಬೆಂಗಳೂರು, ಮಾ.12: ಬಹುನಿರೀಕ್ಷಿತ ಐಪಿಎಲ್‌ 2026ರ(IPL 2026) ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಪ್ರಕಟಿಸಿತ್ತು. ಮೊದಲ ಹಂತದಲ್ಲಿ 20 ಪಂದ್ಯಗಳು ನಡೆಯಲಿದೆ. ಮಾರ್ಚ್ 28ರಂದು ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಮತ್ತು ಸನ್‌ರೈಸರ್ಸ್‌(RCB v SRH) ನಡುವೆ ನಿಗದಿಯಾಗಿದೆ. ಆದಾಗ್ಯೂ, ಆರ್‌ಸಿಬಿ ಬೆಂಗಳೂರಿನಲ್ಲಿ ತಮ್ಮ ತವರು ಪಂದ್ಯಗಳನ್ನು ಆಡಲು ಅವಕಾಶ ನೀಡುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಕರ್ನಾಟಕ ಸರ್ಕಾರ ನೇಮಿಸಿದ ತಜ್ಞರ ಸಮಿತಿ ಪರಿಶೀಲನೆ ನಡೆಸಿದ ನಂತರವೇ ಅನುಮತಿ ನೀಡಲಾಗುವುದು ಎಂದು ಬಿಸಿಸಿಐ ಘೋಷಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯ ಕುರಿತು ಸರ್ಕಾರ ನೇಮಕ ಮಾಡಿರುವ ಪರಿಶೀಲನಾ ಸಮಿತಿಯು ಇದೇ 13ರಂದು ಅವಲೋಕನ ಮಾಡಲಿದೆ. ತದನಂತರವಷ್ಠೇ ಸಮಿತಿಯು ವರದಿ ನೀಡಲಿದೆ. ಹೋದ ವರ್ಷ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ದುರ್ಮರಣಕ್ಕೀಡಾಗಿದ್ದರು. ಈ ದುರ್ಘಟನೆ ಬಳಿಕ ಇಲ್ಲಿ ಯಾವುದೇ ಕ್ರೀಡಾ ಚಟುವಟಿಕೆ ನಡೆದಿಲ್ಲ.

"ಬೆಂಗಳೂರಿನಲ್ಲಿ ನಿಗದಿಯಾಗಿರುವ ಪಂದ್ಯಗಳು ಕರ್ನಾಟಕ ಸರ್ಕಾರ ರಚಿಸಿದ ತಜ್ಞರ ಸಮಿತಿಯ ಅನುಮತಿಗೆ ಒಳಪಟ್ಟಿರುತ್ತವೆ" ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. "ಸಮಿತಿಯು ಮಾರ್ಚ್ 13, 2026 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸಭೆ ಮತ್ತು ಪರಿಶೀಲನೆ ನಡೆಸಲಿದೆ, ಈ ಸಮಯದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕ್ರೀಡಾಂಗಣದ ಸಿದ್ಧತೆಯನ್ನು ನಿರ್ಣಯಿಸಲು ಪಂದ್ಯದ ದಿನದ ವ್ಯವಸ್ಥೆಗಳ ಪೂರ್ಣ ಪ್ರಮಾಣದ ಅಣಕು ಪ್ರದರ್ಶನವನ್ನು ಕೈಗೊಳ್ಳಲಾಗುತ್ತದೆ" ಎಂದು ಬಿಸಿಸಿಐ ತಿಳಿಸಿದೆ. ಒಂದೊಮ್ಮೆ ಅನುಮತಿ ಸಿಗದೇ ಇದ್ದರೆ ಆರ್‌ಸಿಬಿ ತನ್ನ ಎಲ್ಲ ಪಂದ್ಯಗಳನ್ನು ಎರಡನೇ ತವರಾದ ರಾಯ್‌ಪುರದಲ್ಲಿ ಆಡಲಿದೆ.

RCB IPL 2026 Schedule: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಳಾಪಟ್ಟಿ!

ಕ್ರೀಡಾಂಗಣವು ಗಮನಾರ್ಹ ಭದ್ರತೆ ಮತ್ತು ಮೂಲಸೌಕರ್ಯ ಮಾರ್ಪಾಡುಗಳಿಗೆ ಒಳಗಾಗುತ್ತಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ (ಕೆಎಸ್‌ಸಿಎ) ವೆಂಕಟೇಶ್ ಪ್ರಸಾದ್ ಅವರು ಸ್ಥಳದಲ್ಲಿ 13 ಹೊಸ ಗೇಟ್‌ಗಳನ್ನು ನಿರ್ಮಿಸುವ ಮೂಲಕ ದಟ್ಟಣೆ ನಿವಾರಣೆಗೆ ಆದ್ಯತೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಇನ್ನೊಂದೆಡೆ ಪಶ್ಚಿಮ ಏಷ್ಯಾದಲ್ಲಿ ನಡೆದಿರುವ ಯುದ್ಧದಿಂದಾಗಿ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಇರುವ ದೋಹಾ ಮತ್ತು ದುಬೈಗಳಲ್ಲಿ ವಿಮಾನಯಾನವೂ ಅಸ್ತವ್ಯಸ್ತವಾಗಿದೆ. ಆದ್ದರಿಂದ ವಿದೇಶಿ ಆಟಗಾರರು ಐಪಿಎಲ್ ಟೂರ್ನಿಗೆ ಆಗಮಿಸುವ ಕುರಿತು ಗೊಂದಲಗಳು ಮೂಡಿವೆ.