ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs SRH: ʻಬ್ರೇಕ್‌ ತುಂಬಾ ನೆರವು ನೀಡಿದೆʼ-ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ವಿರಾಟ್‌ ಕೊಹ್ಲಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 69 ರನ್‌ಗಳ ಅಜೇಯ ಇನಿಂಗ್ಸ್ ಆಡಿದರು. ಆ ಮೂಲಕ ಆರ್‌ಸಿಬಿ ತಂಡದ 6 ವಿಕೆಟ್‌ ಗೆಲುವಿಗೆ ನೆರವು ನೀಡಿದರು. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ವಿರಾಮದ ನಂತರ ರಿಫ್ರೆಶ್ ಆಗಿ ಮರಳಿದ್ದು ತಮ್ಮ ಆಟಕ್ಕೆ ತುಂಬಾ ಸಹಾಯವಾಗಿದೆ ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ (RCB vs SRH) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಪಂದ್ಯದ ಬಳಿಕ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಮಾತನಾಡಿ, ತಮ್ಮ ಬ್ಯಾಟಿಂಗ್‌ ಯಶಸ್ವಿ ಬಹುಮುಖ್ಯ ಕಾರಣವೇನೆಂದು ರಿವೀಲ್‌ ಮಾಡಿದ್ದಾರೆ. ಐಪಿಎಲ್‌ ಟೂರ್ನಿಗೂ ಮುನ್ನ ಸಿಕ್ಕ ವಿರಾಮ ತಮಗೆ ಮತ್ತೆ ಉತ್ಸಾಹ ತುಂಬಲು ಸಹಾಯ ಮಾಡಿತು ಎಂದು ಹೇಳಿದ್ದಾರೆ. ಗೆಲುವಿಗೆ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಕೊಹ್ಲಿ ಅವರ ಅಜೇಯ 69 ಮತ್ತು ದೇವದತ್ ಪಡಿಕ್ಕಲ್ ಅವರ 61 ರನ್‌ಗಳ ಬಲದಿಂದ 15.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು.

ಪಂದ್ಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, "ಇಲ್ಲಿಗೆ ಮರಳಿರುವುದು ಸಂತೋಷ ತಂದಿದೆ. ಕಳೆದ ವರ್ಷ ನಾನು ಆಡಿದ ಕೊನೆಯ ಪಂದ್ಯ ಐಪಿಎಲ್ ಫೈನಲ್ ಆಗಿತ್ತು, ಆದರೆ ಇತ್ತೀಚಿನ ಏಕದಿನ ಸರಣಿಯಲ್ಲಿ ನಾನು ಬ್ಯಾಟಿಂಗ್ ಮಾಡಿದ ರೀತಿ ನನ್ನ ಲಯವನ್ನು ಮರಳಿ ಪಡೆಯಲು ಸಹಾಯ ಮಾಡಿತು. ನಾನು ಸಾಮಾನ್ಯವಾಗಿ ಆಡದ ಹೊಡೆತಗಳನ್ನು ನಾನು ಆಡುತ್ತಿರಲಿಲ್ಲ. ನಾನು ಉತ್ತಮ ಲಯದಲ್ಲಿದ್ದೇನೆ ಎಂದು ನನಗೆ ತಿಳಿದಿದೆ ಮತ್ತು ನನ್ನ ಫಿಟ್ನೆಸ್ ಬಗ್ಗೆಯೂ ವ್ಯಾಪಕವಾಗಿ ಕೆಲಸ ಮಾಡಿದ್ದರಿಂದ, ನನ್ನ ಪ್ರದರ್ಶನವು ಬಲವಾಗಿರುತ್ತದೆ ಎಂದು ನನಗೆ ವಿಶ್ವಾಸವಿತ್ತು. ನಮಗೆ ಉತ್ತಮ ಆರಂಭವನ್ನು ಪಡೆಯಲು ಅವಕಾಶ ಸಿಕ್ಕಿತು, ಮತ್ತು ಅದನ್ನೇ ನಾವು ಮಾಡಿದ್ದೇವೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಂದೇ ಸ್ವರೂಪದಲ್ಲಿ ಆಡುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕಳೆದ 15 ವರ್ಷಗಳಿಂದ ನಾವು ಹೊಂದಿರುವ ವೇಳಾಪಟ್ಟಿ ಮತ್ತು ನಾವು ಆಡಿರುವ ಕ್ರಿಕೆಟ್ ಪ್ರಮಾಣವನ್ನು ಗಮನಿಸಿದರೆ, ತಯಾರಿಯ ಕೊರತೆಗಿಂತ ಹೆಚ್ಚಾಗಿ ಹೆಚ್ಚು ಆಡುವುದರಿಂದ ಉಂಟಾಗುವ ಆಯಾಸವೇ ನನಗೆ ಯಾವಾಗಲೂ ಅಪಾಯವಾಗಿದೆ. ಆದ್ದರಿಂದ, ಈ ವಿರಾಮಗಳು ನನಗೆ ಉಲ್ಲಾಸದಿಂದ ಮರಳಲು ಅನುವು ಮಾಡಿಕೊಡುವಲ್ಲಿ ಅಪಾರ ಸಹಾಯಕವಾಗಿವೆ," ಎಂದರು.

"ನಾನು ಆಟವಾಡಲು ಹೊರಟಾಗಲೆಲ್ಲಾ, ನನ್ನ ಗುರಿ 120 ಪ್ರತಿಶತ ನೀಡುವುದು. ನಾನು ಎಂದಿಗೂ ಸಿದ್ಧನಾಗದೆ ಪಂದ್ಯಕ್ಕೆ ಹೋಗುವುದಿಲ್ಲ. ಹೆಚ್ಚುವರಿ ವಿಶ್ರಾಂತಿ ನನಗೆ ಮಾನಸಿಕವಾಗಿ ಉಲ್ಲಾಸಗೊಳ್ಳಲು ಸಹಾಯ ಮಾಡಿದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಫ್ರೆಶ್ ಆಗಿ ಆಡಿದರೆ, ನೀವು ತಂಡಕ್ಕೆ ಪರಿಣಾಮಕಾರಿಯಾಗಿ ಕೊಡುಗೆ ನೀಡಬಹುದು ಮತ್ತು ಪ್ರತಿಯೊಬ್ಬ ಆಟಗಾರನು ಮಾಡಲು ಬಯಸುವುದು ಅದನ್ನೇ," ಎಂದು ಆರ್‌ಸಿಬಿ ಮಾಜಿ ನಾಯಕ ತಿಳಿಸಿದ್ದಾರೆ.

RCB vs SRH: ಅರ್ಧಶತಕ ಬಾರಿಸಿ 3000 ಐಪಿಎಲ್‌ ರನ್‌ಗಳನ್ನು ಪೂರ್ಣಗೊಳಿಸಿದ ಇಶಾನ್‌ ಕಿಶನ್!

ದೇವದತ್ ಪಡಿಕ್ಕಲ್ ಅವರ 26 ಎಸೆತಗಳಲ್ಲಿ 61 ರನ್ ಗಳಿಸಿದ ಇನಿಂಗ್ಸ್ ಅದ್ಭುತ ಎಂದು ಬಣ್ಣಿಸಿದ ಅವರು, "ಪವರ್‌ಪ್ಲೇ ಸಮಯದಲ್ಲಿ ನಾನು ಆಕ್ರಮಣಕಾರಿಯಾಗಿ ಆಡಲು ಬಯಸಿದ್ದೆ, ಆದರೆ ಅವರು ಆಡುತ್ತಿರುವ ರೀತಿ ನೋಡಿದಾಗ, ನಾನು ಅವರಿಗೆ ಹೆಚ್ಚಿನ ಸ್ಟ್ರೈಕ್ ನೀಡಲು ಪ್ರಯತ್ನಿಸಿದೆ. ಅವರು ಅದ್ಭುತ ಇನ್ನಿಂಗ್ಸ್ ಆಡಿದರು, ಅದು ಪಂದ್ಯವನ್ನು ಸನ್‌ರೈಸರ್ಸ್‌ನ ವ್ಯಾಪ್ತಿಯಿಂದ ಸಂಪೂರ್ಣವಾಗಿ ದೂರ ಮಾಡಿತು" ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

Vishakha Bhat Heggar

View all posts by this author