ಹುಬ್ಬಳ್ಳಿ, ಫೆ.26: ಚೊಚ್ಚಲ ಟ್ರೋಫಿ(Ranji Trophy final) ಮೇಲೆ ಕಣ್ಣಿಟ್ಟಿರುವ ಜಮ್ಮು-ಕಾಶ್ಮೀರ ತಂಡ ಕರ್ನಾಟಕ(Karnataka vs J&K) ವಿರುದ್ಧದ ಫೈನಲ್ ಪಂದ್ಯದಲ್ಲಿ ಉತ್ತಮ ಹಿಡಿತ ಸಾಧಿಸಿದೆ. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಂಗ್ನಲ್ಲಿಯೂ ರಾಜ್ಯ ತಂಡಕ್ಕೆ ಬಲವಾದ ಹೊಡೆತ ನೀಡಿದೆ. ಒಂದೊಮ್ಮೆ ಪಂದ್ಯ ಡ್ರಾ ಗೊಂಡರೆ ವಿಜೇತರ ನಿರ್ಧಾರ ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜಮ್ಮು-ಕಾಶ್ಮೀರ ಬ್ಯಾಟರ್ಗಳು ಕರ್ನಾಟಕದ ಬೌಲರ್ಗಳ ಬೆವರಿಳಿಸಿದರು. ಎರಡುವರೆ ದಿನ ಬ್ಯಾಟಿಂಗ್ ನಡೆಸಿ 584 ರನ್ ಬಾರಿಸಿದರು. ಬೃಹತ್ ಮೊತ್ತ ಬೆನ್ನಟ್ಟುತ್ತಿರುವ ಕರ್ನಾಟಕ ಸದ್ಯ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಮಯಾಂಕ್ ಅಗರ್ವಾಲ್ ಶತಕ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ಫಲಿತಾಂಶವನ್ನು ಈ ಕೆಳಗಿನಂತೆ ನಿರ್ಧರಿಸಲಾಗುತ್ತದೆ.
ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರೆ, ಆ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಜಮ್ಮು-ಕಾಶ್ಮೀರ ಮುನ್ನಡೆ ಸಾಧಿಸಿದರೆ ಆ ತಂಡ ಗೆಲುವು ಸಾಧಿಸುತ್ತದೆ.
ಆರ್ಸಿಬಿ ಅಥವಾ ರಾಜಸ್ಥಾನ್ ರಾಯಲ್ಸ್ ಖರೀದಿಸಲು ಸ್ಪರ್ಧೆಗೆ ಇಳಿದ ಡೇವಿಡ್ ಬ್ಲಿಟ್ಜರ್
ಕರ್ನಾಟಕ ತಂಡವು ಜಮ್ಮು-ಕಾಶ್ಮೀರದ ಮೊದಲ ಇನ್ನಿಂಗ್ಸ್ ಸ್ಕೋರ್ ಅನ್ನು ದಾಟುವ ಮೊದಲು ಅಂತಿಮ ದಿನದಂದು ಬೌಲಿಂಗ್ ಮಾಡಿದರೆ, ಜಮ್ಮು ಮತ್ತು ಕಾಶ್ಮೀರ ತಂಡವು ಗೆಲ್ಲುತ್ತದೆ.
ಕರ್ನಾಟಕವು ತನ್ನ ಮೊದಲ ಇನ್ನಿಂಗ್ಸ್ ಪೂರ್ಣಗೊಳಿಸಲು ಮಳೆ ಅಡ್ಡಿಪಡಿಸಿದರೆ, ಗುಂಪು ಹಂತದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಕಾರಣ ಕರ್ನಾಟಕವನ್ನು ವಿಜೇತರೆಂದು ಘೋಷಿಸಲಾಗುತ್ತದೆ.
ಈ ಹಿಂದೆ ಯಾವುದೇ ಕಾರಣದಿಂದಾಗಿ ಎರಡೂ ತಂಡಗಳ ಮೊದಲ ಇನ್ನಿಂಗ್ಸ್ ಮುಗಿಯದ ಪಂದ್ಯಗಳಲ್ಲಿ, ಮೊದಲ ಇನ್ನಿಂಗ್ಸ್ ಪೂರ್ಣಗೊಳ್ಳಲು ಆರನೇ ದಿನವನ್ನು ನೀಡಲಾಗುತ್ತಿತ್ತು. 1981-82ರಲ್ಲಿ ಕರ್ನಾಟಕ ಮತ್ತು ದೆಹಲಿ ನಡುವಿನ ರಣಜಿ ಟ್ರೋಫಿಯ ಫೈನಲ್ ಪಂದ್ಯವನ್ನು 6 ನೇ ದಿನಕ್ಕೆ ವಿಸ್ತರಿಸಲಾಯಿತು. ಐದು ದಿನಗಳ ಆಟವು ಮೊದಲ ಇನ್ನಿಂಗ್ಸ್ನಲ್ಲಿಯೂ ಸಹ ಎರಡೂ ತಂಡಗಳು 700 ಕ್ಕಿಂತ ಹೆಚ್ಚು ರನ್ ಗಳಿಸಿದ್ದರಿಂದ ಫಲಿತಾಂಶವನ್ನು ನೀಡಲಿಲ್ಲ. ಅಂತಿಮವಾಗಿ ಕರ್ನಾಟಕವು ಪಂದ್ಯವನ್ನು ಸೋತಿತ್ತು.