ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Cyber Crime: ಡಿಜಿಟಲ್ ಆರೆಸ್ಟ್ ಮೂಲಕ ಮಾಜಿ ಶಾಸಕರಿಗೇ 30 ಲಕ್ಷ ರೂ. ವಂಚನೆ!

ಡಿಜಿಟಲ್ ಆರೆಸ್ಟ್ ಮೂಲಕ ಮಾಜಿ ಶಾಸಕರಿಗೇ 30 ಲಕ್ಷ ರೂ. ವಂಚನೆ!

Digital Arrest: ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್​​ನ ಮಾಜಿ ಶಾಸಕ ಗುಂಡಪ್ಪ ವಕೀಲ್​ಗೆ ವಂಚನೆ ಮಾಡಲಾಗಿದೆ. ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್‌​ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಆರೆಸ್ಟ್ ನಾಟಕವಾಡಿದ್ದಾರೆ.

Murder Case: ತಮಾಷೆಯಿಂದ ಶುರುವಾಗಿ ಕೊಲೆಯಲ್ಲಿ ಮುಕ್ತಾಯವಾದ ಹಣ್ಣಿನ ವ್ಯಾಪಾರಿಗಳ ಜಗಳ

ತಮಾಷೆಯಿಂದ ಶುರುವಾಗಿ ಕೊಲೆಯಲ್ಲಿ ಮುಕ್ತಾಯವಾದ ಹಣ್ಣಿನ ವ್ಯಾಪಾರಿಗಳ ಜಗಳ

Chikkaballapura: ಅರ್ಬಾಜ್ ಮತ್ತು ಫರ್ಹಾದ್‌, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಕೂಡ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ನಿನ್ನೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಅರ್ಬಾಜ್‌ನ ಕೊಲೆ ಆಗಿದೆ.

Exemption from OC: ಬೆಂಗಳೂರಿನಲ್ಲಿ 1200 ಚದರಡಿಯ ಕಟ್ಟಡಗಳಿಗೆ ಇನ್ನು ಒಸಿ ಅಗತ್ಯವಿಲ್ಲ: ಸರಕಾರ ಆದೇಶ

ಬೆಂಗಳೂರಿನಲ್ಲಿ 1200 ಚದರಡಿಯ ಕಟ್ಟಡಗಳಿಗೆ ಇನ್ನು ಒಸಿ ಅಗತ್ಯವಿಲ್ಲ: ಆದೇಶ

Bengaluru: 1200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣಗೊಂಡಿರುವ ಮತ್ತು ನಿರ್ಮಿಸುವ ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ತಳ ಮಹಡಿ (ಸ್ಟಿಲ್ಟ್‌) ಸಹಿತ ಮೂರು ಮಹಡಿ ವಾಸದ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ಸಿಗಲಿದೆ. ಜತೆಗೆ, ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಪಡೆಯುವಲ್ಲಿನ ಅಡಚಣೆ ನಿವಾರಣೆಯಾಗಲಿದೆ.

Lokayukta Raid: ಬೆಳ್ಳಂಬೆಳಗ್ಗೆಯೇ ಮೆಗಾ ಲೋಕಾಯುಕ್ತ ರೈಡ್‌, ರಾಜ್ಯಾದ್ಯಂತ 69 ಕಡೆ ದಾಳಿ

ಬೆಳ್ಳಂಬೆಳಗ್ಗೆಯೇ ಮೆಗಾ ಲೋಕಾಯುಕ್ತ ರೈಡ್‌, ರಾಜ್ಯಾದ್ಯಂತ 69 ಕಡೆ ದಾಳಿ

Lokayukta raid: ದಾಳಿ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಹಲವು ಅಧಿಕಾರಿಗಳು ಎರಡಕ್ಕಿಂತ ಹೆಚ್ಚು ಕಡೆ ಐಷಾರಾಮಿ ಮನೆಗಳು, ಔಟ್‌ಹೌಸ್‌ಗಳು, ಫ್ಯಾಕ್ಟರಿಗಳು, ಆಸ್ತಿಗಳನ್ನು ಹೊಂದಿದ್ದು, ಎಲ್ಲ ಕಡೆಗಳಿಗೂ ಲೋಕಾಯುಕ್ತ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.

Murder Case: ಪ್ರೇಮ ಪ್ರಕರಣ, ರೈಲಿನಡಿಗೆ ತಳ್ಳಿ ಯುವಕನ ಕೊಲೆ

ಪ್ರೇಮ ಪ್ರಕರಣ, ರೈಲಿನಡಿಗೆ ತಳ್ಳಿ ಯುವಕನ ಕೊಲೆ

Bengaluru: ಮೂವರೂ ಬೈಯಪ್ಪನಹಳ್ಳಿಯಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿದ್ದರು ಮತ್ತು ಖಾಸಗಿ ಕಂಪನಿಯೊಂದರ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪುನೀತ್ ಇತ್ತೀಚೆಗೆ ಇಸ್ಮಾಯಿಲ್‌ನನ್ನು ತನ್ನ ಗೆಳತಿಗೆ ಪರಿಚಯಿಸಿದ್ದ. ಇಸ್ಮಾಯಿಲ್ ಆಕೆಯ ಫೋನ್‌ ಸಂಖ್ಯೆಯನ್ನು ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದ್ದ.

Lehenga Sarees Trend 2025: ಮುಂಬರುವ ನವರಾತ್ರಿ ಸಂಭ್ರಮಕ್ಕೆ ಸಾಥ್ ನೀಡಲು ಸಜ್ಜಾದ ಲೆಹೆಂಗಾ ಸೀರೆಗಳು

ಮುಂಬರುವ ನವರಾತ್ರಿ ಸಂಭ್ರಮಕ್ಕೆ ಸಾಥ್ ನೀಡಲು ಸಜ್ಜಾದ ಲೆಹೆಂಗಾ ಸೀರೆಗಳು

Lehenga Sarees Trend 2025: ಮುಂಬರುವ ನವರಾತ್ರಿಯ ಸಂಭ್ರಮಕ್ಕೆ ಸಾಥ್ ನೀಡಲು ಲೆಹೆಂಗಾ ಶೈಲಿಯ ಸೀರೆಗಳು ಹಾಗೂ ಸೀರೆಯ ಲುಕ್ ನೀಡುವ ಲೆಹೆಂಗಾಗಳು ಸಜ್ಜಾಗಿವೆ. ಯಾವ್ಯಾವ ಬಗೆಯವು ಎಂಟ್ರಿ ನೀಡಿವೆ? ಈ ಎಲ್ಲದರ ಕುರಿತಂತೆ ಡಿಸೈನರ್‌ಗಳು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

Karnataka Weather: ಯೆಲ್ಲೋ ಅಲರ್ಟ್‌; ಇಂದು ಬೆಂಗಳೂರು, ತುಮಕೂರು ಸೇರಿ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ!

ಇಂದು ಬೆಂಗಳೂರು, ತುಮಕೂರು ಸೇರಿ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ!

Rain News: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಗಾಳಿಯ ವೇಗ (ಗಂಟೆಗೆ 30-40 ಕಿ.ಮೀ) ಇರುವ ಗಾಳಿ ಬೀಸಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

Namma Metro Yellow Line: ಇಂದಿನಿಂದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲು ಓಡಾಟ, 19 ನಿಮಿಷಕ್ಕೊಂದು ರೈಲು

ಇಂದಿನಿಂದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲು ಓಡಾಟ

Bengaluru: ರೈಲುಗಳ ಸಂಚಾರದ ವೇಳಾಪಟ್ಟಿ ಬದಲಾವಣೆಯಾಗಿದ್ದು, ರೈಲುಗಳ ನಡುವಿನ ಅಂತರ 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಿದೆ. ಆಗಸ್ಟ್ 10 ರಿಂದ ಮೂರು ರೈಲುಗಳೊಂದಿಗೆ ಕಾರ್ಯಾರಂಭ ಮಾಡಲಾಗಿತ್ತು. ಮೂರು ವಾರದ ಹಿಂದೆ ಕೊಲ್ಕತ್ತಾದ ತೀತಾಗಢ್ ರೈಲು ಫ್ಯಾಕ್ಟರಿಯಿಂದ ಈ ರೈಲು ಸೆಟ್ ಗಳು ಬೆಂಗಳೂರಿಗೆ ಬಂದು ಹೆಬ್ಬಗೋಡಿ ಡಿಪೋದಲ್ಲಿ ಜೋಡಣೆ ಮಾಡಲಾಗಿದೆ.

ED Raid: ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ 21.43 ಕೆಜಿ ಚಿನ್ನದ ಬಿಸ್ಕೆಟ್‌, 10.98 ಕೆಜಿ ಚಿನ್ನಲೇಪಿತ ಬೆಳ್ಳಿ ಗಟ್ಟಿ ಜಪ್ತಿ!

ಶಾಸಕ ವೀರೇಂದ್ರ ಪಪ್ಪಿ ಮನೆಯಲ್ಲಿ 21.43 ಕೆಜಿ ಚಿನ್ನದ ಬಿಸ್ಕೆಟ್‌ ಜಪ್ತಿ!

K. C. Veerendra Puppy: ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಡಿ ಮಾಹಿತಿ ಹಂಚಿಕೊಂಡಿದೆ. ಕೆ.ಸಿ. ವೀರೇಂದ್ರ ಮತ್ತು ಇತರರ ವಿರುದ್ಧ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಪಿಎಂಎಲ್‌ಎ ಕಾಯ್ದೆ 2002ರಡಿ ಬೆಂಗಳೂರಿನ ಇಡಿಯಿಂದ, ಚಳ್ಳಕೆರೆಯಲ್ಲಿ ಸೆ.6ರಂದು ದಾಳಿ ನಡೆಸಲಾಗಿತ್ತು.

MLA Satish Sail: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಬಂಧನ

ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಇಡಿಯಿಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಬಂಧನ

Disproportionate assets case: ಕಾರವಾರ ಶಾಸಕ ಸತೀಶ್ ಸೈಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 13 ಮತ್ತು 14ರಂದು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಮತ್ತು ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ವಶಪಡಿಸಿಕೊಂಡಿತ್ತು. ಇದೀಗ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

Nepal Gen Z Protest: ನೇಪಾಳದಲ್ಲಿ ಹಿಂಸಾಚಾರ; 39 ಕನ್ನಡಿಗರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ನೇಪಾಳದಲ್ಲಿ ಸಿಲುಕಿರುವ 39 ಕನ್ನಡಿಗರ ರಕ್ಷಣೆಗೆ ಸಿಎಂ ಸೂಚನೆ

CM Siddaramaiah: ನೇಪಾಳದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

MB Patil: ಧಾರವಾಡದಲ್ಲಿ ಜಪಾನಿನ ಹಿಟಾಚಿ ಮಷಿನರಿ ಕಂಪನಿಯ ಅಭಿವೃದ್ಧಿ ಕೇಂದ್ರ ಸ್ಥಾಪನೆ: ಎಂ.ಬಿ. ಪಾಟೀಲ

ಜಪಾನ್‌ನಲ್ಲಿ ರಾಜ್ಯದ ನಿಯೋಗದ ಎರಡನೇ ದಿನದ ಯಶಸ್ವಿ ರೋಡ್‌ ಷೋ

Invest Karnataka: ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್‌ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಧಾರವಾಡದಲ್ಲಿ 2027ರ ವೇಳೆಗೆ ಕಾರ್ಯಾರಂಭ ಮಾಡಲಿರುವ ಈ ಕೇಂದ್ರವು, ನಿರ್ಮಾಣ ಯಂತ್ರೋಪಕರಣಗಳ ಜಾಗತಿಕ ಉತ್ಪನ್ನಗಳ ವಿನ್ಯಾಸ ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಿದೆ. 200 ಎಂಜಿನಿಯರ್‌ಗಳಿಗೆ ಇಲ್ಲಿ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಸಚಿವರು ಹೇಳಿದ್ದಾರೆ.

ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ 'ಬಸವ ವಿಭೂಷಣ' ಪುರಸ್ಕಾರ

ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ

ಗೌರವಾನ್ವಿತ ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ ಹಾಗೂ ಬಸವ ಸಮಿತಿಯ ಸಂಸ್ಥಾಪನಾ ದಿನಾಚರಣೆಯನ್ನು ಸೆ.10ರಂದು ಬೆಳಗ್ಗೆ 11.30ಕ್ಕೆ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ರೈಲ್ವೆ ಖಾತೆ, ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

Kidwai Hospital: ಕ್ಯಾನ್ಸರ್‌ ಚಿಕಿತ್ಸೆಗೆ ದಾಖಲಾಗಿದ್ದ ಸಜಾ ಕೈದಿ ಕಿದ್ವಾಯಿ ಆಸ್ಪತ್ರೆಯಿಂದ ಪರಾರಿ; ವಿಡಿಯೋ ವೈರಲ್‌!

ಚಿಕಿತ್ಸೆಗೆ ದಾಖಲಾಗಿದ್ದ ಕೈದಿ ಕಿದ್ವಾಯಿ ಆಸ್ಪತ್ರೆಯಿಂದ ಪರಾರಿ!

Convict escapes: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನು ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.

ಜಾಗತಿಕ ಬೇಡಿಕೆ ಪೂರೈಕೆಗೆ ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಹೈ-ವಾಲ್ಯೂಮ್ ಟ್ರಾನ್ಸ್‌ಫಾರ್ಮರ್ ಕಾರ್ಖಾನೆ ಆರಂಭಿಸಿದ ಬಿಒಎಸ್‌

ಗೇಮ್‌ಚೇಂಜ್‌ ಬಿಒಎಸ್‌ಗೆ 0.5-25 ಎಮ್‌ವಿಎ ರೇಂಜ್‌ವರೆಗೆ ಮತ್ತು 69 ಕೆವಿ ವರೆಗಿನ ವೋಲ್ಟೇಜ್‌ನ ಹೈ ವೋಲ್ಟೆಜ್‌ ವಿಭಾಗದ ಎಐ ಚಾಲಿತ ಡೇಟಾ ಸೆಂಟರ್, ರೆನೆವೇಬಲ್‌ ಎನರ್ಜಿ ಉತ್ಪನ್ನಗಳು , ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟೆಮ್, ದೊಡ್ಡ ಮಟ್ಟದ ಎಲೆಕ್ಟ್ರಿಫಿಕೇಶನ್‌ ಮೂಲಸೌಕರ್ಯ ಉತ್ಪನ್ನಗಳನ್ನು ಸಿದ್ಧಪಡಿಸಲು ನೆರವಾಗಿದೆ.

ಡ್ರೈವ್‌X ಡೈರೆಕ್ಟ್ ಪ್ರಾರಂಭಿಸುವುದರೊಂದಿಗೆ ಸಿ2ಸಿ ಮಾರುಕಟ್ಟೆಗೆ ಪ್ರವೇಶಿಸಿದ ಡ್ರೈವ್‌X ಮೊಬಿಲಿಟಿ

ಸಿ2ಸಿ ಮಾರುಕಟ್ಟೆಗೆ ಪ್ರವೇಶಿಸಿದ ಡ್ರೈವ್‌X ಮೊಬಿಲಿಟಿ

ಇದು ಅನುಕೂಲತೆ ಮತ್ತು ನಮ್ಯತೆಯನ್ನು ಬಯಸುವ ಗ್ರಾಹಕರಿಗೆ ಸರಿಯಾದ ಆಯ್ಕೆ ಯಾಗಿದೆ..ಇದು ದಾಖಲೆಗಳ ಸುಗಮಗೊಳಿಸುವಿಕೆ, ಖಾತರಿ ಆಯ್ಕೆಗಳು ಮತ್ತು ಮೌಲ್ಯವರ್ಧಿತ ಸೇವೆಗಳ ಮೂಲಕ ಮತ್ತಷ್ಟು ಭರವಸೆಯನ್ನು ನೀಡುತ್ತದೆ, ಇದು ಸಂಪೂರ್ಣ ಖರೀದಿ ಅನುಭವ ವನ್ನು ಸುಗಮಗೊಳಿಸುತ್ತದೆ

Bidar News: ಬೀದರ್‌ನಲ್ಲಿ ಕಾಲುವೆಗೆ ಹಾರಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ, ನಾಲ್ವರ ಸಾವು, ಇಬ್ಬರು ಪಾರು

ಬೀದರ್‌ನಲ್ಲಿ ಕಾಲುವೆಗೆ ಹಾರಿ ಒಂದೇ ಕುಟುಂಬದ 4 ಮಂದಿ ಆತ್ಮಹತ್ಯೆ

Self Harming: ಒಂದೇ ಕುಟುಂಬದ ಆರು ಮಂದಿ, ಕಾರಂಜಾ ಡ್ಯಾಮ್‌ನ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಚಿವ ಈಶ್ವರ್‌ ಖಂಡ್ರೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಬೀಗ್ರು 'ಡೆಡ್ ಲೀಡ್ಸ್ ಸ್ಮಶಾನ' ಅಭಿಯಾನ ಪ್ರಾರಂಭ- ಸುಳ್ಳು ನಿರೀಕ್ಷೆಗಳ ಮೇಲಿನ ವ್ಯರ್ಥ ಮಾರ್ಕೆಟಿಂಗ್ ವೆಚ್ಚವನ್ನು ಕೊನೆಗೊಳಿಸಲು ಒಂದು ದಿಟ್ಟ ಕರೆ

ಬೀಗ್ರು 'ಡೆಡ್ ಲೀಡ್ಸ್ ಸ್ಮಶಾನ' ಅಭಿಯಾನ ಪ್ರಾರಂಭ

"ಸ್ಮಶಾನ" ಎಂಬ ಪರಿಕಲ್ಪನೆಯ ಮೂಲಕ ಈ ನಷ್ಟಗಳನ್ನು ಸಂಕೇತಿಸುವ ಮೂಲಕ, ಅನರ್ಹ ಅಭಿಯಾನಗಳು, ಉಬ್ಬಿಕೊಂಡಿರುವ ಮಾರಾಟ ವೆಚ್ಚಗಳು ಮತ್ತು ನಿರಂತರ ಅನುಸರಣೆಗಳು ಮಾರ್ಕೆಟಿಂಗ್ ಬಜೆಟ್‌ಗಳನ್ನು ಹೇಗೆ ಬರಿದಾಗಿಸುತ್ತಿವೆ ಎಂಬುದನ್ನು ಈ ಉಪಕ್ರಮವು ಒತ್ತಿ ಹೇಳುತ್ತದೆ ಮತ್ತು ಅಳೆಯಬಹುದಾದ ಕಡಿಮೆ ಆದಾಯವನ್ನು ನೀಡುತ್ತದೆ.

ಸದೃಢ ಬೆಳವಣಿಗೆ: ಕರ್ನಾಟಕದ ಸ್ಥಳೀಯ ಉದ್ಯಮಗಳಿಗೆ ಡಿಜಿಟಲ್ ಪಾವತಿಗಳಿಂದ ಉತ್ತೇಜನ

ಕರ್ನಾಟಕದ ಸ್ಥಳೀಯ ಉದ್ಯಮಗಳಿಗೆ ಡಿಜಿಟಲ್ ಪಾವತಿಗಳಿಂದ ಉತ್ತೇಜನ

ಹಂಪಿಯ ಪ್ರಾಚೀನ ದೇವಾಲಯ ಪಟ್ಟಣಗಳಿಂದ ಹಿಡಿದು ಬೆಳಗಾವಿಯ ಜನನಿಬಿಡ ಕೈಗಾರಿಕಾ ವಲಯಗಳವರೆಗೆ, ಮಂಗಳೂರಿನ ಅಭಿವೃದ್ಧಿಶೀಲ ಬಂದರು ಬದಿಯ ಮಾರುಕಟ್ಟೆಗಳಿಂದ ಹಿಡಿದು ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರಶಾಂತ ಬೀದಿಗಳವರೆಗೆ, ಸ್ಥಳೀಯ ವ್ಯವಹಾರಗಳ ಟ್ರೆಂಡ್‌ ನಲ್ಲಿ ಸ್ಪಷ್ಟ ಬದಲಾವಣೆಗಳು ಕಾಣುತ್ತಿವೆ.

ಫೇರ್‌ಟ್ರೇಡ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಜಾಗತಿಕ ವ್ಯಾಪಾರ ವಲಯದ ಉತ್ಪಾದಕರಿಗೆ ಆದ್ಯತೆ

ಜಾಗತಿಕ ವ್ಯಾಪಾರ ವಲಯದ ಉತ್ಪಾದಕರಿಗೆ ಆದ್ಯತೆ

"ಫೇರ್‌ಟ್ರೇಡ್ ಇನ್ ಇಂಡಿಯಾ"ದ ಎರಡು ದಿನಗಳ ಸಮ್ಮೇಳನವು ಬೆಂಗಳೂರಿನ ದಿ ಛಾನ್ಸೆರಿ ಪೆವಿಲಿಯ ನ್‌ನಲ್ಲಿ ಆರಂಭವಾಗಿದ್ದು, ಈ ಬಾರಿ "ಸುಸ್ಥಿರತೆ, ಮಾರ್ಕೆಟ್‌ಗಳು ಮತ್ತು ಪ್ರಭಾವ" ಎಂಬ ಥೀಮ್ ಹೊಂದಿದೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಉತ್ಪಾದಕರು, ಉದ್ಯಮಗಳು, ಪಾಲಿಸಿ ನಿರೂಪಕರು ಮತ್ತು ಸುಸ್ಥಿರತೆ ನಾಯಕರು ಒಟ್ಟಿಗೆ ಸೇರಿದ್ದರು.

Karnataka Rains: ಯೆಲ್ಲೋ ಅಲರ್ಟ್; ಮುಂದಿನ 6 ದಿನ ರಾಜ್ಯದ ಉತ್ತರ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಮುಂಗಾರು ಮಳೆ!

ಯೆಲ್ಲೋ ಅಲರ್ಟ್; ಮುಂದಿನ 6 ದಿನ ರಾಜ್ಯದಲ್ಲಿ ಅಬ್ಬರಿಸಲಿದೆ ಮುಂಗಾರು ಮಳೆ!

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

Eye Makeup 2025: ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

ಕಣ್ಣಿಗೆ ಐ ಶ್ಯಾಡೋ ಹಚ್ಚುವ ಮುನ್ನ ತಿಳಿದುಕೊಳ್ಳಬೇಕಾದ 5 ಸಂಗತಿಗಳು

Eye Makeup 2025: ಕಂಗಳ ಅಂದವನ್ನು ಹೆಚ್ಚಿಸುವ ಐ ಶ್ಯಾಡೋಗಳನ್ನು ಹಚ್ಚುವ ಮುನ್ನ ಪ್ರಮುಖ 5 ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಕ್ಷಾ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಸಲಹೆ ಕೂಡ ನೀಡಿದ್ದಾರೆ.

Maddur stone-pelting: ಮದ್ದೂರು ಗಲಭೆ ಪ್ರಕರಣ; ತಪ್ಪೆಸೆಗಿದವರ ವಿರುದ್ಧ ಜಾತಿ ಧರ್ಮ ಪರಿಗಣಿಸದೇ ಕ್ರಮ ಎಂದ ಸಿಎಂ

ಮದ್ದೂರು ಗಲಭೆ; ತಪ್ಪೆಸೆಗಿದವರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

CM Siddaramaiah: ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮದ್ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, 21 ಜನರನ್ನು ಈಗಾಗಲೇ ಬಂಧಿಸಿದ್ದು, ಯಾವುದೇ ಜಾತಿ, ಧರ್ಮಗಳನ್ನು ಸರ್ಕಾರ ಪರಿಗಣಿಸದೇ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

Bagalkot News: ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ  ವಿದ್ಯಾರ್ಥಿ!

ಶಾಲೆಯಲ್ಲಿ ಗಲಾಟೆ; ಕಟ್ಟಿಗೆ ಇರಿತದಿಂದ ಕಣ್ಣು ಕಳೆದುಕೊಂಡ ವಿದ್ಯಾರ್ಥಿ!

Bagalkot News: ತೀವ್ರ ಗಾಯದ ಹಿನ್ನೆಲೆಯಲ್ಲಿ ಕಣ್ಣಿನ ಗುಡ್ಡೆಯನ್ನೇ ವೈದ್ಯರು ತೆಗೆದಿದ್ದಾರೆ. ಪೆನ್ ವಾಪಸ್‌ ಕೇಳುವ ವಿಚಾರದಲ್ಲಿ ಮಕ್ಕಳಿಬ್ಬರ ನಡುವೆ ಗಲಾಟೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Loading...