ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಧಾರಾವಾಹಿಯೂ ಕೂಡಾ ಒಂದು. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಆಗಿ ಅಭಿನಯಿಸುತ್ತಿರುವ ರಾಜೇಶ್ ನಟರಂಗ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಬಣ್ಣದ ಲೋಕದಲ್ಲಿ ಮೋಡಿ ಮಾಡಿರುವ ರಾಜೇಶ್ ನಟರಂಗ ಇದೀಗ ಗೌತಮ್ ದಿವಾನ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಈ ವೇಳೆ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಸೀರಿಯಲ್ ಕುರಿತು ಮಾತನಾಡಿದ್ದಾರೆ. ಸೀರಿಯಲ್ ಹಿಂದೆ ತುಂಬಾ ಜನರ ಶ್ರಮ ಇರುತ್ತದೆ. ಯಾರೋ ಅದೃಷ್ಟ ಮಾಡಿದ್ದಾರೆ. ಇನ್ನು ಜೈದೇವ್ ಹಾಗೂ ಗೌತಮ್ ಜಟಾಪಟಿ ನಡೆಯುತ್ತಿದೆ. ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ. ಧಾರಾವಾಹಿ ನೋಡ್ತಾ ಇರಿ ಎಂದರು. ʼವಿಶ್ವವಾಣಿ ನಿರೂಪಕ ಸುಜಯ್ ರಾಜ್ ಚಿಟ್ ಚಾಟ್ ವೇಳೆ ಎನೆಲ್ಲ ವಿಚಾರಗಳನ್ನು ಹಂಚಿಕೊಂಡರು ನಟ?