ಬೆಂಗಳೂರು,ಮಾ.23: ಕನ್ಯಾ ರಾಶಿಗೆ ಅಧಿಪತಿ ಬುಧ ಆಗಿದ್ದಾನೆ. ಹೀಗಾಗಿ ಹೆಚ್ಚಾಗಿಯೇ ಪ್ತಭಾವ ಇರಲಿದ್ದು ಮಿಶ್ರ ಫಲಗಳು ನಿಮಗೆ ಉಂಟಾಗಬಹುದು. ಶನಿಯ ದೃಷ್ಠಿ ನಿಮಗೆ ಇರುವುದರಿಂದ ಜೀವನದಲ್ಲಿ ಬಹಳಷ್ಟು ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಆರ್ಥಿಕವಾಗಿ ನೀವು ಸದೃಢ ವಾಗಲಿದ್ದು ಬೇರೆ ಮೂಲಗಳಿಂದ ಹಣ ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ವ್ಯಾಪಾರ, ವ್ಯವಹಾರವನ್ನು ಶುರು ಮಾಡಲು ಬಹಳ ಲಾಭದಾಯಕವಾಗಿರುತ್ತದೆ. ಶತ್ರುಗಳ ಬಗ್ಗೆ ಜಾಗೃತಿ ವಹಿಸಬೇಕಾಗಿದ್ದು ಈ ಅವಧಿಯಲ್ಲಿ ಹಣಕಾಸಿನ ವಿಷಯವಾಗಿ, ಹೂಡಿಕೆಯ ಭಾಗವಾಗಿ ಬಹಳ ಜಾಗರೂಕರಾಗಿರಿ ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.