ಬೆಂಗಳೂರು, ಮಾ. 24: ವಿಪಕ್ಷ ನಾಯಕ ಆರ್. ಅಶೋಕ್ (R Ashoka) ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹಾಕಿರುವ ಸವಾಲಿಗೆ ಚಿಟಿಕೆ ಹೊಡೆಯುತ್ತ ಗುಡುಗಿದರು. ಬಿಡಿಎ ಸೈಟ್ನ ಇ ಖಾತೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇ ಖಾತಾ ಬಗ್ಗೆ ಇಡೀ ದೇಶವೇ ಕೊಂಡಾಡಿದೆ. ನಮ್ಮ ಸರ್ಕಾರದಲ್ಲಿ ಯಾರು ಲಂಚ ತೆಗೆದುಕೊಂಡಿದ್ದಾರೆ ತೋರಿಸಿ ಎಂದು ಡಿಕೆಶಿ ಸವಾಲು ಹಾಕಿದ್ದರು. ಇದಕ್ಕೆ ಸಾಕ್ಷಿ ಸಮೇತ ಸದನದಲ್ಲಿ ಆರ್. ಅಶೋಕ್ ದಾಖಲೆಯನ್ನು ಪ್ರದರ್ಶಿಸಿದರು. ಫೋನ್ ಪೇನಲ್ಲಿ ಹಣ ತಗೊಂಡಿರುವ ದಾಖಲೆ ಇಲ್ಲಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.