ಬೆಂಗಳೂರು, ಮಾ. 18: ಮೇಷ ರಾಶಿಯಲ್ಲಿ ಗ್ರಹಗತಿಗಳ ಬದಲಾವಣೆ ಆಗಲಿದ್ದು, ಶನಿ ಹಾಗೂ ಗುರು ಸಂಚಾರದಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ. ಮೇಷ ರಾಶಿಯವರಿಗೆ ಈ ವರ್ಷ ಮಿಶ್ರ ಫಲ ದೊರೆಯಲಿದೆ. ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸದರೂ ಅನಾರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ವರ್ಷ ನೀವು ಸುಖ, ದುಃಖ ಎರಡನ್ನೂ ಸರಿಯಾಗಿ ನಿಭಾಯಿಸುತ್ತೀರಿ. ಆದಾಯದ ಮೂಲಗಳು ಹೆಚ್ಚಿದ್ದರೂ ಖರ್ಚು ಜಾಸ್ತಿಯಾಗಬಹುದು. ಅಕ್ಟೋಬರ್ ನಂತರದಲ್ಲಿ ಗುರು ಬಲ ಬರಲಿದ್ದು ವೃತ್ತಿ, ಆರ್ಥಿಕತೆ, ಭೂಮಿ ಖರೀದಿ, ಮನೆ ಖರೀದಿ ಹೀಗೆ ಕುಟುಂಬದಲ್ಲಿ ಶುಭ ಫಲಗಳು ಕಂಡು ಬರಲಿವೆ. ಮೇಷ ರಾಶಿಯವರು ವಿದೇಶಕ್ಕೆ ಪ್ರಯಾಣಿಸುವ ಉತ್ತಮ ಅವಕಾಶವನ್ನು ಹೊಂದಿರುತ್ತಾರೆ. ಯಾವುದೇ ಸಮಸ್ಯೆ ನಿವಾರಣೆಗೆ ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಒಳಿತು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.