ಬೆಂಗಳೂರು, ಮಾ. 31: ಮೂಲವ್ಯಾಧಿ ಎನ್ನುವುದು ಇತ್ತೀಚೆಗೆ ಸಾಮಾನ್ಯ ಆರೋಗ್ಯ ಸಮಸ್ಯೆ ಎನಿಸಿಕೊಂಡಿದೆ. ಇದು ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ. ಗುದನಾಳದ ಒಳಪದರದಲ್ಲಿ ರಕ್ತನಾಳ ಸೊಂಕಿಗೆ ಒಳಗಾದಾಗ ಇದು ಉಬ್ಬಿಕೊಂಡು ಮಲ ವಿಸರ್ಜನೆಯ ಸಮಯದಲ್ಲಿ ಒತ್ತಲ್ಪಟ್ಟು ರಕ್ತ ಹೊರ ಬರುತ್ತದೆ. ಈ ಸಮಯದಲ್ಲಿ ಗಡ್ಡೆಗಳು ಉತ್ಪತ್ತಿಯಾಗುದನ್ನೇ ಮೂಲವ್ಯಾಧಿ ಹೇಳಲಾಗುತ್ತದೆ. ಆದರೆ ಪೈಲ್ಸ್ ತಡೆಗಟ್ಟಲು, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.