ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ರಿಕ್ಸ್ ಶೃಂಗಸಭೆಯಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ; ವಿಡಿಯೊ ವೈರಲ್

Malaysian PM Sings a Bollywood Song: 18ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಕಿಶೋರ್ ಕುಮಾರ್ ಅವರ ಎವರ್‌ಗ್ರೀನ್ ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್ ಎಂಬ ಹಿಂದಿ ಹಾಡನ್ನು ಹಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಬಾಲಿವುಡ್ ಹಾಡು ಹಾಡಿದ ಮಲೇಷ್ಯಾ ಪ್ರಧಾನಿ

ನವದೆಹಲಿ, ಸೆ.13: 18ನೇ ಬ್ರಿಕ್ಸ್ ಶೃಂಗಸಭೆಯ (BRICS Summit) ವೇಳೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ಅವರು ಕಿಶೋರ್ ಕುಮಾರ್ ಅವರ ಎವರ್‌ಗ್ರೀನ್ ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್ ಎಂಬ ಹಿಂದಿ ಹಾಡನ್ನು ಹಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral Video) ಆಗಿದೆ. ತಮ್ಮ ಗಾಯನದ ವಿಡಿಯೊವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರಾಗಿ ಭಾಗವಹಿಸಿದ್ದ ಪ್ರಧಾನಿ ಅನ್ವರ್ ಅವರು, ಶೃಂಗಸಭೆಯ ಅಧಿಕೃತ ಕಾರ್ಯಕಲಾಪಗಳ ನಡುವೆ ನಡೆದ ಅನೌಪಚಾರಿಕ ಸಭೆಯಲ್ಲಿ 1965ರ ರೊಮ್ಯಾಂಟಿಕ್ ಕ್ಲಾಸಿಕ್ ಚಲನಚಿತ್ರ ತೀನ್ ದೇವಿಯಾನ್‌ನ ಈ ಗೀತೆಯನ್ನು ಪ್ರಸ್ತುತಪಡಿಸಿದರು. ಪಿಯಾನೋ ವಾದಕರ ಜೊತೆಗೂಡಿ ಮಲೇಷ್ಯಾ ನಾಯಕರು ಹಾಡಿದ ಎಸ್‌ಡಿ ಬರ್ಮನ್ ಅವರ ಈ ಸಂಯೋಜನೆಯು ಅಲ್ಲಿದ್ದ ಗಣ್ಯರನ್ನು ಅಪಾರವಾಗಿ ರಂಜಿಸಿತು.

ಮಲಯ್ ಭಾಷೆಯ ಶೀರ್ಷಿಕೆಯೊಂದಿಗೆ ಈ ವಿಡಿಯೊವನ್ನು ಅವರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ಒಂದು ಕ್ಷಣ ಹಾಡಲು ಅನುಮತಿ ಪಡೆಯಬಹುದೇ? ಎಂದು ಅವರು ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಲ್ಲದೆ, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಇಲ್ಲಿದೆ ವಿಡಿಯೊ:



ಈ ಸಂಗೀತ ಪ್ರದರ್ಶನವು ಮಲೇಷ್ಯಾ ಪ್ರಧಾನಿ ಅನ್ವರ್ ಅವರಿಗಿರುವ ಭಾರತೀಯ ಸಂಸ್ಕೃತಿ ಮತ್ತು ಸಿನಿಮಾದ ಬಗ್ಗೆ ಅವರ ವೈಯಕ್ತಿಕ ಒಲವನ್ನು ಪ್ರತಿಬಿಂಬಿಸುತ್ತದೆ. ಅನ್ವರ್ ಅವರು ತಮ್ಮ ಹಿಂದಿನ ದ್ವಿಪಕ್ಷೀಯ ಭೇಟಿಗಳ ವೇಳೆಯೂ ಭಾರತೀಯ ಹಿಂದಿ ಕ್ಲಾಸಿಕ್ ಗೀತೆಗಳ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದ್ದರು. ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದಾಗಲೂ ಅವರು ಕಿಶೋರ್ ಕುಮಾರ್ ಮತ್ತು ಮುಕೇಶ್ ಅವರ ಜನಪ್ರಿಯ ಹಾಡುಗಳನ್ನು ಹಾಡಿದ್ದರು.

BRICS Gala Dinner: ಪ್ರಧಾನಿ ನರೇಂದ್ರ ಮೋದಿ ಔತಣಕೂಟಕ್ಕೆ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಗೈರು; ಕಾರಣವೇನು?

ಅಧಿಕೃತ ರಾಜತಾಂತ್ರಿಕ ಮಾತುಕತೆಗಳ ಸಂದರ್ಭದಲ್ಲಿ, ಮಲೇಷ್ಯಾ ಪ್ರಧಾನಿಯವರು ಮಲೇಷ್ಯಾ ಮತ್ತು ಭಾರತದ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ನಿರಂತರವಾಗಿ ಎತ್ತಿ ತೋರಿಸುತ್ತಾ ಬಂದಿದ್ದಾರೆ. ಭಾರತೀಯ ಜನಪ್ರಿಯ ಸಂಗೀತವನ್ನು ಅವರು ತಮ್ಮ ರಾಜತಾಂತ್ರಿಕತೆಯ ಪ್ರಮುಖ ಸೇತುವೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಇಂಧನ, ಆಹಾರ, ಭೂ ಖನಿಜಗಳ ಮೇಲೆ ಸ್ವಾವಲಂಬನೆ: ಬ್ರಿಕ್ಸ್ ಸಮ್ಮೇಳನದಲ್ಲಿ ನಿರ್ಧಾರ

ಇಂಧನ, ಆಹಾರ ಮತ್ತು ವಿರಳ ಭೂ ಖನಿಜಗಳ ಮೂಲಕ ಸ್ವಾವಲಂಬನೆಯತ್ತ ಸಾಗಲು ಬ್ರಿಕ್ಸ್ ಸಮ್ಮೇಳನದಲ್ಲಿ ಸದಸ್ಯ ರಾಷ್ಟ್ರಗಳು ನಿರ್ಣಯ ಕೈಗೊಂಡವು. ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ನಿರ್ಬಂಧ, ಸುಂಕಗಳ ಹಿನ್ನೆಲೆಯಲ್ಲಿ ಸ್ವಾವಲಂಬನೆಯ ಲಾಭ ಪಡೆಯಲು ಆದ್ಯತೆ ನೀಡಲು ನಿರ್ಧರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಬ್ರಿಕ್ಸ್ ನಾಯಕರು ಆರ್ಥಿಕ ಸಹಕಾರವನ್ನು ಬಲಪಡಿಸಲು ಹಾಗೂ ನಿರ್ಬಂಧ ಮತ್ತು ಭೌಗೋಳಿಕ, ರಾಜಕೀಯ ಅಡ್ಡಿಗೆ ಒಳಗಾಗುವ ಬಲವಾದ ಪೂರೈಕೆ ಸರಪಳಿ ಮತ್ತು ಪರ್ಯಾಯ ವ್ಯಾಪಾರ ಮಾರ್ಗಗಳನ್ನು ರೂಪಿಸಲು ಈ ಸಂದರ್ಭದಲ್ಲಿ ಕರೆ ನೀಡಿದರು.

ಜಾಗತಿಕ ವ್ಯಾಪಾರ ಮಾರುಕಟ್ಟೆಯಲ್ಲಿ ನಿರ್ಬಂಧ, ಸುಂಕಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ವ್ಯಾಪಾರ ವಹಿವಾಟುಗಳನ್ನು ಮರುರೂಪಿಸುತ್ತಿರುವ ಅವಶ್ಯಕತೆ ಇದೆ. ಈ ಸಮಯದಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಬೆಳೆಯುತ್ತಿರುವ ಸ್ವಾವಲಂಬನೆಯ ಲಾಭ ಪಡೆಯಲು ಮುಂದಾಗಿವೆ.