ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೈರಲ್‌

ಏಜ್ ಇಸ್ ಜಸ್ಟ್ ಎ ನಂಬರ್: 68 ವರ್ಷದ ಅಜ್ಜಿಯ ಸ್ಕೇಟಿಂಗ್‌ ನೋಡಿದ್ರೆ ನೀವೂ ಬೆರಗಾಗ್ತೀರಾ; ವಿಡಿಯೊ ಇಲ್ಲಿದೆ

ಸರಾಗವಾಗಿ ಸ್ಕೇಟಿಂಗ್‌ ಮಾಡಿ ಶಾಕ್ ನೀಡಿದ 68ರ ಅಜ್ಜಿ

68 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಸ್ಕೇಟಿಂಗ್‌ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಯಾವುದೇ ಭಯ ಇಲ್ಲದೆ ಬಹಳಷ್ಟು ಆತ್ಮವಿಶ್ವಾಸದಿಂದ ಸ್ಕೇಟ್‌ ಬೋರ್ಡ್‌ ಮೂಲಕ ಓಡಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕುದುರೆ ಡಿಕ್ಕಿ; ಅಪಘಾತದ ದೃಶ್ಯ ವೈರಲ್‌

ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕುದುರೆ ಡಿಕ್ಕಿ

ಬೀದಿ ಕುದುರೆಗಳು ದಿಢೀರ್ ಆಗಿ ರಸ್ತೆ ದಾಟಿದ ಪರಿಣಾಮ ಮಹಿಳೆಯೊಬ್ಬರ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಮಹಿಳೆ ಶಾಲಾ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸದ್ಯ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಭೀಕರ ಘಟನೆಯ ದೃಶ್ಯ ವೈರಲ್ ಆಗಿದೆ.

Viral Video: 14 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆತನ ಆದಾಯ ಎಷ್ಟು?

ಬ್ಲಿಂಕ್‌ಇಟ್ ಡೆಲಿವರಿ ಬಾಯ್‌ಗೆ ಸಿಗುವ ದಿನದ ಆದಾಯ ಎಷ್ಟು?

ಝೋಮೆಟೊ ಅಧೀನದ ಬ್ಲಿಂಕ್‌ಇಟ್ ಕಂಪನಿಯ ಆ್ಯಪ್ ಅನ್ನು ಕೋಟ್ಯಾಂತರ ಗ್ರಾಹಕರು ನಿತ್ಯ ಬಳಸುತ್ತಿದ್ದಾರೆ. ಗ್ರಾಹಕರಿಗೆ 10-20 ನಿಮಿಷಗಳ ಒಳಗೆ ತಮಗೆ ಬೇಕಾದ ವಸ್ತು ಮನೆ ಬಾಗಿಲಿಗೆ ತಲುಪುವ ಕಾರಣ ಈ ವ್ಯವಸ್ಥೆ ಹಲವರ ಮನ ಗೆದ್ದಿದೆ. ಇದರ ಡೆಲಿವರಿ ಬಾಯ್ಸ್‌ಗೆ ಉತ್ತಮ ವೇತನ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ವ್ಯಕ್ತಿಯೊಬ್ಬ ದಿನವಿಡಿ ಡೆಲಿವರಿ ಮಾಡಿ ಬಹಳ ಕಡಿಮೆ ವೇತನ ಸಿಕ್ಕಿದೆ ಎಂದು ತಾನು ಗಳಿಸಿದ್ದ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

500 ರುಪಾಯಿ ಫೀಸ್ ಕಟ್ಟಲು ಸಾಧ್ಯವಾಗದೇ ಕೆಲಸಕ್ಕೆ ಸೇರಿದ ಬಾಲಕಿ: ಪ್ರಾಂಶುಪಾಲರ ನಿಸ್ವಾರ್ಥ ನಡೆಗೆ ಭಾರಿ ಮೆಚ್ಚುಗೆ

ವಿದ್ಯಾರ್ಥಿನಿಯ ಶಾಲಾ ಶುಲ್ಕ ಮನ್ನಾ ಮಾಡಿದ ಪ್ರಾಂಶುಪಾಲ

ವಿದ್ಯಾರ್ಥಿಯೊಬ್ಬಳು ಆರ್ಥಿಕ ಸಂಕಷ್ಟದ ಕಾರಣದಿಂದ ಶುಲ್ಕ ಪಾವತಿ ಮಾಡದೇ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಳು. ಇದನ್ನು ತಿಳಿದು ಶಾಲೆಯ ಪ್ರಾಂಶುಪಾಲರು ಮಾಡಿದ ಒಂದು ನಿಸ್ವಾರ್ಥ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೊ ಭಾರಿ ವೈರಲ್ ಆಗಿದೆ.

Online engagement: ವರನಿಗೆ ಸಿಗಲಿಲ್ಲ ರಜೆ; ಉಡುಪಿಯಲ್ಲಿ ಆನ್‌ಲೈನ್‌ನಲ್ಲೇ ನಡೆಯಿತು ನಿಶ್ಚಿತಾರ್ಥ!

ವರನಿಗೆ ಸಿಗಲಿಲ್ಲ ರಜೆ; ಉಡುಪಿಯಲ್ಲಿ ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ!

ಉಡುಪಿಯ ಸರಸ್ವತಿ ಸಭಾಭವನದಲ್ಲಿ ನಿಶ್ಚಿತಾರ್ಥ ನಡೆದಿದೆ. ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಹಾಗೂ ಉಡುಪಿಯ ಯುವತಿ ಎಂಗೇಜ್‌ಮೆಂಟ್‌ ಬ್ರಾಹ್ಮಣ ಸಂಪ್ರದಾಯದಂತೆ ಆನ್‌ಲೈನ್‌ ಮೂಲಕ ನೆರವೇರಿದೆ. ವರ ಕೆನಡಾದಲ್ಲೇ ಇದ್ದು, ವಿಡಿಯೋ ಕಾಲ್‌ ಮೂಲಕ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದಾರೆ.

ಬಿಜೆಪಿ ಶಾಸಕ ಗೋಲು ಶುಕ್ಲಾ ಪುತ್ರನ ಅದ್ಧೂರಿ ಮದುವೆಯ ವಿಡಿಯೊ ವೈರಲ್; ಪಟಾಕಿಗೆ ಖರ್ಚು ಮಾಡಿದ್ದು ಬರೋಬ್ಬರಿ 70 ಲಕ್ಷ ರೂ.!

ಬಿಜೆಪಿ ಶಾಸಕನ ಪುತ್ರನ ಮದುವೆಯಲ್ಲಿ ದುಂದುವೆಚ್ಚ; ನೆಟ್ಟಿಗರಿಂದ ಟೀಕೆ

BJP MLA Golu Shukla’s son wedding: ಮಧ್ಯ ಪ್ರದೇಶದ ಇಂದೋರ್‌ನ ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರನ ಅದ್ಧೂರಿ ವಿವಾಹ ಸಮಾರಂಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಮದುವೆಯಲ್ಲಿ ನಡೆದ ಭರ್ಜರಿ ಪಟಾಕಿ ಪ್ರದರ್ಶನ ಎಲ್ಲರ ಗಮನ ಸೆಳೆದಿದ್ದು, ಅದಕ್ಕಾಗಿ ಮಾಡಿದ ಖರ್ಚು ಕೇಳಿ ನೆಟ್ಟಿಗರು ದಂಗಾಗಿದ್ದು, ಟೀಕೆ ವ್ಯಕ್ತಪಡಿಸಿದ್ದಾರೆ.

ಬಿರುಗಾಳಿಗೆ ಸಿಲುಕಿ ಕುಸಿದು ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ: ವಿಡಿಯೋ ವೈರಲ್

ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ ಧ್ವಂಸ: ವಿಡಿಯೊ ವೈರಲ್

ಬಿರುಗಾಳಿ ರಭಸಕ್ಕೆ ಸ್ಟ್ಯಾಚು ಆಫ್ ಲಿಬರ್ಟಿ ಕುಸಿದು ಬಿದ್ದ ಘಟನೆ ದಕ್ಷಿಣ ಬ್ರೆಜಿಲ್ ನಲ್ಲಿ ನಡೆದಿದೆ. ದಕ್ಷಿಣ ಬ್ರೆಜಿಲ್ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದ್ದ ಪರಿಣಾಮ ಗಾಳಿ ಬೀಸಿ 24 ಮೀಟರ್ ಎತ್ತರದ ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ‌. ಸದ್ಯ ಈ ಕುರಿತಾದ ವಿಡಿಯೋ ಒಂದು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಬಹುತೇಕರು ಅಮೇರಿಕಾದ ಪ್ರತಿಮೆ ಎಂದೆ ಅಂದುಕೊಂಡಿದ್ದು ಈ ಬಗ್ಗೆ ಅನೇಕ ಗಾಸಿಪ್ ಕೂಡ ಹರಿದಾಡಿತ್ತು. ಬಳಿಕ ಇದು ಬ್ರೆಜಿಲ್ ನ ಪ್ರತಿಮೆ ಎಂದು ಖಾತರಿಯಾಗಿದೆ.

Viral Video: ಪಾರ್ಕ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಣ್ಣ-ತಂಗಿಯನ್ನು ತಡೆದ ಪೊಲೀಸ್‌ ಅಧಿಕಾರಿ: ನೆಟ್ಟಿಗರಿಂದ ತರಾಟೆ

ಅಣ್ಣ-ತಂಗಿಯನ್ನು ತಡೆದು ವಿವಾದಕ್ಕೆ ಸಿಲುಕಿದ ಕಾನ್ಸ್‌ಟೇಬಲ್

ಯುವತಿಯೊಬ್ಬಳ ಸುರಕ್ಷತೆಯ ಹೆಸರಿನಲ್ಲಿ ಅತಿಯಾದ ಕಾಳಜಿ‌ ತೋರಿದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ವಿವಾದಕ್ಕೆ ಕಾರಣವಾಗಿದ್ದಾರೆ. ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ತನ್ನ ಅಣ್ಣನೊಂದಿಗೆ ದೇವಸ್ಥಾನದ ಪಾರ್ಕ್‌ಗೆ ಬಂದಿದ್ದ ಯುವತಿಯನ್ನು ತಡೆದು ಸಲಹೆ ನೀಡಿದ ಆರೋಪದ ಮೇಲೆ ಮಹಿಳಾ ಅಧಿಕಾರಿಯನ್ನು ವಿವಾದ ಭುಗಿಲೇಳುತ್ತಿದ್ದಂತೆ ವರ್ಗಾವಣೆ ಮಾಡಲಾಗಿದೆ.

ಹಿಟ್ ಆ್ಯಂಡ್ ರನ್ ಪ್ರಕರಣ; ರಾಂಗ್‌ ರೂಟ್‌ನಲ್ಲಿ ಬಂದು ಬಾಲಕನಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ನಡೆಗೆ ಸಿಡಿದೆದ್ದ ನೆಟ್ಟಿಗರು

ರಾಂಗ್ ರೂಟ್‌ನಲ್ಲಿ ಬಂದ ಬೈಕ್ ಸೈಕಲ್‌ಗೆ ಢಿಕ್ಕಿ; ಬಾಲಕನಿಗೆ ಗಾಯ

ಬೈಕ್ ಸವಾರನೊಬ್ಬ ರಾಂಗ್ ರೂಟ್‌ನಲ್ಲಿ ಬಂದು ಸೈಕಲ್‌ಗೆ ಢಿಕ್ಕಿ ಹೊಡೆದ ಘಟನೆ ಮುಂಬೈಯಲ್ಲಿ ನಡೆದಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಇಬ್ಬರು ಬಾಲಕರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಅದರಲ್ಲಿದ್ದ ಹುಡುಗ ರಸ್ತೆಯಲ್ಲಿ ಬಿದ್ದಿದ್ದಾನೆ. ಆ ಬಾಲಕನಿಗೆ ಏನಾಗಿದೆ ಎನ್ನುವುದನ್ನೂ ವಿಚಾರಿಸದೆ ಬೈಕ್ ಸವಾರ ಅಲ್ಲಿಂದ ಪರಾರಿಯಾಗಿದ್ದಾನೆ. ಮನುಷ್ಯತ್ವ ಮರೆತ ಬೈಕ್ ಸವಾರನ ನಡೆಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಆಭರಣ ಮಳಿಗೆಯಲ್ಲಿ ಕುಸಿದು ಬಿದ್ದ ಉದ್ಯಮಿ; ಮಾಲೀಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು

ಹೃದಯಾಘಾತದಿಂದ ಕುಸಿದು ಬಿದ್ದ ವ್ಯಕ್ತಿಯ ರಕ್ಷಣೆ

ಇತ್ತೀಚೆಗಷ್ಟೆ ಉದ್ಯಮಿಯೊಬ್ಬರು ಆಭರಣ ಮಳಿಗೆಯಲ್ಲಿ ವ್ಯವಹಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಜೈಪುರದಲ್ಲಿ ನಡೆದಿದೆ. ಆ ವ್ಯಕ್ತಿ ನೋಡ ನೋಡುತ್ತಿದ್ದಂತೆ ಕುಸಿದುಬಿದ್ದಿದ್ದು ಆಭರಣ ಮಳಿಗೆಯವರ ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದಂತಾಗಿದೆ. ಉದ್ಯಮಿಯು ಕುಸಿದು ಬಿದ್ದಂತೆ ಅಲ್ಲಿದ್ದವರೆಲ್ಲ ಒಮ್ಮೆಲ್ಲೆ ಗೊಂದಲಗೊಂಡಿದ್ದು ಏನು ಮಾಡಬೇಕೆಂದು ತೋಚದಂತಾದರು ಬಳಿಕ ಕುಸಿದುಬಿದ್ದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ ಸಿಪಿಆರ್ ಪ್ರೊಸೆಸ್ ಮಾಡುವ ಮೂಲಕ ಆ ವ್ಯಕ್ತಿಯನ್ನು ಬದುಕಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಕ್ರಿಕೆಟ್ ಬ್ಯಾಟ್‌ ಶೇಪ್‌ನ ಕಾರ್‌ ಇದು: ಯುವಕನ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ

ಕ್ರಿಕೆಟ್ ಬ್ಯಾಟ್‌ ಮಾದರಿಯ ಕಾರ್‌ ಇದು

ಯುವನೊರ್ವನ ಆವಿಷ್ಕಾರವೊಂದು ಎಲ್ಲರ ಗಮನ ಸೆಳೆದಿದೆ. ಹೈದರಾಬಾದ್‌ನ ಸುಧಾ ಕಾರ್ಸ್ ಮ್ಯೂಸಿಯಂನಲ್ಲಿ 21 ಅಡಿ ಬ್ಯಾಟ್ ಅನ್ನು ಎಂಜಿನ್ ಕಾರು ಆಗಿ ಈತ ರೂಪಾಂತರಗೊಳಿಸಿದ್ದಾನೆ‌. ಸುಧಾ ಕಾರ್ಸ್ ವಸ್ತು ಸಂಗ್ರಹಾಲಯದ ಸದಸ್ಯರೊಬ್ಬರು 21 ಅಡಿ ಉದ್ದದ ಬೃಹತ್ ಕ್ರಿಕೆಟ್ ಬ್ಯಾಟ್ ಅನ್ನು ರಸ್ತೆಯಲ್ಲಿ ಓಡಿಸಬಹುದಾದ ಎಂಜಿನ್ ಕಾರ್ ಆಗಿ ಪರಿವರ್ತಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಮದುವೆಗೆ 2 ಗಂಟೆ ಮೊದಲು ಮಾಜಿ ಪ್ರೇಮಿಯನ್ನು ಭೇಟಿಯಾದ ವಧು: ಈ ನಿಯತ್ತು ಮೊದಲು ಎಲ್ಲಿ ಹೋಗಿತ್ತು ಎಂದು ಕೇಳಿದ ನೆಟ್ಟಿಗರು

ಮದುವೆ ಮೊದಲು ಪ್ರಿಯಕರನನ್ನು ಭೇಟಿಯಾದ ವಧು: ನೆಟ್ಟಿಗರು ಹೇಳಿದ್ದೇನು?

ಮದುವೆಗೆ 2 ಗಂಟೆಯ ಮೊದಲು ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾದ ಭಾವನಾತ್ಮಕ ಘಟನೆಯೊಂದು ನಡೆದಿದೆ. ವಿವಾಹ ಸಮಾರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿದ್ದಾಳೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಆಸ್ಟ್ರೇಲಿಯಾ ಗುಂಡಿನ ದಾಳಿ ವೇಳೆ ಆಪದ್ಬಾಂದವನಾದ ಹಣ್ಣಿನ ವ್ಯಾಪಾರಿ; ಬರಿಗೈಲೇ ಭಯೋತ್ಪಾದಕನ ಹೆಡೆಮುರಿ ಕಟ್ಟಿದ ಅಹ್ಮದ್ ಯಾರು?

ಆಸ್ಟ್ರೇಲಿಯಾ ಗುಂಡಿನ ದಾಳಿಯಲ್ಲಿ ಆಪದ್ಬಾಂದವನಾದ ಹಣ್ಣಿನ ವ್ಯಾಪಾರಿ

Australia shooting: ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ನಡೆದ ಹನುಕ್ಕಾ ಹಬ್ಬದ ಸಂದರ್ಭದಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಶೌರ್ಯ ತೋರಿದ್ದಾನೆ. ಆತನ ಸಾಹಸದ ವಿಡಿಯೊ ವೈರಲ್ ಆಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿ; ಅನುಮಾನವೇ ಬಾರದಂತೆ ಒಂದು ವರ್ಷ ಸಂಸಾರ ಮಾಡಿದ ಮಹಿಳೆ, ಕೊನೆಗೆ ಬಹಿರಂಗವಾಗಿದ್ದು ಹೇಗೆ ಗೊತ್ತಾ?

ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿ; ವಿಚಿತ್ರ ಸಂಸಾರದ ರೋಚಕ ಕಥೆ ಇಲ್ಲಿದೆ

Wife of Two Husbands: ಮಲೇಷ್ಯಾದ ಮಹಿಳೆಯೊಬ್ಬಳು ಇಬ್ಬರು ಗಂಡಂದಿರೊಂದಿಗೆ ಒಂದು ವರ್ಷ ಗುಟ್ಟಾಗಿ ಸಂಸಾರ ನಡೆಸಿದ್ದಾಳೆ. ಕೊನೆಗೆ ಈ ಗುಟ್ಟು ಅತ್ತಿಗೆಯಿಂದ ರಟ್ಟಾಗಿದೆ. ಈ ಸತ್ಯವನ್ನು ಮಹಿಳೆಯ ಮೊದಲನೇ ಪತಿಯ ಸಹೋದರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಓದಿದ ಜನರು ಅವಕ್ಕಾಗಿದ್ದಾರೆ.

ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದ ವಿದ್ಯಾರ್ಥಿನಿ ಸಾವು; ಕೊನೆಯ ಕ್ಷಣ ಕ್ಯಾಮರಾದಲ್ಲಿ ಸೆರೆ

ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದ ವಿದ್ಯಾರ್ಥಿನಿ

Heart Attack: ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಕೊನಸೀಮಾ ಜಿಲ್ಲೆಯ ರಾಮಚಂದ್ರಪುರಂನಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್‍ಡಿಎಫ್‍ಗೆ ಸೋಲು; ಮೀಸೆ ಬೋಳಿಸಿಕೊಂಡ ಕಾರ್ಯಕರ್ತ

ಚುನಾವಣೆಯಲ್ಲಿ ಸೋಲು; ಮೀಸೆ ಬೋಳಿಸಿಕೊಂಡ LDF ಕಾರ್ಯಕರ್ತ

LDF Worker Shaves Moustache: 2025ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡಪಕ್ಷ (ಎಲ್‌ಡಿಎಫ್) ಸೋತು ಸುಣ್ಣವಾಗಿದೆ. ಗೆಲ್ಲುವ ಪಣತೊಟ್ಟಿದ್ದ ಕಾರ್ಯಕರ್ತ ಬಾಬು ವರ್ಗೀಸ್‌ ಸೋತಿದ್ದಕ್ಕೆ ಕೊಟ್ಟ ಮಾತಿನಂತೆ ಮೀಸೆ ಬೋಳಿಸಿ ಸುದ್ದಿಯಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪ್ರತಿದಿನ ಬೆಳಗ್ಗೆ ಸ್ವಚ್ಛತಾ ಕಾರ್ಮಿಕರಿಗೆ ಚಹಾ ಹಂಚುವ ಮಹಿಳೆ; ಇದೇ ನನ್ನ ಭಾರತ ಎಂದು ಕೊಂಡಾಡಿದ ನೆಟ್ಟಿಗರು

ಪ್ರತಿದಿನ ಸ್ವಚ್ಛತಾ ಕಾರ್ಮಿಕರಿಗೆ ಚಹಾ ಹಂಚುವ ಮಹಿಳೆ; ವಿಡಿಯೊ ವೈರಲ್

Woman serves tea: ಪ್ರತಿದಿನ ಬೆಳಗ್ಗೆ ತನ್ನ ಮನೆಯಿಂದ ಹೊರಬಂದು, ಸ್ವಚ್ಛತಾ ಕೆಲಸಗಾರರಿಗೆ ಚಹಾ ಹಂಚುವ ಮಹಿಳೆಯೊಬ್ಬರ ವಿಡಿಯೊ ಇದೀಗ ಜನರ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊ ಜನರನ್ನು ದಯೆಯ ಮೌಲ್ಯವನ್ನು ನೆನಪಿಗೆ ತರುವಂತೆ ಮಾಡುತ್ತಿದೆ. ಇದೇ ನನ್ನ ಭಾರತ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಪುರುಷರೇ ತುಂಬಿದ ರೈಲಿನ ಶೌಚಾಲಯದೊಳಗೆ ಸಿಕ್ಕಿ ಹಾಕಿಕೊಂಡ ಮಹಿಳೆ... ಮುಂದೇನಾಯ್ತು? ವಿಡಿಯೊ ನೋಡಿ

ರೈಲು ಶೌಚಾಲಯದಲ್ಲಿ ಸಿಕ್ಕಿ ಹಾಕಿಕೊಂಡ ಮಹಿಳೆ

ಪುರುಷರೇ ತುಂಬಿಕೊಂಡಿದ್ದ ರೈಲು ಬೋಗಿಯೊಳಗಿನ ಶೌಚಾಲಯದಲ್ಲಿ ಮಹಿಳೆಯೊಬ್ಬರು ಸಿಕ್ಕಿ ಹಾಕಿಕೊಂಡು ಪರದಾಡಿದ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ. ಕೊನೆಗೆ ಆಕೆ ಮೊಬೈಲ್ ಮೂಲಕ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಇದರಿಂದ ತಕ್ಷಣ ಪೊಲೀಸರು ಆಕೆಯ ರಕ್ಷಣೆಗೆ ಧಾವಿಸಿದರು.

Viral Video: ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?

ಒಂದೇ ಬೈಕ್‍ನಲ್ಲಿ ಆರು ಮಂದಿ ಯುವಕರ ಸವಾರಿ

Motorcycle stunt: ದೆಹಲಿಯ ರಸ್ತೆಯಲ್ಲಿನ ವಿಡಿಯೊವೊಂದು ವೈರಲ್ ಆಗಿದೆ. ಒಂದೇ ಬೈಕ್‌ನಲ್ಲಿ6 ಯುವಕರು ಸವಾರಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕ್ಯಾಮರಾ ನೋಡಿ ಅವರು ತೋರಿದ ಪ್ರತಿಕ್ರಿಯೆ ಸದ್ಯ ಗಮನ ಸೆಳೆಯುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.

Viral Video: ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ

ತಂದೂರಿ ರೋಟಿಗಾಗಿ ಮದುವೆ ಮನೆಯಲ್ಲಿ ಮುಗಿಬಿದ್ದ ಅತಿಥಿಗಳು

ಇಲ್ಲೊಂದು ಮದುವೆ ಸಮಾರಂಭದಲ್ಲಿ ತಂದೂರಿ ರೋಟಿಗಾಗಿ ಮದುವೆ ಮನೆಯೇ ರಣರಂಗವಾಗಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಗೊಲ್ಚಾ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದ್ದು ಆಹಾರ ವಿತರಣೆಯ ವೇಳೆ ಉಂಟಾದ ತೀವ್ರ ಅವ್ಯವಸ್ಥೆಯಿಂದಾಗಿ ಮದುವೆ ಸಭಾಂಗಣದಲ್ಲೇ ಜಗಳ ಉಂಟಾಗಿದೆ.‌ ತಂದೂರಿ ರೋಟಿಗಾಗಿ ಅತಿಥಿಗಳು ತೋರಿದ ಅಸಭ್ಯ ವರ್ತನೆಯ ವಿಡಿಯೊ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಚಹಾ ಸೇವಿಸಿದ ‌ವಿದೇಶಿ ವ್ಲಾಗರ್‌ನಿಂದ ಭಾರತೀಯ ಆತಿಥ್ಯಕ್ಕೆ ಮೆಚ್ಚುಗೆ: ವಿಡಿಯೊ ಇಲ್ಲಿದೆ

ಬೆಂಗಳೂರಿನ ಆತಿಥ್ಯಕ್ಕೆ ಮನಸೋತ ವಿದೇಶಿ ಪ್ರವಾಸಿಗ

Viral Video: ಇತ್ತೀಚೆಗೆ ಅಮೆರಿಕದ ವ್ಲಾಗರ್ ಒಬ್ಬರು ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತೀಯ ಜನರ ಔದರ್ಯ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಆದ ಒಂದು ವಿಶಿಷ್ಟ ಅನುಭವವನ್ನು ಶೇರ್ ಮಾಡಿದ್ದಾರೆ. ಸಣ್ಣ ಚಹಾ ಅಂಗಡಿಯೊಂದರ ಮಾಲೀಕರೊಬ್ಬರು ತನ್ನ ಬಳಿ ಹಣ ಪಡೆಯಲು ನಿರಾಕರಿಸಿದ ಸರಳ ಸೌಜನ್ಯಕ್ಕೆ ಅವರು ಫಿದಾ ಆಗಿದ್ದು ವಿಡಿಯೊ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Viral Video: ಭಾರತದ ಬಸ್ ಯೂರೋಪ್‌ಗಿಂತ ಬೆಸ್ಟ್ ಎಂದ ಕೆನಡಾ ವ್ಲಾಗರ್‌

ಭಾರತದಲ್ಲಿನ ಬಸ್‌ಗಳ ಸೌಕರ್ಯಕ್ಕೆ ಮನ ಸೋತ ಕೆನಡಾ ಪ್ರವಾಸಿಗ

ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ರಾತ್ರಿಯ ಬಸ್ ಪ್ರಯಾಣ ಮಾಡಿದ ಕೆನಡಾದ ಪ್ರವಾಸಿಗರೊಬ್ಬರು ಇಲ್ಲಿನ ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ. ಸ್ಲೀಪರ್ ಬಸ್‌ಗಳಲ್ಲಿ ಕೊಡುವ ವಿವಿಧ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಬಸ್‌ನಲ್ಲಿ ಇರುವ ಸೌಲಭ್ಯಗಳು ಯುರೋಪಿಯನ್ ಬಸ್‌ಗಳಿಗಿಂತಲೂ ಮೇಲ್ಮಟ್ಟದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಸ್ತೆ ಮಧ್ಯೆಯೇ ಅಡುಗೆ ಮಾಡಿದ ದಂಪತಿ; ಪ್ರಶ್ನಿಸಿದ ವ್ಯಕ್ತಿಯನ್ನೇ ತರಾಟೆಗೆ ತೆಗೆದುಕೊಂಡ ಮಹಿಳೆ

ರಸ್ತೆ ಮಧ್ಯೆ ಅಡುಗೆ ಮಾಡಿದ ಮಹಿಳೆ: ನೆಟ್ಟಿಗರು ಹೇಳಿದ್ದೇನು?

Viral Video: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರ್ಗ ಮಧ್ಯೆಯೇ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಮಹಿಳೆ ಮತ್ತು ಆಕೆಯ ಪತಿ ಮಾರ್ಗ ಮಧ್ಯೆಯೇ ಕಾರನ್ನು ನಿಲ್ಲಿಸಿ ರಸ್ತೆ ಮೇಲೆ ದಿನಸಿ ಸಾಮಗ್ರಿ ಎಲ್ಲ ಹರಡಿ ಅಡುಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ.‌ ಜನನಿಬಿಡ ಪ್ರದೇಶದಲ್ಲಿ ದಂಪತಿ ಯಾವುದೇ ಭಯ, ಅಂಜಿಕೆ ಇಲ್ಲದೆ ಮುಕ್ತವಾಗಿ ಅಡುಗೆ ಮಾಡುತ್ತಿದ್ದ ಈ ವಿಡಿಯೊ ಚರ್ಚೆ ಹುಟ್ಟು ಹಾಕಿದೆ.

ಅಂಬಾನಿ ಮದುವೆಯನ್ನು ಮೀರಿಸಿದ ಸಮಾರಂಭ ಇದು; ಇಲ್ಲಿ ಅತಿಥಿಗಳಿಗೆ ರಾಜಾತಿಥ್ಯ

ಈ ಸಮಾರಂಭಕ್ಕೆ ಹೋದವರೇ ಅದೃಷ್ಟವಂತರು; ವೈರಲ್‌ ವಿಡಿಯೊ ನೋಡಿ

ಮದುವೆ ಸಮಾರಂಭದ ಔತಣ ಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ರಾಜಾತಿಥ್ಯ ನೀಡಲಾಗಿದೆ. ರಾಜ ಮಹಾರಾಜರ ಕಾಲದ ಅದ್ಧೂರಿ ಔತಣಕೂಟವನ್ನು ರೀ ಕ್ರಿಯೆಟ್ ಮಾಡಿರುವ ಘಟನೆ ದಕ್ಷಿಣ ಭಾರತದ ವಿವಾಹ ಸಮಾರಂಭವೊಂದರಲ್ಲಿ ನಡೆದಿದೆ. ಮದುವೆಯ ಊಟದ ಛತ್ರವು ಸಂಪೂರ್ಣ ಮಾರ್ಪಾಡಾಗಿದ್ದು ಸೆಲೆಬ್ರಿಟಿಗಳ ಔತಣಕೂಟವನ್ನು ಕೂಡ ಮೀರಿಸುವಂತಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

Loading...