ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Selfie Scandal: ಮಹಿಳೆಯೊಂದಿಗೆ ಅರೆನಗ್ನ ಸ್ಥಿತಿಯಲ್ಲಿ ಪೋಸ್‌ ಕೊಟ್ಟ ಸಚಿವ; ಏನಿದು ಸೆಲ್ಫಿ ಸ್ಕ್ಯಾಂಡಲ್‌?

Viral Video: ಪಂಜಾಬ್‌ನ ಸಚಿವರೊಬ್ಬರ ಸೆಲ್ಫಿ ಸ್ಕ್ಯಾಂಡಲ್‌ ದೇಶಾದ್ಯಂತ ಸದ್ದು ಮಾಡುತ್ತಿದೆ. ಭಗವಂತ್‌ ಮಾನ್‌ ನೇತೃತ್ವದ ಆಪ್‌ ಸರ್ಕಾರದ ಸಚಿವ ರಾವ್ಜೋತ್‌ ಸಿಂಗ್‌ ಅವರ ಅಶ್ಲೀಲ ಫೋಟೊ ವೈರಲ್‌ ಆಗಿದೆ. ಅವರು ಮಹಿಳೆಯೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿರುವ ಫೋಟೊ ಇದಾಗಿದ್ದು, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಮಹಿಳೆಯೊಂದಿಗೆ ಅರೆನಗ್ನ ಸ್ಥಿತಿಯಲ್ಲಿ ಪೋಸ್‌ ಕೊಟ್ಟ ಸಚಿವ

Profile Ramesh B Jun 18, 2025 4:19 PM

ಚಂಡೀಗಢ: ಜೂ. 19ರಂದು ಪಂಜಾಬ್‌ನ ಲುಧಿಯಾನ ವೆಸ್ಟ್‌ ಉಪಚುನಾವಣೆ (Ludhiana West by-election) ನಡೆಯಲಿದ್ದು, ಈ ಮಧ್ಯೆ ಸಚಿವರೊಬ್ಬರ ಸೆಲ್ಫಿ ಸ್ಕ್ಯಾಂಡಲ್‌ (Selfie Scandal) ದೇಶಾದ್ಯಂತ ಸದ್ದು ಮಾಡುತ್ತಿದೆ. ಭಗವಂತ್‌ ಮಾನ್‌ (Bhagwant Mann) ನೇತೃತ್ವದ ಆಪ್‌ (AAP) ಸರ್ಕಾರದ ಸಚಿವ ರಾವ್ಜೋತ್‌ ಸಿಂಗ್‌ (Ravjot Singh) ಅವರ ಅಶ್ಲೀಲ ಫೋಟೊ ವೈರಲ್‌ ಆಗಿದೆ. ಅವರು ಮಹಿಳೆಯೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿರುವ ಫೋಟೊ ಇದಾಗಿದ್ದು ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಶಿರೋಮಣಿ ಅಕಾಲಿ ದಳದ ಮುಖಂಡ ಬಿಕ್ರಾಂ ಸಿಂಗ್‌ ಮಜಿಥಿಯಾ (Bikram Singh Majithia) ಈ ಫೋಟೊಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾವ್ಜೋತ್‌ ಸಿಂಗ್‌ ಈ ಆರೋಪವನ್ನು ನಿರಾಕರಿಸಿದ್ದು, ರಾಜಕೀಯ ದುರುದ್ದೇಶದಿಂದ ಎಡಿಟ್‌ ಮಾಡಿದ ಫೋಟೊ ಶೇರ್‌ ಮಾಡಿರುವುದಾಗಿ ತಿಳಿಸಿದ್ದಾರೆ (Viral Video). ಸದ್ಯ ಬಿಕ್ರಾಂ ಸಿಂಗ್‌ ಮಜಿಥಿಯಾ ಹಂಚಿಕೊಂಡ 4 ಫೋಟೊ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್‌ ಫೋಟೊದಲ್ಲಿ ರಾವ್ಜೋತ್‌ ಸಿಂಗ್‌ ಅರೆ ನಗ್ನರಾಗಿ ಮಹಿಳೆಯೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ಸೆಲ್ಫಿಗೆ ಪೋಸ್‌ ನೀಡುತ್ತಿರುವುದು ಕಂಡು ಬಂದಿದೆ. ಬಿಕ್ರಾಂ ಸಿಂಗ್‌ ಮಜಿಥಿಯಾ ಇದನ್ನು ಸೆಲ್ಫಿ ಸ್ಕ್ಯಾಂಡಲ್‌ ಎಂದು ಕರೆದಿದ್ದಾರೆ. ಮಾತ್ರವಲ್ಲ ರಾವ್ಜೋತ್‌ ಸಿಂಗ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಜತೆಗೆ ನಿಂತಿರುವ ಬೇರೆ ಫೋಟೊವನ್ನೂ ಶೇರ್‌ ಮಾಡಿದ್ದಾರೆ. ಆಪ್‌ ಮುಖಂಡ ಅರವಿಂದ್‌ ಕೇಜ್ರಿವಾಲ್‌ ಮತ್ತು ಭಗವಂತ್‌ ಮಾನ್‌ ಅವರನ್ನೂ ಟ್ಯಾಗ್‌ ಮಾಡಿದ್ದಾರೆ. ಈ ಸ್ಕ್ಯಾಂಡಲ್‌ನ ವಿಡಿಯೊ ಕೂಡ ತಮ್ಮ ಬಳಿ ಇರುವುದಾಗಿ ತಿಳಿಸಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Viral Video: ಊಟದ ವಿಷಯಕ್ಕೆ ಕಿರಿಕ್; ರೊಚ್ಚಿಗೆದ್ದ ಪ್ರಯಾಣಿಕರಿಂದ ಅನಾಗರಿಕ ವರ್ತನೆ

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ರಾವ್ಜೋತ್‌ ಸಿಂಗ್‌, ಲುಧಿಯಾನ ಉಪಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಶಿರೋಮಣಿ ಅಕಾಲಿ ದಳ ಎಡಿಟ್‌ ಮಾಡಿದ ಫೋಟೊ ಹಂಚಿಕೊಂಡಿದೆ ಎಂದು ಆರೋಪಿಸಿದ್ದಾರೆ. ಬಿಕ್ರಾಂತ್‌ ಸಿಂಗ್‌ ಮಜಿಥಿಯಾ ದಲಿತ ಮತ್ತು ಮಹಿಳೆಯ ಬಗ್ಗೆ ಗೌರವ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಕ್ರಾಂತ್‌ ಸಿಂಗ್‌, ʼʼಜಾತಿ ಹೆಸರಿನಲ್ಲಿ ನಿಮ್ಮ ತಪ್ಪನ್ನು ಮರೆಮಾಚಬೇಡಿ. ಯಾರೂ ಇಲ್ಲಿ ಜಾತಿಯನ್ನು ಉಲ್ಲೇಖಿಸಿಲ್ಲʼʼ ಎಂದಿದ್ದಾರೆ.

ರಾವ್ಜೋತ್‌ ಸಿಂಗ್‌ ಹೇಳಿದ್ದೇನು?

ʼʼವಿಪಕ್ಷ ನಾಯಕರು ಎಐ ಸಹಾಯದಿಂದ ನನ್ನ ವೈಯಕ್ತಿಕ ಫೋಟೊ ಎಡಿಟ್‌ ಮಾಡಿದ್ದಾರೆ. ನಾನು ಮಾಜಿ ಪತ್ನಿಯೊಂದಿಗಿದ್ದ ಫೋಟೊವನ್ನು ತಿರುಚಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ನಾನು ದಲಿತ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಟಾರ್ಗೆಟ್‌ ಮಾಡಲಾಗುತ್ತಿದೆ. ವಿಪಕ್ಷಗಳ ಭಷ್ಟ್ರಚಾರವನ್ನು ಬಯಲಿಗೆಳೆಯುತ್ತೇನೆ ಎನ್ನುವ ಭಯದಲ್ಲಿ ವಾಮಾಮಾರ್ಗದ ರಾಜಕೀಯಕ್ಕೆ ಇಳಿದಿದ್ದಾರೆ. ಈ ಕೃತ್ಯ ನನಗೆ ಮಾತ್ರವಲ್ಲ ಮಹಿಳೆರಿಗೆ ಎಸಗಿದ ಅವಮಾನʼʼ ಎಂದು ಟೀಕಿಸಿದ್ದಾರೆ.

ʼʼಲುಧಿಯಾನ ಉಪಚುನಾವಣೆಗೆ ಕೇವಲ 2 ದಿನಗಳ ಮುಂಚಿತವಾಗಿ ಫೋಟೊಗಳನ್ನು ಹಂಚಿಕೊಂಡಿದ್ದರ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗಿದೆ. ಇದರ ವಿರುದ್ದ ನಾನು ದೂರು ಸಲ್ಲಿಸುತ್ತೇನೆ. ಈ ಸಂಚಿನಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ಎಳೆದು ತರುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆʼʼ ಎಂದು ಗುಡುಗಿದ್ದಾರೆ.