ಯುವಜನತೆಯ ಸದ್ಬಳಕೆ ದೇಶದ ಅಭಿವೃದ್ಧಿಗೆ ರಹದಾರಿ
ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯ. ಆದರೆ ಅದು ಇಂದಿನ ಅಗತ್ಯವೂ ಆಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಹಲವು ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಆ ಮೂಲಕ ದೇಶ ದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ.


ಶ್ರೀಮತಿ ಶಿವಕಾಂತಮ್ಮ
(ಕಾಂತಾ) ನಾಯಕ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು
ಒಂದು ದೇಶದ ಶಕ್ತಿಯೇ ಯುವಜನತೆ, ದೇಶವು ಅಭಿವೃದ್ಧಿಯಾಗಬೇಕಾದರೆ ಯುವಜನತೆಯ ಪಾತ್ರವು ಅಗಾಧ. ಉದ್ಯೋಗದಲ್ಲಿ ತೊಡಗಿಕೊಳ್ಳುವ ಯುವಕ-ಯುವತಿಯರು ವಿವಿಧ ರೀತಿಯ ಕೌಶಲ್ಯವನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೌಶಲ್ಯದ ಕೊರತೆಯಿಂದಾಗಿ ನಿರುದ್ಯೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಯುವಕರನ್ನು ಕೌಶಲ್ಯಭರಿತ ವಾದ ತರಬೇತಿಯೊಂದಿಗೆ ಸಜ್ಜುಗೊಳಿಸಬೇಕಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 15ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತಿದೆ. ನಿರುದ್ಯೋಗ ಸವಾಲುಗಳನ್ನು ಕಡಿಮೆ ಮಾಡಿ ಉದ್ಯೋಗಾಧಾರಿತ ಕೌಶಲ್ಯ ವನ್ನು ಉತ್ತೇಜಿಸಲು ವಿಶ್ವದಾದ್ಯಂತ ಯುವಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ದಿನವು ಮಹತ್ವದ್ದಾಗಿದೆ.
ಇದು ಕೇವಲ ಒಂದು ದಿನದ ಆಚರಣೆಯಾಗದೇ, ಯುವಜನತೆಗೆ ಸೃಜನಶೀಲತೆ, ಉದ್ಯಮಶೀಲತೆ ಮತ್ತು ಉದ್ಯೋಗದತ್ತ ಹೊರಳಲು ಪ್ರತಿಜ್ಞೆ ವಹಿಸುವ ಮಹತ್ವದ ಘಟ್ಟ, ಪ್ರಪಂಚದಾದ್ಯಂತ ಯುವಕರು ಇಂದು ಅವರ ಪೋಷಕರು ಎದುರಿಸಿದ ಸವಾಲುಗಳಿಗಿಂತ ಭಿನ್ನವಾದ ಕೌಶಲ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯ. ಆದರೆ ಅದು ಇಂದಿನ ಅಗತ್ಯವೂ ಆಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಹಲವು ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಆ ಮೂಲಕ ದೇಶ ದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಪರಿಸ್ಥಿತಿ ಅರಿವು
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮತ್ತು ಉಪಮುಖ್ಯಮಂತ್ರಿಗಳಾದ ಡಿ. ಕೆ.ಶಿವಕುಮಾರ್, ಸಚಿವರಾದ ಡಾ.ಶರಣ ಪ್ರಕಾಶ ರುದ್ರಪ್ಪ ಪಾಟೀಲ್ ರವರ ಸಹಕಾರದೊಂದಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಹಲವಾರು ಹೊಸ ಯೋಜನೆಗಳು, ತರಬೇತಿಗಳು ಮತ್ತು ಉದ್ಯೋಗ ಸಂಪರ್ಕ ಕಾರ್ಯಕ್ರಮಗಳ ಮೂಲಕ ಯುವಕರಿಗೆ ಜೀವನ ರೂಪಿಸುವ ಶಕ್ತಿಯನ್ನು ನೀಡುತ್ತಿದೆ.
ಸರಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿ ಪ್ಲಸ್ ಯೋಜನೆಯಡಿ ಸಾವಿರಾರು ಯುವಕ ರಿಗೆ ಕೈಗಾರಿಕಾ ತರಬೇತಿ ನೀಡಲಾಗುತ್ತಿದ್ದು, ಈ ತರಬೇತಿ ಹೊಸ ತಂತ್ರಜ್ಞಾನಗಳಲ್ಲಿ (AL, Robotics, Future Skills) ನಡೆಯುತ್ತಿರುವುದು ಗಮನಾರ್ಹ.
ಕಲಿಕೆ ಜತೆ ಕೌಶಲ್ಯ ಯೋಜನೆಯಡಿ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜತೆಗೆ ಕೈಗಾರಿಕಾ ಕೌಶಲ್ಯ ನೀಡಲಾಗುತ್ತಿದೆ. ಈಗಾಗಲೇ 2023-24ನೇ ಸಾಲಿನಿಂದ ಇಲ್ಲಿಯವರೆಗೆ 63000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಉನ್ನತ ಶಿಕ್ಷಣದ ಜತೆಗೆ ಉದ್ಯೋಗಪಾತ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಇದು ಹೊಸ ಪ್ರವೃತ್ತಿಯಾಗಿದೆ.
‘ನನ್ನ ವೃತ್ತಿ ನನ್ನ ಆಯ್ಕೆ’ ಎಂಬ ಕಾರ್ಯಕ್ರಮವು 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. ಈ ಮೂಲಕ ಮಕ್ಕಳು ತನ್ನ ಇಚ್ಛೆಯ ಉದ್ದೇಶಗಳನ್ನು ಇನ್ನಷ್ಟು ಸುಲಭವಾಗಿ ರೂಪಿಸಿಕೊಳ್ಳಲು ಸಹಾಯಕವಾಗುತ್ತಿದೆ. ರಾಜ್ಯಾದ್ಯಂತ ನಡೆದ ಉದ್ಯೋಗ ಮೇಳಗಳ ಮುಖಾಂತರ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಡಲು ನಿಗಮವು ಶ್ರಮಿಸುತ್ತಿದೆ.
2024ನೇ ಸಾಲಿನಲ್ಲಿ ನಡೆದ ಇಂಡಿಯಾ ಸ್ಕಿಲ್ ಸ್ಪರ್ಧೆಯಲ್ಲಿ ಕರ್ನಾಟಕವು ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರದ 2ನೇ ರಾಜ್ಯವಾಗಿ ಹೊರ ಹೊಮ್ಮಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ 4 ಮೆಡಲಿಯನ್ ಆಫ್ ಎಕ್ಸಲೆನ್ಸ್ ಗಳನ್ನು ರಾಜ್ಯದ ಯುವಕರಿಗೇ ನೀಡಲಾಗಿದೆ. ಈ ಕೌಶಲ್ಯ ಸ್ಪರ್ಧೆ ಗಳು ಯುವಕರಲ್ಲಿ ತಂತ್ರಜ್ಞಾನದ ಜ್ಞಾನ, ನಿಯೋಜನಾ ನೈಪುಣ್ಯತೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕತೆ ಒದಗಿಸುತ್ತದೆ.
ಅಂತಾರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ ಯೋಜನೆಯಡಿ ಸುಮಾರು 1000 ಕ್ಕೂ ಅಧಿಕ ಯುವಕರಿಗೆ ವಿದೇಶದಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಪ್ರಿ ಆಂಡ್ ಡಿಪಾರ್ಟ್ ಓರಿಯೆಂಟೆಂಡ್ ಟ್ರೈನಿಂಗ್ ಎಂಬ ಸುರಕ್ಷಿತ ಪ್ರಕ್ರಿಯೆಯ ಮೂಲಕ ವಿದೇಶಿಯ ಕಾರ್ಮಿಕ ಅವಧಾನ ಮತ್ತು ಜಾಗೃತಿಯನ್ನು ಸಹ ಕಲಿಸುತ್ತಿದೆ.
ನಲ್-ಜಲ್ ಮಿತ್ರ ಯೋಜನೆಯ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಅಡುಗೆ ಮನೆಯಿಂದ ಅಂತರೀಕ್ಷದವರೆಗೂ ಎಂಬ ಪರಿಕಲ್ಪನೆಯಡಿ ಅಸಾಧಾರಣ ಕೌಶಲ್ಯವನ್ನು ಕಲ್ಪಿಸಿ ಆರ್ಥಿಕವಾಗಿ ಸದೃಢ ಪಡಿಸುವಲ್ಲಿ ನಿಗಮವು ಶ್ರಮವಹಿಸುತ್ತಿದೆ. ವಿಶ್ವ ಕೌಶಲ್ಯ ದಿನದ ಪಾಠ ಬಹುಪಾಲು ರಾಷ್ಟ್ರಗಳಿಗೆ ಯುವಶಕ್ತಿಯ ಹಕ್ಕು ಮತ್ತು ಹೊಣೆಗಾರಿಕೆ ಬಗ್ಗೆ ನೆನಪಿಸುತ್ತಿದೆ. ಆದರೆ ಕರ್ನಾಟಕ ಈ ದಿನವನ್ನು ಕೇವಲ ಆಚರಣೆಯಾಗಿ ತೆಗೆದುಕೊಳ್ಳದೇ, ಎಲ್ಲ ವಿಭಾಗಗಳೊಳಗಿನ ಸಜೀವ ಯೋಜನೆ ಗಳ ಮೂಲಕ ಕೌಶಲ್ಯವಂತ ಕರ್ನಾಟಕದ ಭವಿಷ್ಯವನ್ನು ನಿರ್ಮಿಸುತ್ತಿದೆ. ಇದು ನಮ್ಮ ನಾಡಿನ ನವೋದ್ಯಮದ ನಕ್ಷೆ.
ಯುವಕರಿಗೆ ಕೌಶಲ್ಯ ನೀಡುವುದು ಕೇವಲ ತರಬೇತಿಯಾಗಿರಬಾರದು, ಅದು ಅವರ ಜೀವನಕ್ಕೆ ಉಜ್ವಲ ದಿಕ್ಕು ನೀಡಬೇಕು. ಕರ್ನಾಟಕ ಈಗಲೇ ಆ ದಿಕ್ಕಿನಲ್ಲಿ ನಡಿಗೆಯಿಟ್ಟಿದೆ. ಕೌಶಲ್ಯ ಎಂಬುದು ಪ್ರತಿ ಹೆಜ್ಜೆಯಲ್ಲೂ ಹೊಸತನ ಸಾಧಿಸುವುದು, ಚಲನಶೀಲವಾದುದು, ನಿರಂತರ ಪರಿಷ್ಕರಣೆ ಯಾಗುವಂತಹದ್ದು, ಇಂದಿನ ಕೆಲಸಗಳನ್ನು ನಿನ್ನೆಯ ವಿಧಾನಗಳ ಮೂಲಕ ಮಾಡಿ ನಾಳೆ ವ್ಯವಹಾರ ಮಾಡಲಾಗದು ಎಂಬುದು ಉದ್ಯಮ ಜಗತ್ತಿನ ಮಾರ್ಗದರ್ಶಿ ಸೂತ್ರ. ನಿರಂತರ ಕಲಿಕೆ, ಅನ್ವೇಷಣೆ ಹಾಗೂ ಅಳವಡಿಕೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಕೀಲಿಕ್ಕೆ.
ಯುವ ಜನರಲ್ಲಿ ಕೌಶಲ್ಯವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತು ಆಗಿ ಪರಿವರ್ತಿಸಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯ. ಜ್ಞಾನ ಕ್ಷೇತ್ರದಲ್ಲಿ ಪ್ರಪಂಚ ಇಂದು ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕಲ್ಪನೆಗೂ ಎಟುಕದ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಮುನ್ನಡೆಗಳ ಕಾಲದಲ್ಲಿ ಸಮಕಾಲೀನ ಕೌಶಲ್ಯವರ್ಧನೆ ಒಟ್ಟು ಬೆಳವಣಿಗೆಯ ಅಡಿಪಾಯವಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥ ಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹು ಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಫಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.