ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವವಾಣಿ ವಿಶೇಷ

250th Independence of USA: ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ

ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ

ಭಾರತಕ್ಕೆ 1947, ಆ.15ರಂದು ಸ್ವಾತಂತ್ರ್ಯ ಬಂದ ಮೇಲೆ ಎರಡೂ ದೇಶಗಳ ನಡುವೆ ಅಧಿಕೃತ ಬಾಂಧವ್ಯ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಸಂಬಂಧ ಆಗಾಗ ಬಲಿಷ್ಠಗೊಳ್ಳುತ್ತ, ಆಗಾಗ ವಿಷಮಿಸುತ್ತ ಸಾಗಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೆಲವು ಏರುಪೇರುಗಳಿದ್ದರೂ, ಒಟ್ಟಾರೆ ಬಲವಾದ ಆಂತರಿಕ ಸಂಬಂಧ ಹೊಂದಿವೆ. ಅಮೆರಿಕದ ಪ್ರಮುಖ ಸ್ಥಾನಗಳಲ್ಲಿ ಭಾರತೀಯರು ಇರುವುದು ಅದಕ್ಕೆ ಕಾರಣ.

250th Independence of USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ

‌250 Years for USA: ಯುದ್ಧವನ್ನೇ ಗೆಲ್ಲದ ಯುದ್ಸೋತ್ಸಾಹಿ ರಾಷ್ಟ್ರ

ಜಗತ್ತಿನಾದ್ಯಂತ ನೂರಾರು ದೇಶಗಳಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಹೊಂದಿರುವ ಅಮೆರಿಕಕ್ಕೆ ಸದಾ ಯುದ್ಧದ ಉತ್ಸಾಹ. ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಸಂಘರ್ಷ ನಡೆದರೂ ಅಲ್ಲಿ ಮೂಗು ತೂರಿಸುವುದು ಅಥವಾ ತಾನೇ ಸ್ವತಃ ಯುದ್ಧಕ್ಕೆ ನಾಂದಿ ಹಾಡುವುದು ಅಮೆರಿಕದ ಹಳೆಯ ಚಾಳಿ. ಆದರೆ, ಇತಿಹಾಸದ ಪುಟಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ದ್ವಿತೀಯ ಮಹಾಯುದ್ಧದ ನಂತರ ಅಮೆರಿಕ ತನ್ನದೇ ಆದ ಬಲದಿಂದ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಗೆದ್ದ ಪ್ರಮುಖ ಯುದ್ಧ ಒಂದೂ ಇಲ್ಲ.

250 Years for USA: ಜಸ್‌ ಸೋಲಿ ಎಂಬ ಮಾನವೀಯತೆ: ‌ಅಮೆರಿಕದಲ್ಲಿ ಹುಟ್ಟಿದವರೆಲ್ಲ ಅಮೆರಿಕನ್ನರೇ ಎಂದ ಕೋರ್ಟ್

ಅಮೆರಿಕದಲ್ಲಿ ಹುಟ್ಟಿದವರೆಲ್ಲ ಅಮೆರಿಕನ್ನರೇ ಎಂದ ಕೋರ್ಟ್

ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಈ ಐತಿಹಾಸಿಕ ವಿಚಾರಣೆಯಲ್ಲಿ ‘ಜಸ್ ಸೋಲಿ’ (Jus soli) ಎನ್ನುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪದವನ್ನು ಬಹುಮತದ ತೀರ್ಪು ಬರೆದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಸೋನಿಯಾ ಸೊಟೊ ಮೇಯರ್, ಎಲೆನಾ ಕಗನ್ ಮತ್ತು ಕೆಟಾಂಜಿ ಬ್ರೌನ್ ಜಾಕ್ಸನ್ ಅವರು ವ್ಯಾಪಕವಾಗಿ ಉಲ್ಲೇಖಿಸಿದ್ದಾರೆ.

250th Independence of USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

250 Years for USA: ಶಕ್ತಿವಂತನ ಸ್ವಾತಂತ್ರ್ಯ ದಿನ ಇಂದು

ಪ್ರತಿ ವರ್ಷ ಜುಲೈ 4ರಂದು ಅಮೆರಿಕಾದಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಆಕಾಶ ವನ್ನು ಬಣ್ಣಬಣ್ಣದ ಪಟಾಕಿಗಳು ರಂಗೇರಿಸುತ್ತವೆ. ಮೆರವಣಿಗೆಗಳು ನಡೆಯುತ್ತವೆ. ಕುಟುಂಬ ಸ್ಥರು ಮತ್ತು ಸ್ನೇಹಿತರು ಒಟ್ಟಾಗಿ ಬಾರ್ಬೆಕ್ಯೂ ಹಾಗೂ ಪಿಕ್ನಿಕ್‌ಗಳನ್ನು ಆಯೋಜಿಸು ತ್ತಾರೆ. ಈ ದಿನವನ್ನು ‘ಅಮೆರಿಕದ ಸ್ವಾತಂತ್ರ್ಯ ದಿನ’ ಅಥವಾ ‘ಫೋರ್ಥ್ ಆಫ್ ಜುಲೈ’ ಎಂದು ಕರೆಯಲಾಗು ತ್ತದೆ.

250th Independence of USA: ಅಮೆರಿಕ ಸೂಪರ್‌ ಪವರ್‌ ಆಗಿದ್ದೇಗೆ ?

250 Years for US: ಅಮೆರಿಕ ಸೂಪರ್‌ ಪವರ್‌ ಆಗಿದ್ದೇಗೆ ?

ಅಮೆರಿಕ ಸಂಯುಕ್ತ ಸಂಸ್ಥಾನ ಇಂದು (ಶನಿವಾರ) ತನ್ನ 250ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಸಂಭ್ರಮದಲ್ಲಿದೆ. ಎರಡೂವರೆ ಶತಮಾನಗಳ ಹಿಂದೆ ಕೇವಲ 13 ಬ್ರಿಟಿಷ್ ವಸಾಹತುಗಳಾಗಿದ್ದ ಒಂದು ಭೂಪ್ರದೇಶ, ಇಂದು ಜಗತ್ತಿನ ರಾಜಕೀಯ, ಆರ್ಥಿಕ, ಮಿಲಿಟರಿ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ರಂಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಏಕೈಕ ಜಾಗತಿಕ ಮಹಾಶಕ್ತಿಯಾಗಿ ಬೆಳೆದು ನಿಂತಿರುವುದು ಆಧುನಿಕ ವಿಶ್ವ ಚರಿತ್ರೆಯ ಅತ್ಯಂತ ರೋಚಕ ಅಧ್ಯಾಯ.

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

ಋಷಿಮೂಲ ನದೀಮೂಲಗಳನ್ನೆಲ್ಲ ಹುಡುಕಬಾರದು ಎಂದು ನಿಮ್ಮ ದೇಶದಲ್ಲಿ ಹೇಳ್ತಾರಂತೆ ಅಲ್ವಾ? ಈ ದೇಶದಲ್ಲಿ ಹಾಗೇನಿಲ್ಲ ಬಿಡಿ. ನನ್ನ ಮೂಲ ಯಾವುದು ಎಂದು ಬೇಕಿದ್ದರೆ ನಾನೇ ಹೇಳುತ್ತೇನೆ. ಅಮೆರಿಕದಲ್ಲಿ ಉತ್ತರಭಾಗದಲ್ಲಿ, ಕೆನಡಾ ದೇಶಕ್ಕೆ ತಾಗಿಕೊಂಡು ಇರುವ, ಸಾವಿರ ಸರೋವರಗಳ ನಾಡು ಎಂದು ಖ್ಯಾತವಾದ ಮಿನ್ನೆಸೋಟ ರಾಜ್ಯದಲ್ಲಿ, ಇಟಾಸ್ಕಾ ಎಂಬ ಸರೋವರ ನನ್ನ ತವರುಮನೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಹರಿದು ಹತ್ತು ರಾಜ್ಯಗಳ ಗುಂಟ ಸಾಗಿ (ರಾಜ್ಯಗಳ ಮೂಲಕ ಎನ್ನಬಹು ದಾಗಿತ್ತು,

Aarathi Krishna: ʼಆರತಿ ಕೃಷ್ಣʼಗೆ ಅನಿವಾಸಿ ಸಚಿವೆ ಪಟ್ಟ ನೀಡಿ

ʼಆರತಿ ಕೃಷ್ಣʼಗೆ ಅನಿವಾಸಿ ಸಚಿವೆ ಪಟ್ಟ ನೀಡಿ

ಆರತಿ ಕೃಷ್ಣ ಅವರು ಕಳೆದ ಒಂದುವರೆ ದಶಕದಿಂದ ಅನಿವಾಸಿ ಭಾರತೀಯರನ್ನು ಹಾಗೂ ರಾಜ್ಯ ಸರಕಾರದ ನಡುವೆ ಸೇತುವೆಯ ರೀತಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಅನೇಕ ಅನಿವಾಸಿ ಭಾರತೀಯರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಮನಸ್ಸಿರುತ್ತದೆ. ಅಂತಹವರೊಂದಿಗೆ ಚರ್ಚಿಸಲು, ಅವರಿಗೆ ಅಗತ್ಯವಿರುವ ಸಹಾಯವನ್ನು ಸರಕಾರದ ಮಟ್ಟದಲ್ಲಿ ನೀಡಲು ಒಬ್ಬರ ಅಗತ್ಯವಿದೆ

ʼಅಡ್ಡಕಸುಬಿʼಗಳ ಪತ್ತೆಗೆ ಪಣ

ʼಅಡ್ಡಕಸುಬಿʼಗಳ ಪತ್ತೆಗೆ ಪಣ

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದು ಜಾಹೀರಾಗಿದೆ. ಅಡ್ಡ ಮತದಾನದ ಹೊಡೆತದಿಂದ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಕೈ ಹೂಡಿರುವ ದಾಳಕ್ಕೆ ಮೈತ್ರಿಗಳು ಮುದುಡಿ ಕುಳಿತಂತಾಗಿದೆ. ಅತ್ತ ಅಡ್ಡ ಮತದಾನ ಮಾಡಬಹುದೆಂದು ಗೊತ್ತಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ, ಜೆಡಿಎಸ್ ತಂತ್ರಗಾರಿಕೆ ನಡೆಸಿದೆ. ಇದು ಪರೋಕ್ಷವಾಗಿ ಜೆಡಿಎಸ್, ಬಿಜೆಪಿ ಯಲ್ಲಿ ಹಿತಶತ್ರುಗಳ ಪತ್ತೆಗೆ ಕಾರಣವಾಗಿದೆ. ಕಾಂಗ್ರೆಸ್ ಅಡ್ಡಮತಕ್ಕೆ ಪ್ರೇರಣೆ ನೀಡಿದೆ ಎಂಬ ಕೂಗು ಹೆಚ್ಚಾಗಲೂ ಕಾರಣವಾಗಿದೆ.

Vishwavani Club House Completes 5 Years: ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

ಮಾತಿನ ಮಂಟಪ ವಿಶ್ವವಾಣಿ ಕ್ಲಬ್‌ʼಹೌಸ್ʼಗೆ 5 ವರ್ಷ

ಕರೋನಾ ಕಾಲದಲ್ಲಿ ಆರಂಭಗೊಂಡ ವಿಶ್ವವಾಣಿ ಕ್ಲಬ್‌ಹೌಸ್ (ಸಂವಾದದ APP) ಚರ್ಚೆಗೆ ಇದೀಗ ಐದು ವರ್ಷ ಭರ್ತಿಯಾಗಿದೆ. ‘ಆಡುಮುಟ್ಟದ ಸೊಪ್ಪಿಲ್ಲ; ವಿಶ್ವವಾಣಿ ಕ್ಲಬ್‌ಹೌಸ್‌ ನಲ್ಲಿ ನಡೆಯದ ಚರ್ಚೆಯಿಲ್ಲ’ ಎನ್ನುವಂತೆ ಸತತ 5 ವರ್ಷಗಳ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿರಂತರ ಚರ್ಚೆಗಳು ನಡೆದಿವೆ. ವಿಶ್ವದಲ್ಲಿ ಯಾವುದೇ ಒಂದು ಕ್ಲಬ್‌ಹೌಸ್ ರೂಮ್ ಇಷ್ಟು ಸುದೀರ್ಘವಾಗಿ ನಡೆದ ಇತಿಹಾಸ ವಿಲ್ಲ

Pralhad Joshi Column: ನರೇಂದ್ರ ಮೋದಿ @12: ವಿಕಸಿತ ಭಾರತದ ಹಾದಿ

ನರೇಂದ್ರ ಮೋದಿ @12: ವಿಕಸಿತ ಭಾರತದ ಹಾದಿ

‘ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಧ್ಯೇಯಘೋಷದ ಫಲವಾಗಿ ಭಾರತವಿಂದು ಅಂಬಾರಿ ಸ್ಥಾನವನ್ನಲಂಕರಿಸಿದೆ. ಒಂದು ಕಾಲದಲ್ಲಿ ಪ್ರಪಂಚದ ಐದು ದುರ್ಬಲ ರಾಷ್ಟ್ರ ಗಳಲ್ಲಿ ಒಂದಾಗಿದ್ದ, ಭಯೋತ್ಪಾದನಾ ದಾಳಿ ವೇಳೆ ಮೇಣದ ಬತ್ತಿ ಹಚ್ಚುತ್ತಿದ್ದ ಭಾರತದ ಆ ದಿನಗಳೀಗ ಕರಗಿ ಹೋಗಿವೆ. 21ನೇ ಶತಮಾನದ ಭಾರತ, ನರೇಂದ್ರ ಮೋದಿ ಸಾರಥ್ಯದಲ್ಲಿ ಬಲಿಷ್ಠ ಆರ್ಥಿಕತೆಯತ್ತ ಅಶ್ವಮೇಧವಾಗಿ ಮುನ್ನುಗ್ಗುತ್ತಿದೆ.

Vishwavani Global Achievers Award held at Manila, Philippines: ಫಿಲಿಫೈನ್ಸ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ಫಿಲಿಫೈನ್ಸ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ವಿಶ್ವವಾಣಿ ಗ್ಲೋಬಲ್‌ ಪೋರಂ ನೀಡುವ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು, ರಾಜ್ಯದ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಮೂರು ಜನರ ಆಯ್ಕೆದಾರರ ಸಮಿತಿಯಿರುತ್ತದೆ. ಆ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಸಾಧಕರನ್ನು ಗುರುತಿಸಲಾಗುತ್ತದೆ.

Vishwavani Global Achievers Award held at Manila, Philippines: ಕನ್ನಡಿಗರ ಜಾಗತಿಕ ಸಮಾವೇಶ- ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಸಂಭ್ರಮ

ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಸಂಭ್ರಮ

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದೇಶದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸುವ ವಿಶ್ವವಾಣಿಯ ಗ್ಲೋಬಲ್‌ ಅಚೀವರ್ಸ್‌ ಕಾರ್ಮಕ್ರಮದ ವೇಳೆ ನಾನಾ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸುವುದರ ಜತೆ ಭಾರತ ಹಾಗೂ ಆಯಾ ದೇಶದ ಕಲೆ, ಸಂಸ್ಕೃತಿಯನ್ನು ಪಸರಿಸು ವಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಫಿಲಿಫೈನ್ಸ್‌ʼನಲ್ಲಿ ನಡೆದ ಕಾರ್ಯ ಕ್ರಮದ ಝಲಕ್‌ ಇಲ್ಲಿದೆ.

Vishwavani Global Achievers Award held at Manila, Philippines: ಸಪ್ತ ಸಾವಿರ ದ್ವೀಪದ ನಾಡಲ್ಲಿ ಕನ್ನಡಿಗರಿಗೆ ಸನ್ಮಾನ

ಸಪ್ತ ಸಾವಿರ ದ್ವೀಪದ ನಾಡಲ್ಲಿ ಕನ್ನಡಿಗರಿಗೆ ಸನ್ಮಾನ

ಇಡೀ ವಿಶ್ವದ ಜನರನ್ನು ತನ್ನ ಪ್ರವಾಸಿ ತಾಣಗಳ ಮೂಲಕವೇ ಸೆಳೆಯುವ ಫಿಲಿಪೈನ್ಸ್ ದೇಶದ ರಾಜಧಾನಿ ಮನಿಲಾದಲ್ಲಿ ಕನ್ನಡಿಗರ ಕಂಪು ಸೂಸುತ್ತಿತ್ತು. ವಿಶ್ವವಾಣಿ ಗ್ಲೋಬಲ್ ಫಾರಂ, ವಿಶ್ವವಾಣಿ ವತಿಯಿಂದ ಆಯೋಜಿಸಿದ್ದ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಾಡಿನ ಹೆಮ್ಮೆಯ ಸಾಧಕರನ್ನು ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ವಿಶ್ವಯಾನದಲ್ಲಿ ದಾಖಲೆ ಬರೆದ ಪುಟ್ಟ ಹಕ್ಕಿ

ವಿಶ್ವಯಾನದಲ್ಲಿ ದಾಖಲೆ ಬರೆದ ಪುಟ್ಟ ಹಕ್ಕಿ

ಗಿಡುಗ ಜಾತಿಯ ಅಮೂರ್ ಫಾಲ್ಕನ್ ಮತ್ತೊಮ್ಮೆ ತನ್ನ ಅಪ್ರತಿಮ ಹಾರಾಟ ಸಾಮರ್ಥ್ಯ ದಿಂದ ವಿಜ್ಞಾನಿಗಳನ್ನು ಬೆರಗು ಗೊಳಿಸಿದೆ. ಮಣಿಪುರದಿಂದ ರೇಡಿಯೋ ಟ್ಯಾಗ್ ಮಾಡಲ್ಪಟ್ಟ ಅಪಾಪಂಗ್ ಎಂಬ ಗಂಡು ಪಕ್ಷಿಯು ಸೊಮಾಲಿಯಾದಿಂದ ಮಧ್ಯ ಭಾರತದವರೆಗೆ 95 ಗಂಟೆಗಳಲ್ಲಿ 4750 ಕಿಲೋ ಮೀಟರ್ ದೂರವನ್ನು ಎಲ್ಲಿಯೂ ನಿಲ್ಲದೆ ಕ್ರಮಿಸಿ ಹೊಸ ದಾಖಲೆ ಬರೆದಿದೆ.

ಆಂಟಿಗಳ ಎಸ್ಕೇಪ್‌, ಅಂಕಲ್‌ʼಗಳ ಪರದಾಟ

ಆಂಟಿಗಳ ಎಸ್ಕೇಪ್‌, ಅಂಕಲ್‌ʼಗಳ ಪರದಾಟ

ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜಿಮ್ ಟ್ರೈನರ್‌ನ ಪತ್ನಿ, ಪತಿಯ ಸ್ನೇಹಿತ ನೊಂದಿಗೆ ಓಡಿ ಹೋಗಿದ್ದಾಳೆ. ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲಾಗಿದ್ದಾಳೆ. ಅಣ್ಣ ಅಣ್ಣ ಅಂತ ಕರೆಯುತ್ತಿದ್ದವಳು ಈಗ ಪ್ರೀತಿಸಿ ಮದುವೆಯಾಗಿದ್ದ ಗಂಡನಿಗೆ ಕೊಟ್ಟು ಕೈಕೊಟ್ಟು ಪರಾರಿ ಯಾಗಿದ್ದಾಳೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಮಹಿಳೆ ಓಡಿಹೋಗಿರುವುದು ಕುತೂಹಲಕ್ಕೆ ಕಾರಣ ವಾಗಿದೆ.

Sewage water is no longer a waste: ಚರಂಡಿ ನೀರು ಇನ್ನು ಅಸಹ್ಯವಲ್ಲ, ನಿಮ್ಮ ಅಡುಗೆ ಅನಿಲದ ಮೂಲ!

ಚರಂಡಿ ನೀರು ಇನ್ನು ಅಸಹ್ಯವಲ್ಲ, ನಿಮ್ಮ ಅಡುಗೆ ಅನಿಲದ ಮೂಲ!

ಕಟ್ಟಕಡೆಯಲ್ಲಿ ಮಿಥಾನೊಜೆನಿಸಿಸ್ ಎಂಬ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿಯೇ ಮಿಥೇಲ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವು ನೀರಿನಿಂದ ಬೇರ್ಪಟ್ಟು ಮೇಲಕ್ಕೆ ಹೋಗುತ್ತದೆ. ಅದನ್ನು ಕೊಳವೆಗಳ ಮೂಲಕ ಸ್ಟೋರೇಜ್ ಕಂಟೈನರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಮೇಲಿನ ಪ್ರಕ್ರಿಯೆಯಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾದ ಕೂಡಲೇ ಅದು ಎಲ್‌ಪಿಜಿಯಂತೆ ಅಡುಗೆ ಅನಿಲ ವಾಗಿರುವುದಿಲ್ಲ.

H D Kumaraswamy: ಸಿಎಂ ಪಟ್ಟದ ಮೇಲೆ ಕಣ್ಣು: 'ರಾಜ್ಯ'ಕೀಯಕ್ಕೆ ಎಚ್‌ʼಡಿಕೆ ?

ಸಿಎಂ ಪಟ್ಟದ ಮೇಲೆ ಕಣ್ಣು: 'ರಾಜ್ಯ'ಕೀಯಕ್ಕೆ ಎಚ್‌ʼಡಿಕೆ ?

ಕುಮಾರಸ್ವಾಮಿ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರಿಗೆ ಅಪಾಯದ ವಾಸನೆ ಬಡಿದಿದೆ. ಇದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್'ನೊಳಕ್ಕೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಲೂಬಹುದು. ಒಂದು ವೇಳೆ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರ ಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ, ಬಿಜೆಪಿಯ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ರೊಚ್ಚಿಗೇಳ ಬಹುದು. ಅವರನ್ನೆಲ್ಲ ಹೇಗೆ ಸಂಬಾಳಿಸಲಾಗುತ್ತದೆ ಎಂಬ ಕುತೂಹಲವುಂಟಾಗಿದೆ.

ಅತ್ತ ನರೇಗಾವೂ ಇಲ್ಲ, ಇತ್ತ ವಿಬಿ ಜಿ ರಾಮ್‌ಜಿಯೂ ಇಲ್ಲ

ಅತ್ತ ನರೇಗಾವೂ ಇಲ್ಲ, ಇತ್ತ ವಿಬಿ ಜಿ ರಾಮ್‌ಜಿಯೂ ಇಲ್ಲ

ಕೇಂದ್ರ ಸರಕಾರ ನರೇಗಾ ಕಾಯಿದೆಯ ಬದಲಿಗೆ ವಿಬಿರಾಮ್‌ಜಿ ಕಾಯಿದೆಯ ಮೂಲಕ ಉದ್ಯೋಗ ಖಾತ್ರಿಯನ್ನು ಜಾರಿಗೊಳಿಸಲು ಮುಂದಾಗಿದೆ. ನರೇಗಾದಲ್ಲಿದ್ದ ಅಂಶಗಳಿಗೆ ತಿದ್ದುಪಡಿಗೊಳಿಸಲಾಗಿದೆ. ಆದರೆ ಕೇಂದ್ರದ ಈ ತೀರ್ಮಾನವನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿರೋಧಿಸುತ್ತಿದ್ದು, ರಾಜ್ಯದಲ್ಲಿ ಸರಕಾರ ವಿಬಿ ರಾಮ್ ಜಿ ಕಾಯಿದೆಯನ್ನು ಜಾರಿಗೊಳಿಸುವ ವಿಷಯದಲ್ಲಿ ಈಗಲೂ ಕರ್ನಾಟಕ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ

ದತ್ತಾಂಶ ಆಧಾರಿತ ಆಡಳಿತದತ್ತ ರಾಜ್ಯದ ದಿಟ್ಟ ಹೆಜ್ಜೆ

ದತ್ತಾಂಶ ಆಧಾರಿತ ಆಡಳಿತದತ್ತ ರಾಜ್ಯದ ದಿಟ್ಟ ಹೆಜ್ಜೆ

ಜನಸಾಂಖ್ಯಿಕವಾಗಿ ಕರ್ನಾಟಕವು ಚುರುಕಾದ ಚಿತ್ರಣವನ್ನು ನೀಡುತ್ತದೆ. 15-59 ವರ್ಷದ ಕಾರ್ಯನಿರತ ವಯೋಮಾನದ ವರ್ಗವು ಸುಮಾರು 65% ಇದ್ದು, ಇದು ಜನ ಸಾಂಖ್ಯಿಕ ಲಾಭವನ್ನು ಸೂಚಿಸುತ್ತದೆ. ಇದೇ ಸಮಯದಲ್ಲಿ, 60 ವರ್ಷ ಮೇಲ್ಪಟ್ಟ ಹಿರಿಯರ ಪ್ರಮಾಣ 10% ಕ್ಕಿಂತ ಹೆಚ್ಚು ಆಗುವ ಸಾಧ್ಯತೆಯಿದ್ದು, ವೃದ್ಧಾಪ್ಯ ಆರೈಕೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಗಳ ಅಗತ್ಯತೆಯನ್ನು ಸೂಚಿಸುತ್ತದೆ.

ಐಪಿಎಲ್ ಟಿಕೆಟ್ ಕೇಳಿ ಮರ್ಯಾದೆ ಕಳೆದುಕೊಂಡ ಶಾಸಕರು

ಐಪಿಎಲ್ ಟಿಕೆಟ್ ಕೇಳಿ ಮರ್ಯಾದೆ ಕಳೆದುಕೊಂಡ ಶಾಸಕರು

ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ಐಪಿಎಲ್ ನೋಡಲು ಐದು ಟಿಕೆಟ್ ಕೊಡಿಸಬೇಕು, ಶಾಸಕರಿಗಾಗಿ ವಿಐಪಿ ಜಾಗ ಮಾಡಬೇಕು ಎಂದು ಸ್ಪೀಕರ್‌ಗೆ ದುಂಬಾಲು ಬಿದ್ದ ಘಟನೆ ಹಾಗೂ ಐದು ಟಿಕೆಟ್ ಕೊಡಿಸುವಂತೆ ಸರಕಾರಕ್ಕೆ ಸೂಚನೆ ನೀಡಿರುವ ನಡೆ ತೀವ್ರ ಅಕ್ಷೇಪಕ್ಕೆ ಕಾರಣವಾಗಿದೆ.

ಪ್ರಣೀತ್ ಕುಮಾರ್ ಕೈಯಲ್ಲಿ ಅರಳಿದ ರಥ

ಪ್ರಣೀತ್ ಕುಮಾರ್ ಕೈಯಲ್ಲಿ ಅರಳಿದ ರಥ

ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಪ್ರಣೀತ್, ಕೇವಲ ನಾಲ್ಕು ದಿನಗಳ ಅಲ್ಪಾವಧಿ ಯಲ್ಲಿ ಮೂರು ಅಡಿ ಎತ್ತರದ ಈ ರಥವನ್ನು ನಿರ್ಮಿಸಿದ್ದಾರೆ. ಇದಕ್ಕೆ ‘ಶ್ರೀಮನ್ ಮಹಾ ಸ್ಯಂದನ ರಥ’ ಎಂದು ನಾಮಕರಣ ಮಾಡಲಾಗಿದ್ದು, ಇದು ಅಸಲಿ ಮಹಾರಥದ ಪ್ರತಿರೂಪದಂತೆಯೇ ಕಂಗೊಳಿಸುತ್ತಿದೆ.

Davanagere Byelection: ಯಾರ ಬಾಯಿಗೆ 'ದಾವಣಗೆರೆ ಬೆಣ್ಣೆ ದೋಸೆ'?

Davanagere Byelection: ಯಾರ ಬಾಯಿಗೆ 'ದಾವಣಗೆರೆ ಬೆಣ್ಣೆ ದೋಸೆ'?

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕೇತ್ರದ ಉಪಚುನಾವಣೆ ಕಣ ದಿನೇದಿನೆ ರಂಗೇರುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಕೊನೆಗೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಖಾಡ ಕ್ಕಿಳಿಸಿವೆ. ದಾವಣಗೆರೆ ಬೆಣ್ಣೆ ದೋಸೆ ಯಾರ ಬಾಯಿಗೆ ಮತದಾರ ಇಡಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

Supremacy of Bagalkot: ಬಾಗಲಕೋಟೆ ಅಧಿಪತ್ಯಕ್ಕೆ ಮೇಟಿ-ಚರಂತಿಮಠ ಯುದ್ಧ

ಬಾಗಲಕೋಟೆ ಅಧಿಪತ್ಯಕ್ಕೆ ಮೇಟಿ-ಚರಂತಿಮಠ ಯುದ್ಧ

ಮೇಟಿ ಕುಟುಂಬದಲ್ಲಿನ ಕಲಹ ಈ ಬಾರಿ ಟಿಕೆಟ್ ವಿಚಾರವಾಗಿ ಬಹಳಷ್ಟು ಚರ್ಚೆ ಯಾದರೂ ಸಿಎಂ ಸಿದ್ದರಾಮಯ್ಯ ಮಾತಿಗೆ ಅಸಮಾಧಾನ ಕೊಂಚ ಕಡಿಮೆಯಾಗಿದೆ. ಆಪ್ತ ಸ್ನೇಹಿತನ ಮಗನನ್ನು ಗೆಲ್ಲಿಸುವ ಪ್ರಯತ್ನದಲ್ಲಿರುವ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಉಪಕದನ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಂದ ವೀರಶೈವ ಲಿಂಗಾಯಿತರಿಗೆ ಕನಿಷ್ಠ 100 ಟಿಕೆಟ್ ನೀಡಬೇಕು: ಎಂ.ಕೆ.ಬಸವರಾಜ್ ಒತ್ತಾಯ

ವೀರಶೈವ ಲಿಂಗಾಯಿತರಿಗೆ ಕನಿಷ್ಠ 100 ಟಿಕೆಟ್ ನೀಡಬೇಕು

ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಉಳ್ಳಂತಹ ಹಾಗೂ ರಾಜ್ಯವನ್ನ ಸಮಗ್ರವಾಗಿ ಎಲ್ಲಾ ಪಕ್ಷ ದಲ್ಲೂ ವೀರಶೈವ ಲಿಂಗಾಯಿತರ ಶಾಸಕರ ಹಾಗೂ ಜನಪ್ರತಿನಿಧಿಗಳ ಸಂಖ್ಯೆ ಗಮನದಲ್ಲಿಟ್ಟು ಕೊಂಡರೆ 2015 ಪಾಲಿಕೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಸಿಕ್ಕ ಟಿಕೆಟ್ ಕೇವಲ ಬೆರಳೆಣಿಕೆ ಇಡಿ ಬೆಂಗಳೂರು ಸೇರಿದಂತೆ, ಅಂದಾಜಿನ ಪ್ರಕಾರ ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷ ಇದ್ದಾರೆ.

Loading...