KPSC Controversy: ಕೆಪಿಎಸ್ಸಿ ವಿವಾದ: ಅಧಿಕಾರಿಗಳ ವಿರುದ್ದ ಕ್ರಮವಿಲ್ಲ !
ಕಳೆದ ವರ್ಷ ನಡೆದಿದ್ದ ಕೆಪಿಎಸ್ಸಿ ಪರೀಕ್ಷೆ ಯಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಪ್ರಶ್ನೆಪತ್ರಿಕೆ ತರ್ಜುಮೆ ಯಾಗುವಾಗ ಎಡವಟ್ಟಾಗಿತ್ತು. ಈ ಕಾರಣಕ್ಕೆ ಭಾರಿ ವಿವಾದವಾಗಿದ್ದರಿಂದ, ಮರು ಪರೀಕ್ಷೆ ನಡೆಸ ಲಾಗಿತ್ತು. ಮರು ಪರೀಕ್ಷೆಯಲ್ಲಿಯೂ ತರ್ಜುಮೆಯ ಬಗ್ಗೆ ಭಾರೀ ಆಕ್ಷೇಪಗಳು ಕೇಳಿಬಂದಿದ್ದವು. ಆದರೆ ಇದೀಗ ಈ ಎಡವಟ್ಟು ಮಾಡಿದ ಭಾಷಾಂತರಕಾರರ ವಿರುದ್ಧ ಕ್ರಮವಹಿಸಲು ಸಾಧ್ಯವಿಲ್ಲ ಎನ್ನುವ ಅಚ್ಚರಿಯ ಉತ್ತರ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಬಂದಿದೆ.