Roopa Gururaj Column: ಕಕುದ್ರುಮನೆಂಬ ನಕಲಿ ರಾಜ
ಬ್ರಹ್ಮದೇವ, ಸ್ವಲ್ಪ ಸಮಯದ ಹಿಂದೆಯಷ್ಟೇ ನನ್ನನ್ನು ಸೃಷ್ಟಿ ಮಾಡಿದ್ದಾನೆ, ಈ ಕಾಡಿನಲ್ಲಿ ಒಬ್ಬ ಒಳ್ಳೆಯ ರಾಜನಿಲ್ಲ ಅದಕ್ಕಾಗಿ ಎಲ್ಲಾ ಪ್ರಾಣಿಗಳಿಗೂ ನೀನೇ ರಾಜನಾಗು ಎಂದು ಹೇಳಿ ನನಗೆ ‘ಕಕುದ್ರು ಮ’ ಎಂದು ಹೆಸರು ಕೊಟ್ಟು, ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಅವನ ಆದೇಶದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ ನೀವೆಲ್ಲರೂ ನನ್ನನ್ನು ರಾಜನನ್ನಾಗಿ ಸ್ವೀಕರಿಸಿ ನನ್ನ ಆeಯನ್ನು ಪ್ರಶ್ನಿಸದೇ, ಪರಿ ಪಾಲಿಸ ಬೇಕು ಇದು ಬ್ರಹ್ಮದೇವನ ಆದೇಶ ಎಂದಿತು.


ಒಂದೊಳ್ಳೆ ಮಾತು
ಒಂದು ಕಾಡಿನಲ್ಲಿದ್ದ ನರಿಯೊಂದಕ್ಕೆ ಬಹಳ ಹಸಿವಾಯಿತು. ಎಷ್ಟು ಹುಡುಕಿದರೂ ತಿನ್ನಲು ಏನೂ ಸಿಗಲಿಲ್ಲ. ಹಸಿವು ತಡೆಯಲಾರದೆ ಕಾಡಿನ ಮಗ್ಗಲಿನಲ್ಲಿದ್ದ ಒಂದು ಊರಿನೊಳಗೆ ಆಹಾರ ಹುಡುಕಿಕೊಂಡು ಬಂದಿತು. ಊರಿನಲ್ಲಿದ್ದ ಬೀದಿ ನಾಯಿಗಳು ಒಟ್ಟಾಗಿ, ಒಂದೇ ಸಮನೆ ಬೊಗಳು ತ್ತಾ, ನರಿಯನ್ನು ಕಚ್ಚಲು ಹೋದವು. ನರಿ ಹೇಗೋ ನಾಯಿಗಳ ಕಾಟದಿಂದ ತಪ್ಪಿಸಿ ಕೊಂಡು, ಬಟ್ಟೆಗೆ ಬಣ್ಣ ಹಾಕುವವನ ಮನೆ ಹಿಂಭಾಗದಲ್ಲಿ ನುಗ್ಗಿತು.
ಗಾಬರಿಯಿಂದ ಆತ ಬಟ್ಟೆಗೆ ಬಣ್ಣ ಹಾಕಲೆಂದು ಕದಡಿಟ್ಟಿದ್ದ, ಬಣ್ಣದ ದೊಡ್ಡ ಕಡಾಯಿಯೊಳಗೆ ಬಿದ್ದು ಬಿಟ್ಟಿತು. ಅದರ ಮೈಗೆ ಬಟ್ಟೆಯ ಬಣ್ಣ ಮೆತ್ತಿಕೊಂಡು ಮೈಯೆಲ್ಲಾ ಕಡು ಕಪ್ಪು ಬಣ್ಣವಾಯಿತು. ಸ್ವಲ್ಪ ಸಮಯದ ನಂತರ ನಾಯಿಗಳ ಗಲಾಟೆ ಕಡಿಮೆಯಾದ ನಂತರ, ನರಿ ನಿಧಾನವಾಗಿ ಅಲ್ಲಿಂದ ಎದ್ದು ಹೊರಗೆ ಹೊರಟಿತು.
ಇದರ ಬಣ್ಣ ಬದಲಾದುದರಿಂದ ನಾಯಿಗಳಿಗೆ ಇದರ ಗುರುತು ಸಿಗಲಿಲ್ಲ. ಅವುಗಳು ತಮ್ಮ ಪಾಡಿಗೆ ತಾವು ಅಲ್ಲಿಂದ ಹೊರಟು ಹೋದವು. ನರಿ ಪುನಃ ಕಾಡಿಗೇ ಹೊರಟಿತು. ಕಾಡಿನಲ್ಲಿದ್ದ ಯಾವ ಪ್ರಾಣಿಗಳಿಗೂ ಇದರ ಗುರುತು ಸಿಗಲಿಲ್ಲ. ನರಿ ತನ್ನನ್ನು ಬೆರಗಾಗಿ ನೋಡುತ್ತಿರುವ ಎಲ್ಲಾ ಪ್ರಾಣಿ ಗಳತ್ತ ದೃಷ್ಟಿ ಹರಿಸಿ, ಸ್ವಲ್ಪ ಧ್ವನಿ ಏರಿಸಿ, ಕಾಡಿನ ಮೃಗಗಳೇ, ಇಲ್ಲಿ ಕೇಳಿಸಿಕೊಳ್ಳಿ, ನನ್ನನ್ನು ನೋಡಿ ನೀವೇನೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ.
ಇದನ್ನೂ ಓದಿ: Roopa Gururaj Column: ಪುರಿ ಜಗನ್ನಾಥ ಸ್ವಾಮಿಯ ಅಪೂರ್ವ ದೇವಾಲಯ
ಬ್ರಹ್ಮದೇವ, ಸ್ವಲ್ಪ ಸಮಯದ ಹಿಂದೆಯಷ್ಟೇ ನನ್ನನ್ನು ಸೃಷ್ಟಿ ಮಾಡಿದ್ದಾನೆ, ಈ ಕಾಡಿನಲ್ಲಿ ಒಬ್ಬ ಒಳ್ಳೆಯ ರಾಜನಿಲ್ಲ ಅದಕ್ಕಾಗಿ ಎಲ್ಲಾ ಪ್ರಾಣಿಗಳಿಗೂ ನೀನೇ ರಾಜನಾಗು ಎಂದು ಹೇಳಿ ನನಗೆ ‘ಕಕುದ್ರುಮ’ ಎಂದು ಹೆಸರು ಕೊಟ್ಟು, ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಅವನ ಆದೇಶದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ ನೀವೆಲ್ಲರೂ ನನ್ನನ್ನು ರಾಜನನ್ನಾಗಿ ಸ್ವೀಕರಿಸಿ ನನ್ನ ಆಜ್ಞೆಯನ್ನು ಪ್ರಶ್ನಿಸದೇ, ಪರಿ ಪಾಲಿಸಬೇಕು ಇದು ಬ್ರಹ್ಮದೇವನ ಆದೇಶ ಎಂದಿತು.
ಕಾಡಿನ ಎಲ್ಲಾ ಪ್ರಾಣಿಗಳೂ ನರಿಯ ಮಾತನ್ನು ಒಪ್ಪಿಕೊಂಡವು. ನರಿ ಸಿಂಹಕ್ಕೆ ಪ್ರಧಾನ ಮಂತ್ರಿ ಪದವಿಯನ್ನೂ, ಹುಲಿಗೆ ತನ್ನ ಬೆಂಗಾವಲಿನ ಪದವಿಯನ್ನೂ ಆನೆಗೆ ತಾಂಬೂಲವನ್ನು ತಯಾರಿ ಸುವ ಕೆಲಸವನ್ನು ಕೊಟ್ಟಿತು. ತೋಳವನ್ನು ಬಾಗಿಲ ಕಾವಲುಗಾರನನ್ನಾಗಿ ಮಾಡಿ ಕೊಂಡಿತು.
ಅಪ್ಪಿ ತಪ್ಪಿಯೂ ಕೂಡ ನರಿಗಳನ್ನು ಮಾತ್ರ ಒಳಗೆ ಸೇರಿಸಿಕೊಳ್ಳಲೇ ಇಲ್ಲ! ಎಲ್ಲಾ ನರಿಗಳನ್ನೂ ಕಾಡಿನಿಂದ ಆಚೆಗೆ ಓಡಿಸಿತು. ರಾಜನಾದ, ಕಕುದ್ರುಮನಿಗೆ, ಸಿಂಹದಿಂದ ಹಿಡಿದು ಉಳಿದ ಎಲ್ಲಾ ಪ್ರಾಣಿಗಳೂ, ತಾವು ಬೇಟೆಯಾಡಿ ತಂದ ಮಾಂಸವನ್ನು ಮೊದಲು ಅದರ ಮುಂದೆ ಇಡುತ್ತಿದ್ದವು. ನರಿಯು ತನ್ನ ಪಾಲಿನ ಮಾಂಸವನ್ನು ಮೊದಲು ತಿಂದು ಉಳಿದಿದ್ದನ್ನು ಬೇರೆ ಪ್ರಾಣಿಗಳಿಗೆ ಹಂಚಿ ಕೊಳ್ಳಲು ಹೇಳುತ್ತಿತ್ತು.
ಒಂದು ಸಲ ನರಿ, ಎಲ್ಲಾ ಪ್ರಾಣಿಗಳೊಂದಿಗೆ ಸಭೆ ನಡೆಸುತ್ತಿದ್ದಾಗ ಪಕ್ಕದ ಕಾಡಿನಿಂದ ಗುಳ್ಳೆ ನರಿಗಳು ಗಟ್ಟಿಯಾಗಿ ಊಳಿಡುವ ಶಬ್ದ ಕೇಳಿಸಿತು. ಆಗ ರಾಜ ಕಕುದ್ರುಮನ ಕಿವಿ ನೆಟ್ಟಗಾಯಿತು. ಅವುಗಳ ಊಳಿಡುತ್ತಿರುವ ಶಬ್ದದಿಂದ ನರಿಗೆ ತನ್ನ ಹಿಂದಿನ ಸ್ಮರಣೆಯಾಗಿ, ಆನಂದದಿಂದ ಬಹಳ ರೋಮಾಂಚನಗೊಂಡಿತು.
ಅದು ತನ್ನ ಸಿಂಹಾಸನದಿಂದ ಎದ್ದು ನಿಂತು ಸಂತೋಷದಿಂದ ತಾನೂ ಕೂಡ ಗಟ್ಟಿಯಾಗಿ ಊಳಿಡಲು ಶುರು ಮಾಡಿತು. ಕಕುದ್ರುಮನ ಕಂಠದಿಂದ ಹೊರಬಿದ್ದ ಕರ್ಕಶ ಸ್ವರವನ್ನು ಕೇಳಿದ ತಕ್ಷಣವೇ, ಎಲ್ಲಾ ಪ್ರಾಣಿಗಳಿಗೂ ಇದು ಮಾಮೂಲಿ ನರಿ ಎಂದು ಗೊತ್ತಾಗಿ ಹೋಯಿತು. ಇಂತಹ ಮೋಸಗಾರ ನರಿಗೆ ನಾವು ರಾಜನೆಂದು ತಿಳಿದು ಮರ್ಯಾದೆ ಕೊಟ್ಟೆವಲ್ಲಾ, ನಮ್ಮಂತ ಮೂರ್ಖರು ಇನ್ನೊಬ್ಬರಿಲ್ಲ. ಈ ಮೋಸದ ನರಿ ನಮ್ಮಿಂದ ಎಲ್ಲಾ ರೀತಿಯ ಚಾಕರಿಯನ್ನು ಮಾಡಿಸಿಕೊಂಡಿ ತಲ್ಲಾ ಎಂಬ ಸಿಟ್ಟಿನಿಂದ ಅದನ್ನು ಎಲ್ಲಿಯೂ ತಪ್ಪಿಸಿಕೊಳ್ಳಲು ಬಿಡದೆ ಹರಿದು ತಿಂದು ಬಿಟ್ಟವು.
ನಾವು ಕೂಡ ಇಂತಹ ನಕಲಿ ವರ್ತನೆ ಇರುವ ಜನರನ್ನು ನಮ್ಮ ನಾಯಕರೆಂದು ಆರಿಸಿಕೊಂಡು, ಅವರಿಗೆ ಗೌರವ ಮರ್ಯಾದೆ ಕೊಡುತ್ತಿದ್ದೇವೆ. ಇನ್ನಾದರೂ ಪ್ರಜ್ಞಾವಂತರಾಗಿ, ಸ್ವಸ್ಥ ಸಮಾಜ ವನ್ನು ನಿರ್ಮಿಸೋಣ.