ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Pushpa Kumari

Pushpakumarisangee@gamil.com

Articles
ಇಂಡಿಗೋ ಬಿಕ್ಕಟ್ಟಿನ‌ ನಡುವೆಯೂ ಮನ ಮಿಡಿಯುವ ದೃಶ್ಯ: ಮಗುವಿನೊಂದಿಗೆ ಖುಷಿ ಕ್ಷಣ ಕಳೆದ ಫ್ಲೈಟ್ ಸಿಬ್ಬಂದಿ

ಫ್ಲೈಟ್ ಸಿಬ್ಬಂದಿ, ಮಗುವಿನ ಕ್ಯೂಟ್ ವಿಡಿಯೊಗೆ ನೆಟ್ಟಿಗರು ಫಿದಾ

ಕೆಲವು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯ ಅವ್ಯವಸ್ಥೆ, ಫ್ಲೈಟ್ ಕ್ಯಾನ್ಸಲ್‌ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ಹತಾಶರಾಗಿರುವ ದೃಶ್ಯವೇ ಸದ್ದು ಮಾಡುತ್ತಿದೆ. ಈ ಮಧ್ಯೆ ಮುಂಬೈಯ ಮಹಿಳೆಯೊಬ್ಬರು ಶೇರ್ ಮಾಡಿಕೊಂಡ ವಿಡಿಯೊ ಎಲ್ಲರ ಗಮನ ಸೆಳೆದಿದೆ.

ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಲು ರಾಯರ ಅನುಗ್ರಹ ಕಾರಣ ಎಂದ ಗಾಯಕಿ ಸುಹಾನಾ ಸೈಯದ್

ವಿವಾಹವಾಗಲು ಗುರುರಾಯರ ದಯೆ ಕಾರಣ ಎಂದ ಗಾಯಕಿ ಸುಹಾನಾ

Suhana Syed: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ ಮಂತ್ರಾಲಯದ ಗುರುರಾಯರ ಪವಾಡದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಸುಹಾನಾ ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ವರಿಸಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಹಾಗಿದ್ದರೂ ಈ ಅಸಾಧ್ಯದ ಕೆಲಸವನ್ನು ಮಂತ್ರಾಲಯದ ಗುರು ರಾಯರು ಮಾಡಿಸಿದ್ದಾರೆ ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ದೇವರ ಅಚ್ಚುಮೆಚ್ಚಿನ ಮಗು ಇವರೇ ನೋಡಿ; ಇಂಡಿಗೋ ಬಿಕ್ಕಟ್ಟಿನ ನಡುವೆಯೂ ಅದೃಷ್ಟದ ಪ್ರಯಾಣ ಮಾಡಿದ  ಬೆಂಗಳೂರಿನ ಮಹಿಳೆ

ಇಂಡಿಗೋ ಸಮಸ್ಯೆ ನಡುವೆಯೂ ಸುಗಮ ಪ್ರಯಾಣ ಮಾಡಿದ ಮಹಿಳೆ

ದೇಶಾದ್ಯಂತ ಇಂಡಿಗೋ ವಿಮಾನಗಳ‌ ವಿಳಂಬ ಮತ್ತು ರದ್ದತಿಗಳಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಮಹಿಳೆಯೊಬ್ಬರು ತಾನು ಪ್ರಯಾಣಿಸಿದ ಇಂಡಿಗೋ ಫ್ಲೈಟ್ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಟೇಕ್‌ ಆಫ್‌ ಆಯಿತು ಎಂದು ಹೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಇತ್ತೀಚೆಗೆ ಜೋಧ್‌ಪುರದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವಿಮಾನದಲ್ಲಿ ಅವರಿಗೆ ಯಾವುದೇ ತೊಂದರೆ ಎದುರಾಗಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಉದ್ಯೋಗಿಗಳು ಕಾಡಿ ಬೇಡಿ ರಜೆ ಪಡೆಯಬೇಕು; ವಿದೇಶದಲ್ಲಿ ಹಾಗಿಲ್ಲ: ಅನಿವಾಸಿ ಭಾರತೀಯನ ವಿಡಿಯೊ ವೈರಲ್

ವಿದೇಶದಲ್ಲಿ ರಜೆಗೆ ನೆಪ ಹೇಳುವ ಅಗತ್ಯವಿಲ್ಲ: ಎನ್‌ಆರ್‌ಐ ಹೇಳಿದ್ದೇನು?

ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಭಾರತೀಯರೊಬ್ಬರು ಕಂಪನಿಯ ರಜೆ ವಿಚಾರದ ಬಗ್ಗೆ ತಿಳಿಸಿರುವ ವಿಇಯೊ ವೈರಲ್‌ ಆಗಿದೆ. ನಮ್ಮ ದೇಶದಲ್ಲಿ ರಜೆ ಕೇಳುವುದು ಉದ್ಯೋಗಿಗಳಿಗೆ ಮಾನಸಿಕ ಒತ್ತಡ ಸಮಸ್ಯೆ ಉಂಟುಮಾಡುತ್ತಿದೆ. ಒಂದು ರಜೆಗಾಗಿ ಅನೇಕ ಸುಳ್ಳು, ಇಲ್ಲ ಸಲ್ಲದ ನೆಪ ಹೇಳುವ ಸ್ಥಿತಿ ಇದೆ. ನಾನು ಎಲ್ಲ ಕಡೆ ಇದೆ ಥರ ಇದೆ ಎಂದು ಅಂದುಕೊಂಡಿದ್ದೆ. ಆದರೆ ವಿದೇಶಕ್ಕೆ ತೆರಳಿದ ನಂತರ ನನ್ನ ಈ ದೃಷ್ಟಿಕೋನ ಸಂಪೂರ್ಣ ಬದಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಗೋವಾ ನೈಟ್‌ ಕ್ಲಬ್ ಅಗ್ನಿ ದುರಂತ: ಬೆಂಕಿ ಕಾಣಿಸಿಕೊಳ್ಳಲು ಕಾರಣವಾದ ವಿಡಿಯೊ ಇಲ್ಲಿದೆ ನೋಡಿ

ಗೋವಾ ನೈಟ್‌ಕ್ಲಬ್ ಅಗ್ನಿ ಅವಘಡದ ಭಯಾನಕ ವಿಡಿಯೊ ವೈರಲ್

Goa Night Club Fire: ಉತ್ತರ ಗೋವಾದ ಅರಪೊರಾದ ರೋಮಿಯೋ ಲೇನ್‌ನಲ್ಲಿರುವ ಜನಪ್ರಿಯ ನೈಟ್ ಕ್ಲಬ್‌ ಇದಾಗಿದ್ದು, ತಡ ರಾತ್ರಿ 1 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಹೊಸ ವಿಡಿಯೊವೊಂದು ವೈರಲ್ ಆಗಿದ್ದು ಬೆಂಕಿ ಹತ್ತಿಕೊಳ್ಳಲು ಸ್ಪಷ್ಟವಾದ ಕಾರಣ ಕೂಡ ದೃಢ ಪಟ್ಟಿದೆ.

Health Tips: ವಾರದಿಂದ ಕಾಡುವ ನೆಗಡಿ, ಕೆಮ್ಮಿಗೆ ಇಲ್ಲಿದೆ ಸರಳ ಮನೆ ಮದ್ದು

ದೀರ್ಘ ಕಾಲದ ನೆಗಡಿ-ಕೆಮ್ಮು ಸಮಸ್ಯೆಗೆ ಈ ಸರಳ ಕ್ರಮ ಫಾಲೋ ಮಾಡಿ

ನಮ್ಮ ಸುತ್ತಮುತ್ತಲು ಇರುವ ಔಷಧೀಯ ಗಿಡಗಳಿಂದಲೇ ದೀರ್ಘ ಕಾಲದ ನೆಗಡಿ, ಕೆಮ್ಮು ಕಫದಂತಹ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲಿಯೂ ತುಳಸಿ ಎಲೆ ದೀರ್ಘ ಕಾಲದ ನೆಗಡಿ, ಕಫ, ಕೆಮ್ಮು ಸಮಸ್ಯೆಗೆ ಸುಲಭವಾಗಿ ಪರಿಹಾರ ನೀಡುವ ಜತೆಗೆ ಅನೇಕ ಇತರ ಆರೋಗ್ಯ ಸಮಸ್ಯೆಯನ್ನೂ ನಿವಾರಿಸುತ್ತದೆ ಎಂದು ವೈದ್ಯೆ ಡಾ. ಪದ್ಮಾವತಿ ರಾಥೋಡ್ ವಿವರಿಸಿದ್ದಾರೆ.

Horoscope Today December 8th: ಗುರುವಿನಿಂದ ಈ ರಾಶಿಗೆ ಇಂದು ರಾಜಯೋಗ!

ದಿನ ಭವಿಷ್ಯ- ಗುರುವಿನಿಂದ ಈ ರಾಶಿಗೆ ಇಂದು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು!

ನಿತ್ಯ ಭವಿಷ್ಯ ಡಿಸೆಂಬರ್ 8, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ ,ಚತುರ್ಥಿ ತಿಥಿ, ಪುನರ್ವಸು ನಕ್ಷತ್ರದ ಡಿಸೆಂಬರ್ 8ನೇ ತಾರೀಖಿನ ಸೋಮವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಮದುವೆ ವೇಳೆ ಅಷ್ಟ ವಚನ ನೀಡಿ ವಧುವನ್ನೇ ಶಾಕ್‌ಗೊಳಿಸಿದ ವರ: ವಿಡಿಯೊ ವೈರಲ್

ಅಷ್ಟ ವಚನ ನೀಡಿದ ವರ; ಅಚ್ಚರಿಗೊಳಗಾದ ವಧು: ವಿಡಿಯೊ ವೈರಲ್

ವರನೊಬ್ಬ ತನ್ನ ಮದುವೆ ಸಂದರ್ಭದಲ್ಲಿ ಅಷ್ಟ ವಚನಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾನೆ. ತನ್ನ ವಿವಾಹ ಸಮಾರಂಭದಲ್ಲಿ ಎಂಟು ವಚನಗಳನ್ನು ಹೇಳುವ ಮೂಲಕ ಅತಿಥಿಗಳನ್ನು ಅಚ್ಚರಿಗೊಳಿಸಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಸದ್ಯ ಈ ಕುರಿತಾದ ವಿಡಿಯೊ ವೈರಲ್ ಆಗಿದೆ.

ಗೋವಾ ನೈಟ್ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: ಸಾವು-ನೋವು ಹೆಚ್ಚಾಗಲು ಕಾರಣ ಬಹಿರಂಗ

ಗೋವಾ ನೈಟ್‌ ಕ್ಲಬ್ ಬೆಂಕಿ ದುರಂತ: ಸಾವಿನ ಸಂಖ್ಯೆ ಹೆಚ್ಚಾಗಿದ್ದು ಹೇಗೆ?

ಉತ್ತರ ಗೋವಾದ ಅರ್ಪೋರಾದ ರೋಮಿಯೋ ಲೇನ್‌ನಲ್ಲಿರುವ ಜನಪ್ರಿಯ ನೈಟ್ ಕ್ಲಬ್‌ನಲ್ಲಿ ತಡರಾತ್ರಿ 1 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಅಡುಗೆ ಮನೆಯ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿದ್ದು ಸ್ಫೋಟದ ತೀವ್ರತೆಗೆ ಕೆಲವೇ ಸಮಯದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವಾಸಿಗರು ಡ್ಯಾನ್ಸ್‌ ಮಾಡುತ್ತಿದ್ದ ಕ್ಲಬ್‌ನ ಮೊದಲ ಮಹಡಿಯಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ.

Indigo Flight Issue: ಇಂಡಿಗೋ ವಿಮಾನ ರದ್ದು; ಆಹಾರ, ನೀರಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ಉಪಹಾರ ನೀಡಿದ ಬೆಂಗಳೂರು ಫ್ಲೈಟ್ ಸಿಬ್ಬಂದಿ

ಫ್ಲೈಟ್ ಕ್ಯಾನ್ಸಲ್: ಪ್ರಯಾಣಿಕರಿಗೆ ಉಪಹಾರ ವಿತರಣೆ ಮಾಡಿದ ಸಿಬ್ಬಂದಿ!

Viral Video: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ನೀರು ಮತ್ತು ಉಪಹಾರವನ್ನು ವಿತರಿಸುವ ಮೂಲಕ ಮಾನವೀಯ ಮೆರೆದಿರುವ ಈ ವಿಡಿಯೋವೊಂದು ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಈ ಕ್ಲಿಪ್ ಹರಿ ದಾಡುತ್ತಿದ್ದಂತೆ ಸಿಬ್ಬಂದಿಯ ಮಾನವೀಯತೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಮಾತು ಕಮ್ಮಿ ಮಾಡಿ ಮೌನ ವ್ರತ ಪಾಲಿಸಿದರೆ ಈ ಎಲ್ಲ ಆರೋಗ್ಯ ಲಾಭ ನಿಮ್ಮದಾಗಲಿದೆ; ಈ ಬಗ್ಗೆ ತಜ್ಞರು ಹೇಳೋದೇನು?

ವಾರಕ್ಕೆ ಒಮ್ಮೆಯಾದರೂ ಮೌನ ವ್ರತ ಪಾಲಿಸಿ

Benefit of Silence: ಜೀವನದಲ್ಲಿ ಮೌನವಾಗಿರುವುದು ನಮ್ಮ ವ್ಯಕ್ಯಿತ್ವ ರೂಪುಗೊಳ್ಳಲು ಸಹಕಾರಿ. ಜತೆಗೆ ಮೌನವಾಗಿರುವುದು ವೈಜ್ಞಾನಿಕ ದೃಷ್ಟಿಯಿಂದ ಏನೆಲ್ಲ ಅನುಕೂಲ ಇದೆ ಎಂಬುದನ್ನು ವಿಶ್ವವಾಣಿ ಹೆಲ್ತ್ ಚಾನಲ್‌ನಲ್ಲಿ ಖ್ಯಾತ ವೈದ್ಯ ಡಾ. ಮಾಲಿನಿ ಎಸ್. ಸುತ್ತೂರು ತಿಳಿಸಿಕೊಟ್ಟಿದ್ದಾರೆ. ದೊಡ್ಡ ಸಾಧಕರು ಕೂಡ ಮಾತಿಗಿಂತ ಕೃತಿ ಲೇಸು ಎಂಬ ತತ್ವ ಅಳವಡಿಸಿಕೊಂಡಿದ್ದರು. ಮೌನವಾಗಿರುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಪ್ರಯೋಜನೆ ಸಿಗಲಿದೆ ಎಂದು ತಿಳಿಸಿದ್ದಾರೆ.

Horoscope Today December 7th: ಧನು ರಾಶಿಗೆ ಕುಜನ ಪ್ರವೇಶ: ಇಂದು ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

ಕುಜನಿಂದ ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಯಶಸ್ಸು!

ನಿತ್ಯ ಭವಿಷ್ಯ ಡಿಸೆಂಬರ್ 7, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ ಆರ್ದ್ರಾ ನಕ್ಷತ್ರದ ಡಿಸೆಂಬರ್ 7ನೇ ತಾರೀಖಿನ ಈ ದಿನ ಧನು ರಾಶಿಯನ್ನು ಕುಜ ಪ್ರವೇಶ ಮಾಡಲಿದ್ದಾನೆ.‌ ಹೀಗಾಗಿ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ದಲಿತ ಯುವಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು: ವಿಡಿಯೊ ವೈರಲ್

ದಲಿತ ಯುವಕನಿಗೆ ಮನಬಂದಂತೆ ಹಲ್ಲೆ ನಡೆಸಿದ ಯುವಕರ ಗುಂಪು

ದಲಿತ ಸಮುದಾಯಕ್ಕೆ ಸೇರಿದ ಯುವಕನೊಬ್ಬನ ಮೇಲೆ ನಾಲ್ವರು ಯುವಕರ ಗುಂಪು ಬರ್ಬರವಾಗಿ ಥಳಿಸಿ ಚಪ್ಪಲಿಯಿಂದ ಹೊಡೆದಿದೆ. ಬಳಿಕ ಬಟ್ಟೆಯನ್ನು ಬಿಚ್ಚಿಸಿ ಕಾಲು ಮುಟ್ಟಿ ಕ್ಷಮೆಯಾಚಿಸುವಂತೆ ಬಲವಂತ ಮಾಡಿದೆ ಎನ್ನಲಾಗಿದೆ.‌ ಸದ್ಯ ಈ ಹೇಯ ಕೃತ್ಯದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬ್ರಶ್ ಬಳಸದೆ ಕೈಯಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್

ಬರೀ ಕೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿದ ಬಿಗ್ ಬಾಸ್ ಸ್ಟಾರ್ ಡಾಗ್ ಸತೀಶ್

Dog Satish: ಇತ್ತೀಚೆಗಷ್ಟೇ ಡಾಗ್ ಸತೀಶ್ ಬ್ರಶ್ ಬಳಸದೆ, ಬರಿಗೈಯಲ್ಲೇ ಟಾಯ್ಲೆಟ್ ಕ್ಲೀನ್ ಮಾಡಿರುವ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ‌. ಈ ಮೂಲಕ ಯಾವುದೇ ಸ್ಥಳ ತುಂಬಾ ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿ ಅಸಹ್ಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Home Loan: ಸಾಲಗಾರರಿಗೆ ಗುಡ್‌ ನ್ಯೂಸ್; ರೆಪೊ ದರ ಇಳಿಕೆಯ ಬಳಿಕ 50 ಲಕ್ಷ ರೂ. ಗೃಹ ಸಾಲದಲ್ಲಿ ಎಷ್ಟು ಇಳಿಕೆಯಾಗಲಿದೆ?

ರೆಪೊ ದರ ಇಳಿಕೆಯ ಬಳಿಕ ಗೃಹ ಸಾಲದಲ್ಲಿ ಎಷ್ಟು ಇಳಿಕೆಯಾಗಿದೆ?

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು 2025ರ ಡಿಸೆಂಬರ್‌ 5ರಂದು ರೆಪೊ ದರವನ್ನು 0.25% ಕಡಿತ ಮಾಡಿದ. ಈ ಹಿನ್ನೆಲೆಯಲ್ಲಿ ರೆಪೊ ದರವು 5.25%ಕ್ಕೆ ಇಳಿಕೆಯಾಗಿದೆ. 2025ರ ಫೆಬ್ರವರಿ 7ರಂದು ರೆಪೊ ದರ 6.25%ರ ಮಟ್ಟದಲ್ಲಿ ಇತ್ತು. ಈ ವರ್ಷ ಇದುವರೆಗೆ ಒಟ್ಟಾರೆಯಾಗಿ ರೆಪೊ ದರದಲ್ಲಿ 1.25% ಇಳಿಕೆಯಾಗಿದೆ. ಹಣದುಬ್ಬರ ಇಳಿಕೆಯಾಗಿರುವುದರಿಂದ ಬಡ್ಡಿ ದರ ಇಳಿಕೆಗೆ ಹಾದಿ ಸುಗಮವಾಗಿದೆ. ಇದು ಯಾವ ರೀತಿ ನಿಮ್ಮ ಹೋಮ್‌ ಲೋನ್ ಇಎಂಐಯನ್ನು ತಗ್ಗಿಸಲಿದೆ? ಎನ್ನುವ ವಿವರ ಇಲ್ಲಿದೆ.

ಮದುವೆ ಮೆರವಣಿಗೆ ಮಧ್ಯೆಯೇ ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ ಪತಿ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು

ಮದುವೆ ಸಮಾರಂಭದಲ್ಲೇ ಪತ್ನಿಗೆ ಕಪಾಳಮೋಕ್ಷ ಮಾಡಿದ ಪತಿ

ಮದುವೆ ಸಮಾರಂಭದಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿದ್ದ ಪತ್ನಿಗೆ ಪತಿಯೊಬ್ಬ ಕಪಾಳ ಮೋಕ್ಷ ಮಾಡಿದ ಅಘಾತಕಾರಿ ಘಟನೆ ನಡೆದಿದೆ‌. ಮದುವೆ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿ ಆಗಮಿಸಿ ಪತ್ನಿಗೆ ಒದ್ದು ಕಪಾಳಮೋಕ್ಷ ಮಾಡಿದ್ದಾನೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.

ಜಗತ್ತಿನೆದುರು ಮತ್ತೆ ಪಾಕಿಸ್ತಾನದ ಮಾನ ಹರಾಜು; ಕಲಾಪ ನಡೆಯುತ್ತಿದ್ದಾಗ ಸಂಸತ್‌ಗೆ ದಿಢೀರ್ ಕತ್ತೆ ಎಂಟ್ರಿ: ವೈರಲ್ ವಿಡಿಯೊ ಇಲ್ಲಿದೆ

ಪಾಕಿಸ್ತಾನದ ಸಂಸತ್‌ಗೆ ಎಂಟ್ರಿ ಕೊಟ್ಟ ಕತ್ತೆ

ಪಾಕಿಸ್ತಾನ ಸಂಸತ್ತಿನಲ್ಲಿ ರಾಷ್ಟ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಕತ್ತೆಯೊಂದು ಸೆನೆಟ್ ಕೊಠಡಿಗೆ ಎಂಟ್ರಿ ಕೊಟ್ಟಿದೆ. ಈ ಘಟನೆಯಿಂದ ಅಲ್ಲಿದ್ದ ರಾಜಕೀಯ ನಾಯಕರೆಲ್ಲ ಒಂದು ಕ್ಷಣ ದಿಗ್ಭ್ರಮೆ ಒಳಗಾದರು. ಮೇಲ್ಮನೆ ಕಲಾಪಗಳು ನಡೆಯುತ್ತಿದ್ದಾಗ ಕತ್ತೆ ಎಂಟ್ರಿ ಕೊಟ್ಟ ಕಾರಣ ಸದಸ್ಯರಲ್ಲಿ ಗೊಂದಲ ಉಂಟಾಯಿತು. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದೆ.

Viral Video: ಶಾಲೆಯಲ್ಲಿ ಚಿಕ್ಕ ಮಕ್ಕಳಿಂದ ಇಟ್ಟಿಗೆ ಹೊರಿಸಿದ ಶಿಕ್ಷಕಿ: ನೆಟ್ಟಿಗರಿಂದ ಆಕ್ರೋಶ

ಬಲವಂತದಿಂದ ಚಿಕ್ಕ ಮಕ್ಕಳಲ್ಲಿ ಇಟ್ಟಿಗೆ ಹೊರಿಸಿದ ಶಿಕ್ಷಕಿ

ಶಾಲೆಯ ಆವರಣದಲ್ಲಿ ಚಿಕ್ಕ ಮಕ್ಕಳ ಮೂಲಕ ಬಲವಂತವಾಗಿ ಶಿಕ್ಷಕಿ ಇಟ್ಟಿಗೆ ಹೊರಿಸುತ್ತಿರುವ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Horoscope Today December 6th: ಬುಧ ವೃಶ್ಚಿಕ ರಾಶಿಗೆ ಪ್ರವೇಶ: ಈ ರಾಶಿಗೆ ಇಂದು ಶುಭದಾಯಕ ಫಲ

ದಿನ ಭವಿಷ್ಯ- ಇಂದು ಬುಧನ ಪ್ರವೇಶದಿಂದ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿತ್ಯ ಭವಿಷ್ಯ ಡಿಸೆಂಬರ್ 6,2025: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ ದ್ವೀತಿಯ ತಿಥಿ, ಮೃಗಶಿರಾ ನಕ್ಷತ್ರದ ಡಿಸೆಂಬರ್ 6ನೇ ತಾರೀಖಿನ ಶನಿವಾರದ ಈ ದಿನ ವೃಶ್ಚಿಕ ರಾಶಿಯನ್ನು ಬುಧ ಪ್ರವೇಶ ಮಾಡಲಿದ್ದಾನೆ.‌ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

Dental Problem: ಚಳಿಗಾಲದಲ್ಲಿ ಹಲ್ಲಿನ ಸಮಸ್ಯೆ ನಿಭಾಯಿಸುವುದು ಹೇಗೆ?

ಚಳಿಗಾಲದಲ್ಲಿ ಹಲ್ಲಿನ ಸಮಸ್ಯೆಗೆ ಪರಿಹಾರ ಇಲ್ಲಿದೆ!

ಹಲ್ಲುಗಳ ಕ್ಷೇಮಕ್ಕೆ ಮಾರಕವಾಗುವಂಥ ಕೆಲವು ವಿಚಿತ್ರ ಸವಾಲುಗಳು ಚಳಿಗಾಲದಲ್ಲಿ ಎದುರಾ ಗುವುದು ನಿಜ. ರಜೆಯ ಪ್ರವಾಸಗಳು, ಮಿತ್ರಕೂಟಗಳು, ಹೊಸವರ್ಷದ ಪಾರ್ಟಿ ಎಂದು ಸಹಜವಾಗಿ ಸಿಹಿ ತಿನ್ನುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ಸರಿಯಾಗಿ, ಆಗಾಗ ಬಾಯಿ ತೊಳೆಯದಿರುವುದು, ಚಳಿಯ ನೆಪವನ್ನೊಡ್ಡಿ ರಾತ್ರಿ ಹಲ್ಲುಜ್ಜದೇ ಮಲಗುವುದು ಮುಂತಾದವು ದಂತ ಸ್ವಾಸ್ಥ್ಯ ಹಾಳಾಗುವುದಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತವೆ. ಹಾಗಾದರೆ ಚಳಿಗಾಲದಲ್ಲಿ ಹಲ್ಲುಗಳ ಯೋಗಕ್ಷೇಮ ಕಾಪಾಡಲು ಏನು ಮಾಡಬಹುದು?

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಬಳಲುತ್ತಿದ್ದೀರಾ? ಆಹಾರ ತಜ್ಞರು ಹೇಳೋದೇನು?

ವಿಟಮಿನ್ ಡಿ ಕೊರತೆ ಇದ್ದರೆ ಪರಿಹಾರ ಏನು?

ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ವಿಟಮಿನ್‌ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಪರೀಕ್ಷೆ ನಡೆಸಿ ದಾಗ ಎಲ್ಲಾ ವಯೋಮಾನದವರಲ್ಲೂ ಸಹ ವಿಟಮಿನ್‌ ಡಿ ಮತ್ತು ವಿಟಮಿನ್‌ ಬಿ12 ಕೊರತೆ ಇರುವುದು ತಿಳಿದುಬರುತ್ತಿದೆ. ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸಿದ್ದಾರೆ.

Viral Video: ಇಂಡಿಗೋ ಪ್ರಯಾಣ ರದ್ದು; ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾದ ವಿಡಿಯೋ ವೈರಲ್

ಇಂಡಿಗೋ ಪ್ರಯಾಣ ರದ್ದು: ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರು!

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ದೇಶದ ಹಲವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂತೆಯೇ ಇಂಡಿಗೋ (Indigo) ವಿಮಾನ ವ್ಯತ್ಯಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸು ವಂತಾಗಿದೆ. ಇಂಡಿಗೊ ಸಂಸ್ಥೆಯ ಮೇಲೆ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು ಬೆಂಗಳೂರು ವಿಮಾನ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಉದ್ಯಮಿಯೊಬ್ಬರು ವಿಡಿಯೋ ಮಾಡಿದ್ದು ವಿಮಾನ ಅಡಚಣೆಯಿಂದ ಉಂಟಾದ ಸಮಸ್ಯೆಗಳನ್ನು ರೆಕಾರ್ಡ್ ಮಾಡಿದ್ದಾರೆ.

Viral Video: ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!

ಫ್ಲೈಟ್‌ ಕ್ಯಾನ್ಸಲ್: ತಂದೆಯ ಅಸ್ಥಿ ವಿಸರ್ಜನೆಗೆ ಹೊರಟ ಮಗಳಿಗೆ ಸಂಕಷ್ಟ!

ದೇಶಾದ್ಯಂತ ನೂರಾರು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್‌ಲೈನ್ಸ್ ರದ್ದುಗೊಳಿಸಿದ್ದು ಪ್ರಯಾಣಿಕರು ಭಾರೀ ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದ್ದು, ಪ್ರವಾಸಿಗರು, ಕುಟುಂಬಗಳು ಮತ್ತು ಯಾತ್ರಾರ್ಥಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ತಂದೆಯ ಆಸ್ಥಿ ವಿಸರ್ಜನೆಗಗಾಗಿ ಹೊರಟ ಯುವತಿ ಯೊಬ್ಬಳಿಗೂ ಕೂಡ ವಿಮಾನ ನಿಲ್ದಾಣದಲ್ಲೇ ಪರದಾಡುವಂತಹ ಸಂದರ್ಭ ಒದಗಿ ಬಂದಿದೆ..

Viral Video: ಮದುವೆಗೆ ನಿರಾಕರಿಸಿದ್ದ ಪ್ರೇಯಸಿ: ವಿದ್ಯುತ್ ಟವರ್ ಏರಿದ ಪಾಗಲ್ ಪ್ರೇಮಿಯ ವಿಡಿಯೋ ವೈರಲ್

ಮದುವೆ ನಿರಾಕರಣೆಗೆ ಮನನೊಂದು ವಿದ್ಯುತ್ ಟವರ್ ಏರಲು ಮುಂದಾದ ಯುವಕ!

19 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಸಾಯಲು ನಿರ್ಧರಿಸಿದ್ದ ಘಟನೆ ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ. ತನ್ನ ಪ್ರೇಯಸಿಯು ತನ್ನನ್ನು ನಿರ್ಲಕ್ಷ್ಯದಿಂದ ನೋಡಿಕೊಳ್ಳುತ್ತಿದ್ದಾಳೆ, ತನ್ನಿಂದ ಬೇರ್ಪಡಲು ನಿರ್ಧರಿಸಿದ್ದಾಳೆ ಎಂದು ಮನನೊಂದು ಆ ಯುವಕನು ಹೈ ವೋಲ್ಟೇಜ್ ಇರುವ ವಿದ್ಯುತ್ ಟವರ್ ಅನ್ನು ಏರಿದ್ದಾನೆ. ಈ ಸಿನಿಮೀಯ ದೃಶ್ಯವು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Loading...