ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Pushpa Kumari

Pushpakumarisangee@gamil.com

Articles
Urvashi Rautela: ದಬಿಡಿ ದಿಬಿಡಿ ಹಾಡಿನ ಲಿರಿಕ್ಸ್ ಮರೆತು ಟ್ರೋಲ್ ಆದ ನಟಿ ಊರ್ವಶಿ ರೌಟೇಲಾ!

ದಬಿಡಿ- ದಿಬಿಡಿ ಹಾಡಿನ ಲಿರಿಕ್ಸ್ ಮರೆತು ಟ್ರೋಲ್ ಆದ ನಟಿ ಊರ್ವಶಿ!..

ಟಾಲಿವುಡ್‌ ಸ್ಟಾರ್ ನಟ ಬಾಲಕೃಷ್ಣ ನಟಿಸಿರುವ ಡಾಕು ಮಹಾರಾಜ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಊರ್ವಶಿ ರೌಟೇಲಾ ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಹಾಡೊಂದರಲ್ಲಿ ಸಖತ್ ಸ್ಟೆಪ್ ಹಾಕಿದ್ದರು.ಇದೀಗ ನಟಿ ಸಂದರ್ಶನವೊಂದರಲ್ಲಿ ದಬಿಡಿ ದಿಬಿಡಿ ಹಾಡನ್ನು ಹೇಳಲು ಹೋಗಿ ಈ ಹಾಡಿನ ಲಿರಿಕ್ಸ್ ಮರೆತು ಗೊಂದಲಕ್ಕೆ ಒಳಗಾಗಿದ್ದಾರೆ. ಸದ್ಯ ನಟಿಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನಟಿ ಟ್ರೋಲ್ ಗೆ ಗುರಿಯಾಗಿದ್ದಾರೆ..

World Malaria Day 2025: ವಿಶ್ವ ಮಲೇರಿಯ ದಿನ... ಸಂಘಟಿತ ಯತ್ನವೇ ರೋಗ ತಡೆಗೆ ಪ್ರಧಾನ!

ವಿಶ್ವ ಮಲೇರಿಯ ದಿನ: ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ!

ಮಲೇರಿಯ ಸೋಂಕು ಪ್ರಸಾರ ವಾಗದಂತೆ ತಡೆಯುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸುವುದರ ಮಹತ್ವವನ್ನು ಸಾರುವ ಉದ್ದೇಶದಿಂದ, ಏಪ್ರಿಲ್‌ ತಿಂಗಳ ೨೫ನೇ ದಿನವನ್ನು ವಿಶ್ವ ಮಲೇರಿಯ ದಿನವೆಂದು ಗುರುತಿಸಲಾಗಿದೆ. ವೈದ್ಯ ವಿಜ್ಞಾನ ಸಾಕಷ್ಟು ಉನ್ನತಿ ಹೊಂದಿರುವ ಈ ದಿನಗಳಲ್ಲೂ, ವಾರ್ಷಿಕವಾಗಿ ಕೋಟಿಗಟ್ಟಲೆ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ, ಮಲೇರಿಯ ರೋಗದ ದುಷ್ಪರಿಣಾಮವನ್ನು ಅರ್ಥ ಮಾಡಿಕೊಳ್ಳಬೇಕು.. ಹಾಗಾಗಿ ಈ ರೋಗದ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಬೇಕು..

Fawad Khan Movie: ಪಾಕ್ ನಟ ಫಯಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾದ ಹಾಡುಗಳು ಯೂಟ್ಯೂಬ್‌ನಿಂದ ಡಿಲೀಟ್

ಪಾಕ್‌ ನಟ ಸಿನಿಮಾ ಹಾಡು ಯೂಟ್ಯೂಬ್‌ನಿಂದ ಡಿಲೀಟ್

ಪಾಕ್ ನಟ ಫವಾದ್ ಖಾನ್(Fawad Khan movie) ನಟಿಸಿರುವ ಹಿಂದಿ ಸಿನಿಮಾವೊಂದರ ಮೇಲೆ ಉಗ್ರರ ದಾಳಿಯ ನೇರ ಎಫೆಕ್ಟ್ ಬಿದ್ದಿದೆ. ಭಾರತದಲ್ಲಿ ಬಿಡುಗಡೆ ಆಗಬೇಕಿದ್ದ ಪಾಕಿಸ್ತಾನದ ನಟನ ಸಿನಿಮಾ ಒಂದಕ್ಕೆ ಇದೀಗ ಅವಕಾಶ ನಿರಾಕರಿಸಲಾಗಿದೆ. ಈ ಸಿನಿಮಾದ ಹಾಡು ಮತ್ತು ಟೀಸರ್ ನ ತುಣುಕು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ.

Health Tips: ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?

ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಒಳಿತೇನು?.

ಬಿಸಿಲಿನಲ್ಲಿ ದಣಿದು ಬಂದಾಗ ಕೆಂಪುಕೆಂಪಾದ, ತಣ್ಣನೆಯ, ರಸಭರಿತ ಕಲ್ಲಂಗಡಿ ಹಣ್ಣುಗಳನ್ನು ಯಾರಾದರೂ ಕೈಗಿತ್ತರೆ? ಹಣ್ಣು ಕೊಟ್ಟವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗುವಷ್ಟು ಆಶೀರ್ವದಿಸುತ್ತೇವೆ! ಕಣ್ಣಿಗೆ ಆಕರ್ಷಕವಾದ, ತಿನ್ನುವುದಕ್ಕೆ ಗರಿಗರಿಯಾದರೂ ರಸಭರಿತವಾದ ಅಪ್ಪಟ ಬೇಸಿಗೆಯ ಹಣ್ಣು. ಈ ಹಣ್ಣು ತಿನ್ನುವುದರ ಲಾಭಗಳೇನು ಗೊತ್ತೇ?..

Bollywood Celebrity Fitness: ಫಿಟ್ ಆಗಿರಲು ಬಾಲಿವುಡ್ ಸೆಲೆಬ್ರಿಟಿಗಳ ಫಿಟ್ನೆಸ್ ಚಾಲೆಂಜ್ ಹೇಗಿದೆ?

ಫಿಟ್ನೆಸ್‌ಗಾಗಿ ಬಾಲಿವುಡ್ ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ಹೇಗಿದೆ ನೋಡಿ!

ಸೆಲೆಬ್ರಿಟಿಗಳು ತಮ್ಮ ದೇಹ ಸ್ಥಿತಿ ಯಥಾವತ್ತಾಗಿ ಇಡಲು ವ್ಯಾಯಾಮ, ವರ್ಕೌಟ್ ಇತ್ಯಾದಿ ಮಾಡಿ ಹೆಚ್ಚು ಫಿಟ್ ಆ್ಯಂಡ್ ಫೈನ್ ಆಗಿರಲು ಬಯಸುತ್ತಾರೆ. ಕೆಲವು ಸಿನಿಮಾಗಳಲ್ಲಿ ಹೆಚ್ಚು ದೇಹ ತೂಕ ಬೇಕಾದರೆ ಇನ್ನು ಕೆಲವು ಸಿನಿಮಾಕ್ಕೆ ಸ್ಲಿಂ ಆಗಿರಬೇಕಾಗುತ್ತದೆ. ಹೀಗಾಗಿ ತಮಗೆ ಬೇಕಾದಂತೆ ದೇಹ ಸ್ಥಿತಿ ಮಾರ್ಪಡಿಸುವುದು ಕಷ್ಟದ ಕೆಲಸವಾದರೂ ಕೂಡ ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ಅದ್ಭುತವಾದ ಫಿಟ್ನೆಸ್ ಅನ್ನು ಕಾಯ್ದುಕೊಂಡಿದ್ದಾರೆ.

Shine Tom Chacko: ನಟ ಶೈನ್ ಟಾಮ್ ಬಗ್ಗೆ ಮತ್ತೊಬ್ಬ ಖ್ಯಾತ ನಟಿ ಆರೋಪ

ನಟ ಶೈನ್ ಟಾಮ್ ವಿರುದ್ಧ ಮತ್ತೊಬ್ಬ ನಟಿ ಆರೋಪ!

ನಟ ಶೈನ್ ಟಾಮ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಮತ್ತೊಬ್ಬ ನಟಿ ಚಿತ್ರೀಕರಣ ಸಮಯದಲ್ಲಿ ಅಸಭ್ಯ ವರ್ತನೆ(Shine Tom Chacko) ತೋರಿಸಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆಸ್ಟ್ರೇಲಿಯಾದ ನಟಿ ಅಪರ್ಣಾ ಜಾನ್ ಈ ಆರೋಪ ಮಾಡಿದ್ದು ಮಲಯಾಳಂ ಚಿತ್ರದ ʻಸೂತ್ರವಾಕ್ಯಂ’ನ ಶೂಟಿಂಗ್ ವೇಳೆ, ಅಸಭ್ಯ ವರ್ತನೆ ತೋರಿಸಿದ್ದಾರೆಂದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Tourist Attractions In Kashmir: ಸದಾ ಹೈಅಲರ್ಟ್‌ ಘೋಷಿಸಿರುವ ಕಾಶ್ಮೀರದ ಐದು ಪ್ರವಾಸಿ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕಾಶ್ಮೀರದ ಈ ಪ್ರವಾಸಿ ಸ್ಥಳಗಳಲ್ಲಿ ಸದಾ ಹೈ ಅಲರ್ಟ್‌!

ಉತ್ತರ ಭಾರತದ ಅತ್ಯಂತ ಸುಂದರವಾದ ಪ್ರದೇಶದಲ್ಲಿ ಕಾಶ್ಮೀರ ಕೂಡ ಒಂದಾಗಿದೆ. ಭೂದೃಶ್ಯಗಳು, ಹಚ್ಚ ಹಸಿರಿನ ಕಣಿವೆಗಳು, ಕಣ್ಮನ ಸೆಳೆಯುವ ಸರೋವರದಿಂದ ಕಾಶ್ಮೀರದ ಸುತ್ತ ಮುತ್ತಲಿನ ಪ್ರದೇಶವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಆದರೆ ಇತ್ತೀಚಿನ ಭಯೋತ್ಪಾದಕ ದಾಳಿಯಿಂದ ಭಯಭೀತಿಯ ವಾತಾವರಣ ಸೃಷ್ಟಿಯಾಗಿದೆ. ಇದರ ಹೊರತಾಗಿಯೂ ಕಾಶ್ಮೀರದ 5 ಪ್ರವಾಸಿ ಸ್ಥಳದಲ್ಲಿ ಸದಾ ಕಟ್ಟೆಚ್ಚರ ಕ್ರಮ ಕೈಗೊಳ್ಳಲಾಗುತ್ತದೆ.

Ekka Movie Teaser: ಎಕ್ಕ ಟೀಸರ್ ರಿಲೀಸ್- ಡಿಫರೆಂಟ್ ಅವತಾರದಲ್ಲಿ ಯುವರಾಜ್ ಕುಮಾರ್ ಎಂಟ್ರಿ

ಎಕ್ಕ ಟೀಸರ್ ಬಿಡುಗಡೆ! ಯುವನ ಎಂಟ್ರಿಗೆ ಅಭಿಮಾನಿಗಳು ಫಿದಾ!..

ಯುವರಾಜ್‌ ಕುಮಾರ್‌ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರದ ಯುವ ಟೀಸರ್‌(Ekka Movie teaser release) ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್‌ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್‌ ಆಗಿಯೇ ಟೀಸರ್‌ ರಿಲೀಸ್‌ ಆಗಿದೆ.

Aditya Dhar: ಅವರಿಗೆ ಕಾ‍ಶ್ಮೀರ ಬೇಕು... ನಮಗೆ ಅವರ ತಲೆ ಬೇಕು- ಉರಿ ಸಿನಿಮಾ ನಿರ್ದೇಶಕ ಆಕ್ರೋಶ

ಪಹಲ್ಗಾಮ್ ದಾಳಿ ಬಗ್ಗೆ ಉರಿ ಸಿನಿಮಾ ನಿರ್ದೇಶಕ ಹೇಳಿದ್ದೇನು?

Aditya Dhar on Pahalgam Terror Attack: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಅತ್ಯಂತ ಭೀಕರ ದಾಳಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಈ ಹೀನಾಯ ಕೃತ್ಯ ಖಂಡಿಸಿ ಅನೇಕ ಸಿನಿಮಾ ನಟನಟಿಯರು, ನಿರ್ಮಾಪಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ದೇಶಕ ಆದಿತ್ಯಧರ್ ಕೂಡ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Disha Patani: ಮಾಡರ್ನ್ ಮಿನಿ-ಸಿಲ್ವರ್ ಡ್ರೆಸ್‌ನಲ್ಲಿ ನಟಿ ದಿಶಾ ಪಟಾನಿ ಫುಲ್‌ ಮಿಂಚಿಂಗ್‌; ಫೋಟೋಸ್ ಇಲ್ಲಿವೆ

ದಿಶಾ ಪಟಾನಿ ಮಿನಿ ಸಿಲ್ವರ್ ಔಟ್ ಫಿಟ್ ಗೆ ಫ್ಯಾನ್ಸ್ ಫಿದಾ!

ಇತ್ತೀಚೆಗಷ್ಟೇ ನೆಟ್ಟೆಡ್ ಡ್ರೆಸ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಬೆಡಗಿ ದಿಶಾ ಪಟಾನಿ(Disha Patani) ಇದೀಗ ಸಿಲ್ವರ್ ಮಿನಿ ಮಾಡರ್ನ್ ಡ್ರೆಸ್ ನಲ್ಲಿ‌ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಗ್ಲಾಮರ್ ಲುಕ್ ಗೆ ನೆಟ್ಟಿಗರು ಫಿಧಾ ಆಗಿದ್ದು ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.

Janhvi Kapoor and Sidharth Malhotra: ಪರಮ್ ಸುಂದರಿ ಚಿತ್ರದ ಮುದ್ದು ಜೋಡಿ ಜಾನ್ವಿ -ಸಿದ್ಧಾರ್ಥ್ ಫೋಟೊ ಕಂಡು ಫಿದಾ ಆದ ಫ್ಯಾನ್ಸ್

ಜಾನ್ವಿ- ಸಿದ್ಧಾರ್ಥ್ ರೋಮ್ಯಾಂಟಿಕ್ ಫೋಟೊ ವೈರಲ್!

ಜಾನ್ವಿ ಕಪೂರ್ ತಮ್ಮ ಮುಂಬರುವ ಚಿತ್ರ ಪರಮ್ ಸುಂದರಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನಟಿಸಲಿದ್ದಾರೆ(Janhvi Kapoor and Sidharth Malhotra). ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೂಟಿಂಗ್ ವೇಳೆಯ ಅನೇಕ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ಗಳಿಸಿದ್ದಾರೆ

Dangerous Train: ವಿಶ್ವದ ಅತ್ಯಂತ ಅಪಾಯಕಾರಿ ರೈಲು! ಇದಕ್ಕೆ ಛಾವಣಿಯೂ ಇಲ್ಲ ಆಸನವೂ ಇಲ್ಲ

ಆಸನ, ಛಾವಣಿ ಇಲ್ಲದೆ ಪ್ರಯಾಣಿಸುವ ರೈಲು! ಎಲ್ಲಿದೆ ಗೊತ್ತಾ ಇದು?

ರೈಲು ಪ್ರಯಾಣವನ್ನು ವಿಭಿನ್ನ ರೀತಿಯಲ್ಲಿ ಪ್ರಯಾಣ ಮಾಡಲು ಬಯಸುವವರಿಗೆ ಅಂತಹ ರೈಲು ಸೇವೆ ಕೂಡ ಇರಲಿದೆ ಎಂದರೆ ನಿಮಗೂ ಆಶ್ಚರ್ಯ ಆಗಬಹುದು. ಯಾವುದೇ ಆಸನಗಳು,ಚಾವಣಿಗಳು, ಯಾವುದೇ ನಿಲ್ದಾಣಗಳು(Dangerous Train) ಇಲ್ಲದ ಈ ರೈಲೊಂದು 704 ಕಿಲೋ ಮೀಟರ್ ಪ್ರಯಾಣಿಸುತ್ತದೆ. ಸುಡುವ ಸಹರಾ ಮರುಭೂಮಿಯಲ್ಲಿಯೂ ತಡೆ ರಹಿತವಾಗಿ ಚಲಿಸುವ ಈ ರೈಲಿನ ಬಗ್ಗೆ ಅನೇಕ ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿದೆ.

Actor Lalit Manchanda: ಖ್ಯಾತ ಹಿಂದಿ ಕಿರುತೆರೆ ನಟ ಆತ್ಮಹತ್ಯೆ; ಕಾರಣ ಏನು?

ಖ್ಯಾತ ಹಿಂದಿ ಕಿರುತೆರೆ ನಟ ಆತ್ಮಹತ್ಯೆ; ಕಾರಣ ಏನು?

ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಖ್ಯಾತಿಯ ನಟ ಲಲಿತ್ ಮಂಚಂದ(Actor Lalit Manchanda) ಆತ್ಮಹತ್ಯೆ ಮಾಡಿಕೊಂಡಿದ್ದು ನಟನ ಮೃತ ದೇಹವು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಅವರ ಸ್ವಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲಲಿತ್ ಮಂಚಂದ ಅವರ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Birla Opus Paints: ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರಿನಲ್ಲಿ ಮೊದಲ ಪೇಂಟ್ಸ್ ಸ್ಟುಡಿಯೋ!

ಬೆಂಗಳೂರಿನಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ಸ್ಟುಡಿಯೊ!

ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ಪ್ರಾರಂಭಿಸಿದೆ. ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರು ಸ್ಟುಡಿಯೊವನ್ನು ಸಾಮಾನ್ಯ ರೀಟೇಲ್ ದಯಾಕವಾಗಿ ಪರಿವರ್ತಿಸಲಾಗಿದೆ. ಪೇಂಟ್ ಸ್ಟುಡಿಯೊಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು ಅವು ಸಾಂಪ್ರದಾಯಿಕ ಪೇಂಟ್ ಮಳಿಗೆಗಳಾಗಿ ರೂಪುಗೊಂಡಿದೆ.

AI Movie: ಕನ್ನಡದಲ್ಲೇ ಸಿದ್ಧವಾಯ್ತು ಮೊದಲ ಎಐ ಸಿನಿಮಾ; ಬಿಡುಗಡೆ ಯಾವಾಗ?.

ಎ.ಐ ತಂತ್ರಜ್ಞಾನದ ಮೂಲಕವೇ ರಚಿಸಿದ "ಲವ್ ಯು ಸಿನಿಮಾ"

ಸಂಪೂರ್ಣ ಎಐ ಮೂಲಕವೇ ಕನ್ನಡದಲ್ಲಿ ‘ಲವ್ ಯೂ’ ಸಿನಿಮಾ ಸಿದ್ಧವಾಗಿದೆ.ಸಿನಿಮಾದ ನಿರ್ದೇಶನ ಮತ್ತು ನಿರ್ಮಾಪಕರನ್ನು ಹೊರತು ಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎಐ ತಂತ್ರಜ್ಞಾನವೇ ಮಾಡಿರುವುದು ಈ ಸಿನಿಮಾದ ಮೊದಲ ವಿಶೇಷತೆ. ಸೆನ್ಸಾರ್‌ ಬೋರ್ಡ್‌ನವರೂ ಸಿನಿಮಾವನ್ನು ಕುತೂಹಲದಿಂದ ನೋಡಿ ಯು/ಎ ಸರ್ಟಿಫಿಕೆಟ್‌ ಕೂಡ ನೀಡಿದ್ದಾರೆ.

Shine Tom Chacko: ನಟ ಶೈನ್ ಟಾಮ್ ಗೆ ಕೊನೆಯ ಎಚ್ಚರಿಕೆ ನೀಡಿದ ಕೇರಳ ಫಿಲ್ಮ್ ಫೆಡರೇಷನ್‌

ಡ್ರಗ್ಸ್ ಕೇಸ್​: ನಟ ಶೈಮ್ ಟಾಮ್ ಚಾಕೊಗೆ ಕೊನೆ ಎಚ್ಚರಿಕೆ!

ನಟ ಶೈನ್ ಟಾಮ್ ಚಾಕೊಗೆ(Shine Tom Chacko) ಮಾದಕವಸ್ತು ಸೇವನೆ ಮತ್ತು ಅಸಭ್ಯ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ, ಕೇರಳ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ (FEFKA) ಸಂಸ್ಥೆ ನಟನಿಗೆ ಕೊನೆಯ ಎಚ್ಚರಿಕೆ ನೀಡಿದೆ. ನಟ ಶೈನ್ ಟಾಮ್ ಚಾಕೊ ಸಿನಿಮಾ ಸೆಟ್‌ನಲ್ಲಿ ಮಾದಕವಸ್ತು ಸೇವಿಸುತ್ತಾರೆ ಹಾಗೂ ಸಹನಟಿಯ ರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ’ ಎಂದು ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದ್ದರು.

Health Tips: ಅವಸರದಲ್ಲಿ ಊಟ ಮಾಡುತ್ತೀರಾ? ಇದನ್ನು ತಪ್ಪದೆ ಓದಿ!

ಅವಸರದಲ್ಲಿ ತಿನ್ನುವ ಮೊದಲು ಈ ಬಗ್ಗೆ ಜಾಗೃತರಾಗಿರಿ!..

ತೀರಾ ಅವಸರದಲ್ಲಿ ತಿನ್ನುವುದು, ಗಬಗಬ ಮುಕ್ಕುವುದು, ಅಗಿಯದೇ ನುಂಗುವುದು ಇತ್ಯಾದಿಗಳೆಲ್ಲ ಆರೋಗ್ಯಕ್ಕೆ ಸಮಸ್ಯೆಯನ್ನು ತರಬಲ್ಲವು ಎನ್ನುತ್ತದೆ ವೈದ್ಯವಿಜ್ಞಾನ. ತಿನ್ನುವುದಕ್ಕೂ ನಿಗದಿತ ವೇಗ ಎಂಬುದಿದೆಯೇ? ಹಾಗಾದರೆ ಎಷ್ಟು ನಿಮಿಷಗಳಲ್ಲಿ ಊಟ ಮುಗಿಸಬೇಕು? ಸರಿಯಾಗಿ ತಿನ್ನುವ ಕ್ರಮ ಹೇಗೆ?

Cholesterol Control: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್!..

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಸರಳ ಕ್ರಮ ಫಾಲೋ ಮಾಡಿ

ಅನಾರೋಗ್ಯಕರ ಜೀವನಶೈಲಿಯಿಂದಾಗಿ ದೇಹದ ಹಲವು ಭಾಗಗಳಲ್ಲಿ ಬೊಜ್ಜು ಶೇಖರಣೆ ಆಗಿ, ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಉಂಟಾಗಿ ಹೃದಯದ ಅಪಧಮನಿಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ದಿನನಿತ್ಯದ ಕೆಲವೊಂದು ಅಭ್ಯಾಸ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸೇವಿಸುವಂತಹ ಆಹಾರ ಕ್ರಮ, ದೈಹಿಕ ಚಟುವಟಿಕೆ, ನಿದ್ರೆ ಮತ್ತು ಒತ್ತಡ ನಿರ್ವಹಣೆಯಂತಹ ದೈನಂದಿನ ಚಟುವಟಿಕೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಗೊಳಿಸಬಹುದು.

Aamir Khan: ಈ ವರ್ಷವೇ ಸೆಟ್ಟೇರುತ್ತಾ ಮಹಾಭಾರತ ಸಿನಿಮಾ? ಬಿಗ್‌ ಅಪ್‌ಡೇಟ್‌ ನೀಡಿದ ಆಮೀರ್‌ ಖಾನ್‌

ಮಹಾಭಾರತ ಚಿತ್ರ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ರು ನಟ ಆಮೀರ್‌ ಖಾನ್‌

ಮಹಾಭಾರತದ ಕಥೆಯನ್ನು ಆಧಾರವಾಗಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ತೆರೆ ಮೇಲೆ ಬಂದಿದೆ. ಇದೀಗ ಬಾಲಿ ವುಡ್ ಖ್ಯಾತ ನಟ ಆಮೀರ್‌ ಖಾನ್‌ ಮಹಾಭಾರತ ಸಿನಿಮಾ ತೆರೆ ಮೇಲೆ ತರುವುದಾಗಿ ಗುಡ್ ನ್ಯೂಸ್ ನೀಡಿದ್ದಾರೆ. ಮಹಾಭಾರತದ ಮಹಾಕಾವ್ಯವನ್ನು ಚಲನಚಿತ್ರ ರೂಪಕ್ಕೆ ತರುವುದು ತನ್ನ ಜೀವನದ ಅತೀ ದೊಡ್ಡ ಆಸೆ ಎಂಬ ಬಗ್ಗೆ ನಟ ಆಮೀರ್‌ ಖಾನ್‌ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದು ಬಿಗ್‌ ಪ್ರಾಜೆಕ್ಟ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Sikandar: ಸಿಕಂದರ್ ಚಿತ್ರದ ಡಿಲೀಟೆಡ್ ಸೀನ್ ವೈರಲ್; ದೃಶ್ಯ ನೋಡಿ ಭಾವುಕರಾದ ಫ್ಯಾನ್ಸ್

ಸಿಕಂದರ್ ಸಿನಿಮಾದ ಡಿಲೀಟೆಡ್​ ದೃಶ್ಯ ವೈರಲ್; ಏನಿದೆ ಅದರಲ್ಲಿ?

Sikandar Movie deleted scene: ಹಿರಿಯ ನಿರ್ದೇಶಕ ಎ. ಆರ್. ಮುರುಗದಾಸ್ ನಿರ್ದೇಶನದಲ್ಲಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿಕಂದರ್ ರಿಲೀಸ್ ಆಗಿದ್ದು  ಸಿನಿಮಾ ಅಂದುಕೊಂಡ ಮಟ್ಟಕ್ಕೆ ಸಕ್ಸಸ್ ಪಡೆಯಲಿಲ್ಲ. ಇದೀಗ ಸಿನಿಮಾದಲ್ಲಿ ಅಳಿಸಲಾದ ಬಹುತೇಕ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಟಿ ಕಾಜಲ್ ಅಗರ್ ವಾಲ್ ಕೂಡ ಸಿಕಂದರ್ ಸಿನಿಮಾದಲ್ಲಿ ಅಭಿನಯಿಸಿದ್ದು ಡಿಲೇಟೆಡ್ ಆದ ಕೆಲ ದೃಶ್ಯಗಳು ಇದೀಗ ಮೆಚ್ಚುಗೆ ಗಳಿಸಿದೆ.

Oscars 2026 new rules: ಆಸ್ಕರ್‌ ರೂಲ್ಸ್‌ ಚೇಂಜ್‌; ಬದಲಾದ ಮಹತ್ವದ ನಿಯಮಗಳೇನು?

ಆಸ್ಕರ್ ಪ್ರಶಸ್ತಿ ನಾಮ ನಿರ್ದೇಶನಕ್ಕೆ ಹೊಸ ನಿಯಮ ಜಾರಿ!

ಆಸ್ಕರ್ ಪ್ರಶಸ್ತಿ ನೀಡಲು ಅನೇಕ ನಿಯಮಗಳಿದ್ದು ಪ್ರತೀ ವರ್ಷ ಕೂಡ ನಾಮ ನಿರ್ದೇಶನದ ಆಯ್ಕೆಗೆ ಅನುಗುಣವಾಗಿ ಪ್ರಶಸ್ತಿ ನೀಡಲಾಗುವುದು. ಆದರೆ ಇತ್ತೀಚಿಗೆ ಕೆಲ ನೂತನ ತಂತ್ರಜ್ಞಾನ, ಎಐ ಆಧರಿತ ಸಿನಿಮಾ ನಿರ್ಮಾಣ ಮಾಡುವುದು ಹೆಚ್ಚಾಗಿದೆ. ಇಂತಹ ಸಿನಿಮಾ ಆಸ್ಕರ್ ನಾಮನಿರ್ದೇಶನ ಮಾಡಬಹುದೇ ಎಂಬ ಗೊಂದಲ ಉಂಟಾಗಿತ್ತು. ಇದೀಗ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹಾಗಾದರೆ ಆಸ್ಕರ್ ಪ್ರಶಸ್ತಿಯ ಹೊಸ ನಿಯಮ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ‌.

Firefly Movie: ಫೈರ್‌ ಫ್ಲೈ’ ಚಿತ್ರದ ‘ಹುಷಾರು ಲೇ ಹುಷಾರು’ ಹಾಡು ಬಿಡುಗಡೆ ಮಾಡಿದ ಧ್ರುವ ಸರ್ಜಾ

ಫೈರ್‌ ಫ್ಲೈ’ ಚಿತ್ರ ತಂಡಕ್ಕೆ ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಸಾಥ್!

ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಫೈರ್ ಫ್ಲೈ(Firefly Movie) ಚಿತ್ರ ಇದೇ ತಿಂಗಳ 24ಕ್ಕೆ ತೆರೆಗೆ ಬರ್ತಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಸಿನಿಮಾ ಬಿಡುಗಡೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಪ್ರಚಾರ ಬಿರುಸಿನಿಂದ ಸಾಗಿದೆ. ಅದರ ಭಾಗವಾಗಿ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ ಫೈರ್‌ ಫ್ಲೈ ಸಿನಿಮಾದ ಹುಷಾರು ಲೇ ಹುಷಾರು ಎಂಬ ಹಾಡನ್ನು ರಿಲೀಸ್‌ ಮಾಡಿ ಇದೀಗ ಇಡೀ ತಂಡಕ್ಕೆ ಶುಭಾಶಯ ಕೋರಿದ್ದಾರೆ.

Ghee Benefits: ಬೇಸಿಗೆಯಲ್ಲಿ ತುಪ್ಪ ಸೇವನೆಯ ಪ್ರಯೋಜನಗಳೇನು?

ಬೇಸಿಗೆಯಲ್ಲಿ ತುಪ್ಪ ಸೇವನೆ ದೇಹಕ್ಕೆ ಒಳಿತೆ?

ಬೇಸಿಗೆಯಲ್ಲಿ ಬಿಸಿಲಿನ ಉಷ್ಣಾಂಶ ಹೆಚ್ಚಾಗಿ ಇರುವುದರಿಂದ ನಮ್ಮ ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳು ಹೆಚ್ಚು ಮುಖ್ಯವಾಗುತ್ತವೆ. ಆಯುರ್ವೇದ ಪ್ರಕಾರ ತುಪ್ಪಕ್ಕೆ ನಮ್ಮ ದೇಹ ವನ್ನು ತಂಪು ಮಾಡುವ ಗುಣವಿದೆ. ಹೀಗಾಗಿ ಇದರ ಸೇವನೆಯು ನಮ್ಮ  ದೇಹವನ್ನು ಉಷ್ಣಾಂಶದಿಂದ ಸಮತೋಲನ ಗೊಳಿಸಿ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

Viral News: ಒಡಿಶಾದಲ್ಲಿ ಅಮಾನವೀಯ ಘಟನೆ; ಯುವಕರಿಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ, ಮೂತ್ರ ಸೇವಿಸಲು ಒತ್ತಾಯ!

ಒಡಿಶಾದಲ್ಲಿ ಯುವಕರಿಬ್ಬರಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು!..

ಒಡಿಶಾದ ಪುರಿ ಜಿಲ್ಲೆಯ ಕೋಟಕೋಸಂಗ ಪ್ರದೇಶದಲ್ಲಿ ಗ್ರಾಮ ಮೇಳವೊಂದನ್ನು ಆಯೋಜನೆ ಮಾಡಲಾಗಿತ್ತು. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಗ್ರಾಮ ಮೇಳಕ್ಕೆ ಆಗಮಿಸಿದ್ದರು. ಅಪರಿಚಿತ ಇಬ್ಬರು ಯುವಕರನ್ನು ಕಂಡ ಗ್ರಾಮಸ್ಥರು ತಮ್ಮ ಶತ್ರು ಗ್ರಾಮದ ನಿವಾಸಿಗಳೆಂದು ತಪ್ಪಾಗಿ ಭಾವಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ, ನಂತರ ಹಲ್ಲೆ ಮಾಡಿದ್ದಾರೆ