ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಅನೇಕ ಸದ್ಗುಣಗಳಿದ್ದೂ ಹತನಾದ ರಾವಣ

Roopa Gururaj Column: ಅನೇಕ ಸದ್ಗುಣಗಳಿದ್ದೂ ಹತನಾದ ರಾವಣ

ರಾವಣನ ಶಿವಭಕ್ತಿ ಮತ್ತು ಆತನ ಉತ್ತಮ ಗುಣಗಳಿಗಾಗಿ ಶ್ರೀಲಂಕಾ ಮತ್ತು ಭಾರತದಲ್ಲಿ ಆತನ ದೇವಾಲಯಗಳು ಕೂಡಾ ಇವೆ. ರಾವಣನ ಹತ್ತು ತಲೆಗಳು, ೧೦ ನಕಾರಾತ್ಮಕ ಗುಣಗಳನ್ನು ಸಾಂಕೇತಿಕ ವಾಗಿ ಪ್ರತಿನಿಧಿಸುತ್ತವೆ: ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ. ಇವೇ ರಾವಣನ ವಿನಾಶಕ್ಕೆ ಕಾರಣ. ಈ ತಲೆಗಳು ಅವನ ಅತಿ ಬುದ್ಧಿವಂತಿಕೆ ಮತ್ತು ಅಹಂಕಾರದ ಸಂಕೇತ.

Roopa Gururaj Column: ರಾಮನ ಬಾಣದಿಂದ ಸೃಷ್ಟಿಯಾದ ಥಾರ್‌ ಮರುಭೂಮಿ

Roopa Gururaj Column: ರಾಮನ ಬಾಣದಿಂದ ಸೃಷ್ಟಿಯಾದ ಥಾರ್‌ ಮರುಭೂಮಿ

ಒಂದು ಬಾರಿ ಆಮಂತ್ರಿಸಿದ ದೈವಿಕ ಆಯುಧ ವ್ಯರ್ಥವಾಗಬಾರದು ಎಂಬ ಕಾರಣದಿಂದ, ಆ ಆಯುಧ ವನ್ನು ಉತ್ತರ ದಿಕ್ಕಿನ ‘ದ್ರುಮತುಲ್ಯ’ ಎಂಬ ಪ್ರದೇಶದ ಕಡೆಗೆ ಬಿಡುವಂತೆ ರಾಮನಿಗೆ ತಿಳಿಸಿದ. ಯಾಕೆಂದರೆ ಆ ಭಾಗದಲ್ಲಿ ನೀರನ್ನು ಕುಡಿಯುತ್ತಾ ಕುಕೃತ್ಯಗಳಲ್ಲಿ ತೊಡಗಿದ್ದ ಅಭೀರ ಎನ್ನುವ ದುಷ್ಟರು ವಾಸಿಸುತ್ತಿದ್ದರು. ರಾಮನು, ಸಮುದ್ರದೇವನ ಸಲಹೆಯಂತೆ ಬಾಣವನ್ನು ಆ ದಿಕ್ಕಿಗೆ ಪ್ರಯೋಗಿಸಿದ. ಅದು ಬಿದ್ದ ಪ್ರದೇಶವೇ ಇಂದಿನ ಥಾರ್ ಮರುಭೂಮಿಯಾಗಿದೆ

Roopa Gururaj Column: ವಾಸ್ತು ಪುರುಷನ ಮಹತ್ವ

Roopa Gururaj Column: ವಾಸ್ತು ಪುರುಷನ ಮಹತ್ವ

ಒಂದು ಜಾಗವನ್ನು ಖರೀದಿಸುವ ಕ್ಷಣದಿಂದಲೇ, ವಾಸ್ತುಪುರುಷನು ತೃಪ್ತಿಯಾಗುವಂತೆ ವಿಶೇಷ ಆಚರಣೆಗಳು ಮತ್ತು ಪೂಜೆ-ಪರಿಹಾರಗಳನ್ನು ಮಾಡುವುದು ಅಗತ್ಯ ಎನ್ನಲಾಗುತ್ತದೆ. ಹಾಗೆಯೇ, ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ, ವಾಸ್ತುಪುರುಷನ ದೇಹದ ಸೂಕ್ಷ್ಮ ಭಾಗಗಳಿಗೆ ನೋವುಂಟಾ ಗದಂತೆ, ಅವನ್ನು ಬದಲಾಯಿಸದಂತೆ ವಿಶೇಷ ಕಾಳಜಿ ವಹಿಸಬೇಕೆಂದು ಶಾಸ್ತ್ರ ಹೇಳುತ್ತದೆ.

Roopa Gururaj Column: ಆತ್ಮಪ್ರಶಂಸೆ: ನಮ್ಮ ಬೆಳವಣಿಗೆಗೆ ಮಾರಕ

Roopa Gururaj Column: ಆತ್ಮಪ್ರಶಂಸೆ: ನಮ್ಮ ಬೆಳವಣಿಗೆಗೆ ಮಾರಕ

ಕೆಲವೊಮ್ಮೆ ನಾವು ಮಾಡುವ ಚಿಕ್ಕಪುಟ್ಟ ಸಾಧನೆಗಳು ನಮ್ಮನ್ನು ಮೈ ಮರೆಯುವಂತೆ ಮಾಡು ತ್ತವೆ. ಅವುಗಳನ್ನು ಎಲ್ಲರ ಮುಂದೆ ಹೇಳಿಕೊಂಡು ನಾವೇ ಚಿಕ್ಕವರಾಗುತ್ತಾ ಹೋಗುತ್ತೇವೆ, ಕಾರಣ ನಮಗಿಂತ ದೊಡ್ಡ ಸಾಧಕರು ನಮ್ಮ ಸುತ್ತಲೂ ಬಹಳಷ್ಟು ಜನ ಇರುತ್ತಾರೆ. ಅವರು ಏನೂ ಸದ್ದು ಮಾಡದೆ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾಯಕ ಮಾಡುತ್ತಿರುತ್ತಾರೆ.

Roopa Gururaj Column: ಭಕ್ತಿಭಾವ ಇಲ್ಲದ ನಾಮಸ್ಮರಣೆ ಗಿಳಿಪಾಠದಂತೆ...

Roopa Gururaj Column: ಭಕ್ತಿಭಾವ ಇಲ್ಲದ ನಾಮಸ್ಮರಣೆ ಗಿಳಿಪಾಠದಂತೆ...

ಗುರುಗಳು ಹೀಗೆ ಪ್ರತಿದಿನ ಮಾತನಾಡುತ್ತಿದ್ದಂತೆ, ಒಂದು ಅದ್ಭುತ ಬದಲಾವಣೆ ಸಂಭವಿಸಿತು. ಗಿಳಿಯು ಯಾಂತ್ರಿಕವಾಗಿ ಕಿರುಚುವುದನ್ನು ನಿಲ್ಲಿಸಿತು. ಅದರ ಸ್ವರ ಮೃದುವಾಯಿತು. ಅದು ಕೇಳಲು ಆರಂಭಿಸಿತು. ಅದರ ಧ್ವನಿಯಲ್ಲಿ ಭಾವನೆಗಳು ಮೂಡಲಾರಂಭಿಸಿದವು. ಒಂದು ದಿನ ಗಿಳಿಯು ‘ಕೃಷ್ಣ’ ಎಂದು ಜಪಿಸಿದಾಗ ಅದರ ಧ್ವನಿ ಭಾವದಿಂದ ನಡುಗಿತು.

Roopa Gururaj Column: ನಿಜವಾದ ಭಕ್ತಿ ಇರುವಲ್ಲಿದೆ ಭಗವಂತನ ಸಾನಿಧ್ಯ

Roopa Gururaj Column: ನಿಜವಾದ ಭಕ್ತಿ ಇರುವಲ್ಲಿದೆ ಭಗವಂತನ ಸಾನಿಧ್ಯ

ಒಬ್ಬ ಭಕ್ತನು ಬಂದು ಲೌಕಿಕವಾದ ಯಾವುದನ್ನೂ ಕೇಳದೆ ಕೇವಲ ಭಕ್ತಿಯನ್ನು ಯಾಚಿಸಿ ದನು. ಆಶ್ಚರ್ಯವೆನಿಸುವಂತೆ ಕೃಷ್ಣನ ಪ್ರತಿಕ್ರಿಯೆ ಬೇರೆಯಿತ್ತು. ಕೃಷ್ಣ ಪರಮಾತ್ಮ ಆ ಆಸೆಯನ್ನು ತಕ್ಷಣ ಮನ್ನಿಸದೆ, ಅವನನ್ನು ಅ ಪಕ್ಕದಲ್ಲಿ ಕಾಯಲು ಹೇಳಿದ. ಇದನ್ನು ಕಂಡ ನಾರದಮುನಿಗೆ ಗೊಂದಲ ವಾಯಿತು. ಅವರು ಸ್ವಲ್ಪ ತಡೆದು ಸಂಕೋಚದಿಂದಲೇ ಕೇಳಿದರು: “ಭಗವಂತಾ, ಇತರರ ಎಲ್ಲಾ ಬೇಡಿಕೆ ಗಳನ್ನು ತಕ್ಷಣ ಈಡೇರಿಸುತ್ತೀರಿ, ಆದರೆ ಕೇವಲ ಭಕ್ತಿಯನ್ನು ಕೇಳುವವರನ್ನು ಏಕೆ ಕಾಯಿಸುತ್ತೀರಿ?".

Roopa Gururaj Column: ರೈತನ ನಿಷ್ಕಲ್ಮಶ ಭಕ್ತಿಗೆ ಒಲಿದ ಠಾಕುರ್‌ ಜೀ

Roopa Gururaj Column: ರೈತನ ನಿಷ್ಕಲ್ಮಶ ಭಕ್ತಿಗೆ ಒಲಿದ ಠಾಕುರ್‌ ಜೀ

ಊರಿನವರು ಕೆಲವೊಮ್ಮೆ ಅವನ ಮನೆಯ ಬಳಿ ಹಾದು ಹೋಗುವಾಗ, ಯಾರೋ ಕಾಣದವ ರೊಂದಿಗೆ ಧಣ್ಣ ಮಾತನಾಡುತ್ತಿರುವುದನ್ನು ಕೇಳುತ್ತಿದ್ದರು. ಅವರಿಗೆ ಕೃಷ್ಣನೇ ಧಣ್ಣನ ಮನೆಯ ಅತಿಥಿಯಾಗಿದ್ದ ನೆಂದು ಅರಿವಾಗಲು ಬಹಳ ವರ್ಷ ಹಿಡಿಯಿತು. ಇಂದಿಗೂ ‘ನಾಗೌರ್’ ಹತ್ತಿರ ಧಣ್ಣಾ ಜಾಟ್ ಮತ್ತು ಠಾಕುರ್ ಜೀ ಅವರ ದೇಗುಲವಿದ್ದು, ಜನರು ರೊಟ್ಟಿ ಮತ್ತು ಮೊಸರನ್ನು ಸಮರ್ಪಿಸಿ, ಅವರ ದೈವಿಕ ಸ್ನೇಹವನ್ನು ನೆನಪಿಸಿಕೊಳ್ಳುತ್ತಾರೆ.

Roopa Gururaj Column: ಎಲ್ಲಾ ತಪ್ಪುಗಳಿಗೂ ಶಿಕ್ಷೆಯೇ ಪರಿಹಾರವಲ್ಲ

Roopa Gururaj Column: ಎಲ್ಲಾ ತಪ್ಪುಗಳಿಗೂ ಶಿಕ್ಷೆಯೇ ಪರಿಹಾರವಲ್ಲ

ಯೋಚಿಸಿ ನೋಡಿ, ಕೆಲವೊಮ್ಮೆ ನಾವು ಕೂಡ ಚಿಕ್ಕ ಚಿಕ್ಕ ವಿಷಯಕ್ಕೆ ಅನಗತ್ಯವಾಗಿ ದುಡುಕಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ. ಅಕಸ್ಮಾತಾಗಿ ಯಾರಾದರೂ ತಪ್ಪು ಮಾಡಿರಬಹುದು, ಕೆಲವೊಮ್ಮೆ ಅದು ಅವರ ನಿಯಂತ್ರಣದಲ್ಲಿ ಇರುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಾಗುತ್ತದೆ. ಎಲ್ಲದಕ್ಕೂ ಒಂದೇ ರೀತಿಯ ನಿರ್ಧಾರ ಸರಿ ಹೋಗುವುದಿಲ್ಲ

Roopa Gururaj Column: ತಾಯಿಯ ಪ್ರೀತಿ ಅತಿ ಶ್ರೇಷ್ಠವಾದುದು

Roopa Gururaj Column: ತಾಯಿಯ ಪ್ರೀತಿ ಅತಿ ಶ್ರೇಷ್ಠವಾದುದು

ಎಲ್ಲಕ್ಕಿಂತ ಮಿಗಿಲಾಗಿ, ನಾವು ಮಾಡುವ ತಪ್ಪುಗಳನ್ನು, ನಮ್ಮ ಸುಳ್ಳುಗಳನ್ನ ಮೊದಲು ಗಮನಿಸಿ ನಮ್ಮನ್ನು ಹಿಡಿಯು ವುದೇ ತಾಯಿ. ಅವಳಲ್ಲಿ ನಮ್ಮ ತಪ್ಪುಗಳಿಗೆ ಎಂದಿಗೂ ಮೃದು ಧೋರಣೆ ಇರುವುದಿಲ್ಲ. ದಂಡಿಸಿ ಬೈದು ಬುದ್ಧಿ ಹೇಳಿ ನಮ್ಮನ್ನು ಸಮಾಜಮುಖಿಯಾಗಿಸುವು ದರಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು.

Roopa Gururaj Column: ಪ್ರಾಮಾಣಿಕತೆ ಕೊಡುವ ಸಾತ್ವಿಕ ಗತ್ತು

Roopa Gururaj Column: ಪ್ರಾಮಾಣಿಕತೆ ಕೊಡುವ ಸಾತ್ವಿಕ ಗತ್ತು

ಯಾವುದೇ ಅಧಿಕಾರಯುತ ಕೆಲಸದಲ್ಲಿರುವಾಗ ಅದನ್ನು ಬಳಸಿಕೊಂಡು ಹಣ ಮಾಡು ವುದು ಬಹಳ ಸುಲಭ. ಆದರೆ ಹಣ ಎಂದಿಗೂ ಗೌರವವನ್ನು ಕೊಡಲು ಸಾಧ್ಯವಿಲ್ಲ. ಪ್ರಾಮಾಣಿಕತೆ ಮತ್ತು ಒಳ್ಳೆಯ ನಡವಳಿಕೆ ಮಾತ್ರ ನಾವಿರುವವರೆಗೂ ನಮಗೆ ಅಂಥ ಒಂದು ಸಾತ್ವಿಕ ಗತ್ತನ್ನೂ ಗೌರವವನ್ನೂ ಕೊಡುತ್ತದೆ. ಇದನ್ನು ಕಳೆದುಕೊಂಡರೆ ನಮ್ಮ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.

Roopa Gururaj Column: ಕರ್ಮ ಮರಳಿ ಬರುತ್ತದೆ, ಮರೆಯದಿರಿ...

Roopa Gururaj Column: ಕರ್ಮ ಮರಳಿ ಬರುತ್ತದೆ, ಮರೆಯದಿರಿ...

ನಾವು ಮಾಡುವ ಪ್ರತಿ ಯೊಂದು ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅಂತೆಯೇ ಕೆಟ್ಟ ಕೆಲಸ ಗಳಿಗೂ ಅದರದ್ದೇ ಆದ ಕರ್ಮ ತಟ್ಟದೆ ಬಿಡುವುದಿಲ್ಲ. ನಿಧಾನವಾಗಿ ಯಾದರೂ, ಕೆಲವೊಮ್ಮೆ ಜನ್ಮಾಂತರಗಳಾದರೂ ಸರಿ, ಕರ್ಮ ಮರಳಿ ಬರುತ್ತದೆ. ಆದ್ದರಿಂದ, ಮಾಡುವ ಪ್ರತಿ ಯೋಚನೆ ಮತ್ತು ಕೆಲಸದ ಬಗ್ಗೆಯೂ ಜಾಗೃತರಾಗಿರೋಣ...

Roopa Gururaj Column: ಅಂದುಕೊಂಡದ್ದನ್ನೆಲ್ಲಾ ನೆರವೇರಿಸುವ ಅಶ್ವಿನಿ ದೇವತೆಗಳು

ಅಂದುಕೊಂಡದ್ದನ್ನೆಲ್ಲಾ ನೆರವೇರಿಸುವ ಅಶ್ವಿನಿ ದೇವತೆಗಳು

ಅಶ್ವಿನಿ ದೇವತೆಗಳು ಯಾವಾಗಲೂ ಅಸ್ತು-ತಥಾಸ್ತು ಎಂದು ಹೇಳುತ್ತಿರುತ್ತಾರೆ, ಅವರ ಅನುಗ್ರಹ ದಿಂದ ಆರೋಗ್ಯ- ಸಂಪತ್ತು-ಶಾಂತಿ ಮತ್ತು ಜ್ಞಾನ ಲಭಿಸುತ್ತದೆ. ಆದ್ದರಿಂದಲೇ ಹಿರಿಯರು ಒಳ್ಳೆಯ ಮಾತನಾಡಿ ಒಳ್ಳೆಯ ಯೋಚನೆಗಳನ್ನು ಮಾಡಿ ತಥಾಸ್ತು ದೇವತೆಗಳು ಅಂದರೆ ಅಶ್ವಿನಿ ಕುಮಾರರು ಅದನ್ನು ನೆರವೇರಿಸುತ್ತಾರೆ ಎಂದು ಹೇಳುತ್ತಾರೆ, ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.

Roopa Gururaj Column: ಗುರುಕೃಪೆ ಇದ್ದಾಗ ಎಂಥ ನಕಾರಾತ್ಮಕ ಶಕ್ತಿಯೂ ಗೆಲ್ಲಲಾಗುವುದಿಲ್ಲ

ಗುರುಕೃಪೆ ಇದ್ದಾಗ ಎಂಥ ನಕಾರಾತ್ಮಕ ಶಕ್ತಿಯೂ ಗೆಲ್ಲಲಾಗುವುದಿಲ್ಲ

ಆಶ್ರಮದಲ್ಲಿರುವ ಎಲ್ಲರೂ ಹೀಗೆ ಶ್ರೀಧರರೆಡೆಗೆ ತೋರುತ್ತಿದ್ದ ಇಂಥ ಮಮತೆ, ಪ್ರೀತಿಯನ್ನು ಕಂಡು ಆ ವಾಮಾಚಾರಿಯು ಶ್ರೀಧರರ ಮೇಲೆ ಅಸೂಯೆ ಪಡುತ್ತಿದ್ದ, ವಿನಾ ಕಾರಣ ಕೋಪ ತೋರುತ್ತಿದ್ದ. ಏನಾದರೂ ಮಾಡಿ ಇವರು ಮಾಡುವ ಎಲ್ಲಾ ಸಾಧನೆ ಯನ್ನು ನಿಲ್ಲಿಸಿಬಿಡಬೇಕು ಎಂದು ಸಂಚುಹೂಡಿ, ಒಂದು ದಿನ ಶ್ರೀಧರರ ಮೇಲೆ ವಾಮಾ ಚಾರ ಪ್ರಯೋಗ ಮಾಡಿದ.

Roopa Gururaj Column: ಕಾಡುಜನಾಂಗದ ಮುಗ್ಧ ಬಾಲಕನ ಹಂಚಿ ತಿನ್ನುವ ಗುಣ

ಕಾಡುಜನಾಂಗದ ಮುಗ್ಧ ಬಾಲಕನ ಹಂಚಿ ತಿನ್ನುವ ಗುಣ

“ಅಯ್ಯೋ ದಡ್ಡ, ಒಟ್ಟು ಹಿಟ್ಟಿನ ಇಪ್ಪತ್ತೊಂಬತ್ತು ಮುದ್ದೆ ಮಾಡಿದ್ದರೆ ಆಗುತ್ತಿರಲಿಲ್ಲವೇ? ಅದರಲ್ಲೇಕೆ ಅರ್ಧ ಮಾಡಿದೆ?" ಎಂದರು ಡಾ.ಬಾಲು. ಆಗ ಆ ಹುಡುಗ “ಹಾಗೆ ಮಾಡಿದರೆ, ಬೇರೆ ಎಲ್ಲರಿಗೂ ಸ್ವಲ್ಪ ಕಡಿಮೆಯಾಗುತ್ತಿತ್ತು. ಅವಳು ನನ್ನ ತಂಗಿ, ನನ್ನ ಪಾಲಿನಲ್ಲಿ ಮಾತ್ರ ಅವಳಿಗೆ ಕೊಡುವುದು ಸರಿಯಲ್ಲವೇ ಸರ್?" ಎಂದ. ಆ ಹುಡುಗನ ಮಾತನ್ನು ಕೇಳಿ, ಡಾ.ಬಾಲುರವರ ಕಣ್ಣುಗಳಲ್ಲಿ ನೀರು ಹರಿಯಿತು. ಅವನ ಪ್ರಾಮಾಣಿಕತೆಗೆ ಭೇಷ್ ಎಂದು ಹೇಳಿ ಅವನ ಬೆನ್ನು ತಟ್ಟಿದರು.

Roopa Gururaj Column: ಮನಸ್ಸಿನ ಸಂಯಮ, ಸಂಬಂಧಗಳನ್ನು ಬೆಸೆಯುತ್ತದೆ

Roopa Gururaj Column: ಮನಸ್ಸಿನ ಸಂಯಮ, ಸಂಬಂಧಗಳನ್ನು ಬೆಸೆಯುತ್ತದೆ

ಕೋಪಗೊಂಡಾಗ ಮಾಡಿದ ಅಡುಗೆಯನ್ನು ಊಟ ಮಾಡದೆ ನಮ್ಮನ್ನು ನಾವು ಶಿಕ್ಷಿಸಿ ಕೊಳ್ಳುತ್ತೇವೆ. ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬಂದರೆ ಪುಸ್ತಕದ ಮೇಲೆ ನಮ್ಮ ಸಿಟ್ಟು ಹರಿಯು ತ್ತದೆ. ಆದರೆ ಇದ್ಯಾವುದರಿಂದಲೂ ಆ ಸಿಟ್ಟು ಪ್ರಾರಂಭವಾಗಿರುವುದಿಲ್ಲ; ಅದು ನಮ್ಮೊಳಗೆ ಬೇರೆಯೇ ಕಾರಣಕ್ಕೆ ಹುಟ್ಟಿ ಅನಗತ್ಯವಾಗಿ ಅವುಗಳ ಮೇಲೆ ಹರಿದಿರುತ್ತದೆ.

Roopa Gururaj Column: ಕಷ್ಟ ಬಂದಾಗ ನಾವು ಏನಾಗುತ್ತೇವೆ ?

Roopa Gururaj Column: ಕಷ್ಟ ಬಂದಾಗ ನಾವು ಏನಾಗುತ್ತೇವೆ ?

ಜೀವನ ದಲ್ಲಿ ಹಲವಾರು ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಬೇಕೋ ಬೇಡವೋ ಅದರ ಪ್ರಭಾವ ನಮ್ಮ ಮೇಲೆ ಆಗುತ್ತಲೂ ಇರುತ್ತದೆ. ಆದರೆ ನಿಜವಾಗಿ ಮುಖ್ಯ ವಾದದ್ದು ನಮ್ಮೊಳಗೆ ಆಗ ಏನಾಗುತ್ತದೆ ಎಂಬುದು. ಕಷ್ಟ ಬಂದಾಗ ನಾವು ಕಂಗೆಡುತ್ತಿವಾ? ಗಟ್ಟಿಯಾಗುತ್ತಿವಾ? ಎಂಬುದು. ಕೆಲವೊಮ್ಮೆ ಅದಕ್ಕಿಂತ ಭಿನ್ನವಾಗಿ ಆ ಪರಿಸ್ಥಿತಿಯನ್ನು ನಿಧಾನವಾಗಿ ಬದಲಾಯಿಸಿ ನಮ್ಮ ಅನುಕೂಲಕ್ಕೆ ಒಗ್ಗಿಸಿಕೊಳ್ಳುತ್ತಿವಾ? ಎಂಬುದು.

Roopa Gururaj Column: ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು

ಮನುಷ್ಯನ ಅತಿಯಾಸೆಗೆ ಬಲಿಯಾಗುವ ಜೀವಿಗಳು

ಮಾರ್ಗರೇಟ್ ವಿಜ್ಞಾನಿಯೇನೂ ಅಲ್ಲ; ಆದರೆ ಅವಳಿಗೆ ಸಂವಹನದ ಕಲೆಯ ಮೇಲೆ ಅಪಾರ ಆಸಕ್ತಿ ಇತ್ತು. ಮನುಷ್ಯರು ಒಂದು ದಿನ ಪ್ರಾಣಿಗಳೊಂದಿಗೆ ನಿಜವಾಗಿ ಮಾತನಾಡ ಬಹುದು ಎಂಬ ಕಲ್ಪನೆಯೇ ಅವಳನ್ನು ಆಕರ್ಷಿಸಿತ್ತು. ತಿಂಗಳುಗಳ ಕಾಲ, ಅವಳು ಆ ಕನಸಿನ ಮುಳುಗಿದ್ದಳು.

Roopa Gururaj Column: ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

ದುಡುಕಿ ಜನ್ಮ ಹಾಳು ಮಾಡಿಕೊಂಡ ಜಯ-ವಿಜಯರು

ಭಕ್ತನ ಮೊರೆಯನ್ನು ಆಲಿಸಿದ ಭಗವಂತನು ಗರುಡನ ಹೆಗಲೇರಿ ಬಂದು ತನ್ನ ಸುದರ್ಶನ ಚಕ್ರವನ್ನು ಮೊಸಳೆಯ ಮೇಲೆ ಪ್ರಯೋಗಿಸಿದನು. ಈ ರೀತಿಯಾಗಿ ಗಜೇಂದ್ರನಿಗೆ ಮೋಕ್ಷ ಪ್ರಾಪ್ತಿಯಾಯಿತು. ಅಂದಿನಿಂದ ‘ಗಂಡಕಿ’ ನದಿ ಕ್ಷೇತ್ರವು ಪರಮ ಪಾವನವಾದ ವಿಷ್ಣು ಕ್ಷೇತ್ರ ವಾಯಿತು. ಈ ಗಂಡಕೀ ನದಿಯಲ್ಲಿ ಸಿಗುವ ಶಿಲೆಗಳ ಮೇಲೆ ಚಕ್ರದ ಚಿಹ್ನೆ ಮೂಡಿರುತ್ತದೆ ಅದು ಸಾಲಿಗ್ರಾಮವಾಗಿ ಪೂಜಿಸಲ್ಪಡುತ್ತದೆ.

Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

ಬದುಕಿನಲ್ಲಿ ವೈಭೋಗಗಳ ಆಸೆಗೆ ನಾವು ಅನೇಕ ಬಾರಿ ಕೆಲವರ ಹಂಗಿನಲ್ಲಿ ಬೀಳುತ್ತೇವೆ. ನೆನಪಿರಲಿ, ಯಾರೂ ನಮಗೆ ಅನಗತ್ಯವಾಗಿ ಸಹಾಯ ಮಾಡುವುದಿಲ್ಲ. ಅವರಿಗೆ ನಮ್ಮಿಂದ ಏನೋ ಅನುಕೂಲವಾಗುತ್ತಿರುತ್ತದೆ. ಆದ್ದರಿಂದಲೇ ಅವರು ನಮ್ಮನ್ನು ಅತಿಯಾಗಿ ಹೊಗಳಿ, ಉಡುಗೊರೆಗಳನ್ನು ನೀಡುತ್ತಾ ನಮಗೆ ವಿಶೇಷ ಮರ್ಯಾದೆ ಕೊಡುತ್ತಾರೆ.

Roopa Gururaj Column: ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು

ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು

ಎಷ್ಟೇ ಅಡ್ಡಿಗಳು ಬರಲಿ ಧರ್ಮಮಾರ್ಗದಲ್ಲೇ ನಡೆಯಬೇಕು ಎಂಬ ಸಂಕಲ್ಪವನ್ನು ಶಿಷ್ಯರಲ್ಲಿ ಗಟ್ಟಿ ಮಾಡುತ್ತಾ ಸಾವಿರಾರು ಶಿಷ್ಯರನ್ನು ತಿದ್ದಿ ತೀಡಬೇಕು. ಒಳ್ಳೆಯ ಚಿಂತನೆ ಗಳನ್ನು ಅವರ ಮನದಲ್ಲಿ ಬಿತ್ತಿ, ರಾಷ್ಟ್ರಕ್ಕೆ ಸತ್-ಪ್ರಜೆಗಳನ್ನು ರೂಪಿಸಿ ಕೊಡುಗೆಯಾಗಿ ನೀಡುವ ಅರ್ಪಣಾ ಮನೋಭಾವ ಗುರುಕುಲದ ಗುರುಗಳಿಗೆ ಇದ್ದಾಗ ನಮ್ಮ ದೇಶವು ಧಾರ್ಮಿಕವಾಗಿ, ಸಾಮಾಜಿಕ ವಾಗಿ ಸಂಪೂರ್ಣ ಅಭಿವೃದ್ಧಿಯಾಗುತ್ತದೆ..

Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ

Roopa Gururaj Column: ಉಪಕಾರಸ್ಮರಣೆ ಇಲ್ಲದ ಮನುಷ್ಯ

ಗೋವು ಮಹಿಳೆಗೆ ಕೊಟ್ಟ ಶಾಪದಿಂದಾಗಿ ಮನುಷ್ಯರಿಗೆ ಹುಟ್ಟಿದ ಮಕ್ಕಳು ಎದ್ದು ನಿಲ್ಲಲು 8-10 ತಿಂಗಳು ಬೇಕಾಗುತ್ತದೆ. ಪ್ರಾಣಿಗಳಿಗೆ ಹುಟ್ಟಿದ ಮರಿ-ಕರು ಗಳು, ಕೆಲವೇ ಸಮಯದಲ್ಲಿ ಎದ್ದು ನಿಂತು ಓಡಾಡುತ್ತವೆ. ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸಿ ಯಾನೆ?’ ಎನ್ನುವಂತೆ, ತಾನು ಸೃಷ್ಟಿಸಿದ ಜೀವಗಳನ್ನು ಭಗವಂತ ತಾನೇ ರಕ್ಷಿಸುತ್ತಾನೆ...

Roopa Gururaj Column: ಸಮುದ್ರಕ್ಕೆ ಬಿದ್ದಾಗ ಬುದ್ಧಿ ಕಲಿತ ವ್ಯಾಪಾರಿ

Roopa Gururaj Column: ಸಮುದ್ರಕ್ಕೆ ಬಿದ್ದಾಗ ಬುದ್ಧಿ ಕಲಿತ ವ್ಯಾಪಾರಿ

ಎಷ್ಟೋ ಬಾರಿ ನಮಗಿಂತ ಹೆಚ್ಚು ಕಷ್ಟ ಪಡುವ ಜನರನ್ನು ನೋಡಿದಾಗ ನಮ್ಮ ಸ್ಥಿತಿಯ ಬಗ್ಗೆ ನಮಗೆ ಸಮಾಧಾನವಾಗುತ್ತದೆ. ಆದ್ದರಿಂದ ಎಂತಹದ್ದೇ ಪರಿಸ್ಥಿತಿಯನ್ನು ಸಮಾಧಾನ ದಿಂದ ಎದುರಿಸುವ , ನಿರ್ಲಿಪ್ತ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬದುಕನ್ನು ಸಮಚಿತ್ತದಿಂದ ಸ್ವೀಕರಿಸಲು ಸಾಧ್ಯ.

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ, ಕಷ್ಟದಲ್ಲಿರುವವರನ್ನು ನೋಡಿದಾಗ ಅವರಿಗೆ ಏನಾದರೂ ಮಾಡಬೇಕು ಅನ್ನುವ ತುಡಿತ, ಮಾನವೀಯ ಮೌಲ್ಯ, ವೈಚಾರಿಕತೆ ಇವೆಲ್ಲವನ್ನೂ ರೂಢಿಸಿಕೊಂಡಾಗ ನಾವು ಗಳಿಸಿದ ವಿದ್ಯೆಗೂ ಒಂದು ಮೌಲ್ಯ. ಅದಿಲ್ಲದೆ ‘ನಾನು ಮಾತ್ರ ಉದ್ಧಾರವಾಗ ಬೇಕು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು, ನಾನು ನನ್ನದು’ ಎನ್ನುವ ಸ್ವಾರ್ಥದ ಆಲೋಚನೆಗಳ ಬಂದಿಯಾದವರು ಸಮಾಜಕ್ಕೆ ಒಂದು ಹೊರೆ ಎಂತಲೇ ಹೇಳಬೇಕು.

Roopa Gururaj Column: ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಬದುಕಿರುವ ಕೊನೆಯ ಕ್ಷಣದವರೆಗೂ ಕಲಿಕೆ ನಿಲ್ಲುವುದಿಲ್ಲ

ಕಲಿಕೆಗೆ ಕೊನೆಯೆಂಬುದು ಇಲ್ಲವೇ ಇಲ್ಲ. ಬದುಕಿನುದ್ದಕ್ಕೂ ಹೊಸ ಹೊಸ ವಿಷಯಗಳನ್ನು, ಬದುಕನ್ನು ಅರ್ಥಪೂರ್ಣವಾಗಿ ಬದುಕುವ ಕೌಶಲವನ್ನು ನಾವು ಕಲಿಯುತ್ತಲೇ ಇರಬಹುದು. ಆದ್ದರಿಂದಲೇ ಎನಗಿಂತ ಕಿರಿಯರಿಲ್ಲ ಎನ್ನುವ ಬಸವಣ್ಣನವರ ವಚನದಂತೆ ಸದಾ ವಿನಯದಿಂದ, ಏನನ್ನಾದರೂ ಕಲಿಯುವ ಉತ್ಸಾಹದಿಂದ ಪ್ರತಿ ದಿನವನ್ನು ಸ್ವಾಗತಿಸೋಣ.

Loading...