ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

“ಅಯ್ಯೋ! ಎಂಥ ಮನೆಹಾಳು ಕೆಲಸವಾಯಿತು. ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿ ತಲ್ಲಾ" ಎಂದು ಪಾಪಯ್ಯ ಮಮ್ಮಲ ಮರುಗಿದ. ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಹಣ ಉಳಿಸಲು ವಾಮಮಾರ್ಗಕ್ಕೆ ಇಳಿದರೆ, ಅದರ ಎರಡರಷ್ಟು ಖರ್ಚಾಗಿರುತ್ತದೆ. ಹಣದ ಮೋಹ ಒಳ್ಳೆಯದಲ್ಲ, ಸಂಬಂಧಗಳಿಗೆ ಬೆಲೆ ಕೊಡಬೇಕು. ಅಲ್ಲವೇ ?

Roopa Gururaj Column: ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು

ಅದ್ವೈತ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು

ಶಂಕರ ಬದುಕಿದ. ಅವನಿಗೆ ಎಂಟನೇ ವರ್ಷದಲ್ಲಿದ್ದ ಮೃತ್ಯುಯೋಗ ಭಗವಂತನ ಕೃಪೆಯಿಂದ ನಿವಾರಣೆಯಾಗಿತ್ತು. ನಂತರ ವೇದವ್ಯಾಸರನ್ನು ಕೇದಾರದಲ್ಲಿ ಭೇಟಿಯಾಗಿ ಬ್ರಹ್ಮಸೂತ್ರಗಳಿಗೆ ಅವರು ಬರೆದ ಭಾಷ್ಯವನ್ನು ತೋರಿಸಿ ಅವರೊಂದಿಗೆ ಚರ್ಚೆಯನ್ನು ನಡೆಸಿದಾಗ ಅವರು ೧೬ ವರುಷಗಳ ಆಯಸ್ಸನ್ನು ಕರುಣಿಸಿ ಜಗತ್ತಿನಲ್ಲಿ ಮಿಥ್ಯಾವಾದವನ್ನು ಖಂಡಿಸಿ ಅದ್ವೈತ ಸಿದ್ಧಾಂತವನ್ನು ಆಚಂದ್ರಾರ್ಕವಾಗಿಸುವಂತೆ ಆದೇಶಿಸಿದರು.

Roopa Gururaj Column: ಬಲಿಪಾಡ್ಯಮಿಯ ವೈಶಿಷ್ಟ್ಯ

Roopa Gururaj Column: ಬಲಿಪಾಡ್ಯಮಿಯ ವೈಶಿಷ್ಟ್ಯ

ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನ ರೂಪಿ ಪರಮಾತ್ಮನು ಯಾಗಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು.

Roopa Gururaj Column: ಧನತ್ರಯೋದಶಿಯ ಮಹತ್ವ

Roopa Gururaj Column: ಧನತ್ರಯೋದಶಿಯ ಮಹತ್ವ

ಒಳ್ಳೆಯ ಮನಸ್ಸಿನಿಂದ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾ, ಕಾಲಕಾಲಕ್ಕೆ ಬೇಕಾದ ದಾನ ಧರ್ಮಗಳನ್ನು ಮಾಡುತ್ತಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದಾಗ ಪ್ರತಿದಿನವೂ ಹಬ್ಬವೇ. ಯಾರ ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಕೊಂಡಿರುವುದಿಲ್ಲವೋ, ಹಣ ಪೋಲಾ ಗುವುದಿಲ್ಲವೋ, ಪ್ರಾಮಾಣಿಕತೆಯಿಂದ ಬದುಕುತ್ತಾರೋ ಅಲ್ಲಿ ಲಕ್ಷ್ಮಿ-ಸರಸ್ವತಿ ಇಬ್ಬರ ಕೃಪೆಯೂ ಇರುತ್ತದೆ.

Roopa Gururaj Column: ನರಕ ಚತುರ್ದಶಿಯ ಕಥೆ

Roopa Gururaj Column: ನರಕ ಚತುರ್ದಶಿಯ ಕಥೆ

ಸಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ. ಅವನು ಇಡೀ ಭೂಮಿ ಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ, ನೀರಿನ ದ್ವಂದ್ವ ಯುದ್ಧ ಮಾಡಿ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಿಸಿದ ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ.

Roopa Gururaj Column: ಚಿಂತೆಯ ಚೀಲ

Roopa Gururaj Column: ಚಿಂತೆಯ ಚೀಲ

ಕೆಲಸ ಮುಗಿದ ಹಾಗೆ ಇಡೀ ದಿನದ ಚಿಂತೆಗಳನ್ನು ಆ ಚೀಲದಲ್ಲಿ ತುಂಬಿಸುತ್ತೇನೆ. ಮನೆಗೆ ಬರುವಾಗ ಚಿಂತೆಯ ಭಾರದಿಂದ ತುಂಬಿರುವ ಚೀಲವನ್ನು ಮರಕ್ಕೆ ನೇತುಹಾಕಿ ಮನೆಯೊಳಗೆ ಸಂತೋಷ ದಿಂದ ಹೋಗುತ್ತೇನೆ. ಹೆಂಡತಿ-ಮಕ್ಕಳೊಂದಿಗೆ ನಗುನಗುತ್ತಾ ಕಳೆಯುತ್ತೇನೆ. ರಾತ್ರಿ ಮಲಗಿ ಬೆಳಗ್ಗೆ ಹೊರಡು ವಾಗ ಕೈಚೀಲ ತೆಗೆದುಕೊಂಡರೆ ಚಿಂತೆಗಳೆಲ್ಲ ಕರಗಿ ಚೀಲ ಹಗುರವಾಗಿರುತ್ತದೆ

Roopa Gururaj Column: ತಂದೆ-ತಾಯಿಯರ ಸೇವೆಗಿಂತ ಮಿಗಿಲಾದ ಪುಣ್ಯ ಯಾವುದೂ ಇಲ್ಲ

ತಂದೆ-ತಾಯಿಯರ ಸೇವೆಗಿಂತ ಮಿಗಿಲಾದ ಪುಣ್ಯ ಯಾವುದೂ ಇಲ್ಲ

ಭಕ್ತನ ಮಾತಿನಂತೆ ಕೃಷ್ಣನು ಪತ್ನಿ ರುಕ್ಮಿಣಿ ಸಮೇತ ‘ಪಂಢರಿನಾಥ ಪಾಂಡುರಂಗ’ ಎಂಬ ಹೆಸರಿ ನೊಂದಿಗೆ ಅಲ್ಲೇ ನೆಲೆಸಿದನು. ಇದೇ ಮುಂದೆ ’ಪಂಢರಾಪುರ’ ಎಂಬ ಪುಣ್ಯಕ್ಷೇತ್ರವಾಗಿ ಬೆಳೆಯಿತು. ತಮ್ಮ ಆಯಸ್ಸನ್ನು ಎಲ್ಲಾ ಮಕ್ಕಳ ಶ್ರೇಯಸ್ಸಿಗೆ, ಅಭಿವೃದ್ಧಿಗೆ ವ್ಯಯಿಸಿ ಕೇವಲ ಅವರ ಸುಖಕ್ಕಾಗಿ ಬದುಕುವ ತಂದೆ ತಾಯಿಗಳು, ವೃದ್ಧಾಪ್ಯದಲ್ಲಿದ್ದಾಗ ಮತ್ತೆ ಪುಟ್ಟ ಮಕ್ಕಳಂತಾಗುತ್ತಾರೆ.

Roopa Gururaj Column: ಸೀತೆಯ ಶಾಪಕ್ಕೆ ಗುರಿಯಾದ ನಾಲ್ವರು

Roopa Gururaj Column: ಸೀತೆಯ ಶಾಪಕ್ಕೆ ಗುರಿಯಾದ ನಾಲ್ವರು

ಕೆಲವೊಮ್ಮೆ ಸತ್ಯದ ಪರ ನಿಲ್ಲಲು ನಮಗೆ ಧೈರ್ಯವೇ ಸಾಲದಾಗುತ್ತದೆ.. ಇದರಿಂದ ಮತ್ತೇನೋ ಅವಘಡವಾಗುತ್ತದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತದೆ. ಆದರೆ ಒಬ್ಬರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಸತ್ಯ ನುಡಿಯುವುದರಲ್ಲಿ ಅವರನ್ನು ಕೆಟ್ಟವರಿಂದ ರಕ್ಷಿಸುವಲ್ಲಿ ನಾವು ಧೈರ್ಯ ತಂದು ಕೊಳ್ಳಬೇಕು, ಸತ್ಯವಂತರೊಡನೆ ಭಗವಂತನೂ ಇರುತ್ತಾನೆ.

Roopa Gururaj Column: ಮನಸ್ಸು ಒಮ್ಮೆ ನಿರ್ಧಾರ ಮಾಡಿದರೆ ದೇಹ ಬಾಗಲೇಬೇಕು

ಮನಸ್ಸು ಒಮ್ಮೆ ನಿರ್ಧಾರ ಮಾಡಿದರೆ ದೇಹ ಬಾಗಲೇಬೇಕು

ದಿನವೂ ನಮ್ಮ ದೇಹಕ್ಕೆ ವ್ಯಾಯಾಮ ಬೇಕು, ಅಂದುಕೊಂಡದ್ದನ್ನು ಸಾಧಿಸಲು ಪರಿಶ್ರಮ ಪಡಬೇಕು ಎಂದು ಗೊತ್ತಿದ್ದರೂ ನೆಪಗಳನ್ನು ಹೂಡುತ್ತಾ ಅದನ್ನು ಮುಂದೂಡುತ್ತಾ ಹೋಗುತ್ತೇವೆ. ಕಾರಣ ಮನಸ್ಸು ‘ಇದು ಆಗುವುದಿಲ್ಲ’ ಎಂದು ಆಗಲೇ ನಿರ್ಧರಿಸಿರುತ್ತದೆ. ಆದರೆ ಬೆಳಗ್ಗೆ ಎದ್ದ ಕೂಡಲೇ ‘ಇಂದು ಇಷ್ಟು ಕೆಲಸಗಳನ್ನು ನಾನು ಮಾಡಲೇಬೇಕು’ ಎಂದು ಗಟ್ಟಿಯಾಗಿ ನಿರ್ಧಾರ ಮಾಡಿ ಒಂದು ಕಡೆ ಬರೆದಿಡಿ.

Roopa Gururaj Column: ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

ಇಲ್ಲಿನ ಸೊಬಗಿಗೆ ಬೆರಗಾಗಿ ಈ ಕ್ಷೇತ್ರದ ನೆಲೆಸಿದರು ಎನ್ನುವ ಪುರಾಣವಿದೆ. ವೈಷ್ಣವಿ, ಕೌಮಾರಿ, ಮಾಹೇಶ್ವರಿ ದೇವಿ ಇವರು ನಗುವ ದೇವತೆಗಳಾದ ‘ಹಸನಾಂಬೆಯರು’ (ಹಸನ- ನಗು, ಅಂಬೆ- ತಾಯಿ). ಈ ಮೂವರೂ ದೇವಿಯರು ಹುತ್ತದ ರಚನೆಯಲ್ಲಿ ನೆಲೆಸಿದರು. ಈ ದೇವಿಯರು ನೆಲೆಸಿದ ಕ್ಷೇತ್ರ ‘ಹಾಸನಾಂಬೆ’ಯೇ ಆಡುಮಾತಿನಲ್ಲಿ ‘ಹಾಸನ’ ವಾಯಿತು.

Roopa Gururaj Column: ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು

ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು

ನಮ್ಮ ಆಂತರಿಕ ಕಲಹವು ನೂರು ಜನರಿಗೆ ನೂರು ರೀತಿಯ ಪ್ರೇರಣೆಯನ್ನು ನೀಡುತ್ತದೆ. ಇದನ್ನೇ ಹಿರಿಯರು ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ- ‘ಬಾವಿಯನ್ನು ತೋಡಬೇಕು ಎಂದರೆ, ನೂರು ಕಡೆ ಹಳ್ಳಗಳನ್ನು ಇಷ್ಟಿಷ್ಟೇ ಆಳಕ್ಕೆ ತೋಡಿ ಬಿಟ್ಟುಬಿಡುವುದಲ್ಲ, ಬದಲಿಗೆ ಒಂದೇ ಜಾಗದಲ್ಲಿ 100 ಅಡಿ ಯನ್ನು ತೋಡುವುದು’ ಅಂತ. ಆಗ ಶ್ರಮವೂ ಕಡಿಮೆಯಾಗುತ್ತದೆ ಮತ್ತು ಪ್ರಯೋಜನವೂ ದಕ್ಕುತ್ತದೆ.

Roopa Gururaj Column: ವಿಧಿಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ

Roopa Gururaj Column: ವಿಧಿಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ

ಗರುಡನಿಗೆ ಪುಟ್ಟ ಗುಬ್ಬಿಯ ಮೇಲೆ ಕನಿಕರ ಬಂದಿತು. ‘ಪಾಪ ಇವನು ನನ್ನ ಜಾತಿಯ ಪುಟ್ಟ ಪಕ್ಷಿ, ಯಾಕೆ ನಡುಗುತ್ತಿದ್ದಾನೆ? ಸಮಾಧಾನ ಮಾಡಬೇಕು’ ಎಂದುಕೊಂಡು ಅದರ ಬಳಿ ಹೋಗಿ, ‘ಗುಬ್ಬಿ ನೀನು ಯಾಕೆ ನಡುಗುತ್ತಿರುವೆ’ ಎಂದು ಕೇಳಿದ, ಗುಬ್ಬಿ ಹೇಳಿತು, ‘ಈಗ ತಾನೆ ಯಮರಾಜನನ್ನು ನೋಡಿದೆ, ಅವನ ಕಣ್ಣಿನಲ್ಲಿ ನನ್ನ ಚಿತ್ರ ಕಾಣುತ್ತಿತ್ತು. ನನ್ನ ಜೀವಿತಾವಧಿ ಮುಗಿದಿದೆ, ಯಮ ನನ್ನನ್ನು ಕರೆದೊಯ್ಯಲು ಬಂದಿದ್ದಾನೆ ಅಂತ ನನಗೆ ತುಂಬಾ ಭಯವಾಗಿದೆ’ ಎಂದಿತು.

Roopa Gururaj Column: ಸಂಬಂಧಗಳ ನಿಭಾವಣೆ: ನಾನು ಬೇಡ, ನಾವು ಇರಲಿ

ಸಂಬಂಧಗಳ ನಿಭಾವಣೆ: ನಾನು ಬೇಡ, ನಾವು ಇರಲಿ

ಬುದ್ಧ ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಿದ್ದಾಗ, ನಿಧಾನವಾಗಿ ಕರವಸ್ತ್ರಕ್ಕೆ ಗಂಟುಗಳನ್ನು ಕಟ್ಟಲು ಪ್ರಾರಂಭಿಸಿದನು. ಎಲ್ಲರೂ ಅವನನ್ನೇ ನಿರೀಕ್ಷೆಯಿಂದ ನೋಡಿದರು. ಆ ಕರವಸ್ತ್ರದಲ್ಲಿ ನಾಲ್ಕೈದು ಗಂಟುಗಳನ್ನು ಕಟ್ಟಿದ ನಂತರ ಅವನು ಅದನ್ನು ಅಲ್ಲಿ ನೆರೆದಿದ್ದ ಎಲ್ಲರಿಗೂ ತೋರಿಸಿ, ‘ಇದು ನಾನು ಮೊದಲು ತಂದಿದ್ದ ಕರವಸವೇ ಅಥವಾ ಏನಾದರೂ ವ್ಯತ್ಯಾಸವಿದೆಯೇ?’ ಎಂದು ಕೇಳಿದನು.

Roopa Gururaj Column: ವೃಂದಾದೇವಿ ವಿಷ್ಣುವಿನ ಪತ್ನಿಯಾದ ಕಥೆ

Roopa Gururaj Column: ವೃಂದಾದೇವಿ ವಿಷ್ಣುವಿನ ಪತ್ನಿಯಾದ ಕಥೆ

ಜಲಂಧರನಂತೆ ವೇಷ ಮರೆಸಿಕೊಂಡು ವೃಂದೆಯ ಬಳಿಗೆ ಹೋಗುತ್ತಾನೆ. ಆಕೆಯ ಪಾತಿವ್ರತ್ಯ ಭಂಗವಾಗುತ್ತದೆ. ಇತ್ತ ಜಲಂಧರ ಸೋಲುತ್ತಾನೆ. ಮಹಾದೇವನ ತ್ರಿಶೂಲಕ್ಕೆ ಬಲಿಯಾಗುತ್ತಾನೆ. ವೃಂದೆ ತನ್ನ ಬಳಿ ಬಂದವ ವಿಷ್ಣು ಎಂದರಿವಾಗುತ್ತಲೇ ಚಿತೆಗೆ ಒಡ್ಡಿಕೊಂಡು ಜೀವಂತ ಧುಮುಕುತ್ತಾಳೆ.

Roopa Gururaj Column: ಸದ್ವರ್ತನೆಯಿಂದ ಶಿವನನ್ನು ಮೆಚ್ಚಿಸಿದ ನಾಭಾಗ

Roopa Gururaj Column: ಸದ್ವರ್ತನೆಯಿಂದ ಶಿವನನ್ನು ಮೆಚ್ಚಿಸಿದ ನಾಭಾಗ

ಸತ್ಯದ ಹಾದಿಯಲ್ಲಿ ಪ್ರಾಮಾಣಿಕವಾಗಿ ಬದುಕುವವರ ಜತೆ ಭಗವಂತನ ಅನುಗ್ರಹ ಸದಾ ಇರುತ್ತದೆ. ನಮ್ಮ ಪ್ರಯತ್ನಗಳಿಗೆ ಭಗವಂತನ ಆಶೀರ್ವಾದ, ಸ್ನೇಹಿತರ, ಹಿತೈಷಿಗಳ ಸಹಕಾರ ಖಂಡಿತ ಸಿಕ್ಕೇ ಸಿಗುತ್ತದೆ. ತುಳಿಯುವವರಿಗೆ ಒಂದು ದಾರಿಯಾದರೆ, ಬೆಳೆಯುವವರಿಗೆ ನೂರು ದಾರಿ ಇದ್ದೇ ಇರುತ್ತದೆ. ಆದ್ದರಿಂದ ಇಂಥ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ, ನಾವು ನಂಬಿರುವ ವಿದ್ಯೆ-ಬುದ್ಧಿಯಿಂದ ಬದುಕು ಕಟ್ಟಿಕೊಳ್ಳಬೇಕು.

Roopa Gururaj Column: ಕೆಟ್ಟ ನೆನಪುಗಳ ದುರ್ಗಂಧ

Roopa Gururaj Column: ಕೆಟ್ಟ ನೆನಪುಗಳ ದುರ್ಗಂಧ

ಇಂಥ ದುರ್ಗಂಧವನ್ನು ನಿಮ್ಮಿಂದ ಸಹಿಸಲು ಸಾಧ್ಯವಿಲ್ಲ ಅಲ್ಲವೇ? ನಿಮಗೆ ಸುಗಂಧ ಬೇಕೆಂದರೆ, ನಿಮ್ಮ ಗೆಳೆಯರ ಜತೆ ನಡೆದ, ಸಣ್ಣಪುಟ್ಟ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಳ್ಳದೆ, ಅಂದಿನ ಘಟನೆ ಯನ್ನು ಅಲ್ಲಿಗೇ ಮರೆತು, ನಿಮ್ಮ ನಡುವೆ ನಡೆವ ಒಳ್ಳೆಯ ವಿಚಾರಗಳನ್ನು ಮೆಲಕು ಹಾಕಿ ಮುಂದೆ ಸಾಗಬೇಕು.

Roopa Gururaj Column: ಸಹಸ್ರ ಕವಚ ಇದ್ದರೂ ಅಮರನಾಗದ ಡಂಭೋತ್ಸವ

ಸಹಸ್ರ ಕವಚ ಇದ್ದರೂ ಅಮರನಾಗದ ಡಂಭೋತ್ಸವ

ರಾಕ್ಷಸನ ಹಿಂಸೆ ತಾಳಲಾರದೆ ಋಷಿಮುನಿಗಳೆಲ್ಲ ಹೋಗಿ ದೇವೇಂದ್ರನ ಸಹಾಯ ಕೇಳಿದರು. ಇಂದ್ರನು ಅವರೆಲ್ಲರನ್ನು ಕರೆದು ಕೊಂಡು ಮಹಾವಿಷ್ಣುವಿನ ಬಳಿ ಬಂದನು. ಆಗ ವಿಷ್ಣು, “ನನ್ನ ಅಂಶವನ್ನು ಪಡೆದ ನರ-ನಾರಾಯಣ ಎಂಬ ಅವಳಿ ಸಹೋದರರು ಭೂಮಿಯ ಮೇಲೆ ಜನಿಸುತ್ತಾರೆ. ಅವರಿಂದ ಸಹಸ್ರ ಕವಚ ರಾಕ್ಷಸನ ಸಂಹಾರವಾಗುತ್ತದೆ" ಎಂದನು.

Roopa Gururaj Column: ಮಹಾನವಮಿಯಂದು ಪೂಜೆಗೊಳ್ಳುವ ಬನ್ನಿ ಮರದ ಮಹತ್ವ

ಮಹಾನವಮಿಯಂದು ಪೂಜೆಗೊಳ್ಳುವ ಬನ್ನಿ ಮರದ ಮಹತ್ವ

ಬನ್ನಿಯನ್ನು ಬಂಗಾರ ಎಂದು ಕರೆಯಲು ತ್ರೇತಾಯುಗದ ಕಥೆಯೊಂದಿದೆ. ಕೌಸ್ತ ಹೆಸರಿನ ವಿದ್ಯಾರ್ಥಿ ಯು ವಿದ್ಯಾಭ್ಯಾಸದ ನಂತರ ಗುರುವಿಗೆ ಗುರುದಕ್ಷಿಣೆ ಕೊಡಲು ಇಚ್ಛಿಸುತ್ತಾನೆ, ಅದನ್ನು ಗುರುಗಳ ಜತೆಗೆ ಹಂಚಿಕೊಳ್ಳು ತ್ತಾನೆ. ಆಗ ಗುರುವು ಸಹಸ್ರ ಕೋಟಿ ಚಿನ್ನದ ನಾಣ್ಯಗಳನ್ನು ಕೇಳುತ್ತಾರೆ.

Roopa Gururaj Column: ನವರಾತ್ರಿ ಗೊಂಬೆ ಹಬ್ಬದ ವೈಭವ

Roopa Gururaj Column: ನವರಾತ್ರಿ ಗೊಂಬೆ ಹಬ್ಬದ ವೈಭವ

ಹಳೆ ಮೈಸೂರು ಪ್ರಾಂತ್ಯದಲ್ಲಿ ಗೊಂಬೆ ಬಾಗಿನ ಸಂಪ್ರದಾಯ ಚಾಲ್ತಿಯಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ಸಣ್ಣ ಮಕ್ಕಳೆ ಗುಂಪುಗೂಡಿ ಮನೆಮನೆಗಳಿಗೆ ತೆರಳಿ ‘ನಿಮ್ಮ ಮನೆಯಲ್ಲಿ ಗೊಂಬೆ ಇಟ್ಟಿದ್ದೀರಾ’ ಎಂದು ಕೇಳಿ ಒಳನುಗ್ಗುತ್ತಾರೆ. ಮನೆಯವರಿಂದ ಗೊಂಬೆ ಬಾಗಿನ ಪಡೆದು ಮರಳುತ್ತಾರೆ.

Roopa Gururaj Column: ಚಂದ್ರಘಂಟಾ ದೇವಿಯಾದ ಶಿವೆ

Roopa Gururaj Column: ಚಂದ್ರಘಂಟಾ ದೇವಿಯಾದ ಶಿವೆ

ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರಘಂಟೆಯಲ್ಲಿ ಹತ್ತು ತೋಳುಗಳು ಮೂಡುತ್ತದೆ. ಒಂಭತ್ತು ತೋಳುಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿ ಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ ಹಾಗೂ ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

Roopa Gururaj Column: ಕಠೋರ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ ಬ್ರಹ್ಮಚಾರಿಣಿ

ಕಠೋರ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ ಬ್ರಹ್ಮಚಾರಿಣಿ

ಶಿವನ ಮೇಲಿರುವ ನಿನ್ನ ಪ್ರೀತಿ ಪರಿಶುದ್ಧವಾದುದು, ಹೀಗಾಗಿಯೇ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ದ್ದೀಯ. ನಿನಗೆ ವರ ಕೊಡುವಷ್ಟು ನಾನು ದೊಡ್ಡವನಲ್ಲ ತಾಯಿ. ಹಾಗಾಗಿ ನಿನ್ನ ಅಣ್ಣನ ಸ್ಥಾನದಲ್ಲಿ ಇದ್ದುಕೊಂಡು ನಿನಗೆ ಆಶೀರ್ವಾದ ಮಾಡುತ್ತೇನೆ. ನೀನು ಶಿವನನ್ನೇ ಮತ್ತೊಮ್ಮೆ ಪತಿಯಾಗಿ ಪಡೆಯುವೆ" ಎಂದು ಆಶೀರ್ವದಿಸಿದನು. ಹೀಗೆ ಕಠೋರ ತಪಸ್ಸು ಮಾಡಿದ ಪಾರ್ವತಿಯು ‘ಬ್ರಹ್ಮಚಾರಿಣಿ’ ಎಂಬ ಹೆಸರನ್ನು ಪಡೆದಳು.

Roopa Gururaj Column: ಸತಿಗಾದ ಅವಮಾನ, ಮಾರಣಹೋಮವಾದ ದಕ್ಷಯಜ್ಞ

ಸತಿಗಾದ ಅವಮಾನ, ಮಾರಣಹೋಮವಾದ ದಕ್ಷಯಜ್ಞ

ಜಗಜ್ಜನನಿ ದುರ್ಗಾದೇವಿಯ ಮೊದಲನೇ ಸ್ವರೂಪವನ್ನು ಶೈಲಪುತ್ರಿ ಕರೆಯುತ್ತಾರೆ. ಎಂದು ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ ಕಾರಣ ಇವಳಿಗೆ ಶೈಲಪುತ್ರಿ ಎಂಬ ಹೆಸರಾಯಿತು. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈ ಯಲ್ಲಿ ಕಮಲ ಪುಷ್ಪ ಸುಶೋಭಿತವಾಗಿದೆ. ಇವಳೇ ನವದುರ್ಗೆಯರಲ್ಲಿ ಮೊದಲನೆಯವ ಳಾಗಿದ್ದಾಳೆ.

Roopa Gururaj Column: ಕುಮಾರವ್ಯಾಸ ಭಾರತವನ್ನು ರಚಿಸಲು ನೆರವಾದ ಅಶ್ವತ್ಥಾಮ

ಕುಮಾರವ್ಯಾಸ ಭಾರತವನ್ನು ರಚಿಸಲು ನೆರವಾದ ಅಶ್ವತ್ಥಾಮ

ವ್ಯಾಸಭಾರತವನ್ನು ದೀರ್ಘವಾಗಿ ಅಭ್ಯಾಸ ಮಾಡಿದ್ದ ನಾರಣಪ್ಪನಿಗೆ ಮಹಾಭಾರತವನ್ನು ಸರಳ ವಾದ ಕನ್ನಡದಲ್ಲಿ ಓದುಗರ ಮನಮುಟ್ಟುವಂತೆ ಹೇಳಬೇಕೆಂಬ ಆಸೆ ಬೇರೂರಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆ ಕೃಷ್ಣ ಕಥೆಯನ್ನು ಪ್ರಾರಂಭಿಸಲು ಕುಳಿತರೆ, ಮನದಾಳದಲ್ಲಿ ಹುದುಗಿದ್ದ ಭಕ್ತಿಸುಧೆ ಯನ್ನು ಬರವಣಿಗೆಯಲ್ಲಿ ಇಳಿಸಲಾಗುತ್ತಿರಲಿಲ್ಲ.

Roopa Gururaj Column: ಧರ್ಮನಿಷ್ಠರಾಗಿರುವುದು ಬಹಳ ಮುಖ್ಯ

Roopa Gururaj Column: ಧರ್ಮನಿಷ್ಠರಾಗಿರುವುದು ಬಹಳ ಮುಖ್ಯ

ಯುದ್ಧದಲ್ಲಿ ಏಕಾಂಗಿಯಾಗಿದ್ದರೂ ಧೃತಿಗೆಡದೆ, ಸಂಪೂರ್ಣ ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ಹೋರಾಡಿದ ತರುಣ ಅಭಿಮನ್ಯು ಇಂದಿಗೂ ಶೌರ್ಯಕ್ಕೆ ಮಾದರಿಯಾಗಿದ್ದಾನೆ. ಆದರೆ, ಇಷ್ಟೆಲ್ಲಾ ಹೋರಾಡಿದರೂ ಕೌರವರು ಯುದ್ಧದಲ್ಲಿ ಗೆಲ್ಲಲಿಲ್ಲ. ಮೋಸ, ವಂಚನೆ, ಕೆಟ್ಟತನದಿಂದ ಕ್ಷಣಿಕ ಗೆಲುವು ಸಿಗಬಹುದು, ಅಷ್ಟೇ. ಜೀವನದಲ್ಲಿ ಗೆಲ್ಲಲು ಪ್ರಾಮಾಣಿಕತೆ, ಶಿಸ್ತು, ಬದ್ಧತೆ, ಎಲ್ಲಕ್ಕಿಂತ ಮುಖ್ಯವಾಗಿ ಧರ್ಮನಿಷ್ಠರಾಗಿರುವುದು ಬಹಳ ಮುಖ್ಯ.

Loading...