ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ರೂಪಾ ಗುರುರಾಜ್

rgururaj628@gmail.com

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ಹಂಸ-ಡಿಭಂಕರ ಸಂಹಾರ ಮಾಡಿದ ಕೃಷ್ಣನ ಯುಕ್ತಿ

ಹಂಸ-ಡಿಭಂಕರ ಸಂಹಾರ ಮಾಡಿದ ಕೃಷ್ಣನ ಯುಕ್ತಿ

ಶಿವನ ವರವನ್ನು ಪಡೆದು ಅಜೇಯರಾಗಿದ್ದ ಹಂಸ ಮತ್ತು ಡಿಂಭಕರಂಥ ದುಷ್ಟರನ್ನು ಶ್ರೀಕೃಷ್ಣ ತನ್ನ ಅದ್ಭುತ ಲೀಲೆಯಿಂದ ಸಂಹರಿಸಿ, ದೂರ್ವಾಸರಂಥ ಋಷಿಮುನಿಗಳನ್ನು ಕಾಯುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದ. ಕೆಲವೊಮ್ಮೆ ಅಟ್ಟಹಾಸದಿಂದ ನಮ್ಮ ಮುಂದೆ ಕೆಟ್ಟತನದಲ್ಲಿ ಮೆರೆಯುವ ಅನೇಕರನ್ನು ನೋಡಿದಾಗ ‘ಇವರಿಗೆ ಭಗವಂತನ ಭಯ ಇಲ್ಲವೇ?’ ಎಂದು ಯೋಚಿಸುವಂತಾಗುತ್ತದೆ.

Roopa Gururaj Column: ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಂತ್ರವೆಂಬ ಮನದ ರಕ್ಷಾಕವಚ

ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಂತ್ರವೆಂಬ ಮನದ ರಕ್ಷಾಕವಚ

ಮಂತ್ರೋಚ್ಚಾರಣೆಯ ಬಳಿಕ ನಿನಗೊಂದು ರೀತಿಯ ಆಹ್ಲಾದತೆ ಮತ್ತು ಪರವಶತೆ ಅನುಭವಕ್ಕೆ ಬರುತ್ತವೆ. ಇದು ನಿನ್ನ ಮನಸ್ಸನ್ನು ನಿರಾಳವಾಗಿಸಿ, ಒಂದು ಅದ್ಭುತ ಶಮನಕಾರಿಯಂತೆ ಕೆಲಸ ಮಾಡುತ್ತದೆ. ನಿನ್ನ ಮನಸ್ಸು ಉದ್ವೇಗಗೊಂಡಿದ್ದಾಗ, ಮಂತ್ರಪಠಣವು ಚಿತ್ತವನ್ನು ಬೇರೆಡೆಗೆ ಹರಿಸಿ, ಸಮಸ್ಯೆಯನ್ನು ತಣ್ಣಗಿನ ಮನಸ್ಸಿನಿಂದ ಅವಲೋಕಿಸಿ ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ನೆರವಾಗುತ್ತದೆ

Roopa Gururaj Column: ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಧೀಮಂತ ಮಹಿಳೆ: ಡಾ.ಅನಂದಿಬಾಯಿ ಜೋಶಿ

ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಧೀಮಂತ ಮಹಿಳೆ

ಸಮರ್ಪಕ ಚಿಕಿತ್ಸೆಯಿಲ್ಲದೆ ಆ ಮಗು ಆನಂದಿಯವರ ಮಡಿಲಲ್ಲೇ ಪ್ರಾಣಬಿಟ್ಟಿತು. ಇದರ ಹಿಂದಿದ್ದ ಕಾರಣ ಗೊತ್ತೇ? ಅಂದು ಪುರುಷ ವೈದ್ಯರು ಮಹಿಳೆಯರನ್ನು ತಪಾಸಣೆ ಮಾಡು ವುದು ನಿಷಿದ್ಧವಾಗಿತ್ತು ಮತ್ತು ಭಾರತದಲ್ಲಿ ಮಹಿಳಾ ವೈದ್ಯರೇ ಇರಲಿಲ್ಲ. ಈ ನೋವು ಆನಂದಿ ಯವರನ್ನು ಬದಲಿಸಿತು. ಇನ್ನೊಬ್ಬ ತಾಯಿ ಇಂಥ ನೋವನ್ನು ಅನುಭವಿಸ ಬಾರದು ಎಂಬ ಛಲದೊಂದಿಗೆ ಅವರು ವೈದ್ಯೆಯಾಗಲು ನಿರ್ಧರಿಸಿದರು

Roopa Gururaj Column: ಹತ್ತು ಹೆಜ್ಜೆಗಳ ಬೆಲೆ ಅರಿತ ಪುಟ್ಟ ಹುಡುಗನ ಸಾಧನೆ

ಹತ್ತು ಹೆಜ್ಜೆಗಳ ಬೆಲೆ ಅರಿತ ಪುಟ್ಟ ಹುಡುಗನ ಸಾಧನೆ

2003ರಲ್ಲಿ ಕಾನೂನು ಹೋರಾಟ ನಡೆಸಿ ಜಿಮ್ಮಿಯನ್ನು ಕೆನಡಾಕ್ಕೆ ಕರೆ ತಂದು ತಮ್ಮ ಮನೆಯ ಮಗನನ್ನಾಗಿ ಮಾಡಿಕೊಂಡರು. ಅಂದು ಪೆನ್-ಪಾಲ್‌ಗಳಾಗಿದ್ದ ಇಬ್ಬರು ಇಂದು ಸಹೋದರ ರಾಗಿ ಬದುಕುತ್ತಿದ್ದಾರೆ. ಇಂದು ‘ರಯಾನ್ ವೆಲ್ ಫೌಂಡೇಷನ್’ 17 ದೇಶಗಳಲ್ಲಿ 1700ಕ್ಕೂ ಹೆಚ್ಚು ನೀರಿನ ಯೋಜನೆಗಳನ್ನು ಪೂರೈಸಿದೆ. 15 ಲಕ್ಷಕ್ಕೂ ಹೆಚ್ಚು ಜನರಿಗೆ ಇಂದು ಶುದ್ಧ ಕುಡಿಯುವ ನೀರು ಸಿಗುತ್ತಿದೆ.

Roopa Gururaj Column: ಅವಶೇಷಗಳ ನಡುವೆ ಅರಳಿದ ಸಹೋದರತ್ವ

Roopa Gururaj Column: ಅವಶೇಷಗಳ ನಡುವೆ ಅರಳಿದ ಸಹೋದರತ್ವ

ಅಂದು ಆ ವಲಯದಲ್ಲಿ ಬದುಕುಳಿದವರು ಕೇವಲ 18 ಜನರು. ಅಂದಿನ ರಾತ್ರಿ ಸ್ಟಾನ್ಲಿ ಫೋನ್ ಮಾಡಿದಾಗ ಇಬ್ಬರ ಕಣ್ಣಲ್ಲೂ ಆನಂದ ಬಾಷ್ಪವಿತ್ತು. 9/11ರ ದುರಂತದ ನಂತರ, ಬ್ರಿಯಾನ್ ಮತ್ತು ಸ್ಟಾನ್ಲಿ ಕೇವಲ ಸ್ನೇಹಿತರಾಗಿ ಉಳಿಯಲಿಲ್ಲ. ಅವರು ಜಗತ್ತಿನಾದ್ಯಂತ ಸಂಚರಿಸಿ ತಮ್ಮ ಬದುಕಿನ ಕಥೆಯನ್ನು ಹಂಚಿಕೊಂಡರು.

Roopa Gururaj Column: ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಸೂರ್ಯ ನಮಸ್ಕಾರ

ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಸೂರ್ಯ ನಮಸ್ಕಾರ

ದಂಡಾಸನ ಮತ್ತು ಸಾಷ್ಟಾಂಗ ನಮಸ್ಕಾರ ಮಾಡುವಾಗ, ಓಂ ಖಗಾಯ ನಮಃ ಮತ್ತು ಓಂ ಪೂಷ್ಣೇ ನಮಃ ಎಂದು ಜಪಿಸಿದರು. ಭೂತಾಯಿ ನಿನ್ನನ್ನು ತಾಯಿಯಂತೆ ಪೋಷಿಸುತ್ತಿದ್ದಾಳೆ. ನೀನು ಬಲಹೀನನಲ್ಲ, ಈ ಸೃಷ್ಟಿಯ ಶಕ್ತಿ ನಿನ್ನ ಬೆನ್ನಿಗಿದೆ, ಎಂಬ ಮಾತುಗಳು ರಾಜೀವನ ಕಣ್ಣಲ್ಲಿ ನೀರು ಹೆಪ್ಪುಗಟ್ಟಿತ್ತು. ಅದು ದುಃಖದ ಹನಿಗಳಲ್ಲ, ಕೃತಜ್ಞತೆಯ ಕಣ್ಣೀರಾಗಿತ್ತು.

Roopa Gururaj Column: ತ್ಯಾಗದ ಸುವರ್ಣ ಸಿರಿ: ಮಹಾರಾಣಿ ಕಾಮಸುಂದರಿ ದೇವಿ

ತ್ಯಾಗದ ಸುವರ್ಣ ಸಿರಿ: ಮಹಾರಾಣಿ ಕಾಮಸುಂದರಿ ದೇವಿ

1962ರ ಯುದ್ಧದ ಸಮಯದಲ್ಲಿ ದರ್ಭಾಂಗ ರಾಜಮನೆತನವು ನೀಡಿದ ದೇಣಿಗೆಯು ಭಾರತದ ಯಾವುದೇ ವ್ಯಕ್ತಿ ಅಥವಾ ಕುಟುಂಬ ನೀಡಿದ ಅತಿದೊಡ್ಡ ವೈಯಕ್ತಿಕ ದೇಣಿಗೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇಂದು ನಾವು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದೇವೆ ಎಂದರೆ, ಅದರ ಹಿಂದೆ ಕಾಮಸುಂದರಿ ದೇವಿಯವರಂಥ ಅಸಂಖ್ಯಾತ ತಾಯಂದಿರ ತ್ಯಾಗವಿದೆ.

Roopa Gururaj Column: ಕರ್ದಮ ಮತ್ತು ದೇವಹೂತಿಯರ ತ್ಯಾಗ ಮತ್ತು ಭಕ್ತಿಯ ಮಹಾನ್‌ ಪಯಣ

ಕರ್ದಮ ಮತ್ತು ದೇವಹೂತಿಯರ ತ್ಯಾಗ ಮತ್ತು ಭಕ್ತಿಯ ಮಹಾನ್‌ ಪಯಣ

ಸರಸ್ವತಿ ನದಿಯ ತೀರದಲ್ಲಿ ಕರ್ದಮ ಎಂಬ ಮಹಾನ್ ತಪಸ್ವಿ ಇದ್ದರು. ಬ್ರಹ್ಮನ ಮಾನಸ ಪುತ್ರರಾಗಿದ್ದರೂ, ಸಂಸಾರಕ್ಕಿಂತ ಆಧ್ಯಾತ್ಮಿಕ ಶಕ್ತಿಯ ಅವರಿಗೆ ಆಸಕ್ತಿ ಹೆಚ್ಚು. ಸೃಷ್ಟಿ ಕಾರ್ಯ ಕ್ಕಾಗಿ ದಂಪತಿಗಳ ಅಗತ್ಯವಿದ್ದ ಕಾರಣ, ಕರ್ದಮರು ಮಹಾವಿಷ್ಣುವನ್ನು ಕುರಿತು ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು.

Roopa Gururaj Column: ಮೃತ್ಯುವನ್ನೇ ಗೆದ್ದ ಮಾರ್ಕಂಡೇಯನ ಅಚಲ ಭಕ್ತಿ

ಮೃತ್ಯುವನ್ನೇ ಗೆದ್ದ ಮಾರ್ಕಂಡೇಯನ ಅಚಲ ಭಕ್ತಿ

ಬದುಕಿನಲ್ಲಿ ಎದುರಾಗುವ ಸಾವು, ರೋಗ ಅಥವಾ ಸಂಕಷ್ಟಗಳ ಭಯವನ್ನು ಇದು ದೂರ ಮಾಡುತ್ತದೆ. ಹೇಗೆ ಒಂದು ಸೌತೆ ಕಾಯಿಯು ಹಣ್ಣಾದ ನಂತರ ಬಳ್ಳಿಯಿಂದ ತಾನಾಗಿಯೇ ಸುಲಭವಾಗಿ ಬೇರ್ಪಡುತ್ತದೆಯೋ (ಉರ್ವಾರುಕಮಿವ ಬಂಧನಾನ್), ಹಾಗೆಯೇ ಈ ಮಂತ್ರವು ನಮ್ಮನ್ನು ಅಜ್ಞಾನ ಮತ್ತು ಸಂಸಾರದ ಬಂಧನದಿಂದ ನೋವಿಲ್ಲದೆ ಬಿಡುಗಡೆ ಮಾಡಿ ಜ್ಞಾನದತ್ತ ಕೊಂಡೊಯ್ಯುತ್ತದೆ.

Roopa Gururaj Column: ಭವಿಷ್ಯವಾಣಿಯನ್ನು ಸುಳ್ಳು ಮಾಡಿದ ಮಿಂಚಿನ ಆಟಗಾರ್ತಿ ವಿಲ್ಮಾ ರುಡಾಲ್ಫ್

ಭವಿಷ್ಯವಾಣಿ ಸುಳ್ಳು ಮಾಡಿದ ಮಿಂಚಿನ ಆಟಗಾರ್ತಿ ವಿಲ್ಮಾ ರುಡಾಲ್ಫ್

1960ರ ಒಲಿಂಪಿಕ್ಸ್ ವಿಲ್ಮಾಳ ಜೀವನದ ಅತ್ಯುನ್ನತ ಶಿಖರ. ಕೇವಲ 11 ಸೆಕೆಂಡುಗಳಲ್ಲಿ 100 ಮೀಟರ್ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದಳು. 200 ಮೀಟರ್ ಓಟದಲ್ಲಿಯೂ ಚಿನ್ನ 4*100 ಮೀಟರ್ ರಿಲೇನಲ್ಲಿ ಅಂತಿಮ ಓಟಗಾರ್ತಿಯಾಗಿ ಓಡಿದ ವಿಲ್ಮಾ, ಅಮೆರಿಕ ತಂಡಕ್ಕೆ ಜಯ ತಂದುಕೊಟ್ಟಳು.

Roopa Gururaj Column: ಇಂದಿರಾ ನೂಯಿ ಸೀರೆಯುಟ್ಟ ಸಿಂಹಿಣಿಯ ಅಪ್ರತಿಮ ಯಾನ

ಇಂದಿರಾ ನೂಯಿ ಸೀರೆಯುಟ್ಟ ಸಿಂಹಿಣಿಯ ಅಪ್ರತಿಮ ಯಾನ

ಒಮ್ಮೆ ಪ್ರಮುಖ ಇಂಟರ್‌ವ್ಯೂ ಒಂದಕ್ಕೆ ಅವರು ಕಷ್ಟಪಟ್ಟು ಉಳಿಸಿದ 50 ಡಾಲರ್‌ನಲ್ಲಿ ಅಗ್ಗದ ಸೂಟ್ ಖರೀದಿಸಿ ಧರಿಸಿದ್ದರು. ಆದರೆ ಅದು ಅವರಿಗೆ ಕಿಂಚಿತ್ತೂ ಒಪ್ಪುತ್ತಿರಲಿಲ್ಲ, ಇತರ ಅಭ್ಯರ್ಥಿಗಳ ಮುಂದೆ ಅವರು ನಗೆಪಾಟಲಿಗೀಡಾದರು. ಆ ದಿನ ಕಣ್ಣೀರು ಹಾಕುತ್ತಾ ಮನೆಗೆ ಬಂದ ಇಂದಿರಾ ಅವರಿಗೆ ಅವರ ಮೆಂಟರ್ ನೀನು ನೀನಾಗಿಯೇ ಇರು ಎಂದು ನೀಡಿದ ಸಲಹೆ ಅವರ ಜೀವನದ ಮಂತ್ರವಾಯಿತು.

‌Roopa Gururaj Column: ಅಂಡಮಾನ್‌ ಜರವಾ ಬುಡಕಟ್ಟಿನವರ ಅಶ್ವಿನಿ ದೇವತೆ ಡಾ.ರತನ್‌ ಚಂದ್ರಕರ್

ಅಂಡಮಾನ್‌ ಜರವಾ ಬುಡಕಟ್ಟಿನವರ ಅಶ್ವಿನಿ ದೇವತೆ ಡಾ.ರತನ್‌ ಚಂದ್ರಕರ್

ಸುಮಾರು 150 ವರ್ಷಗಳಿಗೂ ಹೆಚ್ಚು ಕಾಲ ಹೊರಗಿನ ಜಗತ್ತನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ, ಆಧುನಿಕತೆಯ ನೆರಳು ಕಂಡರೆ ತಮ್ಮ ಬಾಣಗಳಿಂದ ದಾಳಿ ಮಾಡುತ್ತಿದ್ದ ‘ಜರವಾ’ (Jarawas) ಬುಡಕಟ್ಟು ಜನಾಂಗ ದವರೊಡನೆ ಸಂಪರ್ಕ ಸಾಧಿಸಲು ಸರ್ಕಾರ ಮುಂದಾಗಿತ್ತು. ಆದರೆ, ಅದು ಸುಲಭದ ಮಾತಾಗಿರಲಿಲ್ಲ. ಈ ಕೆಲಸವನ್ನು ಸಾಧಿಸಲು ದೈತ್ಯ ಮನಸ್ಸಿನ ಒಬ್ಬ ಸಣ್ಣ ಆಕಾರದ ಮನುಷ್ಯ ಅಂಡಮಾನ್‌ನ ತೀರಕ್ಕೆ ಬಂದಿಳಿದರು. ಅವರೇ ಡಾ.ರತನ್ ಚಂದ್ರಕರ್.

Roopa Gururaj Column: ಸ್ನೋಮ್ಯಾನ್:‌ ಯಾರೂ ಬೇಡವೆಂದ ಕುದುರೆಯ ವಿಜಯಗಾಥೆ

ಸ್ನೋಮ್ಯಾನ್:‌ ಯಾರೂ ಬೇಡವೆಂದ ಕುದುರೆಯ ವಿಜಯಗಾಥೆ

1956ರ ಫೆಬ್ರವರಿಯ ಒಂದು ಚಳಿಯ ಬೆಳಗ್ಗೆ, ಹ್ಯಾರಿ ಡಿಲೇಯರ್ ಎನ್ನುವ ವ್ಯಾಪಾರಿ ಪೆನ್ಸಿಲ್ವೇನಿಯಾದ ಕುದುರೆ ಹರಾಜಿಗೆ ತಡವಾಗಿ ತಲುಪಿದರು. ರಸ್ತೆಯಲ್ಲಿ ಕಾರಿನ ಟೈರ್ ಪಂಕ್ಚರ್ ಆಗಿದ್ದರಿಂದ ಅವರು ಬರುವಷ್ಟರಲ್ಲಿ ಹರಾಜು ಮುಗಿದು ಹೋಗಿತ್ತು. ಒಳ್ಳೆಯ ತಳಿಯ ಕುದುರೆಗಳೆಲ್ಲಾ ಅದಾಗಲೇ ಮಾರಾಟವಾಗಿ ಲಾರಿಗಳಲ್ಲಿ ಹೊರಟಿದ್ದವು.

Roopa Gururaj Column: ಕರ್ನಾಟಕದ ಮೊದಲ ಮಹಿಳಾ ಎಂಜಿನಿಯರ್‌ ರಾಜೇಶ್ವರಿ ಚಟರ್ಜಿ

ಕರ್ನಾಟಕದ ಮೊದಲ ಮಹಿಳಾ ಎಂಜಿನಿಯರ್‌ ರಾಜೇಶ್ವರಿ ಚಟರ್ಜಿ

ಆಕೆಯ ಕಣ್ಣುಗಳಲ್ಲಿ ನಕ್ಷತ್ರಗಳಿಗಿಂತಲೂ ಮಿಗಿಲಾದ ಹೊಳಪಿತ್ತು, ಕೈಗಳಲ್ಲಿ ಯಾವಾಗಲೂ ಪುಸ್ತಕಗಳಿರುತ್ತಿದ್ದವು. ಆಕೆಯೇ ರಾಜೇಶ್ವರಿ. ಆ ಕಾಲದಲ್ಲಿ ಹೆಣ್ಣುಮಕ್ಕಳು ಅಡುಗೆಮನೆಗೆ ಸೀಮಿತವಾಗಿದ್ದಾಗ, ವಿಜ್ಞಾನದ ಪ್ರಯೋಗಾಲ ಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟ ಅಪರೂಪದ ಜ್ಞಾನದ ಕಣಜ ರಾಜೇಶ್ವರಿ.

Roopa Gururaj Column: ಟಾಟಾ ಸಾಮ್ರಾಜ್ಯದ ನೈತಿಕ ಅಡಿಪಾಯ ಸೂನಿ ಟಾಟಾ

ಟಾಟಾ ಸಾಮ್ರಾಜ್ಯದ ನೈತಿಕ ಅಡಿಪಾಯ ಸೂನಿ ಟಾಟಾ

ಕೌಟುಂಬಿಕ ಏರಿಳಿತಗಳು, ವೈಯಕ್ತಿಕ ನೋವುಗಳು ಎದುರಾದಾಗಲೂ ಸೂನಿ ಅವರು ಕುಗ್ಗಲಿಲ್ಲ. ಅವರ ವ್ಯಕ್ತಿತ್ವದಲ್ಲಿ ಒಂದು ‘ಘನತೆ’ ಇತ್ತು. ಸಾರ್ವಜನಿಕವಾಗಿ ಅವರು ಎಂದೂ ಪ್ರಚಾರ ಬಯಸ ಲಿಲ್ಲ. ಕ್ಯಾಮೆರಾಗಳ ಫ್ಲ್ಯಾಶ್ʼಲೈಟ್‌ಗಳಿಗಿಂತ ಮನೆಯ ಒಳಗಿನ ದೀಪದ ಬೆಳಕಿನಲ್ಲಿ ಮಕ್ಕಳ ಭವಿಷ್ಯ ರೂಪಿಸುವುದೇ ಅವರಿಗೆ ಮುಖ್ಯವಾಗಿತ್ತು.

R‌oopa Gururaj Column: ಸದ್ದಿಲ್ಲದೆ ನೂರಾರು ಜೀವಗಳನ್ನು ಉಳಿಸಿದ ನೀರಜಾ ಭಾನೋಟ್

ಸದ್ದಿಲ್ಲದೆ ನೂರಾರು ಜೀವಗಳನ್ನು ಉಳಿಸಿದ ನೀರಜಾ ಭಾನೋಟ್

ಗುಂಡುಗಳು ಹಾರುತ್ತಿದ್ದರೂ ನೀರಜಾ ತಲೆ ಕೆಡಿಸಿಕೊಳ್ಳಲಿಲ್ಲ. ಮೂವರು ಮಕ್ಕಳಿಗೆ ಗುಂಡು ತಗಲದಂತೆ ಅವರು ತಮ್ಮ ದೇಹವನ್ನೇ ಗುರಾಣಿಯಾಗಿ ಅಡ್ಡ ಹಿಡಿದರು. ಆ ವೇಳೆ ಉಗ್ರರ ಗುಂಡುಗಳಿಗೆ ನೀರಜಾ ಬಲಿಯಾದರು. ಆ ದಾಳಿಯಲ್ಲಿ ನೀರಜಾ ಸೇರಿದಂತೆ 20 ಜನರು ಪ್ರಾಣ ಕಳೆದುಕೊಂಡರು, ಆದರೆ ಉಳಿದ ನೂರಾರು ಪ್ರಯಾಣಿಕರು ನೀರಜಾ ಅವರ ಅಪ್ರತಿಮ ಧೈರ್ಯದಿಂದಾಗಿ ಬದುಕುಳಿದರು.

Roopa Gururaj Column: ಅಂತರ್ಶಕ್ತಿ ಒಂದೇ ಬದುಕಲು ಪ್ರೇರಣೆ

Roopa Gururaj Column: ಅಂತರ್ಶಕ್ತಿ ಒಂದೇ ಬದುಕಲು ಪ್ರೇರಣೆ

ಹಡಗು ಮುಳುಗಲಾರಂಭಿಸಿದಾಗ ಆಕೆ ದಿಗಿಲುಗೊಂಡು ಕೂರಲಿಲ್ಲ. ಭಯದಿಂದ ಅಧೀರಳಾಗುವ ಬದಲು, ಇತರರಿಗೆ ಬೆಚ್ಚಗಿನ ಬಟ್ಟೆಗಳನ್ನು ತೊಡಿಸಿ, ಮಹಿಳೆಯರನ್ನು ದೋಣಿಗಳತ್ತ ಸಾಗಿಸಿ, ಭಾಷೆ ತಿಳಿಯದವರಿಗೆ ಹಿರಿಯರ ಆದೇಶಗಳನ್ನು ಅನುವಾ ದಿಸುತ್ತಾ ಸಂರಕ್ಷಕಿಯಾಗಿ ನಿಂತಳು. ಕೊನೆಗೆ ಆಕೆಯನ್ನು ಆರನೇ ನಂಬರಿನ ಲೈಫ್‌ ಬೋಟ್‌ಗೆ ಹತ್ತಿಸಲಾಯಿತು.

Roopa Gururaj Column: ಸೋಲುಗಳನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡ ಅಬ್ರಹಾಂ ಲಿಂಕನ್

ಸೋಲುಗಳನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡ ಅಬ್ರಹಾಂ ಲಿಂಕನ್

ಲಿಂಕನ್ ಹೇಳುತ್ತಿದ್ದರು- “ನನ್ನ ಪಾದಗಳು ಜಾರಿದಾಗ ನಾನು ಬಿದ್ದೆ ಎಂದು ಭಾವಿಸುವುದಿಲ್ಲ, ಇದು ಮುಂದೆ ಹೋಗಲು ಸಿಕ್ಕ ಮತ್ತೊಂದು ಎಚ್ಚರಿಕೆ ಎಂದು ನಂಬುತ್ತೇನೆ". ಇದೇ ಛಲ ಅವರನ್ನು 1860ರಲ್ಲಿ ಅಮೆರಿಕದ 16ನೇ ಅಧ್ಯಕ್ಷರನ್ನಾಗಿ ಮಾಡಿತು. ಅಧ್ಯಕ್ಷರಾದಾಗ ಅಮೆರಿಕವು ಅಂತರ್ಯುದ್ಧದಿಂದ ಜರ್ಜರಿತವಾಗಿತ್ತು. ದೇಶ ಇಬ್ಭಾಗವಾಗುವ ಭೀತಿಯಲ್ಲಿದ್ದಾಗ, ಒಡೆದ ಮನೆ ಎಂದಿಗೂ ನೆಲೆಯಾಗಿ ನಿಲ್ಲಲಾರದು ಎಂದು ಸಾರಿದ ಲಿಂಕನ್, ಅತ್ಯಂತ ಸಂಯಮದಿಂದ ದೇಶವನ್ನು ಒಂದುಗೂಡಿಸಿದರು.

Roopa Gururaj Column: ಅಚಲ ಪ್ರೇಮದ ನಳ-ದಮಯಂತಿಯರ ಕಥೆ

Roopa Gururaj Column: ಅಚಲ ಪ್ರೇಮದ ನಳ-ದಮಯಂತಿಯರ ಕಥೆ

ಮಹಾಭಾರತದ ವನಪರ್ವದಲ್ಲಿ ಬರುವ ‘ನಳ-ದಮಯಂತಿ’ಯರ ಕಥೆಯು ಮನುಷ್ಯನ ಜೀವನ ದಲ್ಲಿ ಬರುವ ಏರಿಳಿತಗಳು, ಧರ್ಮದ ಹಾದಿ ಮತ್ತು ಅಚಲವಾದ ಪ್ರೇಮಕ್ಕೆ ಸಾಕ್ಷಿಯಾಗಿದೆ. ಬೃಹದಶ್ವರ ಮುನಿಗಳು ಧರ್ಮರಾಯನಿಗೆ ಧೈರ್ಯ ತುಂಬಲು ಈ ಕಥೆಯನ್ನು ವಿವರಿಸಿದ್ದರಂತೆ. ನಮಗೂ ಸಹ ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಸವಾಲುಗಳು ಎದುರಾಗುತ್ತವೆ.

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ವಾಪಸ್ ಬರುವಾಗ ಹುಡುಗ ಗುರುಗಳನ್ನು ಕೇಳಿದ, “ನಾನು ಒಂದೇ ಒಂದು ಪಟ್ಟಿನಿಂದ ಹೇಗೆ ಗೆದ್ದೆ?" ಗುರುಗಳು ಹೇಳಿದರು- “ಮಗು, ನೀನು ಕಲಿತ ಪಟ್ಟು ಜೂಡೋದ ಅತ್ಯಂತ ಕಷ್ಟಕರವಾದದ್ದು. ಅದರಿಂದ ಪಾರಾಗಲು ಎದುರಾಳಿಗೆ ಇರುವ ಏಕೈಕ ದಾರಿ ಎಂದರೆ, ನಿನ್ನ ಬಲಗೈಯನ್ನು ಹಿಡಿದು ಎಳೆಯುವುದು. ಆದರೆ ನಿನಗೆ ಆ ಕೈಯೇ ಇಲ್ಲವಲ್ಲ!". ಆತನ ದೊಡ್ಡ ದೌರ್ಬಲ್ಯವೇ ಅವನ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿ ಬದಲಾಗಿತ್ತು.

Roopa Gururaj Column: ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಶಾಲೆಯ ಚಾವಣಿಯ ಒಂದು ಭಾಗ ಕುಸಿದು ಬಿದ್ದಾಗ, ಹಿಮದ ಹನಿಗಳು ಚೂಪಾದ ಗಾಜಿನ ಚೂರು ಗಳಂತೆ ಮಕ್ಕಳ ಮೈಗೆ ಚುಚ್ಚತೊಡಗಿದವು. ಮಕ್ಕಳು ಗಾಬರಿಯಿಂದ ಕಿರುಚುತ್ತಾ ಹೊರಗೆ ಓಡಲು ಯತ್ನಿಸಿದರು. ಆದರೆ, ಅವರ ಇನ್ನೂ ಚಿಕ್ಕವಯಸಿನ ಶಿಕ್ಷಕಿ ಮಿನಿಗೆ ತಿಳಿದಿತ್ತು- ಈ ಮಾರುತದಲ್ಲಿ ಹೆಜ್ಜೆ ಇಟ್ಟರೆ ಸಾವು ಖಚಿತ ಎಂದು. ಮಿನಿ ಫ್ರೀಮನ್ ಕೇವಲ 19 ವರ್ಷದ ಹುಡುಗಿಯಾಗಿದ್ದರೂ, ಆ ಕ್ಷಣದಲ್ಲಿ ಅಪ್ರತಿಮ ನಾಯಕಿಯಾದಳು.

Roopa Gururaj Column: ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಒಂದು ಅಣೆಕಟ್ಟು ಕಟ್ಟಲಿಲ್ಲ; ಅವರು ಲಕ್ಷಾಂತರ ಜನರ ಬದುಕಿಗೆ ಭರವಸೆಯ ಅಡಿಪಾಯ ಹಾಕಿದರು. ಅವರ ಆ ತ್ಯಾಗವಿಲ್ಲದಿದ್ದರೆ ಇಂದು ದಕ್ಷಿಣ ಕರ್ನಾಟಕದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅದಕ್ಕಾಗಿಯೇ ಇಂದಿಗೂ ರೈತರು ಮೊದಲ ಬೆಳೆಯನ್ನು ಕಾವೇರಿಗೆ ಅರ್ಪಿಸುವಾಗ ಆ ರಾಜರ್ಷಿಯನ್ನು ನೆನೆಯುತ್ತಾರೆ.

Roopa Gururaj Column: ಕೃಷ್ಣ-ಸುಧಾಮರ ಅಪೂರ್ವ ಮೈತ್ರಿ

Roopa Gururaj Column: ಕೃಷ್ಣ-ಸುಧಾಮರ ಅಪೂರ್ವ ಮೈತ್ರಿ

ಎಂದಿಗೆ ನಾವು ಯಾವುದೇ ಸ್ನೇಹ ಪ್ರೀತಿಯಲ್ಲಿ ಅಪೇಕ್ಷೆಯನ್ನು ಇರಿಸಿಕೊಳ್ಳದೆ ಕೊಡಲು ಸಾಧ್ಯ ವಾಗುತ್ತದೋ ಅಂದಿಗೆ ಮಾತ್ರ ಅದು ಸಾರ್ಥಕ. ನಮ್ಮ ಇಂದಿನ ಯಾಂತ್ರಿಕ ಬದುಕಿನಲ್ಲಿ, ಲಾಭ-ನಷ್ಟಗಳನ್ನು ಲೆಕ್ಕ ಹಾಕುವ ಸಂಬಂಧಗಳ ನಡುವೆ ನಾವೂ ಕೃಷ್ಣ -ಸುಧಾಮರ ಪವಿತ್ರ ಸ್ನೇಹ ದಂತಹ ಶುದ್ಧ ಭಾವನೆಯನ್ನು ಉಳಿಸಿಕೊಂಡರೆ ನಮ್ಮೊಳಗಿನ ಕೃಷ್ಣ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.

Roopa Gururaj Column: ಇರುವೆಗಳಿಂದ ಮದ್ದು ಮಾಡಿಸಿಕೊಳ್ಳುವ ಕಾಗೆ

ಇರುವೆಗಳಿಂದ ಮದ್ದು ಮಾಡಿಸಿಕೊಳ್ಳುವ ಕಾಗೆ

ಇರುವೆಗಳು ರಕ್ಷಣೆಗಾಗಿ ತಮ್ಮ ದೇಹದಿಂದ ‘ಫಾರ್ಮಿಕ್ ಆಸಿಡ್’ ಎಂಬ ರಾಸಾಯನಿಕ ವನ್ನು ಹೊರ ಹಾಕುತ್ತವೆ. ಈ ಆಮ್ಲವು ಕಾಗೆಯ ಪಾಲಿಗೆ ಅದ್ಭು ಸಂಹಾರಕ. ರೆಕ್ಕೆಗಳ ನಡುವೆ ಅಡಗಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕ್ರಿಮಿಗಳನ್ನು ಈ ಆಮ್ಲವು ನಾಶಪಡಿಸುತ್ತದೆ. ಕಾಗೆ ಎಷ್ಟು ಜಾಣ ಎಂದರೆ, ಕೆಲವೊಮ್ಮೆ ತನ್ನ ಕೊಕ್ಕಿನಿಂದ ಇರುವೆಗಳನ್ನು ಹಿಡಿದು, ರೆಕ್ಕೆಗಳ ಕೆಳಗೆ ಎಲ್ಲಿ ಹೆಚ್ಚು ತುರಿಕೆ ಇದೆಯೋ ಅಲ್ಲಿ ಸಾವಕಾಶವಾಗಿ ಉಜ್ಜಿಕೊಳ್ಳುತ್ತದೆ.

Loading...