ನವದೆಹಲಿ, ಜೂ. 8: ಕೇಂದ್ರ ಸರ್ಕಾರವು 14.2 ಕೆ.ಜಿ. ಎಲ್ಪಿಜಿ (LPG or cooking gas) ಸಿಲಿಂಡರ್ ದರವನ್ನು 29 ರುಪಾಯಿ ಹೆಚ್ಚಿಸಿ 942 ರುಪಾಯಿಗೆ ಏರಿಸಿರುವುದನ್ನು ಸಮರ್ಥಿಸಿಕೊಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇನ್ನೂ ಪ್ರತಿ ಸಿಲಿಂಡರ್ ಮರುಪೂರಣದ ಮೇಲೆ 700 ರುಪಾಯಿ ನಷ್ಟ ಅನುಭವಿಸುತ್ತಿವೆ ಎಂದು ತಿಳಿಸಿದೆ. ಪಾಕಿಸ್ತಾನ (Pakisthan) ಮತ್ತು ಬಾಂಗ್ಲಾದೇಶಗಳಿಗಿಂತ (Bangladesh) ಭಾರತದಲ್ಲಿ ಅಡುಗೆ ಅನಿಲದ ಬೆಲೆ ಇಂದಿಗೂ ಕಡಿಮೆಯಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿದೆ.
ಫೆಬ್ರವರಿ 28ರಂದು ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭುಗಿಲೆದ್ದ ನಂತರ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಜೂನ್ 6) ತಡರಾತ್ರಿ ದೇಶಾದ್ಯಂತ ಎರಡನೇ ಬಾರಿಗೆ ದೇಶೀಯ ಎಲ್ಪಿಜಿ ಬೆಲೆಗಳನ್ನು ಹೆಚ್ಚಿಸಿವೆ. ಇದು ಜಾಗತಿಕ ಪೂರೈಕೆಯಲ್ಲಿ ಪ್ರಮುಖ ಅಡಚಣೆಗಳಿಗೆ ಕಾರಣವಾಯಿತು. ಮಾರ್ಚ್ 7ರಂದು 14.2 ಕೆಜಿ ಸಿಲಿಂಡರ್ಗೆ 60 ರುಪಾಯಿಗೆ ಹೆಚ್ಚಳ ಸೇರಿ ಅಡುಗೆ ಅನಿಲ ಬೆಲೆಗಳಲ್ಲಿನ ಒಟ್ಟು ಹೆಚ್ಚಳವು 89 ರುಪಾಯಿಗೆ ತಲುಪಿದೆ.
ಮಾರ್ಚ್ 7ರಂದು ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯ ಮನೆಗಳಿಗೆ ಸರಬರಾಜು ಮಾಡುವ 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 853 ರುಪಾಯಿಂದ 913 ರುಪಾಯಿಗೆ ಮತ್ತು ಜೂನ್ 7ರಂದು 942 ರುಪಾಯಿಗೆ ಹೆಚ್ಚಿಸಿದವು. ಇತ್ತೀಚಿನ ಹೆಚ್ಚಳವು ಅಡುಗೆ ಅನಿಲದ ಬೆಲೆಯನ್ನು 2023ರ ಆಗಸ್ಟ್ 30ರ ನಂತರದ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ. ಆದರೆ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸುಮಾರು 100 ಮಿಲಿಯನ್ ಬಡ ಕುಟುಂಬಗಳಿಗೆ ವರ್ಷಕ್ಕೆ ಒಂಬತ್ತು ಮರುಪೂರಣಗಳಿಗೆ 14.2 ಕೆಜಿ ಸಿಲಿಂಡರ್ಗೆ 300 ರುಪಾಯಿ ಸಬ್ಸಿಡಿ ನೀಡುತ್ತದೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆ; ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ ಬದಲಾವಣೆ ಇಲ್ಲ
ಬೆಲೆಯನ್ನು ನಿಯಂತ್ರಿಸುವ ಕಾರ್ಯವನ್ನು ಸರ್ಕಾರ ಮುಂದುವರಿಸುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ವರ್ಷಕ್ಕೆ ಮೊದಲ ನಾಲ್ಕು ಸಿಲಿಂಡರ್ ರಿಫಿಲ್ಗಳ ಮೇಲೆ ಪ್ರತಿ ಸಿಲಿಂಡರ್ಗೆ 300 ರುಪಾಯಿ ಸಬ್ಸಿಡಿ ಪಡೆಯಲಿದ್ದಾರೆ. ಇದು ಸಾಮಾನ್ಯ ಉಜ್ವಲ ಕುಟುಂಬದ ವಾರ್ಷಿಕ ಸರಾಸರಿ ಬಳಕೆಗೆ (ಸುಮಾರು ನಾಲ್ಕು ಮರುಪೂರಣಗಳು) ಸಮಾನ. ಹೀಗಾಗಿ ಅವರು ಆ ನಾಲ್ಕು ಮರುಪೂರಣಗಳಿಗೆ 642 ರುಪಾಯಿ ಮಾತ್ರ ಪಾವತಿಸುತ್ತಾರೆ. ಈ ನೆರವು ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯಲಿದೆ ಎಂದು ಸಚಿವಾಲಯ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಬಡ ಕುಟುಂಬಗಳಿಗೆ ಲಭ್ಯವಿರುವ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು ಸರ್ಕಾರ ಅಧಿಕೃತವಾಗಿ ಒಂಬತ್ತರಿಂದ ನಾಲ್ಕಕ್ಕೆ ಇಳಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ ಹಣಕಾಸು ವರ್ಷದಲ್ಲಿ ಬಡ ಕುಟುಂಬಗಳಿಗೆ ವಾರ್ಷಿಕವಾಗಿ ಲಭ್ಯವಿರುವ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಸರ್ಕಾರ ಅಧಿಕೃತವಾಗಿ ಕಡಿತಗೊಳಿಸಿದೆಯಾ ಎಂಬುದು ಗೊತ್ತಾಗಿಲ್ಲ. ಈ ಕುರಿತು ಪೆಟ್ರೋಲಿಯಂ ಸಚಿವಾಲಯದ ವಕ್ತಾರರಿಂದ ಸ್ಪಷ್ಟೀಕರಣ ಇನ್ನೂ ನಿರೀಕ್ಷಿಸಲಾಗಿದೆ.