ಕೋಲ್ಕಾತಾದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ; ಕಾನೂನು ಕಾಲೇಜಿನಲ್ಲಿ ನಡೆಯಿತು ಹೀನ ಕೃತ್ಯ; ಆ ಕರಾಳ ಬುಧವಾರ ರಾತ್ರಿ ನಡೆದಿದ್ದೇನು?
Kolkata Law College Horror: ದಕ್ಷಿಣ ಕೋಲ್ಕತಾದ ಕಾಲೇಜೊಂದರ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮಾಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಕಾನೂನು ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರನ್ನು ಬಂಧಿಸಲಾಗಿದೆ. ಘಟನೆಯನ್ನು ಸಂತ್ರಸ್ತೆ ಪೊಲೀಸರ ಮುಂದೆ ಇಂಚು ಇಂಚಾಗಿ ಬಿಚ್ಚಿಟ್ಟಿದ್ದಾರೆ.


ಕೋಲ್ಕತಾ: ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ ಪಶ್ಚಿಮ ಬಂಗಾಳದ ಕೋಲ್ಕತಾ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ಪದವಿಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಘಟನೆ ಮಾಸುವ ಮುನ್ನವೇ ಅದೇ ಮಾದರಿಯ ಹೀನ ಕೃತ್ಯ ಕೋಲ್ಕತಾದಲ್ಲಿಯೇ ನಡೆದಿದೆ (Kolkata Law College Horror). ದಕ್ಷಿಣ ಕೋಲ್ಕತಾದ ಕಾಲೇಜೊಂದರ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿಯ (First-year student of a law college) ಮೇಲೆ ಸಾಮಾಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಕಾನೂನು ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ (Crime News). ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಮೊನೊಜಿತ್ ಮಿಶ್ರಾ, ಜೈಬ್ ಅಹ್ಮದ್ ಮತ್ತು ಮಿತ್ ಮುಖರ್ಜಿ ಎಂದು ಗುರುತಿಸಲಾಗಿದೆ.
ʼʼಹಳೆಯ ವಿದ್ಯಾರ್ಥಿ ಮತ್ತು ಇಬ್ಬರು ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲೇ ಈ ಕೃತ್ಯ ಎಸಗಿದ್ದಾರೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂ. 25ರ ಸಂಜೆ 7.30ರಿಂದ 10.50ರ ನಡುವೆ ಈ ಘಟನೆ ನಡೆದಿದೆ.
#Kolkatalawcollege : 24-year-old first-year law student at South Calcutta Law College was allegedly gang-raped on June 25 inside a guardroom by former student Monojit Mishra and 2 senior students. Acc. to the FIR, the victim said the assault was filmed and used to blackmail her. pic.twitter.com/1z14RE8aX0
— Shivangi Saxena (@shivangi441) June 27, 2025
ತೃಣಮೂಲ ಕಾಂಗ್ರೆಸ್ ನಾಯಕನ ನಂಟು
ಪ್ರಮುಖ ಆರೋಪಿಯನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಅಲ್ಲಿನ ಸಿಬ್ಬಂದಿಯೂ ಆದ ತೃಣಮೂಲ ಕಾಂಗ್ರೆಸ್ ನಾಯಕ ಮೊನೊಜಿತ್ ಮಿಶ್ರಾ (31) ಎಂದು ಗುರುತಿಸಲಾಗಿದೆ. ಆತನೊಂದಿಗೆ ಇತರ ಇಬ್ಬರು ಆರೋಪಿಗಳಾದ 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖರ್ಜಿಯನ್ನು ಶುಕ್ರವಾರ (ಜೂ. 27) ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇವರನ್ನು ಜು. 1ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಜೈಬ್ ಅಹ್ಮದ್ ಮತ್ತು ಮಿತ್ ಮುಖರ್ಜಿ ಅದೇ ಕಾಲೇಜಿನ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು.
ಪೊಲೀಸರು ಮೂವರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಸಂತ್ರಸ್ತೆಯ ಆರಂಭಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಹಲವು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Physical Abuse: ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ; ತೃಣಮೂಲ ನಾಯಕ ಸೇರಿ ಇಬ್ಬರ ಬಂಧನ
SHAME!
— Amit Malviya (@amitmalviya) June 27, 2025
In the horrific gang rape case of a college student in Kasba, involving a TMCP leader and his associates, TMC MP Kalyan Banerjee has crossed all limits of shamelessness.
When asked about women’s safety, he dismissed it as a mere “political agenda.”
On the RG Kar rape… pic.twitter.com/QWw3lKlN7q
ಘಟನೆ ದಿನ ಏನಾಗಿತ್ತು?
ಬುಧವಾರ 24 ವರ್ಷದ ಸಂತ್ರಸ್ತೆ ಪರೀಕ್ಷೆಗೆ ಸಂಬಂಧಿಸಿದ ಅರ್ಜಿಯನ್ನು ಭರ್ತಿ ಮಾಡಲು ಕಾಲೇಜಿಗೆ ಬಂದಿದ್ದರು. ಅವರು ಆರಂಭದಲ್ಲಿ ಕಾಲೇಜಿನ ಯೂನಿಯನ್ ರೂಮ್ನಲ್ಲಿ ಕುಳಿತಿದ್ದರು. ಈ ವೇಳೆ ಮೊನೊಜಿತ್ ಮಿಶ್ರಾ ಗೇಟ್ ಲಾಕ್ ಮಾಡಲು ಆದೇಶಿಸಿದ್ದ. ಬಳಿಕ ಅಕೆಯ ಬಳಿ ಸರಸವಾಡಲು ಮುಂದಾದ. ನಿರಾಕರಿಸಿದಾಗ ಮೇಲೆರಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
"ಆತ ಬಲಾತ್ಕಾರಕ್ಕೆ ಮುಂದಾದಾಗ ನಿರಾಕರಿಸಿದೆ, ಪ್ರತಿರೋಧಿಸಿದೆ. ಕೊನೆಗೆ ಅಳುತ್ತಾ ಬಿಟ್ಟುಬಿಡಿ ಎಂದು ಅಂಗಾಲಾಚಿದೆ. ನನಗೆ ಒಬ್ಬ ಪ್ರಿಯಕರನಿದ್ದಾನೆ ಎಂದೂ ಹೇಳಿದೆ. ಆದರೆ ಅವನು ಕೇಳಲಿಲ್ಲ" ಎಂದು ಸಂತ್ರಸ್ತೆ ಅಂದಿನ ಭಯಾನಕ ಘಟನೆ ವಿವರಿಸಿದ್ದಾರೆ. ಈ ವಿಚಾರ ಹೊರಗೆ ತಿಳಿಸಿದರೆ ತನ್ನ ಬಾಯ್ಫ್ರೆಂಡ್ನ ಮೇಲೆ ಹಲ್ಲೆ ನಡೆಸುವುದಾಗಿಯೂ, ಹೆತ್ತವರನ್ನು ಸುಳ್ಳು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವುದಾಗಿಯೂ ಮಿಶ್ರಾ ಬೆದರಿಕೆ ಹಾಕಿದ್ದಾನೆ. ಜತೆಗೆ ಆಕೆಗೆ ಸ್ಟಿಕ್ನಿಂದ ಹೊಡೆದಿದ್ದಾನೆ. ವಿದ್ಯಾರ್ಥಿ ಸಂಘದ ಕಚೇರಿಯ ಪಕ್ಕದಲ್ಲಿರುವ ನೆಲ ಮಹಡಿಯಲ್ಲಿರುವ ಭದ್ರತಾ ಸಿಬ್ಬಂದಿಯ ಕೋಣೆಗೆ ಕರೆದೊಯ್ದು ಅಲ್ಲಿಯೂ ಹಲ್ಲೆ ಮುಂದುವರಿಸಿದ್ದಾನೆ.
ʼʼಬಿಟ್ಟುಬಿಡುವಂತೆ ಮಿಶ್ರಾನ ಕಾಲಿಗೆರಗಿದ್ದೆ. ಆದರೆ ಆತನ ಮನಸ್ಸು ಕರಗಲಿಲ್ಲʼʼ ಎಂದು ಸಂತ್ರಸ್ತೆ ವಿವರಿಸಿದ್ದಾರೆ. ಮಿಶ್ರಾ ತನ್ನ ಮೇಲೆ ಅತ್ಯಾಚಾರ ಎಸಗುವಾಗ ಜೈಬ್ ಅಹ್ಮದ್ ಮತ್ತು ಮಿತ್ ಮುಖರ್ಜಿ ಅಲ್ಲೇ ಇದ್ದು ವಿಡಿಯೊ ಚಿತ್ರೀಕರಿಸುತ್ತಿದ್ದರು ಎಂದೂ ದೂರಿನಲ್ಲಿ ತಿಳಿಸಿದ್ದಾರೆ.
"ಘಟನೆಯ ಬಗ್ಗೆ ಮಾಹಿತಿ ನೀಡಿದರೆ ಚಿತ್ರೀಕರಿಸಿಕೊಂಡಿರುವ ಅತ್ಯಾಚಾರದ ದೃಶ್ಯಗಳನ್ನು ಇಂಟರ್ನೆಟ್ನಲ್ಲಿ ಹರಿಯಬಿಡುವುದಾಗಿ ಮೂವರು ಆರೋಪಿಗಳು ಬೆದರಿಕೆ ಹಾಕಿದ್ದರುʼʼ ಎಂದು ಪೊಲೀಸರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಸಂತ್ರಸ್ತೆಯನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಘಟನೆಗೆ ದೇಶಾದ್ಯಂತ ಅಕ್ರೋಶ ವ್ಯಕ್ತವಾಗುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೂಗು ಕೇಳಿ ಬರುತ್ತಿದೆ. ಘಟನೆಯನ್ನು ಬಿಜೆಪಿ ನಾಯಕರೂ ಖಂಡಿಸಿದ್ದಾರೆ.