ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL

IPL

Rajasthan Royals: ಆರ್‌ಆರ್ ಫ್ರಾಂಚೈಸಿ ತೊರೆಯಲು ನಿರ್ಧರಿಸಿದ ಸಿಇಒ ಮ್ಯಾಕ್ರಮ್

ರಾಜಸ್ಥಾನ್‌ ರಾಯಲ್ಸ್‌ಗೆ ಸಿಇಒ ಮ್ಯಾಕ್ರಮ್ 'ಗುಡ್‌ ಬೈ'

ಮ್ಯಾಕ್ರಮ್ 2017 ರಲ್ಲಿ ರಾಯಲ್ಸ್‌ಗೆ ಜನರಲ್ ಮ್ಯಾನೇಜರ್ ಆಗಿ ಸೇರಿದರು, 2019 ರಲ್ಲಿ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಬಡ್ತಿ ಪಡೆದರು ಮತ್ತು ಜುಲೈ 2021 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅವರು ಮೂರು ವರ್ಷಗಳ ಹಿಂದೆ ಬಾರ್ಬಡೋಸ್ ರಾಯಲ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪಾತ್ರವನ್ನು ವಹಿಸಿಕೊಂಡಿದ್ದರು.

IPL 2025: ʻಪಂಜಾಬ್‌ ಕಿಂಗ್ಸ್‌ನಲ್ಲಿ ಸಿಕ್ಕಿದ್ದ ಬೆಂಬಲ ಕೆಕೆಆರ್‌ನಲ್ಲಿ ಸಿಕ್ಕಿರಲಿಲ್ಲʼ-ಶ್ರೇಯಸ್‌ ಅಯ್ಯರ್!

ಪಂಜಾಬ್‌- ಕೋಲ್ಕತಾ ಫ್ರಾಂಚೈಸಿ ನಡುವಿನ ವ್ಯತ್ಯಾಸ ತಿಳಿಸಿದ ಅಯ್ಯರ್‌!

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ನಾಯಕತ್ವ ವಹಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌, ಹಿಂದಿನ ಫ್ರಾಂಚೈಸಿ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವಣ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.

ರಾಹುಲ್​ ಕರೆ ಮಾಡಿದ್ರು...! ಆದರೆ ಫ್ರಾಂಚೈಸಿ ಕೆಟ್ಟದಾಗಿ ನಡೆಸಿಕೊಂಡಿತು; ಗೇಲ್‌ ಸ್ಫೋಟಕ ಹೇಳಿಕೆ

ಆ... ಫ್ರಾಂಚೈಸಿ ಕೆಟ್ಟದಾಗಿ ನಡೆಸಿಕೊಂಡಿತು; ಗೇಲ್‌ ಸ್ಫೋಟಕ ಹೇಳಿಕೆ

"ಕೆಎಲ್ ರಾಹುಲ್ ಅವರು ನನಗೆ ಫೋನ್ ಮಾಡಿ, 'ಕ್ರಿಸ್, ಇರು, ನೀನು ಮುಂದಿನ ಪಂದ್ಯದಲ್ಲಿ ಆಡುತ್ತೀಯಾ' ಎಂದು ಹೇಳಿದರು. ಆದರೆ ನಾನು 'ನಿಮಗೆ ಒಳ್ಳೆಯದಾಗಲಿ' ಎಂದಷ್ಟೇ ಹೇಳಿ ನನ್ನ ಬ್ಯಾಗ್ ತೆಗೆದುಕೊಂಡು ಹೊರಟೆ," ಎಂದು ಗೇಲ್ ಫ್ರಾಂಚೈಸಿ ತೊರೆದ ಘಟನೆಯನ್ನು ಮೆಲುಕು ಹಾಕಿದರು. ಕ್ರಿಸ್ ಗೇಲ್ ಅವರು ಐಪಿಎಲ್ ನಲ್ಲಿ 2018ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು.

ʻವಿರಾಟ್‌ ಕೊಹ್ಲಿಯನ್ನು ಐಪಿಎಲ್‌ ಟೂರ್ನಿಯಲ್ಲಿ 7 ಬಾರಿ ಔಟ್‌ ಮಾಡಿದ್ದೇನೆʼ: ಸಂದೀಪ್‌ ಶರ್ಮಾ!

ವಿರಾಟ್‌ ಕೊಹ್ಲಿಯನ್ನು 7 ಬಾರಿ ಔಟ್‌ ಮಾಡಿದ್ದೇನೆ: ಸಂದೀಪ್‌ ಶರ್ಮಾ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ವಿರಾಟ್‌ ಕೊಹ್ಲಿಯನ್ನು 7 ಬಾರಿ ಔಟ್‌ ಮಾಡಿರುವ ನಾನು ನಿಜಕ್ಕೂ ಅದೃಷ್ಟಶಾಲಿ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ವೇಗಿ ಹೇಳಿದ್ದಾರೆ. ತಮಗೆ ಎದುರಾಗಿದ್ದ ಕಠಿಣ ಬ್ಯಾಟರ್‌ಗಳ ಪಟ್ಟಿಯಿಂದ ಕೊಹ್ಲಿಯವರನ್ನು ಹೊರಗಿಟ್ಟಿದ್ದಾರೆ ಮತ್ತು ಸುರೇಶ್‌ ರೈನಾ ಅವರಿಗೆ ಪವರ್‌ಪ್ಲೇನಲ್ಲಿ ಬೌಲ್‌ ಮಾಡುವುದು ಸವಾಲಿನ ಕೆಲಸ ಎಂದಿದ್ದಾರೆ.

IPL 2025: ಎಂಎಸ್‌ ಧೋನಿಯ ನಿಜ ಸ್ವರೂಪವನ್ನು ರಿವೀಲ್‌ ಮಾಡಿದ ಡೆವಾಲ್ಡ್‌ ಬ್ರೆವಿಸ್‌!

ಎಂಎಸ್‌ ಧೋನಿಯ ನಿಜ ಸ್ವರೂಪವನ್ನು ರಿವೀಲ್‌ ಮಾಡಿದ ಬ್ರೆವಿಸ್‌!

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ಡೆವಾಲ್ಡ್‌ ಬ್ರೆವಿಸ್‌ ಎಲ್ಲರ ಗಮನವನ್ನು ಸೆಳೆದಿದ್ದರು ಹಾಗೂ ಸಿಎಸ್‌ಕೆ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಇದೀಗ ಅವರು ಎಂಎಸ್‌ ಧೋನಿಯ ಬಗ್ಗೆ ಮಾತನಾಡಿದ್ದಾರೆ.

IPL Tickets: ಐಪಿಎಲ್ ಅಭಿಮಾನಿಗಳಿಗೆ ಶಾಕ್‌; ಟಿಕೆಟ್ ಬೆಲೆ ಹೆಚ್ಚಳ!

GST rate cuts: ಹೊಸ ತೆರಿಗೆ ಪದ್ಧತಿ; ಐಪಿಎಲ್‌ ಟಿಕೆಟ್‌ ದುಬಾರಿ!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ, ಎಲ್ಲಾ ರಾಜ್ಯಗಳ ಸಚಿವರ ಸಮ್ಮುಖದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದರನ್ವಯ, ಪ್ರಸಕ್ತ ಇರುವ ಶೇ.5, 12, 18 ಮತ್ತು 28ರ ತೆರಿಗೆ ಸ್ತರ ರದ್ದಾಗಿ ಕೇವಲ ಶೇ.5 ಮತ್ತು ಶೇ.18 ಸ್ತರದ ತೆರಿಗೆ ಜಾರಿಗೆ ಬರಲಿದೆ.

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ಪ್ಲೇಯಿಂಗ್‌ XI ಆರಿಸಿದ ಸಂದೀಪ್‌ ಶರ್ಮಾ!

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ XI ಆರಿಸಿದ ಸಂದೀಪ್‌ ಶರ್ಮಾ!

ರಾಜಸ್ಥಾನ್‌ ರಾಯಲ್ಸ್‌ ತಂಡದ ವೇಗದ ಬೌಲರ್‌ ಸಂದೀಪ್‌ ಶರ್ಮಾ ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡದ ಪ್ಲೇಯಿಂಗ್‌ Xi ಆಯ್ಕೆ ಮಾಡಿದ್ದಾರೆ. ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಎಂಎಸ್‌ ಧೋನಿಗೆ ನಾಯಕತ್ವ ಹಾಗೂ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ನೀಡಿದ್ದಾರೆ.

IPL 2026: ಕೋಲ್ಕತಾ ನೈಟ್‌ ರೈಡರ್ಸ್‌ಗೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗುವ ಸಾಧ್ಯತೆ!

ಕೆಕೆಆರ್‌ಗೆ ಮುಂದಿನ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌?

ಮುಂದಿನ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌ ಆಗುವ ಸಾದ್ಯತೆ ಇದೆ. ಅವರು 2025ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಕೋಚ್‌ ಆಗಿದ್ದರು. ಇದೀಗ ಅವರು ಆರ್‌ಆರ್‌ ತಂಡವನ್ನು ತೊರೆದಿದ್ದಾರೆ.

Virat Kohli: 'ನಿಮ್ಮ ಸೋಲು ನಮ್ಮ ಕಥೆ'; ಕಾಲ್ತುಳಿತದ ಬಗ್ಗೆ ಮೌನ ಮುರಿದ ಕೊಹ್ಲಿ

'ನಿಮ್ಮ ಸೋಲು ನಮ್ಮ ಕಥೆ'; ಕಾಲ್ತುಳಿತದ ಬಗ್ಗೆ ಮೌನ ಮುರಿದ ಕೊಹ್ಲಿ

3 ತಿಂಗಳ ಬಳಿಕ ಇತ್ತೀಚೆಗಷ್ಟೇ ಮೃತರ ಕುಟುಂಬಸ್ಥರಿಗೆ ತಲಾ ₹25 ಲಕ್ಷ ಪರಿಹಾರ ಘೋಷಿಸಿತ್ತು. ಜತೆಗೆ ಆರ್‌ಸಿಬಿ ಕೇರ್ಸ್‌’ನಡಿ ಭವಿಷ್ಯಕ್ಕೆ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿತ್ತು. ಈ ನಿಟ್ಟಿನಲ್ಲಿ ಫ್ರಾಂಚೈಸಿಯು 6 ಸೂತ್ರಗಳನ್ನು ಪ್ರಸ್ತಾಪಿಸಿದೆ. ಆದರೆ ಸರ್ಕಾರದ ಅನುಮತಿ ಬಳಿಕವೇ ಇವುಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ.

ಮುಂದಿನ 10 ವರ್ಷಗಳ ಕಾಲ ರೋಹಿತ್‌ ಶರ್ಮಾ ಐಪಿಎಲ್‌ ಆಡಬೇಕೆಂದ ಖಲೀಲ್‌ ಅಹ್ಮದ್‌!

10 ವರ್ಷ ರೋಹಿತ್‌ ಶರ್ಮಾ ಐಪಿಎಲ್‌ ಆಡಬೇಕು: ಖಲೀಲ್‌ ಅಹ್ಮದ್‌!

ಭಾರತ ಏಕದಿನ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವೇಗದ ಬೌಲರ್‌ ಖಲೀಲ್‌ ಅಹ್ಮದ್‌ ಶ್ಲಾಘಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ಮುಂದಿನ 10 ವರ್ಷಗಳ ಕಾಲ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಬೇಕೆಂದು ಆಗ್ರಹಿಸಿದ್ದಾರೆ.

ಶ್ರೀಶಾಂತ್ ವಿಮಾ ಹಕ್ಕು ವಿವಾದ; ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ವಿಮಾ ಕಂಪನಿ

ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ವಿಮಾ ಕಂಪನಿ

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದು, ಫ್ರಾಂಚೈಸಿ ಸಲ್ಲಿಸಿದ ಮೂಲ ವಿಮಾ ಅರ್ಜಿ ಮತ್ತು ಶ್ರೀಶಾಂತ್ ಅವರಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಫಿಟ್‌ನೆಸ್ ಪ್ರಮಾಣಪತ್ರಗಳು ಸೇರಿದಂತೆ ಹೆಚ್ಚುವರಿ ದಾಖಲೆಗಳನ್ನು ದಾಖಲಿಸಲು ವಿಮಾದಾರರಿಗೆ ಅವಕಾಶ ನೀಡಿದೆ.

R Ashwin: ಐಪಿಎಲ್‌ ನಿವೃತ್ತಿ ಬೆನ್ನಲ್ಲೇ ವಿದೇಶಿ ಲೀಗ್‌ ಆಡಲು ಮುಂದಾದ ಅಶ್ವಿನ್‌

ಐಪಿಎಲ್‌ ನಿವೃತ್ತಿ ಬೆನ್ನಲ್ಲೇ ವಿದೇಶಿ ಲೀಗ್‌ ಆಡಲು ಮುಂದಾದ ಅಶ್ವಿನ್‌

2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪಾದಾರ್ಪಣೆ ಮಾಡಿದ ಅಶ್ವಿನ್​ ಒಂದು ದಶಕ ಕಾಲ ತಂಡದ ಪರ ಆಡಿದ್ದಾರೆ. 2024ರಲ್ಲಿ ರಾಜಸ್ಥಾನ ರಾಯಲ್ಸ ತಂಡದ ಪರ ಆಡಿದ್ದ ಅಶ್ವಿನ್​ ಅವರನ್ನು ಕಳೆದ ವರ್ಷ ನಡೆದಿದ್ದ ಐಪಿಎಲ್​ 2025ರ ಹರಾಜಿನಲ್ಲಿ ಸಿಎಸ್​ಕೆ ₹9.75 ಕೋಟಿ ರೂ.ಗೆ ಮರಳಿ ತಂಡಕ್ಕೆ ಕರೆ ತಂದಿತ್ತು 2025 ರ ಐಪಿಎಲ್‌ನಲ್ಲಿ ಅವರು ಹಳದಿ ಜೆರ್ಸಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.

ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ವಿಡಿಯೊ ವೈರಲ್‌ʼ: ಲಲಿತ್‌ ಮೋದಿ ವಿರುದ್ಧ ಭಜ್ಜಿ ಆಕ್ರೋಶ!

ʻಶ್ರೀಶಾಂತ್‌ಗೆ ಕಪಾಳ ಮೋಕ್ಷʼ:ಲಲಿತ್‌ ಮೋದಿ ವಿರುದ್ಧ ಭಜ್ಜಿ ಆಕ್ರೋಶ!

ಉದ್ಘಾಟನಾ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯವೊಂದರಲ್ಲಿ ಶ್ರೀಶಾಂತ್‌ಗೆ ಹರ್ಭಜನ್‌ ಸಿಂಗ್‌ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ಬಗ್ಗೆ ಇದೀಗ ಹರ್ಭಜನ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊವನ್ನು ಪೋಸ್ಟ್‌ ಮಾಡಿದ ಲಲಿತ್‌ ಮೋದಿ ವಿರುದ್ಧ ಭಜ್ಜಿ ಕಿಡಿಕಾರಿದ್ದಾರೆ.

ಡೆಲ್ಲಿ ತಂಡದ ನಾಯಕತ್ವದಿಂದ ಅಕ್ಷರ್‌ಗೆ ಗೇಟ್ ಪಾಸ್ ಸಾಧ್ಯತೆ; ರೇಸ್‌ನಲ್ಲಿ ಕನ್ನಡಿಗ

IPL 2026: ಡೆಲ್ಲಿ ತಂಡದ ನಾಯಕತ್ವದಿಂದ ಅಕ್ಷರ್‌ಗೆ ಗೇಟ್ ಪಾಸ್ ?

ಅಕ್ಷರ್ ಪಟೇಲ್ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಳಿಕ ತಂಡದ ಹೊಸ ನಾಯಕ ಸ್ಥಾನಕ್ಕೆ ಕನ್ನಡಿಗ ಕೆಎಲ್ ರಾಹುಲ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್‌ ಹೆಸರು ಕೇಳಿ ಬಂದಿದೆ. ಆದರೆ ರಾಹುಲ್‌ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವುದು ಅನುಮಾನ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಅವರು ಸ್ವತಃ ನಾಯಕತ್ವದ ಆಫರ್‌ ತಿರಸ್ಕರಿಸಿದ್ದರು. ಸದ್ಯಕ್ಕೆ ನಾಯಕತ್ವದ ಬದಲಾವಣೆ ಕುರಿತು ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

2025ರ ಐಪಿಎಲ್‌ನಲ್ಲಿ ತಾನು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಆರಿಸಿದ ರವಿ ಬಿಷ್ಣೋಯ್!

ತಾನು ಎದುರಿಸಿದ ಕಠಿಣ ಬ್ಯಾಟರ್‌ ಆರಿಸಿದ ರವಿ ಬಿಷ್ಣೋಯ್‌!

ಭಾರತ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಸ್ಪಿನ್ನರ್‌ ರವಿ ಬಿಷ್ಣೋಯ್‌ ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಾವು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರನ್ನು ಹೆಸರಿಸಿದ್ದಾರೆ.

ʻರಾಹುಲ್‌ ದ್ರಾವಿಡ್‌ಗೆ ಗೇಟ್‌ ಪಾಸ್‌ʼ: ರಾಜಸ್ಥಾನ್‌ ರಾಯಲ್ಸ್‌ ಬಗ್ಗೆ ಎಬಿಡಿ ಅಚ್ಚರಿ ಹೇಳಿಕೆ!

ಆರ್‌ಆರ್‌ ಕೋಚ್‌ ಸ್ಥಾನವನ್ನು ತೊರೆದ ದ್ರಾವಿಡ್‌ ಬಗ್ಗೆ ಎಬಿಡಿ ಹೇಳಿಕೆ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಾಜಸ್ಥಾನ್‌ ರಾಯಲ್ಸ್‌ ತಂಡದ ಹೆಡ್‌ ಕೋಚ್‌ ಹುದ್ದೆಗೆ ರಾಹುಲ್‌ ದ್ರಾವಿಡ್‌ ಆಗಸ್ಟ್‌ 30 ರಂದು ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಇಬ್ಬರಿಂದ ರಾಜಸ್ಥಾನ್‌ ರಾಯಲ್ಸ್‌ ಹೆಡ್‌ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್‌ ದ್ರಾವಿಡ್‌!

ಆರ್‌ಆರ್‌ ಕೋಚ್‌ ಸ್ಥಾನಕ್ಕೆ ದ್ರಾವಿಡ್‌ ರಾಜೀನಾಮೆ ನೀಡಿದ್ದೇಕೆ?

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೂ ಮುನ್ನ ರಾಹುಲ್‌ ದ್ರಾವಿಡ್‌ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಹೆಡ್‌ ಕೋಚ್‌ ಸ್ಥಾನಕ್ಕೆ ಹಠಾತ್‌ ರಾಜೀನಾಮೆ ನೀಡಿದ್ದಾರೆ. ಇದೀಗ ದ್ರಾವಿಡ್‌ ಏಕೆ ಈ ನಿರ್ಧಾರ ತೆಗೆದುಕೊಂಡರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ವರದಿಯೊಂದಿಗೆ ಇದೀಗ ಪ್ರಕಟವಾಗಿದೆ.

ಸಾರ್ವಕಾಲಿಕ ಶ್ರೇಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇಯಿಂಗ್‌ XI ಆರಿಸಿದ ಸುರೇಶ್‌ ರೈನಾ!

ಸಾರ್ವಕಾಲಿಕ ಶ್ರೇಷ್ಠ ಸಿಎಸ್‌ಕೆ ಪ್ಲೇಯಿಂಗ್‌ XI ಆರಿಸಿದ ಸುರೇಶ್‌ ರೈನಾ!

ಭಾರತ ತಂಡದ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI ಆರಿಸಿದ್ದಾರೆ. ತಮ್ಮ ಈ ತಂಡದಲ್ಲಿ ಸಿಎಸ್‌ಕೆ ನಾಯಕ ಋತುರಾಜ್‌ ಗಾಯಕ್ವಾಡ್‌ ಅವರನ್ನು ಕೈ ಬಿಟ್ಟಿದ್ದಾರೆ. ಮುರಳಿ ವಿಜಯ್‌ ಹಾಗೂ ಮ್ಯಾಥ್ಯೂ ಹೇಡನ್‌ಗೆ ಓಪನರ್‌ ಆಗಿ ಆಯ್ಕೆಯಾಗಿದ್ದಾರೆ.

Rahul Dravid: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ

ರಾಜಸ್ಥಾನ್ ತಂಡದ ಮುಖ್ಯ ಕೋಚ್ ಹುದ್ದೆಗೆ ದ್ರಾವಿಡ್ ದಿಢೀರ್‌ ರಾಜೀನಾಮೆ

ಈ ಹಿಂದೆ ನಾಯಕತ್ವ ಮತ್ತು ತರಬೇತುದಾರರಾಗಿದ್ದ ಫ್ರಾಂಚೈಸಿಗೆ ಮತ್ತೆ ಕೋಚ್‌ ಆಗಿ ಮರಳಿದ್ದ ದ್ರಾವಿಡ್‌ 18ನೇ ಆವೃತ್ತಿಯಲ್ಲಿ ಕಾಲು ನೋವಿನ ಮಧ್ಯೆಯೂ ಅವರು ಬ್ಯಾಂಡೆಜ್‌ ಸುತ್ತಿಕೊಂಡೇ ತಂಡಕ್ಕೆ ತರಬೇತಿ ನೀಡಿದ್ದರು. ಆದಾಗ್ಯೂ, 2025 ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್‌ ನಿರಾಶಾದಾಯಕ ಪ್ರದರ್ಶನ ನೀಡಿತ್ತು.

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ಆರ್ಥಿಕ ನೆರವು ಘೋಷಿಸಿದ ಆರ್‌ಸಿಬಿ

ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ನೆರವು ಘೋಷಿಸಿದ ಆರ್‌ಸಿಬಿ

ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಾವಿರಾರು ಬೆಂಬಲಿಗರು ಜಮಾಯಿಸಿದ್ದರು. ಆದರೆ ಕ್ರೀಡಾಂಗಣದ ದ್ವಾರಗಳತ್ತ ಅಭಿಮಾನಿಗಳ ಅನಿಯಂತ್ರಿತ ಪ್ರವೇಶದಿಂದ 11 ಜನರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

18 ವರ್ಷಗಳ ಬಳಿಕ ರಿಲೀಸ್‌ ಆಯಿತು ಶ್ರೀಕಾಂತ್‌ ಕೆನ್ನೆಗೆ ಬಾರಿಸಿದ ವಿಡಿಯೊ

ಮೈದಾನದಲ್ಲೇ ಭಜ್ಜಿ ಶ್ರೀಶಾಂತ್ ಕೆನ್ನೆಗೆ ಬಾರಿಸಿದ ವಿಡಿಯೊ ವೈರಲ್‌

Harbhajan slapping Sreesanth: ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್ ಅವರು ಎಸ್. ಶ್ರೀಶಾಂತ್‌ಗೆ ಮೈದಾನದಲ್ಲಿಯೇ ಕಪಾಳಮೋಕ್ಷ ಮಾಡಿದ್ದರು. ಆದರೆ ಅಂದಿನ ಈ ಘಟನೆಯ ವಿಡಿಯೊ ಮಾತ್ರ ಇದುವರೆಗೂ ಸಾರ್ವಜನಿಕರಿಗೆ ಲಭಿಸಿರಲಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಪ್ರಸಾರಕರು ಇದನ್ನು ಗೌಪ್ಯವಾಗಿಟ್ಟಿದ್ದರು.

ಕಾಲ್ತುಳಿತ ಸಂಭವಿಸಿ ಮೂರು ತಿಂಗಳ ಬಳಿಕ ಭಾವುಕ ಪೋಸ್ಟ್‌ ಮಾಡಿದ ಆರ್‌ಸಿಬಿ

RCB break silence: ಅಭಿಮಾನಿಗಳಿಗೆ 'ಆರ್‌ಸಿಬಿ ಕೇರ್ಸ್' ನಿಧಿ ಸ್ಥಾಪನೆ

RCB break silence: ಕಾಲ್ತುಳಿತ ನಡೆದ ಕೆಲ ದಿನಗಳಲ್ಲೇ ಭಾರತ-ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಚಿನ್ನಸ್ವಾಮಿಯಿಂದ ರಾಜ್‌ಕೋಟ್‌ಗೆ ಸ್ಥಳಾಂತರಿಸಿ ಬಿಸಿಸಿಐ ಆದೇಶಿಸಿತ್ತು. ಮಹಿಳಾ ವಿಶ್ವಕಪ್‌ನ ಪಂದ್ಯಗಳೂ ಕೂಡ ಮುಂಬೈಗೆ ಶಿಫ್ಟ್‌ ಆಗಿದೆ. ಮುಂದಿನ ಆವೃತ್ತಿಯ ಐಪಿಎಲ್‌ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ʻಪಿಚ್‌ ಮೇಲೆ ಪ್ರಪೋಸ್‌ ಮಾಡಿದ್ದೆʼ: ತಮ್ಮ ಲವ್‌ ಸ್ಟೋರಿಯನ್ನು ರಿವೀಲ್‌  ಮಾಡಿದ ಆರ್‌ ಅಶ್ವಿನ್‌!

ತಮ್ಮ ಲವ್‌ ಸ್ಟೋರಿಯನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

ಭಾರತೀಯ ಕ್ರಿಕೆಟ್‌ನ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಅವರು ಆಗಸ್ಟ್‌ 27 ರಂದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಮಾತ್ರ ತನ್ನನ್ನು ತಾನು ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಐಪಿಎಲ್‌ ವೃತ್ತಿ ಜೀವನದಲ್ಲಿ ಆರ್‌ ಅಶ್ವಿನ್‌ರ 4 ವಿವಾದಾತ್ಮಕ ಘಟನೆಗಳು!

ಆರ್‌ ಅಶ್ವಿನ್‌ರ ಐಪಿಎಲ್‌ನ 4 ವಿವಾದಾತ್ಮಕ ಘಟನೆಗಳು!

ಕಳೆದ ವರ್ಷ 2024ರ ಅಂತ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಭಾರತೀಯ ಸ್ಪಿನ್‌ ದಿಗ್ಗಜ ರವಿಚಂದ್ರನ್ ಅಶ್ವಿನ್, ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೃತ್ತಿ ಬದುಕಿಗೂ ನಿವೃತ್ತಿ ಘೋಷಿಸಿದ್ದಾರೆ. ಅವರು ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಐದನೇ ಬೌಲರ್‌ ಆಗಿ ತಮ್ಮ ಐಪಿಎಲ್‌ಗೆ ಅಂತ್ಯವಾಡಿದ್ದಾರೆ.

Loading...