ಲಖನೌ, ಆ. 18: ಆಸ್ತಿ ವಿವಾದ ಮಹಿಳೆಯೊಬ್ಬರ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ದುರ್ಘಟನೆ ಉತ್ತರ ಪ್ರದೇಶದ (Uttar Pradesh) ರಾಂಪುರದಲ್ಲಿ ನಡೆದಿದೆ. ಆಕೆಯ ಖಾಸಗಿ ಭಾಗಗಳು ಸೇರಿ ದೇಹಕ್ಕೆ ಕರೆಂಟ್ ಶಾಕ್ ನೀಡಿದ್ದಕ್ಕಾಗಿ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದಾರೆ. ನಸ್ರೀನ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ಖಾಸಗಿ ಭಾಗಗಳು ಸೇರಿ ದೇಹದ ಮೇಲೆ ಕರೆಂಟ್ ಶಾಕ್ನಿಂದ ಉಂಟಾಗಿರುವ ಹಲವು ಸುಟ್ಟ ಗಾಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ (Crime News). ಅಪರಾಧಿಯನ್ನು ಆಕೆಯ ಪತಿ ಆರೋಪಿ ಇಸ್ರಾರ್ ಎಂದು ಗುರುತಿಸಲಾಗಿದೆ.
ಇಸ್ರಾರ್ ಅಪರಾಧವನ್ನು ಒಪ್ಪಿಕೊಂಡಿದ್ದು, ತನ್ನ ಪತ್ನಿ ಹೆತ್ತವರಿಂದ ಆನುವಂಶಿಕವಾಗಿ ಪಡೆದ ಭೂಮಿಯನ್ನು ಮಾರಾಟ ಮಾಡಲು ನಿರಾಕರಿಸಿದ್ದರಿಂದ ಕೋಪಗೊಂಡು, ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ. ಭೂಮಿಯನ್ನು ಮಾರಾಟ ಮಾಡುವುದರಿಂದ ತನ್ನ ಐದು ಮಕ್ಕಳ ಭವಿಷ್ಯಕ್ಕೆ ಅಪಾಯವಾಗಬಹುದು ಎಂದು ಆಕೆ ಹೆದರಿದ್ದಳು ಎಂದು ನಸ್ರೀನ್ ಕುಟುಂಬ ಹೇಳಿದೆ.
ನಸ್ರೀನ್ ಮತ್ತು ಇಸ್ರಾರ್ ಸುಮಾರು 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಭೂ ವಿವಾದವು ಆಕೆಯ ವಿರುದ್ಧ ಪದೇ ಪದೆ ಬೆದರಿಕೆ ಮತ್ತು ಹಿಂಸೆಗೆ ಕಾರಣವಾಯಿತು ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ. ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಕೆಯನ್ನು ಕೊಲ್ಲುವುದಾಗಿ ಇಸ್ರಾರ್ ಬೆದರಿಕೆ ಹಾಕಿದ್ದ ಎಂದು ಆಕೆಯ ಕುಟುಂಬ ಹೇಳಿದೆ.
ಪತ್ನಿಯನ್ನು ಕೊಂದು ಚಾವಣಿಯಿಂದ ಬಿದ್ದು ಮೃತಪಟ್ಟಳು ಎಂದು ಕಥೆ ಕಟ್ಟಿದ ಸೈನಿಕ
ನಸ್ರೀನ್ ಇತ್ತೀಚೆಗೆ ಗಾಯಗೊಂಡಿದ್ದರು. ಆದರೆ ತನಗಾದ ದೌರ್ಜನ್ಯವನ್ನು ತಮ್ಮ ಕುಟುಂಬದಿಂದ ಮರೆಮಾಡಿದ್ದರು ಎಂದು ಅವರ ಸಹೋದರಿ ಹಸೀನ್ ಜಹಾನ್ ಹೇಳಿದ್ದಾರೆ. ಅವಳು ಮನೆಗೆ ಬಂದಾಗ ಮುಖದಲ್ಲಿ ಗಾಯಗಳಿದ್ದವು. ಆದರೆ ತನಗೇನಾಯ್ತು ಎಂಬುದನ್ನು ನಸ್ರೀನ್ ಬಹಿರಂಗಪಡಿಸಲಿಲ್ಲ ಎಂದು ಕುಟುಂಬ ತಿಳಿಸಿದೆ.
ಮೃತ ಮಹಿಳೆಯ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಆಕೆಯ ಅತ್ತೆ-ಮಾವ ಕೂಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ರಾಂಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್ ಆರೋಪಿಸಿದ್ದಾರೆ. ಕರೆಂಟ್ ಶಾಕ್ನಿಂದ ಉಂಟಾದ ಹಲವು ಗಾಯಗಳನ್ನು ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಮರಣೋತ್ತರ ವರದಿಯಲ್ಲಿ ದೇಹದ ಆರು ಸ್ಥಳಗಳಲ್ಲಿ ಗಾಯಗಳಾಗಿದ್ದು, ಕರೆಂಟ್ ಶಾಕ್ನಿಂದ ಉಂಟಾದ ಹಲವು ಸುಟ್ಟ ಗಾಯಗಳು ಸೇರಿವೆ. ಆಕೆಯ ಖಾಸಗಿ ಭಾಗಗಳಲ್ಲಿ ಕರೆಂಟ್ ಶಾಕ್ನಿಂದ ಉಂಟಾದ ಗಾಯಗಳು ಸಹ ಕಂಡುಬಂದಿವೆ ಎಂದು ಸಿಂಗ್ ಹೇಳಿದರು.