ಕುಡಿಮಂಗಲಂ: ಆಸ್ತಿ ವಿಚಾರಕ್ಕೆಅಪ್ಪ-ಮಕ್ಕಳ ನಡುವೆ ಜಗಳ ನಡೆಯುತ್ತಿದ್ದ ವೇಳೆ ಬಿಡಿಸಲು ಬಂದ ಪೊಲೀಸ್ನನ್ನೇ ಕೊಚ್ಚಿ ಕೊಲೆಗೈದಿರುವ(Murder Case) ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಿರುಪ್ಪೂರ್ ಜಿಲ್ಲೆಯ ಉಡುಮಲ್ಪೇಟೆ (Udumalpet) ಬಳಿಯ ಕುಡಿಮಂಗಲಂನಲ್ಲಿ ಸೋಮವಾರ ರಾತ್ರಿ ವಿಶೇಷ ಸಬ್-ಇನ್ಸ್ಪೆಕ್ಟರ್ (Special Sub-Inspector) ಷಣ್ಮುಗವೇಲ್ (Shanmugavel) ಅವರನ್ನು ಕ್ರೂರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳೀಯ ಎಐಎಡಿಎಂಕೆ ಶಾಸಕರ ಒಡೆತನದ ಖಾಸಗಿ ಎಸ್ಟೇಟ್ನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳ ನಡುವಿನ ಗಲಾಟೆ ಬಗ್ಗೆ ತಿಳಿದು ಷಣ್ಮುಗವೇಲ್ ಅವರು ಸ್ಥಳಕ್ಕೆ ತೆರಳಿದಾಗ ಈ ಘಟನೆ ಸಂಭವಿಸಿದೆ.
ಘಟನೆಯ ವಿವರ
ಪೊಲೀಸ್ ಮೂಲಗಳು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ ಗಸ್ತಿನಲ್ಲಿದ್ದ ಷಣ್ಮುಗವೇಲ್ ಅವರಿಗೆ ತುರ್ತು ಸೇವೆಗೆ ಕರೆ ಬಂದಿತು. ಎಸ್ಟೇಟ್ ಕಾರ್ಮಿಕ ಮೂರ್ತಿ ಮತ್ತು ಆತನ ಮಕ್ಕಳಾದ ತಂಗಪಾಂಡಿಯನ್ ಮತ್ತು ಮಣಿಕಂಡನ್, ಮದ್ಯದ ಅಮಲಿನಲ್ಲಿ ತೀವ್ರ ಗಲಾಟೆಯಲ್ಲಿ ತೊಡಗಿದ್ದರು. ಮಕ್ಕಳು ತಂದೆಯ ಮೇಲೆ ದಾಳಿ ಮಾಡಿದ್ದಾಗ, ಷಣ್ಮುಗವೇಲ್ ಕಲಹವನ್ನು ತಡೆಯಲು ಮಧ್ಯಸ್ಥಿಕೆ ವಹಿಸಿ, ಗಾಯಗೊಂಡ ತಂದೆಗೆ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕರೆಯಲು ಯತ್ನಿಸಿದರು. ಆದರೆ, ತಂಗಪಾಂಡಿಯನ್ನೊಂದಿಗೆ ಮಾತನಾಡುತ್ತಿದ್ದಾಗ, ಅಡಗಿದ್ದ ಕಿರಿಯ ಮಗ ಮಣಿಕಂಡನ್ ಷಣ್ಮುಗವೇಲ್ನ ಮೇಲೆ ಕುಡುಗೋಲಿನಿಂದ ದಾಳಿ ಮಾಡಿದ. ತಂದೆ ಮತ್ತು ಹಿರಿಯ ಮಗನೂ ದಾಳಿಯಲ್ಲಿ ಭಾಗಿಯಾಗಿ, ಅಧಿಕಾರಿಯನ್ನು ಕೊಚ್ಚಿ ಕೊಂದರು. ಷಣ್ಮುಗವೇಲ್ನ ಚಾಲಕ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ.
ಈ ಸುದ್ದಿಯನ್ನು ಓದಿ: Viral Video: ಸೇತುವೆ ಅಂಚಿನಲ್ಲಿ ನೇತಾಡುತ್ತಾ ಪುಲ್-ಅಪ್ ಮಾಡಿದ ಭೂಪ! ಎದೆ ಝಲ್ಲೆನಿಸೋ ವಿಡಿಯೊ
ಆರೋಪಿಗಳಿಗಾಗಿ ಶೋಧ
ಆರೋಪಿಗಳಾದ ಮೂರ್ತಿ, ತಂಗಪಾಂಡಿಯನ್, ಮತ್ತು ಮಣಿಕಂಡನ್ ಪರಾರಿಯಾಗಿದ್ದಾರೆ. ಐದು ವಿಶೇಷ ಪೊಲೀಸ್ ತಂಡಗಳು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಕೊಲೆಯ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಷಣ್ಮುಗವೇಲ್ನ ಕುಟುಂಬಕ್ಕೆ ಸಂತಾಪ ಸೂಚಿಸಿ, 1 ಕೋಟಿ ರೂ. ಆರ್ಥಿಕ ನೆರವು ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ.
ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಇನ್ನೂ ಪ್ರತಿಕ್ರಿಯಿಸಿಲ್ಲ. 2026ರ ರಾಜ್ಯ ಚುನಾವಣೆಗೆ ಕೇವಲ ಎಂಟು ತಿಂಗಳು ಬಾಕಿಯಿರುವಾಗ ಈ ಘಟನೆ ಆಕ್ರೋಶವನ್ನು ಹುಟ್ಟುಹಾಕಿದೆ. ಬಿಜೆಪಿಯ ನಾರಾಯಣನ್ ತಿರುಪತಿ ಈ ದಾಳಿಯನ್ನು “ಆಘಾತಕಾರಿ” ಎಂದು ಕರೆದು, ಇದನ್ನು “ವೈಯಕ್ತಿಕ ದ್ವೇಷ” ಎಂದು ಕಡೆಗಣಿಸಲಾಗದು ಎಂದಿದ್ದಾರೆ. “ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವುದು ಮತ್ತು ಶಿಸ್ತನ್ನು ಮರುಸ್ಥಾಪಿಸುವುದು ಪ್ರಾಮಾಣಿಕ ಸರ್ಕಾರದ ಕರ್ತವ್ಯ,” ಎಂದು ಅವರು ಒತ್ತಾಯಿಸಿದ್ದಾರೆ.