ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಸಾವು; ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ

ಲೋಧಿ ಕಾಲೋನಿಯಲ್ಲಿ 28 ವರ್ಷದ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಳನ್ನು ಆಕೃತಿ ಎಂದು ಗುರುತಿಸಲಾಗಿದ್ದು, ಅವರು ಎಲ್ಲಿಂದ ಬಿದ್ದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಅವರ ದೇಹವು ಪಾಲಿಕಾ ಕುಂಜ್‌ನ ಎನ್‌ಡಿಎಂಸಿ ಫ್ಲಾಟ್‌ಗಳ ಕಟ್ಟಡದ ಹೊರಗೆ ನೆಲದ ಮೇಲೆ ಪತ್ತೆಯಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಲೋಧಿ ಕಾಲೋನಿಯಲ್ಲಿ 28 ವರ್ಷದ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಳನ್ನು ಆಕೃತಿ ಎಂದು ಗುರುತಿಸಲಾಗಿದ್ದು, (Delhi Crime news) ಅವರು ಎಲ್ಲಿಂದ ಬಿದ್ದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಅವರ ದೇಹವು ಪಾಲಿಕಾ ಕುಂಜ್‌ನ ಎನ್‌ಡಿಎಂಸಿ ಫ್ಲಾಟ್‌ಗಳ ಕಟ್ಟಡದ ಹೊರಗೆ ನೆಲದ ಮೇಲೆ ಪತ್ತೆಯಾಗಿದೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

ಪುಷ್ಪ್ ವಿಹಾರ್ ನಿವಾಸಿ ಆಕೃತಿ ಏಪ್ರಿಲ್ 24 ರಂದು ವಿವಾಹವಾಗಿದ್ದರು. ಆಕೃತಿಯ ಕುಟುಂಬವು ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ. ಆಕೆಯ ಪತಿ ಮತ್ತು ಅತ್ತೆ ಮಾವಂದಿರು ವರದಕ್ಷಿಣೆ ಕಿರುಕುಳ ಮತ್ತು ದೈಹಿಕ ಕಿರುಕುಳ ನೀಡಿದೆ ಎಂದು ಆರೋಪಿಸಲಾಗಿದೆ. ಆಕೃತಿಯ ಸಹೋದರ ಈ ಕುರಿತು ಮಾತನಾಡಿದ್ದು, ಆದರೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಭಾರತ್ ನ್ಯಾಯ ಸಂಹಿತಾ ಸೆಕ್ಷನ್ 196 ರ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದ್ದು, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೋರಲಾಗಿದೆ. ಘಟನೆಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನನ್ನು ಕೊಂದ ಪತ್ನಿ

ಗಂಡನನ್ನು ಕೊಲೆ ಮಾಡಿ ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ್ದ ಪತ್ನಿಯನ್ನು ಶನಿವಾರ ಸಂಜೆ ತಡರಾತ್ರಿ ಜೈಲಿಗೆ ಕಳುಹಿಸಲಾಗಿದೆ. ಗಂಟೆಗಟ್ಟಲೆ ವಿಚಾರಣೆ ಎದುರಿಸಿದ ಕೊಲೆ ಆರೋಪಿ ಮಹಿಳೆ, ಗಂಡನನ್ನು ಕೊಂದು ಶವವನ್ನು ತಾನೇ ಸ್ನಾನಗೃಹದಲ್ಲಿ ಹೂತು ಹಾಕಿದ್ದೇನೆ ಎಂಬ ಹೇಳಿಕೆಗೆ ಬದ್ಧಳಾಗಿದ್ದಾಳೆ. ಈ ಕೊಲೆ ಪ್ರಕರಣದಲ್ಲಿ ಬೇರೆಯವರ ಕೈವಾಡವಿಲ್ಲ. ಈ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಅಥವಾ ಪುರಾವೆಗಳು ಸಿಕ್ಕಿಲ್ಲ.

ಪತ್ನಿಯನ್ನು ಮನವೊಲಿಸಲು ತೆರಳಿದ್ದ ಪತಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ಭಾವ; ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ವಿಚಾರಣೆಯ ಸಮಯದಲ್ಲಿ, ಆರೋಪಿ ಮಹಿಳೆ ರೂಬಿ ತನ್ನ ಪತಿ ತಾನಾಗಿಯೇ ಕಣ್ಮರೆಯಾಗಲು ಬಯಸಿದ್ದ. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡೆ. ನಿತ್ಯ ಆತ ನೀಡುತ್ತಿದ್ದ ದೈಹಿಕ ಕಿರುಕುಳದಿಂದ ಬೇಸತ್ತಿದ್ದೆ. ಹೀಗಾಗಿ, ಪ್ಲಾನ್​ ರೂಪಿಸಿ ಕೊಲೆ ಮಾಡಿದೆ. ಬಳಿಕ ನಾನೇ ಗುಂಡಿ ಅಗೆದು ಶವವನ್ನು ಅದರಲ್ಲಿ ಹೂತು ಹಾಕಿದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಅಲ್ಲದೇ, ಕೊಲೆ ಮಾಡಿದ ದಿನದಂದು ತಾನು ಏನೆಲ್ಲಾ ಮಾಡಿದೆ ಎಂಬುದನ್ನೂ ಆಕೆ ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾಳೆ.

Vishakha Bhat Heggar

View all posts by this author