ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಚುನಾವಣೆ
Basavaraj Bommai: ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಸವರಾಜ ಬೊಮ್ಮಾಯಿ ಆರೋಪ

ಕಾಂಗ್ರೆಸ್‌ನ ಕಾನೂನು ಬಾಹಿರ ಜಯ ತಾತ್ಕಾಲಿಕ: ಬಸವರಾಜ ಬೊಮ್ಮಾಯಿ

ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಯ ಮೂರು ಜನ ಸದಸ್ಯರನ್ನು ರಾತ್ರಿ 12 ಗಂಟೆಗೆ ಅಮಾನತು ಮಾಡಿ ಅವರನ್ನು ಮತ ಹಾಕದಂತೆ ನೋಡಿಕೊಂಡಿದ್ದಾರೆ. ಅಮಾನತುಗೊಂಡ ಸದಸ್ಯರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟು ಆದೇಶ ನೀಡಿದೆ. ಚುನಾವಣಾಧಿಕಾರಿ ಅದನ್ನು ದಿಕ್ಕರಿಸಿ, ಎಲ್ಲ ಸಂಪರ್ಕ ಬಂದು ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

Delhi's New CM: ದಿಲ್ಲಿಯಲ್ಲಿ ಹಿರಿತನಕ್ಕೆ ಮಣೆ ಹಾಕಿದ ಬಿಜೆಪಿ; ಯಾರು ಈ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ?

ಬಿಜೆಪಿಯ ಹಿರಿಯ ನಾಯಕಿ ರೇಖಾ ಗುಪ್ತಾ ಬಗ್ಗೆ ನಿಮಗೆಷ್ಟು ಗೊತ್ತು?

ದಿಲ್ಲಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಇದೀಗ ಬಿಜೆಪಿ ತನ್ನ ಮುಖ್ಯಮಂತ್ರಿ ಹೆಸರನ್ನು ಘೋಷಿಸಿದ್ದು, ಪಕ್ಷದ ಹಿರಿಯ ನಾಯಕಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ರೇಖಾ ಗುಪ್ತಾ ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.

Aravind Kejriwal:  ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕೇಜ್ರಿವಾಲ್‌ಗೆ ಪಂಜಾಬ್‌ ಸಿಎಂ ಗಾದಿ?

ಚುನಾವಣೆಯಲ್ಲಿ ಸೋತರೂ ಕೇಜ್ರಿವಾಲ್‌ಗೆ ಪಂಜಾಬ್‌ ಸಿಎಂ ಪಟ್ಟ?

ದೆಹಲಿ ಚುನಾವಣೆಯ ಫಲಿತಾಂಶ ಶನಿವಾರ(ಫೆ.8) ಹೊರ ಬಿದ್ದಿದ್ದು, ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ. ಕಳೆದ ಹತ್ತು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಪ್‌ ಮಕಾಡೆ ಮಲಗಿದೆ. ಸ್ವತಃ ಅರವಿಂದ ಕೇಜ್ರಿವಾಲ್‌ ಕೂಡ ತಮ್ಮ ತವರು ಕ್ಷೇತ್ರದಲ್ಲಿಯೇ ಹೀನಾಯವಾಗಿ ಸೋತಿದ್ದಾರೆ. ಈ ಮಧ್ಯೆ ಚುನಾವಣೆಯಲ್ಲಿ ಸೋತರೂ ಕೇಜ್ರಿವಾಲ್‌ ಪಂಜಾಬಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Delhi Election Result: ದಿಲ್ಲಿ ಚುನಾವಣೆಯಲ್ಲಿ ಅತೀ ಹೆಚ್ಚು, ಅತೀ ಕಡಿಮೆ ಅಂತರದಿಂದ ಗೆದ್ದವರು

ದಿಲ್ಲಿ ರಿಸಲ್ಟ್: ಅತೀ ಹೆಚ್ಚು, ಅತೀ ಕಡಿಮೆ ಗೆಲುವಿನ ಅಂತರವೆಷ್ಟು ಗೊತ್ತೇ?

ದೆಹಲಿ ವಿಧಾನಸಭೆಯ ಮತದಾನದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದು ಆಡಳಿತಾ ರೂಢ ಆಮ್ ಆದ್ಮಿ ಪಕ್ಷಕ್ಕೆ ಮತದಾರ ಸೋಲಿನ ರುಚಿ ತೊರಿಸಿದ್ದಾನೆ. ಈ ಫಲಿತಾಂಶದಲ್ಲಿ ಅತೀ ಹೆಚ್ಚು ಮತ್ತು ಅತೀ ಕಡಿಮೆ ಗೆಲುವಿನ ಅಂತರದ ವಿವರ ಇಲ್ಲಿದೆ...

BJP Dominance: ದೇಶದ 15 ರಾಜ್ಯಗಳಲ್ಲಿ ಕೇಸರಿ ಪಡೆಯ ಆಧಿಪತ್ಯ: 4 ದಶಕಗಳ ನಂತರ ಇತಿಹಾಸ ಬರೆದ ಬಿಜೆಪಿ!

ದೇಶದ 15 ರಾಜ್ಯಗಳಲ್ಲಿ ʼಕಮಲ‌ʼ ಕಮಾಲ್!

ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆ ಮೂಲಕ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ಭದ್ರಕೋಟೆಯಾಗಿಸಿಕೊಂಡಿದ್ದ ಆಮ್‌ ಆದ್ಮಿ ಈ ಬಾರಿಯ ಚುನಾವಣೆಯಲ್ಲಿ ಮಕಾಡೆ ಮಲಗಿದೆ. ಆಪ್‌ನ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಇದೀಗ ದೆಹಲಿಯಲ್ಲಿ ಅಧಿಕಾರವನ್ನು ಪಡೆಯುವ ಮೂಲಕ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

Atishi Marlena: ದೆಹಲಿ ಚುನಾವಣೆಯಲ್ಲಿ ಮುಗ್ಗರಿಸಿದ ಆಪ್: ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ!

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ!

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ‌ ಆಪ್ ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ಅತಿಶಿ ಇಂದು (ಫೆ.9) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅತಿಶಿ ಬೆಳಗ್ಗೆ 11 ಗಂಟೆ ಸುಮಾರಿಗೆ ರಾಜಭವನಕ್ಕೆ ತೆರಳಿ ಲೆಫ್ಟಿನಂಟ್ ಗವರ್ನರ್ ವಿ.ಕೆ. ಸಕ್ಕೇನಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಒಂದು ದಶಕ ಅಧಿಪತ್ಯ ಸಾಧಿಸಿದ್ದ ಆಮ್ ಆದ್ಮಿ ಪಕ್ಷದ ಆಡಳಿತ ಇದೀಗ ಅಂತ್ಯವಾಗಿದೆ.

Oath ceremony : ದೆಹಲಿಯ ನೂತನ ಸಿಎಂ ಪ್ರಮಾಣವಚನ ಯಾವಾಗ? ಇಲ್ಲಿದೆ ಮಾಹಿತಿ

ದೆಹಲಿಯ ನೂತನ ಸಿಎಂ ಪ್ರಮಾಣವಚನ ಯಾವಾಗ?

ಮುಖ್ಯ ಮಂತ್ರಿ ಪದಗ್ರಹಣ ಸಮಾರಂಭ ಕಾರ್ಯಕ್ರಮ ಕೊಂಚ ವಿಳಂಬವಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಅವರು ಭಾರತಕ್ಕೆ ಹಿಂದಿರುಗುವ ವರೆಗೂ ದೆಹಲಿ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮ ನಡೆಯುವುದು ಬಹುತೇಕ ಅನುಮಾನ.

Narendra Modi: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಜಾಗತಿಕ ಮಾಧ್ಯಮಗಳು ಹೇಳಿದ್ದೇನು?

ದೆಹಲಿ ಚುನಾವಣೆ: ಬಿಜೆಪಿ ಗೆಲುವನ್ನು ವಿಶ್ಲೇಷಿಸಿದ ಜಾಗತಿಕ ಮಾಧ್ಯಮಗಳು!

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲುವನ್ನು ಸಾಧಿಸಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಏರಿದ್ದು,ಆ ಮೂಲಕ ಪ್ರಧಾನಿ ನರೇಂದ್ರ ಅವರಿಗಿದ್ದ ಸ್ಟಾರ್‌ ಇಮೇಜ್ ಮರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 78 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇತ್ತ ದೆಹಲಿ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವನ್ನು ಜಾಗತಿಕ ಮಾಧ್ಯಮಗಳು ವಿಶ್ಲೇಷಿಸಿವೆ.

Delhi Election: ದೆಹಲಿಯ ಫಲಿತಾಂಶ ರಾಷ್ಟ್ರಮಟ್ಟದಲ್ಲಿ ಮುಖ್ಯ‌ ಏಕೆ?

ದೆಹಲಿಯಲ್ಲಿ ಬಿಜೆಪಿ ಕಮಾಲ್‌; ಗೆಲುವಿಗೆ ಕಾರಣವೇನು?

ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ (BJP) ಅಧಿಕ್ಕಾರಕ್ಕೇರಿದೆ. ಹತ್ತು ವರ್ಷ ಆಡಳಿತ ನಡೆಸಿದ್ದ ಆಮ್‌ ಆದ್ಮಿ ಪಕ್ಷ ಹೀನಾಯ ಸೋಲನ್ನು ಕಂಡಿದೆ. 2019 ರಲ್ಲಿ ದೆಹಲಿಯ ಎಲ್ಲಾ ಏಳು ಸಂಸದೀಯ ಕ್ಷೇತ್ರಗಳನ್ನು ಹಾಗೂ 2024 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಇದೀಗ ದೆಹಲಿಯಲ್ಲಿ ಕಮಲ ಅರಳಿದೆ.

PM Narendra Modi: ಶಾರ್ಟ್ ಕಟ್ ರಾಜಕೀಯಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿದೆ; ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ದಿಲ್ಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಅಡಿದ ಪ್ರಧಾನಿ ನರೇಂದ್ರ ಮೋದಿ ಆಪ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

PM Narendra Modi: ಅಸ್ವಸ್ಥ ಬಿಜೆಪಿ ಕಾರ್ಯಕರ್ತನಿಗಾಗಿ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ಮೋದಿ

ಬಿಜೆಪಿ ಕಾರ್ಯಕರ್ತನಿಗಾಗಿ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ಮೋದಿ

ಸುಮಾರು 27 ವರ್ಷಗಳ ಬಳಿಕ ಬಿಜೆಪಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದಿದೆ. 48 ಕ್ಷೇತ್ರಗಳಲ್ಲಿ ಕಮಲ ಪಡೆ ಜಯಗಳಿಸಿದ್ದು, ಆಪ್‌ನ ಹ್ಯಾಟ್ರಿಕ್‌ ಕನಸು ನುಚ್ಚು ನೂರಾಗಿದೆ. ಬಿಜೆಪಿ ಗೆಲುವಿನ ಬೆನ್ನಲ್ಲೇ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಸಾವಿರಾರು ಕಾರ್ಯಕರ್ರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಕಾರ್ಯಕರ್ತನನ್ನು ಗಮನಿಸಿ ತಮ್ಮ ಭಾಷಣವನ್ನು ಕೆಲಹೊತ್ತು ನಿಲ್ಲಿಸಿ ಆತನನ್ನು ಉಪಚರಿಸುವಂತೆ ಕೇಳಿಕೊಂಡರು.

Delhi Election Results 2025: ದಿಲ್ಲಿಯಲ್ಲಿ ಆಪ್‌ ನೆಲ ಕಚ್ಚಿದ್ದು ಹೇಗೆ? ಇಲ್ಲಿದೆ ಟಾಪ್‌ 6 ಕಾರಣಗಳು

ದಿಲ್ಲಿಯಲ್ಲಿ ಆಪ್‌ ನೆಲ ಕಚ್ಚಿದ್ದು ಹೇಗೆ? ಇಲ್ಲಿದೆ ಟಾಪ್‌ 6 ಕಾರಣಗಳು

ದಿಲ್ಲಿಯಲ್ಲಿ ಸುಮಾರು 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. 10 ವರ್ಷಗಳ ಕಾಲ ಆಡಳಿತ ನಡೆಸಿದ್ದ ಆಪ್‌ ನೆಲ ಕಚ್ಚಿದ್ದು, ಕಾಂಗ್ರೆಸ್‌ ಮತ್ತೆ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಹಾಗಾದರೆ ಆಪ್‌ ಸೋಲಿಗೆ ಕಾರಣವಾದ ಅಂಶವೇನು? ಬಿಜೆಪಿ ಗೆದ್ದಿದ್ದು ಹೇಗೆ? ಇಲ್ಲಿದೆ ವಿವರ.

PM Narendra Modi: ದಿಲ್ಲಿ ಇನ್ಮುಂದೆ ಆಪ್‌ ಮುಕ್ತ;  ವಿಕಾಸ, ವಿಶ್ವಾಸ್‌, ವಿಷನ್‌ಗೆ ಸಿಕ್ಕ ಗೆಲುವಿದು-ಪ್ರಧಾನಿ ಮೋದಿ ಅಬ್ಬರ

10ವರ್ಷಗಳ ನಂತರ ದಿಲ್ಲಿ ಆಪತ್ತಿನಿಂದ ಪಾರಾಗಿದೆ- ಪ್ರಧಾನಿ ಮೋದಿ

ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಜೊತೆ ಸಂಭ್ರಮಾಚರಿಸಿದ್ದಾರೆ. ಇದೇ ವೇಳೆ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

Milkipur Bypoll Result 2025: ಅಯೋಧ್ಯೆ ಸೋಲಿಗೆ ಭರ್ಜರಿ ಸೇಡು ತೀರಿಸಿಕೊಂಡ ಬಿಜೆಪಿ; ಮಿಲ್ಕಿಪುರ ಉಪಚುನಾವಣೆಯಲ್ಲಿ ಜಯಭೇರಿ

ಮಿಲ್ಕಿಪುರ ಉಪಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ

ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಭರ್ಜರಿ ಜಯಗಳಿಸಿದೆ. ಆ ಮೂಲಕ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಳಗೊಂಡ ಫೈಝಾಬಾದ್‌ ಕ್ಷೇತ್ರದ ಸೋಲಿಗೆ ಸೇಡಿ ತೀರಿಸಿಕೊಂಡಿದೆ. ಬಿಜೆಪಿಯ ಚಂದ್ರಭಾನು ಪಾಸ್ವಾನ್‌ 61,710 ಮತಗಳ ಅಂತರದಿಂದ ಗೆದ್ದಿದ್ದಾರೆ.

Swati Maliwal: ಕೇಜ್ರಿವಾಲ್‌ಗೆ ಸೋಲು: ದ್ರೌಪದಿ ವಸ್ತ್ರಾಪಹರಣದ ಪೋಸ್ಟ್‌ ಶೇರ್‌ ಮಾಡಿದ ಸ್ವಾತಿ ಮಲಿವಾಲ್!

ಕೇಜ್ರಿವಾಲ್‌ಗೆ ಸೋಲು: ದ್ರೌಪದಿ ವಸ್ತ್ರಾಪಹರಣದ ಪೋಸ್ಟ್‌ ಫುಲ್‌ ವೈರಲ್!

ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್‌ ಕೇಜ್ರಿವಾಲ್‌ ಕೂಡ‌ ಹೀನಾಯವಾಗಿ ಸೋತಿದ್ದಾರೆ. ಕೇಜ್ರಿವಾಲ್‌ ಸೋತ ಬೆನ್ನಲ್ಲೇ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ದ್ರೌಪದಿ ವಸ್ತ್ರಾಪಹರಣದ ಪೋಸ್ಟ್‌ವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಇದೀಗ ಅದು ಫುಲ್‌ ವೈರಲ್‌ ಆಗಿದೆ.

Delhi Election Result 2025: ಭ್ರಷ್ಟಾಚಾರದ ವಿರೋಧಿಸುತ್ತಾ ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲ್ ಮುಖವಾಡ ಕಳಚಿ ಬಿದ್ದಿದೆ-ವಿಜಯೇಂದ್ರ

ಕೇಜ್ರಿವಾಲ್ ಮುಖವಾಡ ಕಳಚಿ ಬಿದ್ದಿದೆ: ವಿಜಯೇಂದ್ರ

Delhi Election Result 2025: ದೆಹಲಿ ರಾಜ್ಯದಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರ ಮುಖವಾಡ ಕಳಚಿ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Delhi Election Results 2025: 27 ವರ್ಷಗಳ ಬಿಜೆಪಿಯ ವನವಾಸ ಅಂತ್ಯ;  ಪ್ರಚಂಡ ಗೆಲುವಿಗೆ ಕಾರ್ಯಕರ್ತರ ಸಂಭ್ರಮಾಚರಣೆ

ದಿಲ್ಲಿಯಲ್ಲಿ ಪ್ರಚಂಡ ಗೆಲುವು; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಫೆ. 5ರಂದು ನಡೆದ ಹೊಸದಿಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಅಂತ್ಯಗೊಂಡಿದ್ದು, ಬಿಜೆಪಿ ಅಧಿಕಾರಕ್ಕೆ ಮರಳಿದೆ. ಸುಮಾರು 27 ವರ್ಷಗಳ ಬಳಿಕ ಕೇಸರಿ ಪಡೆ ರಾಷ್ಟ್ರ ರಾಜಧಾನಿಯಲ್ಲಿ ಗದ್ದುಗೆಗೆ ಏರಿದ್ದು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

Delhi Election Result 2025: ʼಕೈʼ  ಹಿಡಿಯದ  ಗ್ಯಾರಂಟಿ ಯೋಜನೆಗಳು; ಕಾಂಗ್ರೆಸ್‌ ಯುಗಾಂತ್ಯಕ್ಕೆ ಕಾರಣವೇನು?

ದೆಹಲಿಯಲ್ಲಿ ಕಾಂಗ್ರೆಸ್‌ ಯುಗಾಂತ್ಯ- ʼಕೈʼ ಕೊಟ್ಟ ಗ್ಯಾರಂಟಿ ಯೋಜನೆ!

ದೆಹಲಿ ಚುನಾವಣೆಯ ತ್ರಿಕೋನ ಸ್ವರ್ಧೆಯಲ್ಲಿ ಕಾಂಗ್ರೆಸ್‌ ಶೂನ್ಯ ಸುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್‌ ಕೈ ಹಿಡಿದಿದ್ದ ಗ್ಯಾರಂಟಿ ಯೋಜನೆಗಳು ಉತ್ತರದಲ್ಲಿ ಕೈ ಕೊಟ್ಟಿವೆ. ದೆಹಲಿಯ ಮತದಾರರು ಕಾಂಗ್ರೆಸ್‌ಗೆ ಬಿಗ್‌ ಶಾಕ್‌ ನೀಡಿದ್ದಾರೆ. ಕೇವಲ ಗ್ಯಾರಂಟಿಗಳನ್ನು ನಂಬಿಕೊಂಡು ಚುನಾವಣೆಯನ್ನು ಎದುರಿಸಿದ್ದ ಕಾಂಗ್ರೆಸ್‌ ಇದೀಗ ಬೆಲೆ ತೆತ್ತಿದೆ.

Aravind Kejriwal: ಜನಾದೇಶವನ್ನು ಒಪ್ಪಿಕೊಳ್ಳುತ್ತೇನೆ- ಅರವಿಂದ ಕೇಜ್ರಿವಾಲ್ ಫಸ್ಟ್‌ ರಿಯಾಕ್ಷನ್‌

ಹೀನಾಯ ಸೋಲಿನ ಬೆನ್ನಲ್ಲೇ ಕೇಜ್ರಿವಾಲ್‌ ಫಸ್ಟ್‌ ರಿಯಾಕ್ಷನ್‌

ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಅಧಿಪತ್ಯ ಸಾಧಿಸಿದ್ದ ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್‌ ಕೇಜ್ರಿವಾಲ್‌ ಕೂಡ‌ ಹೀನಾಯವಾಗಿ ಸೋತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಜ್ರಿವಾಲ್‌ ಜನಾದೇಶವನ್ನು ಮತ್ತು ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

Delhi Election Result 2025: ಅಭಿವೃದ್ಧಿ ಗೆದ್ದಿದೆ; ದಿಲ್ಲಿಯ ಪ್ರಚಂಡ ಗೆಲುವಿಗೆ ಮತದಾರರಿಗೆ ಧನ್ಯವಾದ ಅರ್ಪಿಸಿದ ಮೋದಿ

ದಿಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದ ಮೋದಿ

ದಿಲ್ಲಿಯಲ್ಲಿ ಸುಮಾರು 27 ವರ್ಷಗಳ ಬಳಿಕ ಬಿಜೆಪಿ ಗದ್ದುಗೆ ಏರಿದ್ದು, ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದ ಆಪ್‌ಗೆ ನಿರಾಸೆಯಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಂಡ ಗೆಲುವಿಗಾಗಿ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Delhi Election Result: ಭ್ರಷ್ಟ ಮಾಜಿ ಸಿಎಂ ಕೇಜ್ರಿವಾಲ್‌ ಮುಖವಾಡ ಕಳಚಿದೆ: ಬಿ.ವೈ.ವಿಜಯೇಂದ್ರ

ಭ್ರಷ್ಟ ಮಾಜಿ ಸಿಎಂ ಕೇಜ್ರಿವಾಲ್‌ ಮುಖವಾಡ ಕಳಚಿದೆ: ಬಿ.ವೈ.ವಿಜಯೇಂದ್ರ

Delhi Election Result: ದೆಹಲಿ ಚುನಾವಣೆ ಫಲಿತಾಂಶ ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಸಂದೇಶವನ್ನು ದೆಹಲಿಯ ಜನತೆ ಬಿಜೆಪಿ ಗೆಲ್ಲಿಸುವ ಮೂಲಕ ಪಸರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

Arvind Kejriwal: ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದಿಂದಲೇ  ಆರಂಭ! ಭ್ರಷ್ಟಾಚಾರದಿಂದಲೇ ಅಂತ್ಯ!

ಭ್ರಷ್ಟಾಚಾರದಿಂದಲೇ ಆರಂಭಗೊಂಡ ಕೇಜ್ರಿವಾಲ್ ರಾಜಕೀಯ ಏರಿಳಿತ ಹೇಗಿತ್ತು?

ಅರವಿಂದ ಕೇಜ್ರಿವಾಲ್ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರನ್ನು ಬಿಜೆಪಿಯ ಪರ್ವೇಶ್ ವರ್ಮಾ ಸೋಲಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಸ್ವತಃ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿ ಜೈಲು ಪಾಲಾಗಿ ರಾಜಕೀಯವಾಗಿ ಅಧಪತನ ಕಂಡಿದ್ದಾರೆ.

Delhi Election Results 2025: ದಿಲ್ಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಬಿಜೆಪಿಯ ಪರ್ವೇಶ್‌ ವರ್ಮಾಗೆ ಜಯ; ಯಾರಿವರು? ಹಿನ್ನೆಲೆ ಏನು?

ಕೇಜ್ರಿವಾಲ್‌ಗೆ ಸೋಲುಣಿಸಿದ ಬಿಜೆಪಿಯ ಪರ್ವೇಶ್‌ ವರ್ಮಾ ಹಿನ್ನೆಲೆ ಏನು?

ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಿಜೆಪಿಯ ಪರ್ವೇಶ್‌ ವರ್ಮಾ ಸೋಲಿಸಿದ್ದಾರೆ. ಇವರು ಹೊಸದಿಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈ ಕಾರಣಕ್ಕೆ ಹೊಸದಿಲ್ಲಿ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿತ್ತು. ದಿಲ್ಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ.

Delhi Election Result 2025: ದೆಹಲಿಯಲ್ಲಿ ಆಪ್‌ಗೆ ಭಾರೀ ಮುಖಭಂಗ; ಹೀನಾಯ ಸೋಲಿಗೆ ಕಾರಣಗಳೇನು?

ಆಪ್‌ ಸೋಲಿಗೆ ಕಾರಣವಾದ ಅಂಶಗಳೇನು? ಇಲ್ಲಿದೆ ಡಿಟೇಲ್ಸ್‌

ಬಹು ನಿರೀಕ್ಷಿತ ದೆಹಲಿ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸುವ ಮೂಲಕ ವಿಜಯದ ನಗೆ ಬೀರಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಅಧಿಪತ್ಯ ಸಾಧಿಸಿದ್ದ ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್‌ ಕೇಜ್ರಿವಾಲ್‌ ಕೂಡ ಸೋತಿದ್ದಾರೆ. ಹಾಗಿದ್ದರೆ ಆಪ್‌ ಸೋಲಿಗೆ ಕಾರಣವಾದ ಅಂಶಗಳೇನು? ಇಲ್ಲಿದೆ ಡಿಟೇಲ್ಸ್‌