ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauranga Das: ಬ್ಯಾಚ್‌ಮೇಟ್ ಆಗಿದ್ದ ಸನ್ಯಾಸಿಯನ್ನು ಭೇಟಿಯಾದಾಗ ಸುಂದರ್ ಪಿಚೈ ಹೇಳಿದ್ದೇನು?

ಐಐಟಿಯಲ್ಲಿ ಸುಂದರ್ ಪಿಚೈ ಅವರ ಬ್ಯಾಚ್‌ಮೇಟ್ ಆಗಿದ್ದವರು ಸನ್ಯಾಸಿಯಾಗಿ ಬದಲಾಗಿರುವುದು ಮತ್ತು ಇತ್ತೀಚೆಗೆ ಅವರಿಬ್ಬರು ಭೇಟಿಯಾಗಿರುವ ಸುದ್ದಿ ವೈರಲ್‌ ಆಗಿತ್ತು. ಐಐಟಿಯಲ್ಲಿ ಒಂದೇ ಬ್ಯಾಚ್‌ನಲ್ಲಿ ಅಧ್ಯಯನ ಮಾಡಿದ್ದರು ಗೌರಂಗಾ ದಾಸ್ ಮತ್ತು ಸುಂದರ್ ಪಿಚೈ. ಅವರಿಬ್ಬರೂ ಕಾಲೇಜು ದಿನಗಳಲ್ಲಿ ಎಂದಿಗೂ ಭೇಟಿಯಾಗಿರಲಿಲ್ಲ. ಯಾಕೆಂದರೆ ಅವರು ಐಐಟಿಯ ಬೇರೆ ಬೇರೆ ಶಾಖೆಗಳಲ್ಲಿ ಅಧ್ಯಯನ ಮಾಡಿದ್ದರು.

ಸನ್ಯಾಸಿಯಾಗಿರುವ ಸುಂದರ್ ಪಿಚೈ ಬ್ಯಾಚ್‌ಮೇಟ್ ಯಾರು ಗೊತ್ತೇ?

ನವದೆಹಲಿ: ಬಾಲ್ಯದಲ್ಲಿ ಒಟ್ಟಿಗೆ ಓದಿ ಬೆಳದವರಲ್ಲಿ ಕೆಲವರು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದರೆ ಇನ್ನು ಕೆಲವರು ಯಾವುದೋ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಕೆಲಸ ಮಾಡುವುದನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಇವರು ಮತ್ತೆ ಒಬ್ಬರನ್ನೊಬ್ಬರು ಕಾಣುವುದು ಬಹಳ ಅಪರೂಪ. ಆದರೆ ಗೂಗಲ್ ಸಿಇಒ ಸುಂದರ್ ಪಿಚೈ (Google ceo Sundar Pichai) ಅವರ ಬ್ಯಾಚ್ ಮೇಟ್ (IIT Batchmate) ಒಬ್ಬರು ಸನ್ಯಾಸಿ (Gauranga Das)ಯಾಗಿದ್ದಾರೆ. ಅವರು ಇದೀಗ ಪಿಚೈ ಅವರೊಂದಿಗಿನ ಮರು ಭೇಟಿಯನ್ನು ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಐಐಟಿಯಲ್ಲಿ ಸುಂದರ್ ಪಿಚೈ ಅವರ ಬ್ಯಾಚ್‌ಮೇಟ್ ಆಗಿದ್ದವರು ಸನ್ಯಾಸಿಯಾಗಿ ಬದಲಾಗಿರುವುದು ಮತ್ತು ಇತ್ತೀಚೆಗೆ ಅವರಿಬ್ಬರು ಭೇಟಿಯಾಗಿರುವ ಕ್ಷಣ ವೈರಲ್‌ ಆಗಿತ್ತು.

ಐಐಟಿಯಲ್ಲಿ ಒಂದೇ ಬ್ಯಾಚ್‌ನಲ್ಲಿ ಅಧ್ಯಯನ ಮಾಡಿದ್ದರು ಗೌರಂಗಾ ದಾಸ್ ಮತ್ತು ಸುಂದರ್ ಪಿಚೈ. ಅವರಿಬ್ಬರೂ ಕಾಲೇಜು ದಿನಗಳಲ್ಲಿ ಎಂದಿಗೂ ಭೇಟಿಯಾಗಿರಲಿಲ್ಲ. ಯಾಕೆಂದರೆ ಅವರು ಐಐಟಿಯ ಬೇರೆ ಬೇರೆ ಶಾಖೆಗಳಲ್ಲಿ ಅಧ್ಯಯನ ಮಾಡಿದ್ದರು. ಇಸ್ಕಾನ್‌ನ ಸಂತನಾಗಿರುವ ಗೌರಂಗಾ ದಾಸ್ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಬ್ಯಾಚ್‌ಮೇಟ್ ಎಂದು ಹೇಳಿಕೊಂಡಿದ್ದು, ಹಳೆಯ ದಿನಗಳನ್ನು ನೆನಪಿಸಿಕೊಂಡು ತಮ್ಮ ವಯಸ್ಸಿನವರೇ ಆದ ಪಿಚೈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

picchai1

ಇಂಡಿಯಾ ಗ್ಲೋಬಲ್ ಫೋರಮ್ 2025ರ ಅಂತಿಮ ದಿನದಂದು ಗೌರಂಗಾ ದಾಸ್ ಮಾತನಾಡಿ, ತಾವು ಐಐಟಿ ಬಾಂಬೆಯಲ್ಲಿ ಪದವೀಧರರಾಗಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮವು ಒತ್ತಡ ಮತ್ತು ಒಂಟಿತನ ಹೆಚ್ಚಾಗಲು ಹೇಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸಿದ ಅವರು, ಕಾಲೇಜು ದಿನಗಳಲ್ಲಿ ತಾವು ಎಂದಿಗೂ ಪಿಚೈ ಅವರನ್ನು ಭೇಟಿಯಾಗಿರಲಿಲ್ಲ. 53 ವರ್ಷದ ಬಳಿಕ ಲಂಡನ್‌ನಲ್ಲಿ ಪಿಚೈ ಅವರನ್ನು ಭೇಟಿಯಾದ ದಾಸ್ ಪಿಚೈ ಅವರ ಯೌವ್ವನದ ದಿನಗಳನ್ನು ಹೊಗಳಿದರು.

ಗೌರಂಗಾ ದಾಸ್ ತಮ್ಮ ಮಾತನ್ನು ಮುಂದುವರಿಸುತ್ತಾ, ʼʼನಾನು ಸುಂದರ್ ಪಿಚೈ ಅವರದ್ದೇ ಬ್ಯಾಚ್‌ನಲ್ಲಿ ಐಐಟಿಯಲ್ಲಿ ಅಧ್ಯಯನ ಮಾಡಿದ್ದೆ. ಅನೇಕ ವರ್ಷಗಳ ಅನಂತರ ನಾವು ಭೇಟಿಯಾದೆವು. ಆಗ ಅವರು ನಾನು ಅವರಿಗಿಂತ ಚಿಕ್ಕವರಾಗಿ ಕಾಣುತ್ತಿರುವುದಾಗಿ ಹೇಳಿದರು. ಅದಕ್ಕೆ ಉತ್ತರಿಸಿದ ನಾನು, ನೀವು ಒತ್ತಡವನ್ನು ಸೃಷ್ಟಿಸುವ ಗೂಗಲ್‌ನೊಂದಿಗೆ ವ್ಯವಹರಿಸುತ್ತೀರಿ. ನಾನು ಒತ್ತಡವನ್ನು ಬಿಡುಗಡೆ ಮಾಡುವ ದೇವರೊಂದಿಗೆ ವ್ಯವಹರಿಸುತ್ತೇನೆ ಎಂದು ಹೇಳಿದೆʼʼ ಎಂಬುದಾಗಿ ದಾಸ್ ನೆನಪಿಸಿಕೊಂಡರು.

ಇದನ್ನೂ ಓದಿ: ʻನನ್ನ ಟೆಸ್ಟ್‌ ಸರಾಸರಿ ಬಗ್ಗೆ ಈಗಲೂ ನೋವಿದೆʼ: ಶತಕದ ಹೊರತಾಗಿಯೂ ಕೆಎಲ್‌ ರಾಹುಲ್‌ ಬೇಸರ!

ಸಾಮಾಜಿಕ ಮಾಧ್ಯಮ ವ್ಯಸನದ ಬಗ್ಗೆ ಮಾತನಾಡಿದ ದಾಸ್, ನಮಗೆ ಒಂದು ದೊಡ್ಡ ಸಮಸ್ಯೆ ಇದೆ. ಜಾಗತಿಕವಾಗಿ 230 ಮಿಲಿಯನ್ ಜನರು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದಾರೆ. ಭಾರತದಲ್ಲಿ ಮಾತ್ರ, ಹದಿಹರೆಯದವರಲ್ಲಿ ಶೇ. 70ರಷ್ಟು ಜನರು ಪ್ರತಿದಿನ ಏಳು ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಕಳೆಯುತ್ತಾರೆ. ಪ್ರಪಂಚದಾದ್ಯಂತ ಏಳು ಜನರಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.

ಗೌರಂಗ ದಾಸ್ ಯಾರು?

ಐಐಟಿ ಬಾಂಬೆಯಿಂದ ಪದವೀಧರರಾಗಿರುವ ಗೌರಂಗ ದಾಸ್ ಇಸ್ಕಾನ್‌ನಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಲೇಖಕರೂ ಆಗಿದ್ದು, ʼದಿ ಆರ್ಟ್ ಆಫ್ ರೆಸಿಲಿಯನ್ಸ್ʼ ಮತ್ತು ʼದಿ ಆರ್ಟ್ ಆಫ್ ಫೋಕಸ್ʼ ಕೃತಿಗಳನ್ನು ರಚಿಸಿದ್ದಾರೆ.