ಪಾಕಿಸ್ತಾನದಲ್ಲಿ ಮತ್ತೊಂದು ಘೋರ ಕೃತ್ಯ; ಹಿಂದೂಗಳನ್ನು ಅಪಹರಿಸಿ ಇಸ್ಲಾಂಗೆ ಮತಾಂತರ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಹದಾದ್ಪುರದಲ್ಲಿ ನಾಲ್ವರು ಹಿಂದೂ ಸಮುದಾಯದವರನ್ನು ಅಪಹರಿಸಿ ಅಬರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ. ಈ ವಿಚಾರ ತೀವ್ರ ಕಳವಳವನನು ಹುಟ್ಟು ಹಾಕಿದು, ಹಿಂದೂಳ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಸದ್ಯ ಘಟನೆಯ ವಿಡಿಯೊ ವೈರಲ್ ಆಗಿದೆ.


ಇಸ್ಲಾಮಾದಾದ್: ಪಾಕಿಸ್ತಾನದಲ್ಲಿರುವ (Pakistan) ಹಿಂದೂಗಳು ಸುರಕ್ಷಿತರಲ್ಲ ಎನ್ನುವ ವಿಚಾರ ಜಗಜ್ಜಾಹೀರು. ಇದಕ್ಕೆ ಸಂಬಂಧಿಸಿ ಈ ಹಿಂದೆ ಅನೇಕ ಘಟನೆಗಳು ವರದಿಯಾಗಿದ್ದವು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಆ ಮೂಲಕ ಹಿಂದೂಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸಿಂಧ್ ಪ್ರಾಂತ್ಯದ ಶಹದಾದ್ಪುರದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಹಿಂದೂ ಒಡಹುಟ್ಟಿದವರು - ಮೂವರು ಸಹೋದರಿಯರು ಮತ್ತು ಅವರ ಸಹೋದರನನ್ನು ಅಪಹರಿಸಿ ಬಲವಂತವಾಗಿ (Forcibly Converted) ಇಸ್ಲಾಂಗೆ ಮತಾಂತರಿಸಲಾಗಿದೆ. ಆ ಮೂಲಕ ಅಲ್ಪ ಸಂಖ್ಯಾತ ಹಿಂದೂ ಸಮುದಾಯದವರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸಂತ್ರಸ್ತರನ್ನು 22 ವರ್ಷದ ಜಿಯಾ ಭಾಯಿ, 20 ವರ್ಷದ ದಿಯಾ ಭಾಯಿ, 16 ವರ್ಷದ ದಿಶಾ ಭಾಯಿ ಮತ್ತು ಅವರ ಸಹೋದರ 13 ವರ್ಷದ ಹರ್ಜೀತ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅವರ ತಾಯಿ ದೂರು ನೀಡಿದ್ದಾರೆ. ಸ್ಥಳೀಯ ಕಂಪ್ಯೂಟರ್ ಶಿಕ್ಷಕ ಫರ್ಹಾನ್ ಖಾಸ್ಖೇಲಿ ತನ್ನ ಮಕ್ಕಳನ್ನು ಅಪಹರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
The state of Hindus in Pakistan!
— Treeni (@TheTreeni) June 20, 2025
Three minor Hindu girls and a minor boy were abducted from Shahdadpur, Pakistan, and all the children were converted to Islam.
The mother of the children has been seen mourning and pleading with Bilawal Bhutto and the government for their… pic.twitter.com/wqUnGnw6HK
"ನನಗೆ ಮೂವರು ಹೆಣ್ಣುಮಕ್ಕಳು, ಓರ್ವ ಮಗನನ್ನು ಫರ್ಹಾನ್ ಕರೆದೊಯ್ದಿದ್ದಾನೆ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಧಾರ್ಮಿಕ ಮತಾಂತರವನ್ನು ತಡೆಗಟ್ಟಲು ಪಿಪಿಪಿ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಮಧ್ಯ ಪ್ರವೇಶಿಸಬೇಕೆಂದೂ ಮನವಿ ಮಾಡಿದ್ದಾರೆ.
ಈ ಮಕ್ಕಳನ್ನು ಮತಾಂತರಿಸಲಾಗುತ್ತಿದೆ ಎನ್ನಲಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಿಂದೂ ಮುಖಂಡರು ಇದನ್ನು "ಸಾಂಸ್ಕೃತಿಕ ಭಯೋತ್ಪಾದನೆ" ಎಂದು ಖಂಡಿಸಿದ್ದಾರೆ. ಹಿಂದೂ ಪಂಚಾಯತ್ ಮುಖ್ಯಸ್ಥ ರಾಜೇಶ್ ಕುಮಾರ್ ಈ ಘಟನೆಯನ್ನು ಸಮುದಾಯ ವಿಪತ್ತು ಎಂದು ಕರೆದಿದ್ದಾರೆ.
ಕಾನೂನು ಸಮರ
ಸದ್ಯ ಈ ಘಟನೆ ಕೋರ್ಟ್ ಮೆಟ್ಟಿಲೇರಿದೆ. ಕುಟುಂಬಸ್ಥರ ಪ್ರತಿಭಟನೆಯ ನಂತರ ಪೊಲೀಸರು ಸಂತ್ರಸ್ತರನ್ನು ಶಹದಾದ್ಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯವು ಇಬ್ಬರು ವಯಸ್ಕ ಸಹೋದರಿಯರಾದ ಜಿಯಾ ಮತ್ತು ದಿಯಾ (ವೈದ್ಯಕೀಯ ವಿದ್ಯಾರ್ಥಿನಿಯರು) ಅವರನ್ನು ಕರಾಚಿಯಲ್ಲಿರುವ ಆಶ್ರಯ ಗೃಹಕ್ಕೆ ಕಳುಹಿಸಲು ಆದೇಶಿಸಿದೆ. ಇಬ್ಬರು ಅಪ್ರಾಪ್ತ ವಯಸ್ಕರಾದ ದಿಶಾ (15) ಮತ್ತು ಹರ್ಜೀತ್ (13)ನನ್ನು ಪೋಷಕರೊಂದಿಗೆ ಕಳುಹಿಸಲಾಗಿದೆ. ಅದಾಗ್ಯೂ ಪಾಕಿಸ್ತಾನಿ ಮಾಧ್ಯಮಗಳು ಮತಾಂತರವನ್ನು ಸಮರ್ಥಿಸಿಕಂಡಿವೆ. ಇದು ಸ್ವಯಂಪ್ರೇರಿತವೆಂದು ವರದಿ ಮಾಡಿವೆ. ಮಕ್ಕಳನ್ನು ಶಹದಾದ್ಪುರದಿಂದ ಅಪಹರಿಸಿ, ಬಲವಂತವಾಗಿ ಮತಾಂತರಿಸಲಾಗಿದೆ ಎಂದು ಸಂತ್ರಸ್ತರ ಕುಟುಂಬ ಆರೋಪಿಸಿದೆ.
ವಿಚಾರಣೆಯ ಸಮಯದಲ್ಲಿ ಮಕ್ಕಳು ಒತ್ತಡದ್ದಂತೆ ಕಂಡುಬಂತು ಎಂದು ಅವರು ಪ್ರತಿಪಾದಿಸಿದ್ದಾರೆ. ಮಕ್ಕಳ ಹೇಳಿಕೆಗಳ ಆಧಾರದ ಮೇಲೆ ಆರೋಪಿಗಳಾದ ಜುಲ್ಫಿಕರ್ ಖಾಸ್ಖೇಲಿ ಮತ್ತು ಫರ್ಹಾನ್ನನ್ನು ನ್ಯಾಯಾಲಯ ಅಪಹರಣ ಆರೋಪಗಳಿಂದ ಖುಲಾಸೆಗೊಳಿಸಿದೆ.
ದಶಕಗಳಿಂದಲೂ ಕಿರುಕುಳ
ಈ ರೀತಿಯ ದೌರ್ಜನ್ಯವನ್ನು ಹಿಂದೂಗಳು ದಶಕಗಳಿಂದಲೂ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿಅಲ್ಪ ಸಂಖ್ಯತ ಹಿಂದೂಗಳನ್ನು ಮತಾಂತರಿಸಲಾಗುತ್ತಿದೆ. ಪ್ರತಿವರ್ಷ 1,000ಕ್ಕೂ ಹೆಚ್ಚು ಹಿಂದೂ ಹುಡುಗಿಯರನ್ನು ಅಪಹರಿಸಲಾಗುತ್ತಿದೆ ಎನ್ನುತ್ತದೆ ಅಂಕಿ-ಅಂಶ. ವೈಯಕ್ತಿಕ ದ್ವೇಷಕ್ಕಾಗಿ ಅಲ್ಪಸಂಖ್ಯಾತರ ವಿರುದ್ಧ ಧರ್ಮ ನಿಂದನೆಯ ಕಾನೂನುಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತದೆ. ಪ್ರಬಲ ಗುಂಪುಗಳು ಭೂಕಬಳಿಕೆಯ ಮೂಲಕ ಹಿಂದೂ ಕುಟುಂಬಗಳನ್ನು ವ್ಯವಸ್ಥಿತವಾಗಿ ಹೊರ ಹಾಕುತ್ತವೆ. ಈ ಬಗ್ಗೆ ಹಿಂದೂ ಸಂಘಟನೆಗಳು ಕಳವಳ ವ್ಯಕ್ತಪಡಿಸತ್ತಿವೆ.