ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunjay Kapur: ನಟಿ ಕರಿಷ್ಮಾ ಮಾಜಿ ಪತಿ ನಿಧನಕ್ಕೆ ಈ ವಿಚಾರವೇ ಕಾರಣವಾಯ್ತ?

ಉದ್ಯಮಿ ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಪೋಲೋ ಆಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು. ಇವರ ನಿಧನಕ್ಕೆ ಬಾಲಿವುಡ್ ತಾರೆಯರು, ಸಿನಿಮಾ ರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ‌. 53 ವರ್ಷದ ಉದ್ಯಮಿ ಸಂಜಯ್ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ದೇಹದ ಆರೋಗ್ಯ ಸುಸ್ಥಿತಿಯಲ್ಲಿದ್ದರೂ ಇವರಿಗೆ ಹೃದಯಾಘಾತ ಆಗಲು ಬೇರೆಯದ್ದೇ ಕಾರಣ ಇದೆ ಎಂದು ಹೇಳಲಾಗುತ್ತಿದೆ.

ನಟಿ ಕರಿಷ್ಮಾ ಮಾಜಿ ಪತಿ ನಿಧನಕ್ಕೆ ಕಾರಣ ಏನು?

Sunjay Kapur

Profile Pushpa Kumari Jun 14, 2025 10:11 PM

ಮುಂಬೈ: ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ (Sunjay Kapur) ಇಂಗ್ಲೆಂಡ್‌ನಲ್ಲಿ ಪೋಲೋ ಆಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು. ಇವರ ನಿಧನಕ್ಕೆ ಬಾಲಿವುಡ್ ತಾರೆಯರು, ಸಿನಿಮಾ ರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ‌. 53 ವರ್ಷದ ಉದ್ಯಮಿ ಸಂಜಯ್ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ದೇಹದ ಆರೋಗ್ಯ ಸುಸ್ಥಿತಿಯಲ್ಲಿದ್ದರೂ ಇವರಿಗೆ ಹೃದಯಾಘಾತ ಆಗಲು ಬೇರೆಯದ್ದೇ ಕಾರಣ ಇದೆ ಎಂದೆ ಹೇಳಲಾಗುತ್ತಿದೆ. ಜೇನು ನೊಣ ಸಂಜಯ್ ಅವರ ಪ್ರಾಣಕ್ಕೆ ಕುತ್ತು ತಂದಿದೆ ಎನ್ನುವ ವಿಚಾರವು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಉದ್ಯಮಿ ಸಂಜಯ್ ನಿಧನ ಹೊಂದಿದ್ದಕ್ಕೆ ವ್ಯವಹಾರ ಸಲಹೆಗಾರ ಸುಹೇಲ್ ಸೇಠ್ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್ ಜೆ. ಕಪೂರ್ ಅವರು ಪೋಸ್ಟ್‌ ಶೇರ್‌ ಮಾಡಿ ಅದರಲ್ಲಿ, ಜೂನ್ 12ರಂದು ಇಂಗ್ಲೆಂಡ್‌ನಲ್ಲಿ ಹಠಾತ್ ಹೃದಯಾಘಾತದಿಂದ ಅಕಾಲಿಕ ನಿಧನರಾದರು ಎಂದು ನಾವು ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ. ಕಪೂರ್ ಜೇನು ನೊಣವನ್ನು ನುಂಗಿದ ನಂತರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಸಂಜಯ್ ಕಪೂರ್ ಅವರಿಗೆ ಕ್ರೀಡಾಸಕ್ತಿ ಇತ್ತು. ಸಂಜಯ್ ಕಪೂರ್ ಪೋಲೋ ಪ್ರೇಮಿಯಾಗಿದ್ದು ತಮ್ಮ ನೆಚ್ಚಿನ ಆಟ ಆಡುತ್ತಿರುವಾಗಲೇ ಅಸುನೀಗುವ ದುಸ್ಥಿತಿ ಇವರಿಗೆ ಎದುರಾಗಿದೆ. ಸಂಜಯ್ ಕಪೂರ್ ಎಂದಿನಂತೆ ಪೋಲೋ ಆಡುತ್ತಿರುವಾಗ ಆಕಸ್ಮಿಕವಾಗಿ ಜೇನು ನೊಣವೊಂದು ಅವರ ಬಾಯಿಯ ಒಳಗೆ ಪ್ರವೇಶಿಸಿತ್ತು. ಇದನ್ನರಿಯದ ಅವರು ಆ ಜೇನು ನೊಣವನ್ನು ನುಂಗಿದ್ದರು. ಇದರಿಂದನೇ ಹೃದಯಾಘಾತವಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಹಾಗಾದರೆ ಜೇನು ನೊಣ ನುಂಗಿದರೆ ಹೃದಯಾಘಾತ ಆಗಲಿದೆಯೇ ಎಂಬ ಚರ್ಚೆ ಇದೀಗ ಉಂಟಾಗುತ್ತಿದೆ.

ಇದನ್ನು ಓದಿ: Thimmana Mottegalu Movie: ಟ್ರೈಲರ್‌ನಲ್ಲೇ ಕುತೂಹಲ ಮೂಡಿಸಿದ ʼತಿಮ್ಮನ ಮೊಟ್ಟೆಗಳುʼ

ಜೇನು ನೊಣ ಕಚ್ಚಿದ್ದ ಸಂದರ್ಭದಲ್ಲಿ ಕೆಲವೊಮ್ಮೆ ಸಾವು ಸಂಭವಿಸುವುದು ಇದೆ. ಆದರೆ ಜೇನು ನೊಣ ನುಂಗಿದಂತಹ ಸಂದರ್ಭದಲ್ಲಿ ಅದು ಕಚ್ಚಿದರೆ ಗಂಟಲಿನ ಒಳ ಭಾಗ ದಪ್ಪ ಆಗಲಿದ್ದು ಉಸಿರಾಟ ಸಮಸ್ಯೆ ಬರಲಿದೆ. ಆದರೆ ಉದ್ಯಮಿ ಸಂಜಯ್ ಕಪೂರ್ ಜೇನು ಹುಳು ನುಂಗಿ ಗಾಬರಿಯಾದ ಹಿನ್ನೆಲೆ ಹೃದಯ ಸ್ತಂಭನವಾಗಿರುವ ಸಾಧ್ಯತೆ ಇದೆ. ಜೇನು ನೊಣದಲ್ಲಿ ವಿಷಕಾರಿ ಅಂಶವಿದ್ದು, ಕೆಲವು ವ್ಯಕ್ತಿಗಳಿಗೆ ಅನಾ ಫಿಲ್ಯಾಕ್ಸಿಸ್ ಎಂಬ ಅಲರ್ಜಿಯೂ ಉಂಟಾಗುತ್ತದೆ. ಇದು ರಕ್ತದೊತ್ತಡವಾಗಿ ಹಠಾತ್ ಕುಸಿತ, ಉಸಿರಾಟ ಸಮಸ್ಯೆ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.