ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಡಯಾಬಿಟಿಸ್‌ ನಿಯಂತ್ರಣ, ಚರ್ಮದ ಸಂರಕ್ಷಣೆಗೆ ಮೂಲಂಗಿ ತಿನ್ನಿ

ಮೂಲಂಗಿ ಅದ್ಭುತ ತರಕಾರಿ. ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳು ಇದರಲ್ಲಿದೆ. ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದ್ದು, ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಇದರ ಸೇವನೆ ಅಗತ್ಯವಾಗಿದ್ದು ಆಯುರ್ವೇದದಲ್ಲಿಯೂ ಇದಕ್ಕೆ ವಿಶೇಷ ಸ್ಥಾನವಿದೆ.

ಆರೋಗ್ಯದ ಗಣಿ ಮೂಲಂಗಿ

ಸಂಗ್ರಹ ಚಿತ್ರ -

Profile
Pushpa Kumari Jan 20, 2026 7:00 AM

ಬೆಂಗಳೂರು, ಜ. 20: ನಮ್ಮಲ್ಲಿ ಅನೇಕರು ಮೂಲಂಗಿ (Radish) ಅಂತ ಹೆಸರು ಹೇಳಿದಾಗ ಹಿಂದೇಟು ಹಾಕುವವರೇ ಹೆಚ್ಚು. ಆದರೆ ಇದರ ಆರೋಗ್ಯ ಲಾಭವನ್ನು ತಿಳಿದರೆ ಖಂಡಿತ ನೀವು ಸೇವಿಸುತ್ತೀರಿ. ಈ ಅದ್ಭುತವಾದ ತರಕಾರಿಯಲ್ಲಿ ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳು ಇವೆ. ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಇದರ ಸೇವನೆ ಅಗತ್ಯವಾಗಿದ್ದು ಆಯುರ್ವೇದದಲ್ಲಿಯೂ ಇದಕ್ಕೆ ವಿಶೇಷ ಸ್ಥಾನವಿದೆ.

ಮೂಲಂಗಿಯ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಗೆ ಸಹಕಾರಿ: ಮೂಲಂಗಿ ಅತ್ಯುತ್ತಮ ನೈಸರ್ಗಿಕ ಜೀರ್ಣಕಾರಿ ಪೋಷಕಾಂಶಗಳನ್ನು ಹೊಂದಿದೆ. ಇದು ಮಲಬದ್ಧತೆಯನ್ನು ತಡೆಗಟ್ಟಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಊಟಕ್ಕೆ ಮೊದಲು ಜೀರ್ಣ ಕ್ರಿಯೆಯನ್ನು ಉತ್ತೇಜಿಸಲು ಇದನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ. ಹಾಗಾಗಿ ಮೂಲಂಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬುವುದು, ಅಜೀರ್ಣ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಬಹುದು ಮತ್ತು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಸಹ ಕಾಪಾಡಿಕೊಳ್ಳಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಮೂಲಂಗಿ ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಪ್ರಬಲ ಉತ್ಕರ್ಷಣ ಶಕ್ತಿ ಹೊಂದಿದೆ. ಇದರಲ್ಲಿರುವ 'ರಾಫನಿನ್' ಎಂಬ ಸಂಯುಕ್ತವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರಿಂದ ದೇಹವು‌ ಸೋಂಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮಧುಮೇಹ ನಿರ್ವಹಣೆ: ಮಧುಮೇಹ ಇದ್ದ ವ್ಯಕ್ತಿಗಳಿಗೆ ಮೂಲಂಗಿ ಹೆಚ್ಚು ಪ್ರಯೋಜನಕಾರಿಯಾಗಿದೆ. 2024ರ ಅಧ್ಯಯನ ಸೇರಿದಂತೆ ಇತ್ತೀಚಿನ ಸಂಶೋಧನೆಯ ಪ್ರಕಾರ ಮೂಲಂಗಿ ಬೇರಿನ ಸಾರಗಳು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ನಾರಿನಾಂಶವು ರಕ್ತಕ್ಕೆ ಸಕ್ಕರೆ ಸೇರುವ ವೇಗವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಅತ್ಯುತ್ತಮ ಆಹಾರ.

ಯಕೃತ್ತು ಮತ್ತು ಮೂತ್ರಪಿಂಡಗಳ ರಕ್ಷಣೆಗೆ: ಮೂಲಂಗಿಯು ದೇಹದ ವಿಷಕಾರಿ ಅಂಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮೂಲಂಗಿ ರಸವನ್ನು ಸಾಮಾನ್ಯವಾಗಿ ಕಾಮಾಲೆಗೆ ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. ಏಕೆಂದರೆ ಇದು ರಕ್ತದಿಂದ ಹೆಚ್ಚುವರಿ ಬಿಲಿರುಬಿನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದರಿಂದಾಗಿ ಯಕೃತ್ತಿನ ಕಾರ್ಯವೈಖರಿ ಕೂಡ ಸುಧಾರಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಈ ಆಹಾರ ಕ್ರಮ ಅಳವಡಿಸಿ

ಚರ್ಮದ ರಕ್ಷಣೆಗಾಗಿ: ಮೂಲಂಗಿಯಲ್ಲಿರುವ ಹೆಚ್ಚಿನ ನೀರಿನಾಂಶ ಆರೋಗ್ಯಯುತ, ಕಾಂತಿಯುತ ಚರ್ಮಕ್ಕೆ ಕೊಡುಗೆ ನೀಡುತ್ತದೆ. ಇದು ಚರ್ಮವನ್ನು ಹೈಡ್ರೀಕರಿಸಲಿದ್ದು ಚರ್ಮದ ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿ- ಆಕ್ಸಿಡೆಂಟ್‌ಗಳು ಸುಕ್ಕುಗಳನ್ನು ತಡೆಗಟ್ಟಿ, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತವೆ.

ಉರಿಯೂತ ನಿವಾರಕ: ದೀರ್ಘಕಾಲದ ಉರಿಯೂತವು ಸಂಧಿವಾತ, ಆಸ್ತಮಾ ಮತ್ತು ಹೃದಯ ಕಾಯಿಲೆ ಸೇರಿದಂತೆ ಅನೇಕ ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಮೂಲಂಗಿಗಳು ನೈಸರ್ಗಿಕವಾಗಿ ಉರಿಯೂತ ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ನೋವು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿದೆ.

ಆಯುರ್ವೇದದ ಪ್ರಕಾರ, ಮೂಲಂಗಿಯನ್ನು ಹಸಿಯಾಗಿ ತಿನ್ನುವುದಕ್ಕಿಂತ ಸ್ವಲ್ಪ ಬೇಯಿಸಿ ಅಥವಾ ಉಪ್ಪು ಮತ್ತು ಕಾಳುಮೆಣಸಿನೊಂದಿಗೆ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಅದೇ ರೀತಿ ಕತ್ತರಿಸಿದ ಮೂಲಂಗಿಯನ್ನು ಸೌತೆಕಾಯಿ ಮತ್ತು ಕ್ಯಾರೆಟ್‌ಗಳೊಂದಿಗೆ ಮಿಶ್ರಣ ಮಾಡಿ ಸೇವಿಸಿ.