ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಕ್ಕಳಿಗೆ ಚಳಿಗಾಲದಲ್ಲಿ ಮೊಸರು, ಬಾಳೆಹಣ್ಣು ಯಾಕೆ ನೀಡಬಾರದು? ಈ ಬಗ್ಗೆ ವಿಶ್ವವಾಣಿ ಸಂದರ್ಶನದಲ್ಲಿ ವೈದ್ಯರು ತಿಳಿಸಿದ್ದೇನು?

Health Tips: ಚಳಿಗಾಲ ಇದ್ದ ಕಾರಣ ಶೀತ , ಜ್ವರ , ಕೆಮ್ಮು ನಂತಹ ಅನೇಕ ರೋಗಗಳು ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಚಳಿಗಾಲದಲ್ಲಿ ನಾವು ಯಾವ ರೀತಿಯ ಜೀವನ ಶೈಲಿಯನ್ನು ಹವ್ಯಾಸವಾಗಿ ಅನುಸರಿಸಬೇಕು ಎಂಬ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ಮಲ್ಲಿಕಾರ್ಜುನ ಡಂಬಳ ಅವರು ತಿಳಿಸಿ ಕೊಟ್ಟಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು, ಡಿ.27: ಋತುಗಳು ಬದಲಾದಂತೆ ನಮ್ಮ ದೇಹದ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಕಂಡು ಬರುವುದು ಸಹಜ. ಆದರೆ ಇತ್ತೀಚಿನ ಜನಾಂಗದಲ್ಲಿ ಬದಲಾದ ಜೀವನ ಶೈಲಿ ಹಾಗೂ ಕೆಲವು ಹವ್ಯಾಸಗಳು ಕೂಡ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರು ತ್ತಿದೆ. ಹೀಗಾಗಿ ನಮ್ಮ ಜೀವನ ಶೈಲಿಯಲ್ಲಿ ನಿಗಾವಹಿಸುವುದು ಅತ್ಯವಶ್ಯಕವಾಗಿದೆ. ಅಂತೆಯೇ ಈಗ ಚಳಿಗಾಲ ಇದ್ದ ಕಾರಣ ಶೀತ , ಜ್ವರ , ಕೆಮ್ಮು ನಂತಹ ಅನೇಕ ರೋಗಗಳು ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಚಳಿಗಾಲದಲ್ಲಿ ನಾವು ಯಾವ ರೀತಿಯ ಜೀವನ ಶೈಲಿ ಯನ್ನು ಹವ್ಯಾಸವಾಗಿ ಅನುಸರಿಸಬೇಕು ಎಂಬ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ಮಲ್ಲಿಕಾರ್ಜುನ ಡಂಬಳ (Dr. Mallikarjuna Dambala) ಅವರು ತಿಳಿಸಿ ಕೊಟ್ಟಿದ್ದಾರೆ. ಆಯುರ್ವೇದ ಶಾಸ್ತ್ರದ ಪ್ರಕಾರ ಚಳಿಗಾಲದಲ್ಲಿ ಶರೀರದ ಬಲ ಹೆಚ್ಚಾಗಿ ಇರಲಿದೆ. ಆದರೆ ಇದೇ ಕಾಲಕ್ಕೆ ಜನರಿಗೆ ಸೂಕ್ಷ್ಮಾಣು ವೈರಾಣುಗಳಿಂದ ಕಾಯಿಲೆ ಬರುವ ಪ್ರಮಾಣ ಹೆಚ್ಚಾಗಿದ್ದು ವಿಪರ್ಯಾಸವಾಗಿದೆ. ಹೀಗಾಗಿ ಈ ಕಾಲದಲ್ಲಿ ನಾವು ಸೇವಿಸುವ ಆಹಾರವು ಚಳಿಗಾಲಕ್ಕೆ ಸೂಕ್ತವಾಗಿರುವಂತೆ ನೋಡಿಕೊಂಡರೆ ಯಾವುದೆ ಸಮಸ್ಯೆ ಬರಲಾರದು ಎಂಬ ಬಗ್ಗೆ ಅವರು ಸಲಹೆ ನೀಡಿದ್ದಾರೆ .

ಮಳೆಗಾಲ ಮುಗಿಸಿ ಚಳಿಗಾಲ ಆರಂಭವಾಗಿದ್ದ ಕಾರಣ ಬಹುತೇಕರು ತಾವು ಸೇವಿಸುವ ಆಹಾರಗಳ ಬಗ್ಗೆ ಅಷ್ಟಾಗಿ ಕಾಳಜಿ ಹೊಂದಿಲ್ಲ. ಮಳೆ ಇಲ್ಲ ಶೀತ , ಕೆಮ್ಮು ಭಯ ಪಡುವ ಅಗತ್ಯ ಇಲ್ಲ ಕಾರಣಕ್ಕೆ ಬೇಸಿಗೆ ಕಾಲಕ್ಕೆ ಸೇವಿಸುವ ಆಹಾರವನ್ನೇ ಚಳಿಗಾಲಕ್ಕೂ ಸೇವಿಸುತ್ತಾರೆ. ಇದೇ ಆಹಾರದ ಕ್ರಮದಿಂದ ಬಹುತೇಕರು ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ರಾತ್ರಿಯ ಸಮಯ ಚಳಿಗಾಲದಲ್ಲಿ ಅಧಿಕ ಇದ್ದು ಹಗಲು ಕಡಿಮೆ ಇರಲಿದೆ‌. ಹೀಗಾಗು ನಿದ್ದೆ ಅಧಿಕ ಮಾಡಬೇಕು ಆದರೆ ಬಹುತೇಕರು ನಿದ್ದೆ ಬಿಟ್ಟು ನಿದ್ರಾಹೀನತೆ ಸಮಸ್ಯೆಗೆ ಒಗ್ಗಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ವಿಡಿಯೋ ನೋಡಿ:



ಚಳಿಗಾಲದಲ್ಲಿ ಚರ್ಮ ಒಣಗುವುದು, ಕೀಲು ನೋವು ಬರುವುದು ಇಂತಹ ಸಮಸ್ಯೆ ಸಾಮಾನ್ಯ ವಾಗಿದೆ. ನೆಗಡಿ, ಕಫ, ಅಸ್ತಮ ಇತ್ಯಾದಿ ಕಾಯಿಲೆಗಳು ಕೂಡ ಚಳಿಗಾಲದಲ್ಲಿ ಕಂಡು ಬರುತ್ತದೆ. ಹೀಗಾಗಿ ಔಷಧಗಳ ಮೊರೆ ಹೋಗುವ ಮೊದಲು ಆಹಾರ ಮತ್ತು ಜೀವನ ಶೈಲಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ನಿದ್ರೆ ಚೆನ್ನಾಗಿ ಮಾಡಬೇಕು, ಚಳಿಗಾಲದಲ್ಲಿ ಶರೀರದ ವರ್ಧನೆ, ಶರೀರದ ಬಲ ಹೆಚ್ಚಿಸಿಕೊಳ್ಳಲು, ದೀರ್ಘಾಯುಷ್ಯಕ್ಕೆ ಎಲ್ಲದಕ್ಕೂ ನಿದ್ರೆ ಬಹಳ ಅಗತ್ಯ. ರಾತ್ರಿ ಬೇಗ ಮಲಗಿ ಬೆಳಗ್ಗೆ ಶೀತಗಾಳಿ ಎಲ್ಲ ಕಡಿಮೆ ಆದ ಬಳಿಕ ಎದ್ದರೆ ಅದು ಬಹಳ ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

Health Tips: ಚಳಿಗಾಲದ ಆರೋಗ್ಯಕ್ಕೆ ಕರಿಮೆಣಸು ರಾಮಬಾಣ!

ಚಳುಗಾಲದಲ್ಲಿ ನಾವು ಸೇವಿಸುವ ಆಹಾರಗಳು ಜೀರ್ಣ ಕ್ರಿಯೆಯನ್ನು ಉತ್ತೇಜಿಸುವಂತೆ ಇರಬೇಕು. ಚಳಿಗಾಲದಲ್ಲಿ ಹಸಿವು ಜಾಸ್ತಿ ಇರುವ ಕಾರಣ ಸಿಕ್ಕ ಸಿಕ್ಕಿದ್ದನ್ನು ತಿನ್ನಬಾರದು. ಬದಲಿದೆ ಶರೀರಕ್ಕೆ ಜೀರ್ಣಕ್ರಿಯೆಗೆ ಸಹಕರಿಸುವ ಆಹಾರ ಸೇವಿಸಬೇಕು‌. ಅದರಲ್ಲೂ ಮಕ್ಕಳಿಗೆ ಈ ಕಾಲದಲ್ಲಿ ಹಸಿವು ಹೆಚ್ಚಿದ್ದ ಕಾರಣ ಮನೆ ಆಹಾರ ವನ್ನೇ ಅತಿಯಾಗಿ ನೀಡುವ ಕ್ರಮ ರೂಢಿಯಾಗಿಸಬೇಕು. ಚಿಪ್ಸ್, ಪೂರಿ ಇಂತಹ ತಿಂಡಿಯನ್ನು ಆದಷ್ಟು ಕಡಿಮೆ ಸೇವಿಸಬೇಕು. ನೀರಿನಲ್ಲಿ ಬೇಯಿಸಿದ್ದ ಆಹಾರ ಅರಿಯಾಗಿ ಸೇವಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ಈ ಕಾಲಕ್ಕೆ ನೀರು ಕುಡಿಯಲು, ಸ್ನಾನ ಮಾಡಲು, ಮುಖ ತೊಳೆಯಲು ಎಲ್ಲದಕ್ಕು ಬಿಸಿ ನೀರನ್ನು ಬಳಸುವುದು ಉತ್ತಮವಾಗಿದೆ. ಈ ಕಾಲದಲ್ಲಿ ಕಾಲು, ಕಿವಿ, ಅಂಗೈ, ಅಂಗಾಲು ಎಲ್ಲವು ಕೂಡ ಬೆಚ್ಚಗಿದಷ್ಟು ಶರೀರಕ್ಕೆ ಸೂಕ್ಷ್ಮ ವೈರಾಣು ದಾಳಿ ಮಾಡಲಾರದು. ಈ ಕಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಅಧಿಕ ಪಾತ್ರಿನಿಧ್ಯ ನೀಡಬೇಕು. ಮಕ್ಕಳು ಅತಿಯಾಗಿ ಸ್ವೀಟ್ ತಿನ್ನುವುದು, ಮೊಸರು , ಬಾಳೆಹಣ್ಣು ತಿನ್ನುವುದರಿಂದ ಶೀತ , ಕಫ ಕಂಡು ಬರುತ್ತದೆ ಇವುಗಳನ್ನು ನೀಡುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಈ ಕಾಲದಲ್ಲಿ ಎಣ್ಣೆ ತಿಂಡಿ ಬದಲು ಮನೆ ತಿಂಡಿ ನೀಡಿ, ಪಾಯಸ, ಒಬ್ಬಟ್ಟು ಇತರ ಸಿಹಿ ನೀಡಿದರೆ ಸಮಸ್ಯೆ ಇಲ್ಲ ಎಂದು ಅವರು ಸಲಹೆ ಕೂಡ ನೀಡಿದ್ದಾರೆ.