ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕದಾದ್ಯಂತ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದ ಸ್ಯಾಮ್‌ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಇಂಡಿಯಾ–ಬೆಂಗಳೂರು ನೋಟ್‌ಬುಕ್ ವಿತರಣಾ ಅಭಿಯಾನ

2015ರಿಂದ ಆರಂಭಗೊಂಡ ಈ ಅಭಿಯಾನವು ಇಂದು ಕರ್ನಾಟಕದಾದ್ಯಂತ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ. ಇದುವರೆಗೆ ಸುಮಾರು 15 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸಲಾಗಿದ್ದು, ಈ ವರ್ಷದ ಅಭಿಯಾನದಡಿ ಕೋಲಾರ ಜಿಲ್ಲೆಯ 195 ಸರ್ಕಾರಿ ಶಾಲೆಗಳ 7,620 ವಿದ್ಯಾರ್ಥಿಗಳಿಗೆ 42,819 ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ.

ಬೆಂಗಳೂರು: ಸುಮಾರು ಒಂದು ದಶಕದ ಹಿಂದೆ, ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದ ಸ್ಯಾಮ್‌ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಇಂಡಿಯಾ–ಬೆಂಗಳೂರು (SRI-B)ಯ ಉದ್ಯೋಗಿಗಳು ಒಂದು ಸಾಮಾನ್ಯ ಸಮಸ್ಯೆಯನ್ನು ಗಮನಿಸಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಉತ್ತಮವಾಗಿದ್ದರೂ, ಕಲಿಕೆಗೆ ಅಗತ್ಯವಾದ ಮೂಲಭೂತ ಶೈಕ್ಷಣಿಕ ಸಾಮಗ್ರಿಗಳಾದ ನೋಟ್‌ಬುಕ್‌ಗಳು ಹಾಗೂ ಲೇಖನ ಸಾಮಗ್ರಿಗಳ ಕೊರತೆ ಅನೇಕ ವಿದ್ಯಾರ್ಥಿಗಳನ್ನು ಕಾಡುತ್ತಿತ್ತು.

ಈ ಗಮನಿಕೆ ಉದ್ಯೋಗಿಗಳ ನೇತೃತ್ವದಲ್ಲಿ ಆರಂಭವಾದ ಒಂದು ಸಾಮಾಜಿಕ ಅಭಿಯಾನಕ್ಕೆ ನಾಂದಿ ಹಾಡಿತು.

2015ರಿಂದ ಆರಂಭಗೊಂಡ ಈ ಅಭಿಯಾನವು ಇಂದು ಕರ್ನಾಟಕದಾದ್ಯಂತ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ. ಇದುವರೆಗೆ ಸುಮಾರು 15 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸ ಲಾಗಿದ್ದು, ಈ ವರ್ಷದ ಅಭಿಯಾನದಡಿ ಕೋಲಾರ ಜಿಲ್ಲೆಯ 195 ಸರ್ಕಾರಿ ಶಾಲೆಗಳ 7,620 ವಿದ್ಯಾರ್ಥಿಗಳಿಗೆ 42,819 ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. ಈ ವರ್ಷದ ಕಾರ್ಯಕ್ರಮದಲ್ಲಿ SRI-Bನ 100ಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂಸೇವಕರಾಗಿ ಭಾಗವಹಿಸಿ, ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ಹಸ್ತಾಂತರಿಸುವುದರ ಜೊತೆಗೆ ಅವರೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'

ಸ್ಯಾಮ್‌ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಇಂಡಿಯಾ–ಬೆಂಗಳೂರು (SRI-B)ಯ ಕಾರ್ಪೊರೇಟ್ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮೋಹನ್ ರಾವ್ ಗೋಳಿ ಅವರು ಮಾತನಾಡಿ:

"SRI-Bನಲ್ಲಿ ನಾವೀನ್ಯತೆ ಮತ್ತು ಶಿಕ್ಷಣ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಎಂಜಿನಿಯ ರ್‌ಗಳು ಮತ್ತು ನಾವೀನ್ಯತೆಯ ಸೃಷ್ಟಿಕರ್ತರಾಗಿ, ಶಿಕ್ಷಣವು ಜೀವನದಲ್ಲಿ ತರಬಲ್ಲ ಪರಿವರ್ತನೆಯ ಶಕ್ತಿಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಒಂದು ನೋಟ್‌ಬುಕ್ ಸಾಮಾನ್ಯ ವಸ್ತುವಾಗಿ ಕಾಣಬಹುದಾದರೂ, ಒಂದು ಮಗುವಿಗೆ ಅದು ಅವಕಾಶ, ಆತ್ಮವಿಶ್ವಾಸ ಮತ್ತು ಕನಸು ಕಾಣುವ ಸ್ವಾತಂತ್ರ್ಯದ ಸಂಕೇತವಾಗಿದೆ. ಈ ಅಭಿಯಾನದ ಮೂಲಕ ವಿದ್ಯಾರ್ಥಿಗಳು ತಮ್ಮದೇ ಯಶೋಗಾಥೆಯನ್ನು ಬರೆಯಲು ಮತ್ತು ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅವರನ್ನು ಸಬಲಗೊಳಿಸುವ ಆಶಯ ನಮ್ಮದು."

SRI-Bನ ನೋಟ್‌ಬುಕ್ ವಿತರಣಾ ಅಭಿಯಾನವು 2015ರಲ್ಲಿ ಆರಂಭವಾಯಿತು. ಸರ್ಕಾರಿ ಶಾಲೆ ಗಳಿಗೆ ಭೇಟಿ ನೀಡುತ್ತಿದ್ದ ಉದ್ಯೋಗಿಗಳು, ಅನೇಕ ವಿದ್ಯಾರ್ಥಿಗಳು ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿದ್ದರೂ ನೋಟ್‌ಬುಕ್‌ಗಳು ಮತ್ತು ಇತರ ಮೂಲಭೂತ ಶೈಕ್ಷಣಿಕ ಸಾಮಗ್ರಿಗಳ ಕೊರತೆಯನ್ನು ಎದುರಿಸುತ್ತಿರುವುದನ್ನು ಕಂಡರು. ಈ ಅಗತ್ಯವನ್ನು ಮನಗಂಡು ಉದ್ಯೋಗಿ ಗಳಿಂದ ಆರಂಭವಾದ ಸಣ್ಣ ಪ್ರಯತ್ನವು, ಇಂದು SRI-Bನ ಅತ್ಯಂತ ದೀರ್ಘಕಾಲದಿಂದ ನಿರಂತರ ವಾಗಿ ನಡೆಯುತ್ತಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆಳೆದಿದೆ.

ಈ ನೋಟ್‌ಬುಕ್ ವಿತರಣಾ ಅಭಿಯಾನವು, ಬೆಂಗಳೂರಿನ ಸುತ್ತಮುತ್ತಲಿನ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಬೆಂಬಲ ನೀಡುವ SRI-Bನ ದೀರ್ಘಕಾಲೀನ ಬದ್ಧತೆಯ ಪ್ರತಿಬಿಂಬವಾಗಿದೆ. ಉದ್ಯೋಗಿಗಳ ಸ್ವಯಂಸೇವಾ ಮನೋಭಾವ ಹಾಗೂ ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಶಾಲಾ ಮೂಲ ಸೌಕರ್ಯದಲ್ಲಿ ನಿರಂತರ ಹೂಡಿಕೆಯ ಮೂಲಕ, ಕರ್ನಾಟಕದ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಲು ಸಂಸ್ಥೆ ತನ್ನ ಪ್ರಯತ್ನವನ್ನು ಮುಂದುವರಿಸುತ್ತಿದೆ.