ಬೆಂಗಳೂರು: ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬಿಐಇಸಿಯಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ (IT) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಬಾಹ್ಯಾಕಾಶ(Space)ದಿಂದ ಬೆಂಗಳೂರಿಗೆ ಬರುವುದು ಸುಲಭ ಆದರೆ ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವುದು ತುಂಬಾ ಕಷ್ಟ ಎಂದು ಐಟಿ ಸಚಿವರ ಎದುರೇ ತಮಾಶೆ ಮಾಡಿದ್ದಾರೆ. ಮಾರತ್ತಹಳ್ಳಿಯಿಂದ ಮಾದಾವರ ತಲುಪುವ ಸಮಯಕ್ಕಿಂತ ಬೇಗ ಬಾಹ್ಯಾಕಾಶವನ್ನೇ ತಲುಪಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಟಿ ಸಚಿವ ಪ್ರಿಯಾಂಕ್ ಖರ್ಗೆ, (Priyank Kharge) ರಾಜ್ಯ ಸರ್ಕಾರ ಈ ಕುರಿತು ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಬಾಹ್ಯಾಕಾಶದಿಂದ ಬೆಂಗಳೂರಿಗೆ ಹೋಗುವುದು ಸುಲಭ ಎಂದು ಶುಭಾಂಶು ಶುಕ್ಲಾ ಹೇಳಿದರು, ಆದರೆ ಮಾರತ್ತಹಳ್ಳಿಯಿಂದ ಈ ಸ್ಥಳಕ್ಕೆ ಹೋಗುವುದು ಕಷ್ಟಕರವಾಗಿತ್ತು" ಎಂದು ಅವರು ಹೇಳಿದರು, ಅಂತಹ ವಿಳಂಬಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶುಭಾಂಶು ಶುಕ್ಲಾ ಮಾತು
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿ ಮತ್ತು ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2027 ರಲ್ಲಿ ಉಡಾವಣೆ ಮಾಡಲು ಯೋಜಿಸಲಾದ ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಾದ ಗಗನಯಾನಕ್ಕೆ ಆಯ್ಕೆಯಾದ ಮತ್ತು ತರಬೇತಿ ಪಡೆದ ನಾಲ್ವರು ಗಗನಯಾತ್ರಿಗಳಲ್ಲಿ ಅವರು ಒಬ್ಬರು. ಈ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ ಅತ್ಯಂತ ಜನಪ್ರಿಯ ಅಧಿವೇಶನಗಳಲ್ಲಿ ಒಂದಾಗಿದೆ. ತಂತ್ರಜ್ಞಾನ, ಉದ್ಯಮಶೀಲತೆ, ಕ್ರೀಡೆ ಮತ್ತು ಸೃಜನಶೀಲ ಕ್ಷೇತ್ರಗಳ ಬಗ್ಗೆ ಒಳನೋಟಗಳನ್ನು ತಂದ ವೈವಿಧ್ಯಮಯ ಭಾಷಣಕಾರರ ಗುಂಪಿನಿಂದ ಕೇಳಲು ಸಾವಿರಾರು ಭಾಗವಹಿಸುವವರು ಸೇರಿದ್ದರು.
Shubhanshu Shukla: ಬಾಹ್ಯಾಕಾಶದಿಂದ ಭಾರತ ಹೇಗಿದೆ ನೋಡಿ.. ಶುಭಾಂಶು ಶುಕ್ಲಾ ಹಂಚಿಕೊಂಡ ಅಪರೂಪದ ಚಿತ್ರಣ
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.ಭೂಮಿಗೆ ಮರಳುವಾಗ ಕ್ಯಾಪ್ಸುಲ್ ಅಗ್ನಿಯ ಚೆಂಡಿನಂತಾಗುತ್ತದೆ. ಸುಮಾರು 4,000 ಡಿಗ್ರಿ ತಾಪಮಾನ ಇರುತ್ತದೆ. ನೀವು ಭೂಮಿಯ ಗುರುತ್ವಾಕರ್ಷಣೆಗೆ ವ್ಯಾಪ್ತಿಗೆ ಬಂದ ಬಳಿಕ 20 ದಿನಗಳ ಕಾಲ ನಿಮ್ಮ ದೇಹ ಗುರುತ್ವಬಲವನ್ನು ಮರೆತಿರುತ್ತದೆ ಎಂದು ಶುಕ್ಲಾ ಹೇಳಿದ್ದಾರೆ. ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎಂಬ ವಿಡಿಯೋವನ್ನು ಪ್ರದರ್ಶಿಸಿದರು. ಉತ್ತರಕ್ಕೆ ಸಾಗುತ್ತಿದ್ದಂತೆ ಬೆಳಕಿನ ತೇಜಸ್ಸು, ಗಂಭೀರವಾಗಿ ಕುಳಿತ ಹಿಮಾಲಯ ಗೋಚರಿಸುತ್ತದೆ.
ಭಾರತದ ನಗರಗಳು ಅದ್ಭುತವಾಗಿ ಕಾಣಿಸುತ್ತದೆ. ಬಳಿಕ ಸೂರ್ಯನ ಕಿರಣಗಳು ಆವರಿಸುವ ವಿಹಂಗಮ ನೋಟವನ್ನು ಪ್ರದರ್ಶಿಸಿದರು. ರಾತ್ರಿ ವೇಳೆಯಲ್ಲಿ ಭಾರತದ ನಗರಗಳು ಹೇಗೆ ಕಾಣಿಸುತ್ತದೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದ್ದಾರೆ.