ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಮೈಸೂರು ಮಂಗಳಸೂತ್ರ ಫೌಂಡೇಶನ್ ಸಹಯೋಗದಲ್ಲಿ ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣ ಸಮಾವೇಶ ಹಾಗೂ ಶೀಘ್ರದಲ್ಲಿ ಕಲ್ಯಾಣಕ್ಕಾಗಿ ಶ್ರೀಶ್ರೀನಿವಾಸ ಕಲ್ಯಾಣೋತ್ಸವವನ್ನು ಕುಮಾರ ಪಾರ್ಕ್ ನ ಬಡಗನಾಡು ಸಂಘದ ಕನ್ವೇಷನ್ ಹಾಲ್ ನಲ್ಲಿ ಜ. 10 ಹಾಗೂ 11 ರಂದು ನಡೆಯಲಿದೆ.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ಶನಿವಾರ ಹಾಗೂ ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6 ವರೆಗೆ ವಧು-ವರಾನ್ವೇಷಣೆ ಹಮ್ಮಿಕೊಳ್ಳಲಾಗಿದೆ.
ಆಸಕ್ತರು 1ಪೋಸ್ಟ್ ಕಾರ್ಡ್ ಸೈಜ್ ಫೋಟೋ, 1 ಜಾತಕ ಹಾಗೂ ವ್ಯಕ್ತಿ ಪರಿಚಯದ ವಿವರ ಗಳೊಂದಿಗೆ ಭಾಗವಹಿಸಬೇಕೆಂದು ಸಂಚಾಲಕರಾದ ಶ್ರೀನಿವಾಸ್ ಭಾರದ್ವಾಜ್ ಮನವಿ ಮಾಡಿದ್ದಾರೆ.
ಮಾಹಿತಿಗಾಗಿ: 9449425536 / 8217876335 ಸಂಪರ್ಕಿಸಬಹುದು.