ಚಿಕ್ಕಬಳ್ಳಾಪುರ, ಸೆ.17: ನಗರದ ಹೊರವಲಯದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ (Chikkaballapur News) ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಂಸ್ಮರಣೋತ್ಸವದ ಅಂಗವಾಗಿ, ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಯು.ಪಿ.ಎಸ್.ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕʼ ಪ್ರಶಸ್ತಿ ಪ್ರದಾನ, ಬಿ.ಜಿ.ಎಸ್ ಸಾಧಕ ಪುರಸ್ಕಾರ ಹಾಗೂ ಆಸ್ಟ್ರೇಲಿಯಾದಲ್ಲಿ ‘ಮಣ್ಣಿನ ಮಗʼ ಪ್ರಶಸ್ತಿ ಪಡೆದ ಸೀಕಲ್ ರಾಮಚಂದ್ರಗೌಡ ಅವರಿಗೆ ಅಭಿನಂದನಾ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸೌಮ್ಯಾನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಯು.ಪಿ.ಎಸ್.ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕʼ ಪ್ರಶಸ್ತಿ ಪ್ರದಾನ, ಬಿ.ಜಿ.ಎಸ್ ಸಾಧಕ ಪುರಸ್ಕಾರ ಹಾಗೂ ಆಸ್ಟ್ರೇಲಿಯಾದಲ್ಲಿ ‘ಮಣ್ಣಿನ ಮಗʼ ಪ್ರಶಸ್ತಿ ಪಡೆದ ಸೀಕಲ್ ರಾಮಚಂದ್ರಗೌಡ ಅವರಿಗೆ ಗೌರವಿಸಿ, ಸನ್ಮಾನಿಸಲಾಯಿತು.