ಚಿಕ್ಕಬಳ್ಳಾಪುರ : ಇಲ್ಲಿನ ತಾಲ್ಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಜಿ.ಪ್ರಭು(Deputy Commissioner G.Prabhu) ಅವರು ಆಕಸ್ಮಿಕ ಭೇಟಿ ನೀಡಿದ್ದು ಕಡತ ವಿಲೇವಾರಿ ಪ್ರಕ್ರಿಯೆ, ಅರ್ಜಿ ಸ್ವೀಕರಣ ವ್ಯವಸ್ಥೆ ಮತ್ತು ಅಭಿಲೇಖಾಲಯದ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ನೆರೆದಿದ್ದ ಸಾರ್ವಜನಿಕರಿಂದ ಕೆಲವು ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೆ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಈ ವೇಳೆ, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್. ತಹಸೀಲ್ದಾರ್ ರಶ್ಮಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.