ಗೌರಿಬಿದನೂರು: ತಾಲೂಕಿನ ತೊಂಡೆಬಾವಿ ಹೋಬಳಿಯ ಅಲ್ಲಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಬೀದಿ ನಾಟಕ ಕಾರ್ಯಕ್ರಮವನ್ನು ನೆರವೇರಿಸ ಲಾಯಿತು. ಬೀದಿ ನಾಟಕವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ ಹಾಗೂ ವೈದ್ಯರಾದ ಡಾ ಮಮತಾ ಅವರುಗಳು ತಮಟೆ ಭಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Gauribidanur News: ಛಾಯಾಗ್ರಾಹಕರು ಸಮಾಜದ ಕಣ್ಣುಗಳಾಗಿ ಕೆಲಸ ಮಾಡುತ್ತಿದ್ದಾರೆ: ಕೆಪಿಎ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್
ಬೀದಿನಾಟಕದ ಮೂಲಕ ಜನರಲ್ಲಿ, ನೀರಿನ ಬಗ್ಗೆ, ಸದ್ಬಳಕೆ ಬಗ್ಗೆ ಜಾಗೃತಿ, ಸ್ವಚ್ಛತೆಯ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಆರೋಗ್ಯ ಜಾಗೃತಿ ಬಗ್ಗೆ, ವಿವಿಧ ವಿಷಯಗಳ ಬಗ್ಗೆ ಜಾಗೃತಿ ಅರಿವನ್ನು ಗ್ರಾಮೀಣ ಕಲಾ ತಂಡದವರು ನೆಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಧಿಕಾರಿ ಅಶ್ವಿನಿ, ಮೇಲ್ವಿಚಾರಕರಾದ ನರಸಿಂಹ ಮೂರ್ತಿ, ಸೇವಾಪ್ರತಿನಿಧಿಯವರು, ಕೇಂದ್ರದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು