ಚಿಂತಾಮಣಿ: ತಾಲೂಕಿನ ಮುರುಗಮಲ್ಲ ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ ಅವರ 57ನೇ ಹುಟ್ಟುಹಬ್ಬವನ್ನು ಅತ್ಯಂತ ಸಡಗರ ಮತ್ತು ಧಾರ್ಮಿಕ ಶ್ರದ್ಧೆಯೊಂದಿಗೆ ಆಚರಿಸಿದರು.
ಮಾಜಿ ಶಾಸಕರ ಜನ್ಮದಿನದ ಪ್ರಯುಕ್ತ ಮುರುಗಮಲ್ಲ ದರ್ಗಾಕ್ಕೆ ಭೇಟಿ ನೀಡಿದ ಜೆಡಿಎಸ್ ಕಾರ್ಯ ಕರ್ತರ ದಂಡು,ದರ್ಗಾದ ಪವಿತ್ರ ಗದ್ದುಗೆಗೆ ವಿಶೇಷ ಚಾದರ ಮತ್ತು ಹೂವಿನ ಹಾರಗಳನ್ನು ಅರ್ಪಿಸಿ ವಿಶೇಷ 'ಫಾತಿಹಾ' ಪ್ರಾರ್ಥನೆ ಸಲ್ಲಿಸಿತು.
ಇದನ್ನೂ ಓದಿ: Chinthamani News: ಚಿಂತಾಮಣಿಯಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಕೃಷ್ಣಾರೆಡ್ಡಿ ಅವರಿಗೆ ಉತ್ತಮ ಆರೋಗ್ಯ, ಆಯುಸ್ಸು ಕರುಣಿಸಲಿ ಮತ್ತು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಅವರು ಭರ್ಜರಿ ಜಯ ದಾಖಲಿಸಲಿ ಎಂದು ಈ ಸಂದರ್ಭದಲ್ಲಿ ದೇವರಲ್ಲಿ ವಿಶೇಷವಾಗಿ ಬೇಡಿಕೊಳ್ಳಲಾಯಿತು.
ದಿನವಿಡೀ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು: ಮಾಜಿ ಶಾಸಕರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಮುಖಂಡರು ಇಂದು ಮುಂಜಾನೆಯಿಂದಲೇ ತಾಲೂಕಿನಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ನ ಪ್ರಮುಖ ಮುಖಂಡರಾದ ಅಬ್ದುಲ್ ಸಮ್ಮದ್,ಮಾಜಿ ನಗರಸಭಾ ಸದಸ್ಯರಾದ ಅಗ್ರಹಾರ ಮುರಳಿ, ಅಮಾನುಲ್ಲಾ, ಎಲ್.ನರಸಿಂಹರೆಡ್ಡಿ, ಮಿಲ್ಟ್ರಿ ಶ್ರೀನಿವಾಸ್, ಚಂದ್ರಪ್ಪ, ಶಂಕರಪ್ಪ, ನಾಗರಾಜ್, ಕೃಷ್ಣಪ್ಪ, ವೆಂಕಟರವಣಪ್ಪ, ರೆಹಮತುಲ್ಲಾ, ಇರ್ಫಾನ್, ಅಪ್ಸರ್ ಪಾಷಾ, ಅಕ್ರಂ ಪಾಷಾ, ಜೆಡಿಎಸ್ ತಾಲೂಕ್ ಅಧ್ಯಕ್ಷರಾದ ಬೈ ರೆಡ್ಡಿ, ರಿಯಾಜ್ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.