ಚಿಂತಾಮಣಿ: ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಮುಸ್ಲಿಂ ರನ್ನು ಕಡೆಗಣಿಸುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಮೊಹಮ್ಮದ್ ಶಫೀಕ್ ಆರೋಪವನ್ನು ಮಾಡಿದ್ದಾರೆ..
ಚಿಂತಾಮಣಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಇದುವರೆಗೂ ಕ್ಷೇತ್ರದಲ್ಲಿ ಮುಸ್ಲಿಂಗೆ ಕನಿಷ್ಠ ಪಕ್ಷ ಇಂದು ಶಾದಿ ಮಹಲ್ ಕಟ್ಟಿಸಿಲ್ಲ,ಜೊತೆಗೆ ಮುಸ್ಲಿಂ ಮುಖಂಡರಿಗೆ ಯಾವುದೇ ಗೌರವ ಕೊಡುತ್ತಿಲ್ಲಾ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Chinthamani News: ಎಫ್ ಸಿ ಇಲ್ಲದ ಶಾಲಾ ವಾಹನಗಳಿಗೆ ಎಫ್ ಸಿ ಮಾಡಿಕೊಳ್ಳಲು ಖಡಕ್ ವಾರ್ನಿಂಗ್
ಚಿಂತಾಮಣಿ ನಗರಸಭೆ ಸದಸ್ಯರಿಗೆ ಇದುವರೆಗೂ ನಗರಸಭೆ ಪೌರಾಯುಕ್ತ ಗೌರವಧನ ವನ್ನು ಕೊಟ್ಟಿಲ್ಲ ಎಂದು ನಗರಸಭೆ ಸದಸ್ಯ ಮಹಮದ್ ಶಫೀಕ್ ಆರೋಪ ಮಾಡಿದ್ದಾರೆ. ನಾವು ಜನರಸೇವೆ ಮಾಡಲು ಆಯ್ಕೆಯಾದ ಜನ ಪ್ರತಿನಿಧಿಗಳು ಆದ್ರೆ ಇದುವರೆಗೂ 8 ತಿಂಗಳ ಗೌರವಧನ ಸಿಕ್ಕಿಲ್ಲ, ಅದನ್ನು ಪ್ರಶ್ನೆ ಮಾಡಿದ್ರೆ ಅಕೌಂಟ್ ಸರಿಯಿಲ್ಲ ಎಂದು ಉಡಾಫೆ ಹೇಳಿಕೆಗಳನ್ನು ಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಗೌರವ ಧನ ಕೊಟ್ಟಿಲ್ಲ ಎಂದರೆ ನಗರಸಭೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಆರೋಪ ಮಾಡಿದ್ದಾರೆ.