ಗೌರಿಬಿದನೂರು : ನಗರ 10ನೇ ವರ್ಡುನಲ್ಲಿ ಸಿಸಿ ರಸ್ತೆ ಮತ್ತು ಕೆಂಪೇಗೌಡ ವೃತ್ತದಿಂದ ಅಯ್ಯಪ್ಪ ಸ್ವಾಮಿ ದೇವಾಲಯವರಿಗೂ ಬೀದಿ ದೀಪಗಳ ಅಳವಡಿಕೆ ಮತ್ತು ಕೆಎಸ್ಅರ್ಟಿಸಿ ಮುಂಬಾಗದ ಜಾಮೀಯನ ಮಸೀದಿ ಒಳಗೆ ಹೊರಂಗಣ ಕಾಂಕ್ರಿಟ್ ಅಳವಡಿಕೆ ಕಾಮಗಾರಿಗೆ ಶಾಸಕ ಕೆಎಚ್, ಪುಟ್ಟಸ್ವಾಮಿಗೌಡ ಚಾಲನೆ ನೀಡಿದರು. ಬೀದಿ ದೀಪಗಳ ಅಳವಡಿಕೆಯಿಂದ ರಾತ್ರಿ ವೇಳೆ ಸಾಕಷ್ಟು ಬೆಳಕು ಇರುವುದರಿಂದ ಅಪರಾಧಗಳಿಗೆ ಕಡಿವಾಣ ಮತ್ತು ಅಪಘಾತಗಳಿಗೆ ನಡೆಯದೆ ಇರುತ್ತದೆ. ನಗರದ ಜಾಮಿಯಾ ಮಸೀದಿ ಹೊರಾಂಗಣ ಕ್ಕೆ ಕಾಂಕ್ರಿಟ್ ಮಾಡಿಸಲು ನನ್ನ ಸ್ವಂತ ಖರ್ಚನಲ್ಲಿ ಕಾಮಗಾರಿ ಮಾಡಿಸಿದ್ದೇನೆ ಎಂದರು.
ಇದೇ ವೇಳೆಯಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ,ಉಪಾಧ್ಯಕ್ಷ ಪರೀದ್,ಪೌರಾಯುಕ್ತೆ ಡಿ,ಎಂ,ಗೀತಾ,ಕೆಎಚ್ಪಿ ಪೌಂಡೇಷನ್ ಕರ್ಯನರ್ವಹಕ ಶ್ರೀನಿವಾಸಗೌಡ.ನಗರಸಭೆ ಸದಸ್ಯರಾದ ಡಿಜೆ ಚಂದ್ರಮೋಹನ್ ಅಲ್ತಾಪ್,ಮುಖಂಡರಾದ
ಖಲಂಧರ್, ನರ್ಗಜುನ, ತೈಯಬ್, ಆಸ್ಲಾಂ ಶಫೀಕ್ ಉಲ್ಲಾ ಮುಂತಾದ ಮುಖಂಡರು ಹಾಜರಿದ್ದರು.