ಬಾಗೇಪಲ್ಲಿ: ಪಟ್ಟಣದ ೨೨ ನೇ ವಾರ್ಡ್ನ ಕಮರ್ ಖಮರ್ ಮಸೀದಿಯ ಮುಂದೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಹುತಾತ್ಮರಾ ದವರಿಗೆ ಇತ್ತೀಚಿಗೆ ಮಸೀದಿಯ ಧರ್ಮಗುರುಗಳು, ಮುಸ್ಲಿಂ ಸಮುದಾಯದ ಮುಖಂಡರು, ಮಹಿಳೆ ಯರು ಶ್ರದ್ಧಾಂಜಲಿ ಅರ್ಪಿಸಿದರು. ಖಮರ್ ಮಸೀದಿಯ ಧರ್ಮಗುರು ರಿಜ್ವಾನ್ ಅಹಮದ್ ಮಾತನಾಡಿ, ಇಸ್ಲಾಂ ಪ್ರಕಾರ ವ್ಯಕ್ತಿಗಳನ್ನು ಕೊಲ್ಲುವುದು ಇಡೀ ಮಾನವಕುಲವನ್ನೇ ಕೊಂದಿದಂತೆ. ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಯು ಖಂಡನೀಯ ಆಗಿದೆ. ಗುಂಡಿನ ದಾಳಿಯಲ್ಲಿ ಅಮಾಯಕರು ಹುತಾತ್ಮರಾಗಿ ದ್ದಾರೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ರೋಧನ ಮನಕುಲಕ್ಕೆ ಮಾರಕ ಆಗಿದೆ. ದೇಶದಲ್ಲಿ ಶಾಂತಿ ಸೃಷ್ಠಿಯಾಗಬೇಕು. ಕೂಡಿಬಾಳುವ ಸಂಸ್ಕೃತಿ ಬೆಳೆಯಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: Grater Bangalore: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್
ಈ ಸಂದರ್ಭದಲ್ಲಿ ಮಸೀದಿಯ ಕಾರ್ಯದರ್ಶಿ ಅದಿಲ್ಖಾನ್, ಸುಭಾನ್ಸಾಬ್, ಮೌಲಾ ಆಲಿ, ಮೌಝಿನ್ ಇಮ್ತಿಯಾಜ್ ಸಾಬ್ ಸೇರಿದಂತೆ ಸದಸ್ಯರು, ಮುಸ್ಲಿಂ ಸಮುದಾಯದವರು, ಮಹಿಳೆ ಯರು ಇದ್ದರು.