ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

₹156.46 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಚಿವರಾದ ಬೈರತಿ, ಸುಧಾಕ‌ರ್ ರಿಂದ ಚಾಲನೆ, ಹಲವು ಕಾಮಗಾರಿಗಳ ಲೋಕಾರ್ಪಣೆ

ವಿವಿಧ ಕೊಳೆಗೇರಿ ಪ್ರದೇಶದ 303 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ.ಗ್ರಾಮೀಣ ಭಾಗಗಳಾದ ಚಿನ್ನಸಂದ್ರ,ಕೊಂಡ್ಲಗಾನಹಳ್ಳಿ, ವೈಜಕೂರು,ಉಸ್ಮಾನ್ ಪುರ, ಕೊಡದವಾದಿ ಗ್ರಾಮಗಳಲ್ಲಿ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒಟ್ಟು 14.46 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ.

ಕಾಮಗಾರಿಗಳಿಗೆ ಉಭಯ ಸಚಿವರಿಂದ ಚಾಲನೆ, ಹಲವು ಕಾಮಗಾರಿಗಳ ಲೋಕಾರ್ಪಣೆ

Profile Ashok Nayak Jun 29, 2025 10:53 PM

ಚಿಂತಾಮಣಿ: ನಗರಸಭೆ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸಚಿವ ಭೈರತಿ ಸುರೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ವಿವಿಧೋದ್ದೇಶ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಭೂಮಿಪೂಜೆ ನೆರೆವೇರಿಸಿದರು.

ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಭಾರಿಗೆ 200 ವಿಶೇಷ ಚೇತನರಿಗೆ ಸ್ಕೂಟರ್ ವಿತರಣೆ.2.16 ಕೋಟಿ ವೆಚ್ಚದಲ್ಲಿ ಕನಂಪಲ್ಲಿ,ತಿಮ್ಮಸಂದ್ರ, ಶಾಂತಿನಗರ, ಟಿಪ್ಪುನಗರ, ಮಾಳಪ್ಪಲ್ಲಿ, ಶ್ರೀರಾಮನಗರ ಮತ್ತು ಎನ್.ಎನ್.ಟಿ.ರಸ್ತೆ, ಅನಕಲ್ಲು, ಕೊಡಿಗೇಹಳ್ಳಿ, ಮುತ್ತಕದಹಳ್ಳಿ, ನಿಮ್ಮಕಾಯಲಹಳ್ಳಿ ಕೇಂದ್ರಗಳಲ್ಲಿ 11 ನೂತನ ಅಂಗನವಾಡಿ ಕೇಂದ್ರಗಳ ಕಾಮಗಾರಿಗೆ ಚಾಲನೆ ನೀಡಿದರು.

ಚಿನ್ನಸಂದ್ರದ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ಸೇರಿ,ಕೊಂಡ್ಲಿಗಾನಹಲ್ಲಿ ಕಿರಿಯ ಪ್ರಾಥಮಿಕ ಶಾಲೆ,ಕಾಗತಿ ಸರ್ಕಾರಿ ಪ್ರೌಢಶಾಲೆ, ಕೆ.ರಾಗುಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು ₹1.14 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದು ಉದ್ಘಾಟನೆಗೊಂಡವು.

ಇದನ್ನೂ ಓದಿ: Chikkaballapur News: ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕವಾದ ಮಳ್ಳೂರು ಶಿವಣ್ಣನವರಿಗೆ ಸನ್ಮಾನ

ತಾಲೂಕಿನ ವಿವಿಧೆಡೆ ಒಟ್ಟು ₹77.19 ಲಕ್ಷ ವೆಚ್ಚದಲ್ಲಿ 11 ಸಾವಿರ ಎಲ್‌ಪಿಎಚ್ ಸಾಮರ್ಥ್ಯದ ಹತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಲೋಕಾರ್ಪಣೆ.ತಾಲೂಕಿನ ವಿವಿಧೆಡೆ ಕಲ್ಯಾಣಿಗಳ ಪುನಶ್ಚೇತನ, ದೊಡ್ಡಕುಂಟೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣದ ಒಟ್ಟು 1.95 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಲಾಯಿತು.

ಅಲ್ಪಸಂಖ್ಯಾತರ ವಾಸ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ 7 ಕೋಟಿ ರಸ್ತೆ ಕಾಮಗಾರಿ, ನಗರ ಭಾಗಗಳಾದ ನೆಕ್ಕುಂದಿಪೇಟೆ ಮೆಹಬೂಬ್ ನಗರ, ಬಾಂಬೂ ಬಜಾರ್, ವೆಂಕಟಗಿರಿಕೋಟೆ, ಅಬ್ಬು ಗುಂಡು, ವೆಂಕಟೇಶ್ವರ ಬಡಾವಣೆ, ಆಶ್ರಯ ಬಡಾವಣೆ, ಎನ್.ಎನ್.ಟಿ ಹಿಂಭಾಗ, ಕೆ.ಜಿ.ಎನ್ ಬಡಾವಣೆ, ಶಾಂತಿ ನಗರ, ಕೀರ್ತಿನಗರ, ಜೆಜೆ ಕಾಲೋನಿ ಭಾಗಗಳಲ್ಲಿ 5 ಕೋಟಿ ವೆಚ್ಚದ ರಸ್ತೆ ಒಳ ಚರಂಡಿ ವ್ಯವಸ್ಥೆ ಮೇಲ್ದರ್ಜೆಗೇರಿಸುವ 46.70 ವೆಚ್ಚದ ಕಾಮಗಾರಿಗೆ ಚಾಲನೆ. 7.46 ಕಿಮೀ ಒಳ ಚರಂಡಿ ಸಂಪರ್ಕ, 33.45 ಕಿಮೀ ಹೊಸ ಒಳಚರಂಡಿ ಜಾಲ, 3750 ಹೊಸ ಸಂಪರ್ಕಗಳು ಮತ್ತು 7 ಎಂಎಲ್‌ಡಿ ಸಾಮರ್ಥ್ಯದ ಎಸ್ಟಿಪಿ ಸ್ಥಾಪನೆಗೆ ಚಾಲನೆ.

ಭಕ್ತರಹಳ್ಳಿ ಅರಸೀಕೆರೆ ನೀರನ್ನು ಚಿಂತಾಮಣಿ ನಗರಕ್ಕೆ ಹರಿಸುವ ಯೋಜನೆಗೆ 15 ಕೋಟಿ ವೆಚ್ಚ ದಲ್ಲಿ ಚಾಲನೆ. ಅಮೃತ್ 2.0 ಯೋಜನೆಯಡಿ ವಿನ್ಯಾಸ,ನಿರ್ಮಾಣ,

ಕಾರ್ಯಾಚರಣೆ ಮತ್ತು ಹಸ್ತಾಂತರ ಎಲ್ಲವನ್ನೂ ಒಳಗೊಂಡಂತೆ ಭಕ್ತರಹಳ್ಳಿ ಅರಸೀಕೆರೆಯಿಂದ ಚಿಂತಾಮಣಿ ನಗರಕ್ಕೆ ನೀರು ಹರಿಸುವ 15 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ. ಚಿಂತಾಮಣಿ ನಗರದಲ್ಲಿ ನೂತನವಾಗಿ ವ್ಯವಸ್ಥಿತ ಪರಿವೀಕ್ಷಣಾ ಮಂದಿರವನ್ನು 10 ಕೋಟಿ ವೆಚ್ಚದಲ್ಲಿ ನಿರ್ಮಿ ಸುವ ಕಾಮಗಾರಿಗೆ ಚಾಲನೆ.

ವಿವಿಧ ಕೊಳೆಗೇರಿ ಪ್ರದೇಶದ 303 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ. ಗ್ರಾಮೀಣ ಭಾಗಗಳಾದ ಚಿನ್ನಸಂದ್ರ,ಕೊಂಡ್ಲಗಾನಹಳ್ಳಿ, ವೈಜಕೂರು,ಉಸ್ಮಾನ್ ಪುರ, ಕೊಡದವಾದಿ ಗ್ರಾಮಗಳಲ್ಲಿ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಒಟ್ಟು 14.46 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ. ಎಸ್.ಎಚ್-82 ರಿಂದ ಗೌರಿಬಿದನೂರು ರಸ್ತೆ ಅಭಿವೃದ್ಧಿ. ಚೇಳೂರು-ಬಾಗೇಪಲ್ಲಿ-ಯಲ್ಲೋಡು-ಮಲ ನಹಳ್ಳಿ - ವಾಟದಹೊಸಹಳ್ಳಿ 5 ಕಿಮೀ ರಸ್ತೆ ಅಭಿವೃದ್ಧಿ ಪಣಸಚೌಡನಹಳ್ಳಿಯಿಂದ ಕೈವಾರ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ, ಬಿಬಿ ರಸ್ತೆಯಿಂದ ಪಲ್ಲಿಚರ್ಲು ರಸ್ತೆ ಅಭಿವೃದ್ಧಿ ಯಗ್ರಕೋಟೆ ಗ್ರಾಮ ಎಸ್.ಟಿ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ, ತಮ್ಮೇಪಲ್ಲಿ ಗ್ರಾಮ -ಎಸ್ ಟಿ ಜನಾಂಗ ವಾಸದ ಮನೆ ಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿ. ಕರಿಯಪ್ಪಲ್ಲಿ ಗ್ರಾಮ -ಮುರುಗಮಲ್ಲ ಮುಖ್ಯರಸ್ತೆಯಿಂದ ಅಗ್ನಿ ಶಾಮಕ ಕಛೇರಿ ವರೆಗೂ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರು ಮಾತನಾಡಿ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರು ಅಭಿವೃದ್ಧಿ ವಿಚಾರದಲ್ಲಿ ದೂರ ದೃಷ್ಟಿಯುಳ್ಳ ನಾಯಕರಾಗಿದ್ದಾರೆ.

ರಾಜ್ಯದಲ್ಲಿ ಸಿ ಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಜನಪರ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇಂತಹ ನಾಯಕರ ಜೊತೆ ಯಲ್ಲಿ ನಮಗೆ ಮಂತ್ರಿ ಸ್ಥಾನ ದೊರುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಡಿಟಿ ಶ್ರೀನಿವಾಸ್ ನಗರಸಭಾ ಅಧ್ಯಕ್ಷರಾದ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ಜಿಲ್ಲಾಧಿಕಾರಿಗಳಾದ ರವೀಂದ್ರ,ಸಿ ಇ ಓ ನವೀನ್ ಭಟ್, ತಾಲೂಕು ದಂಡಾಧಿಕಾರಿ ಗಳಾದ ಸುದರ್ಶನ್ ಯಾದವ್,ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ಪೌರಾಯುಕ್ತರದ ಜಿ ಎನ್ ಚಲಪತಿ,ಸೇರಿದಂತೆ ನಗರಸಭಾ ಸದಸ್ಯರು ಮುಖಂಡರುಗಳು ಭಾಗ ವಹಿಸಿದ್ದರು.