ಚಿಕ್ಕಬಳ್ಳಾಪುರ: ನಗರದ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಎನ್ಸಿಸಿ ಘಟಕದ ಮುಖ್ಯಸ್ಥರಾದ ಶಾರದಮ್ಮ ಬಿ. ಅವರಿಗೆ ಸಿಕ್ಕಿಂನ ಆಲ್ಫೈ ನ್ ವಿಶ್ವವಿದ್ಯಾಲಯವು ದೈಹಿಕ ಶಿಕ್ಷಣ ವಿಷಯದಲ್ಲಿ ಪಿಹೆಚ್ಡಿ ಪದವಿ ಪ್ರದಾನ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾರದಮ್ಮ ಬಿ. ಅವರು ಹುಬ್ಬಳ್ಳಿಯ ಅಂಜುಮಾನ್ ಎ ಇಸ್ಲಾಂನ ನೆಹರು ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯದ ಅಸೋಸಿಯೇಟ್ ಪ್ರೊಪೇಸರ್ ಡಾ.ಐ.ಎಂ. ಮಕ್ಕುಬಾಯಿ ಮಾರ್ಗದರ್ಶನ ದಲ್ಲಿ ಸಿಕ್ಕಿಂನ ಆಲ್ಫೈನ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ "ಎ ಕ್ರಿಟಿಕಲ್ ಅನಾಲಿಸಿಸ್ ಆಫ್ ಫಿಸಿಕಲ್ ಎಜುಕೇಷನ್ಸ್ ರೋಲ್ ಇನ್ ಪ್ರೊಮೋಟಿಂಗ್ ಹೋಲಿಸ್ಟಿಕ್ ಡೆವಲಪ್ಮೆಂಟ್ ಆಫ್ ಸ್ಟುಡೆಂಟ್ಸ್ ಇನ್ ಸೌಥ್ಈಸ್ಟರ್ನ್ ಕರ್ನಾಟಕ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಅಂಗೀಕರಿಸಿ ಪಿಹೆಚ್ಡಿ ಪದವಿಗೆ ಪರಿಗಣಿಸಿದೆ.
ಅವರ ಈ ಸಾಧನೆಯು ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ಶೈಕ್ಷಣಿಕ ಸಮುದಾ ಯಕ್ಕೆ ಸ್ಪೂರ್ತಿಯಾಗಿದೆ. ಅವರ ಸಾಧನೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.